X
ಹೋಮ್ ಚಲನಚಿತ್ರಗಳ ಒಳನೋಟ

ಸಿನಿ ಪ್ರೇಕ್ಷಕರು ಎಂದೂ ಮರೆಯಾದ ಕನ್ನಡ ಸಿನಿಮಾಗಳ ಪಾತ್ರಗಳಿವು: ನಿಮ್ಮಷ್ಟದ ಪಾತ್ರ ಯಾವುದು?

Author Sowmya Bairappa | Published: Wednesday, August 7, 2024, 05:12 PM [IST]

ಒಂದು ಸಿನಿಮಾ ಹಲವು ಪಾತ್ರಗಳಿಗೆ ಜೀವ ಕೊಡುತ್ತದೆ. ಆ ಪಾತ್ರಗಳು ಒಮ್ಮೊಮ್ಮೆ ಸಿನಿಮಾ ದಿಕ್ಕು ಬದಲಾಯಿಸುವ ಜೊತೆಗೆ ಸಿನಿರಸಿಕರ ಮನದಲ್ಲಿ ಗಟ್ಟಿಯಾಗಿ ನೆಲೆಯೂರುತ್ತದೆ. ಕೆಲ ಸಿನಿಮಾಗಳ ಹೆಸರು ಕೇಳಿದ್ರೆ ಸಾಕು ಥಟ್ ಅಂತ ನೆನಪಾಗೋದೆ ವಿಭಿನ್ನ ಪಾತ್ರ. ಇಲ್ಲಿ ಕನ್ನಡಿಗರು ಎಂದೂ ಮರೆಯದ ಕನ್ನಡ ಸಿನಿಮಾಗಳ ಕೆಲ ಪಾತ್ರಗಳ ಬಗ್ಗೆ ಮಾಹಿತಿ ನೀಡಲಾಗಿದೆ.


cover image
'ಪುಟ್ಮಲ್ಲಿ'

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಪುಟ್ನಂಜ ಸಿನಿಮಾದಲ್ಲಿನ  'ಪುಟ್ಮಲ್ಲಿ' ಪಾತ್ರವನ್ನು ಕನ್ನಡ ಸಿನಿ ಪ್ರೇಕ್ಷಕರು ಮರೆಯಲು ಸಾಧ್ಯವಿಲ್ಲ. ಈ ಪಾತ್ರ ಉಮಾಶ್ರೀ ವೃತ್ತಿ ಜೀವನದ ಅತ್ಯುತ್ತಮ ಪಾತ್ರಗಳಲ್ಲಿ ಒಂದು. ಇಲ್ಲಿಯವರೆಗೂ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಉಮಾಶ್ರೀಯವರು, ಪುಟ್ನಂಜದಲ್ಲಿ ರವಿಚಂದ್ರನ್ ಅವರ ಅಜ್ಜಿಯಾಗಿ (ಪುಟ್ಮಲ್ಲಿ) ಗಂಭೀರ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ಫೋಷಕ ನಟಿ ಫಿಲ್ಮಫೇರ್ ಅವಾರ್ಡ್ ಕೂಡ ಲಭಿಸಿದೆ. 


ಆರ್ಮುಗಂ

ಕಿಚ್ಚ ಸುದೀಪ್ ನಿರ್ದೇಶಿಸಿ ನಟಿಸಿದ್ದ  'ಕೆಂಪೇಗೌಡ' ಸಿನಿಮಾದಲ್ಲಿನ  'ಆರ್ಮುಗಂ' ಪಾತ್ರವನ್ನು ಯಾರು ಮರೆಯುವುದಿಲ್ಲ. 'ಇದು ನನ್ನರೂ, ನನ್ನ ಏರಿಯಾ, ನಾನು ಬೆಂಗಳೂರಿನಲ್ಲಿ ಗುಡುಗಿದರೆ ಉಡುಪಿ, ಮಂಗಳೂರು ನಡುಗಿ ಹೋಗುತ್ತೆ. ಕೈಯೆತ್ತೆ ತಟ್ಟಿದ ಅಂದ್ರೆ ರಿಯಲ್ ಎಸ್ಟೇಟ್ ಎಗರಿ ಹೋಗುತ್ತೆ. ಇದು ಆರುಮುಗ ಕೋಟೆ ಕಣೋ ಎಂಬ ಡೈಲಾಗ್‌ ಅನ್ನು ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ. ಈ ಆರ್ಮುಗಂ ಪಾತ್ರದಲ್ಲಿ ಅಬ್ಬರಿಸಿದವರು ಪಿ ರವಿಶಂಕರ್. ಈ ಸಿನಿಮಾದಲ್ಲಿ ರವಿಶಂಕರ್ ಅವರ ಖಡಕ್ ವಾಯ್ಸ್, ಬೆಚ್ಚಿಬೀಳಿಸುವ ನಟನೆಗೆ ಕನ್ನಡಿಗರು ಫಿದಾ ಆಗಿದ್ದು, ಇದು ಅವರ ಜೀವನಕ್ಕೆ ಬಿಗ್ ಬ್ರೇಕ್ ಕೊಟ್ಟ ಪಾತ್ರವಾಗಿದೆ.

ಮುಸ್ತಫಾ

ರಮೇಶ್ ಅರವಿಂದ ಹಾಗೂ ಚಾರುಲತಾ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ 'ಓ ಮಲ್ಲಿಗೆ' ಸಿನಿಮಾದಲ್ಲಿನ ಸಾಧು ಕೋಕಿಲ ಅವರ ಪಾತ್ರವನ್ನು ಎಲ್ಲರೂ ನೋಡಿಯೇ ಇರುತ್ತಾರೆ. ಚಿತ್ರದಲ್ಲಿ ಸಾಧು ಅವರು ಫೋಟೋಗ್ರಾಫರ್ 'ಮುಸ್ತಫಾ' ಎಂಬ ಹಾಸ್ಯದ ಪಾತ್ರದ ಮೂಲಕ ಎಲ್ಲರನ್ನು ನಕ್ಕುನಲಿಸಿದ್ದರು. ಈ ಸಿನಿಮಾದ ಅವರ ಪಾತ್ರವನ್ನು ಯಶ್ ನಟನೆಯ ಗೂಗ್ಲಿ ಸಿನಿಮಾದಲ್ಲೂ ರಿಪೀಟ್ ಮಾಡಲಾಗಿತ್ತು. 


ಗಂಗಾ ಮತ್ತು ನಾಗವಲ್ಲಿ

2004ರಲ್ಲಿ ಬಿಡುಗಡೆಯಾಗಿದ್ದ ಸೈಕಲಾಜಿಕಲ್ ಥ್ರಿಲ್ಲರ್ 'ಆಪ್ತಮಿತ್ರ' ಸಿನಿಮಾದಲ್ಲಿನ ಗಂಗಾ ಪಾತ್ರ ಕೂಡ ಕನ್ನಡ ಸಿನಿರಸಿಕರಲ್ಲಿ ಅಚ್ಛಳಿಯದೇ ಉಳಿದಿದೆ. ಚಿತ್ರದಲ್ಲಿ ಸೌಂದರ್ಯ ಅವರು ಗಂಗಾ ಮತ್ತು ನಾಗವಲ್ಲಿಯಾಗಿ ಅದ್ಭುತವಾಗಿ ನಟಿಸಿದ್ದರು. ಇದು ಅವರ ಕೊನೆಯ ಚಿತ್ರ ಕೂಡ ಹೌದು. ಚಿತ್ರಮಂದಿರಗಳಲ್ಲಿ ಈ ಚಿತ್ರ ಒಂದು ವರ್ಷ ಪ್ರದರ್ಶನ ಕಂಡಿದ್ದು, ಐದು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿದೆ.  


ಸಾಹುಕಾರ್ ಸಿದ್ದಪ್ಪ

ಡಾ.ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದ ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿನ 'ಸಾಹುಕಾರ್ ಸಿದ್ದಪ್ಪ' ಪಾತ್ರ ಕೂಡ ಎವರ್‌ಗ್ರೀನ್ ಆಗಿ ಉಳಿದುಕೊಂಡಿದೆ. ಕಠೋರ ಮನಸ್ಸಿನ, ತಾನು ಏನೇ ಮಾಡಿದ್ರೂ ಸರಿ ಎನ್ನುವ  'ಸಾಹುಕಾರ್ ಸಿದ್ದಪ್ಪ'ನ ಪಾತ್ರದಲ್ಲಿ ವಜ್ರಮುನಿ ಅದ್ಭುತವಾಗಿ ನಟಿಸಿದ್ದರು. ಈ ಸಿನಿಮಾ ನೋಡಿದ ಪ್ರತಿಯೊಬ್ಬರು 'ಸಾಹುಕಾರ್ ಸಿದ್ದಪ್ಪ' ಪಾತ್ರಕ್ಕೆ ಹಿಡಿಶಾಪ ಹಾಕುತ್ತಿದ್ದರು. ಅಷ್ಟರಮಟ್ಟಿಗೆ ವಜ್ರಮುನಿ ಈ ಪಾತ್ರದಲ್ಲಿ ಜೀವಿಸಿದ್ದರು. 1974ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. 

ಚಾಮಯ್ಯ ಮೇಸ್ಟ್ರು

ಸಾಹಸಸಿಂಹ ಡಾ.ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿದ್ದ ಚೊಚ್ಚಲ ಸಿನಿಮಾ ನಾಗರಹಾವು. ಈ ಚಿತ್ರದಲ್ಲಿನ 'ಚಾಮಯ್ಯ ಮೇಸ್ಟ್ರು' ಪಾತ್ರವನ್ನು ಕೂಡ ಎಂದೂ ಮರೆಯಲು ಸಾಧ್ಯವಿಲ್ಲ. ಮುಂಗೋಪಿ ಯುವಕ (ರಾಮಾಚಾರಿ)  ಮತ್ತು ಅವನನ್ನು ಮಗನಂತೇ ಪ್ರೀತಿಸಿ ಸದಾ ಕಾಪಾಡುವ ಮೇಷ್ಟ್ರ ( ಚಾಮಯ್ಯ) ಪ್ರೀತಿಯ ಬಾಂಧವ್ಯದ ಕಥೆಯನ್ನು ಹೊಂದಿದ್ದ್ ಈ ಸಿನಿಮಾ ಎವರ್‌ಗ್ರೀನ್ ಆಗಿ ಉಳಿದುಕೊಂಡಿದೆ.

ಡಾಕ್ಟರ್ ಶ್ಯಾಮ್

ರಮೇಶ್‌ ಅರವಿಂದ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ  ಸಖತ್ ಹಾಸ್ಯಮಯವಾಗಿದ್ದ 'ರಾಮ ಶಾಮ ಭಾಮ'  ಚಿತ್ರದಲ್ಲಿನ  ಕಮಲ್ ಹಾಸನ್ ಪಾತ್ರವನ್ನು ಕೂಡ ಯಾರು ಮರೆಯುವುದಿಲ್ಲ. ಈ ಸಿನಿಮಾದಲ್ಲಿ ಕಮಾಲ್ ಉತ್ತರ ಕರ್ನಾಟಕ ಭಾಷೆ ಮಾತನಾಡುವ ಡಾಕ್ಟರ್ ಶ್ಯಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಮಿಳಿನ ಸತಿ ಲೀಲಾವತಿ ಚಿತ್ರದ ರೀಮೇಕ್ ಆಗಿದ್ದ ಈ ಸಿನಿಮಾದಲ್ಲಿ ಕಮಲ್ ಹಾಸನ್, ಊರ್ವಶಿ ಅವರ ಮ್ಯಾನರಿಸಂ ಹಾಗೂ ಡೈಲಾಗ್‌ಗಳು ಪ್ರೇಕ್ಷಕರನ್ನು ನಕ್ಕು ನಗಿಸಿದ್ದವು. 

ಗಡ್ಡಪ್ಪ

2016ರಲ್ಲಿ ತೆರೆಕಂಡ ಪಿ ವಾಸು ನಿರ್ದೇಶನದ 'ತಿಥಿ' ಸಿನಿಮಾದಲ್ಲಿನ ಗಡ್ಡಪ್ಪ ಪಾತ್ರ ಕೂಡ ಸಖತ್ ಫೇಮಸ್ ಆಗಿದೆ. ಬಹುತೇಕ ಹೊಸ ಮುಖಗಳೇ ಇದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೂ ಮುನ್ನವೇ ಪ್ರತಿಷ್ಠಿತ ‘ಲೊಕಾರ್ನೊ ಅಂತರರಾಷ್ಟ್ರೀಯ ಚಿತ್ರೋತ್ಸವ’ದಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದಿತ್ತು. ಮಾತ್ರವಲ್ಲದೇ ಈ ಸಿನಿಮಾದಲ್ಲಿ ಯಾವುದೇ ವೃತ್ತಿಪರ ಕಲಾವಿದರು ನಟಿಸಿಲ್ಲ ಅನ್ನೋದು ಈ ಚಿತ್ರದ ವಿಶೇಷ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+