X
ಹೋಮ್ ಚಲನಚಿತ್ರಗಳ ಒಳನೋಟ

ಪ್ರತಿಯೊಬ್ಬ ಅಭಿಮಾನಿಯೂ ನೋಡಲೇಬೇಕಾದ ಡಾ.ರಾಜ್‌ಕುಮಾರ್ ಅವರು 10 ಅಪರೂಪದ ಫೋಟೋಗಳಿವು!

Author Sowmya Bairappa | Updated: Wednesday, November 13, 2024, 11:18 AM [IST]

ವರನಟ ಡಾ.ರಾಜ್‌ಕುಮಾರ್ ಕನ್ನಡಿಗರ ಅಸ್ಮಿತೆಯ ಸಂಕೇತ. ಅಣ್ಣಾವ್ರು ಕನ್ನಡ ಚಿತ್ರರಂಗಕ್ಕೆ ಭದ್ರವಾದ ಬುನಾದಿ ಹಾಕಿ, ಸಾಮಾಜಿಕ ಚಿತ್ರಗಳ ಮೂಲಕ ಚಿತ್ರಪ್ರೇಮಿಗಳಿಗೆ ಒಳ್ಳೆಯ ಸಂದೇಶವನ್ನು ನೀಡಿದ್ದಾರೆ. ನಾಯಕನಟರಾಗಿ ಗುರುತಿಸಿಕೊಂಡು ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಡಾ.ರಾಜ್‌ಕುಮಾರ್. ತಮ್ಮ ವೃತ್ತಿಜೀವನದಲ್ಲಿ 200ಕ್ಕೂ ಹೆಚ್ಚೂ ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು, ಅಭಿಮಾನಿಗಳ ಹೃದಯದಲ್ಲಿ ವಿರಾಜಮಾನರಾಗಿ ಉಳಿದಿದ್ದಾರೆ. ಇಲ್ಲಿ ಪ್ರತಿಯೊಬ್ಬ ಅಭಿಮಾನಿಯೂ ನೋಡಲೇಬೇಕಾದ ಡಾ.ರಾಜ್‌ಕುಮಾರ್ ಅವರು ೧೦ ಅಪರೂಪದ ಫೋಟೋಗಳನ್ನು ನೀಡಲಾಗಿದೆ.


cover image
ಅಮಿತಾಬ್ ಬಚ್ಚನ್ &  ಡಾ.ರಾಜ್‌ಕುಮಾರ್

ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ ಕನ್ನಡ ಚಿತ್ರರಂಗದ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಇನ್ನು ಡಾ.ರಾಜ್‌ಕುಮಾರ್ ಜೊತೆ ಅವರಿಗೆ ಆತ್ಮೀಯ ಅನುಬಂಧವಿತ್ತು. ಇಂದಿಗೂ ಕೂಡ ದೊಡ್ಮನೆ ಅಂದರೆ ಬಿಗ್‌ಬಿಗೆ ಅಷ್ಟೇ ಅಕ್ಕರೆ. ಅಮಿತಾಬ್ ಬಚ್ಚನ್ ಹಾಗೂ ಅಣ್ಣಾವ್ರು ಸಾಕಷ್ಟು ಬಾರಿ ಭೇಟಿಯಾಗಿದ್ದರು.

ಡಾ.ರಾಜ್‌ಕುಮಾರ್ & ರಜನಿಕಾಂತ್

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಆದರೆ, ರಜನಿಯವರು 'ವರನಟ ಡಾ.ರಾಜ್‌ಕುಮಾರ್' ಅವರ ಅಪ್ಪಟ ಅಭಿಮಾನಿ. ಇವರಿಬ್ಬರ ನಡುವೆ ಒಳ್ಳೇ ಬಾಂಧವ್ಯವಿತ್ತು. ರಜನಿ ಕರ್ನಾಟಕಕ್ಕೆ ಬಂದಾಗಲೆಲ್ಲಾ ಅಣ್ಣಾವ್ರರನ್ನು ಭೇಟಿಯಾಗುತ್ತಿದ್ದರು. ರಜನಿ ಆಟೋಗ್ರಾಫ್ ತೆಗೆದುಕೊಂಡ ಏಕೈಕ ನಟ ವರನಟ ಡಾ.ರಾಜ್‌ಕುಮಾರ್ ಅವರಂತೆ.

ರಾಜ್‌ಕುಮಾರ್ ಮತ್ತು ವಿಷ್ಣು

ಡಾ.ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಎರಡು ಕಣ್ಣುಗಳಿದ್ದಂತೆ. ಅಣ್ಣವ್ರ 150ನೇ ಸಿನಿಮಾ ಗಂಧದಗುಡಿಯಲ್ಲಿ ವಿಷ್ಣು ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದರು. ಆ ಬಳಿಕ ಯಾವ ಸಿನಿಮಾದಲ್ಲೂ ಒಟ್ಟಿಗೆ ನಟಿಸಿರಲಿಲ್ಲ. ಆದರೆ, ಹಲವು ಕಾರ್ಯಕ್ರಮಗಳಲ್ಲಿ ಈ ಇಬ್ಬರು ದಿಗ್ಗಜ ನಟರು ಒಟ್ಟಿಗೆ ಕಾಣಿಸಿಕೊಂಡಿದ್ದರು.

ರಾಜ್‌ಕುಮಾರ್ ಮತ್ತು ಕುವೆಂಪು

ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರೊಂದಿಗೆ ರಾಷ್ಟ್ರಕವಿ ಕುವೆಂಪು  ಕಂಡಿದ್ದು. ಎರಡನೇ ಫೋಟೋ ರಾಷ್ಟ್ರಕವಿ ಕುವೆಂಪು ಅವರಿಗೆ ಕರ್ನಾಟಕ ಪ್ರಶಸ್ತಿ ನೀಡುವಾಗ ಡಾ.ರಾಜ್‌ ಕಾಣಿಸಿಕೊಂಡಿದ್ದು ಹೀಗೆ. ಈ ಇಬ್ಬರ ದಿಗ್ಗಜ ನಟರ ಸಮ್ಮಿಲನ ನೋಡದೇ ಕಣ್ಣಿಗೆ ಹಬ್ಬ.   

ರಾಜ್‌ಕುಮಾರ್ ಮತ್ತು ಚಿ.ಉದಯ್ ಶಂಕರ್

ಡಾ.ರಾಜ್‌ಕುಮಾರ್ ಅವರೊಂದಿಗೆ ಹತ್ತಿರದ ಒಡನಾಟ ಹೊಂದಿದ್ದ ಕೆಲವೇ ಕೆಲವರ ಪೈಕಿ ಸಂಭಾಷಣೆಕಾರ, ನಿರ್ದೇಶಕ ಮತ್ತು ಚಿತ್ರಸಾಹಿತಿ ಚಿ.ಉದಯ್ ಶಂಕರ್ ಕೂಡ ಒಬ್ಬರು. 80/90ರ ದಶಕದಲ್ಲಿ ಈ ಜೋಡಿಯ ಹಲವು ಹಿಟ್ ಸಿನಿಮಾಗಳು, ಬಾಕ್ಸಾಫೀಸ್‌ನಲ್ಲಿ ಜಾದೂ ಮಾಡಿದ್ದವು.

ಗೋಕಾಕ್ ಚಳುವಳಿ

ಕನ್ನಡ ನೆಲ, ಜಲ, ಭಾಷೆ, ಸಾಹಿತ್ಯಕ್ಕೆ ಕೊಡುಗೆ ನೀಡಿದ ಮಹನೀಯರಲ್ಲಿ ಡಾ.ರಾಜ್‌ ಪ್ರಮುಖರು. 1980ರಲ್ಲಿ ನಡೆದ ಗೋಕಾಕ್ ಚಳುವಳಿಯಲ್ಲಿ ಅಣ್ಣಾವ್ರು ಕಾಣಿಸಿಕೊಂಡಿದ್ದು ಹೀಗೆ.  ಕನ್ನಡ ಭಾಷೆ ಕರ್ನಾಟಕದಲ್ಲಿ ಸೂಕ್ತ ಸ್ಥಾನಮಾನ ದೊರಕಬೇಕೆಂಬ ಆಗ್ರಹವೇ ಗೋಕಾಕ್ ಚಳುವಳಿಯ ಮುಖ್ಯ ಉದ್ದೇಶವಾಗಿತ್ತು.

ರಾಜ್‌ಕುಮಾರ್ ಮತ್ತು ನರಸಿಂಹರಾಜು

ನಟ ನರಸಿಂಹರಾಜು ಅವರ ಮಗ ಅಕಾಲಿಕ ಮರಣ ಹೊಂದಿದ್ದರು. ಆಗ ಮಗನ ನೆನಪಿಗಾಗಿ ಏನಾದ್ರೂ ಮಾಡಬೇಕು ಎಂಬ ಉದ್ದೇಶದಿಂದ 'ಪ್ರೊ.ಹುಚ್ಚರಾಯ' ಸಿನಿಮಾ ಶುರುಮಾಡಿದ್ದರು. ಆ ಚಿತ್ರದ ಮೂಹೂರ್ತ ಸಮಾರಂಭಕ್ಕೆ ಆಗಮಿಸಿದ್ದ ಡಾ.ರಾಜ್ ಅವರನ್ನು ಕಂಡಾಗ, ನರಸಿಂಹರಾಜು ಪುತ್ರನನ್ನು ನೆನೆದು ಗದ್ಗದಿತರಾದ ಕ್ಷಣ.

ರಾಜ್‌ಕುಮಾರ್ ಮತ್ತು ಪಿ ಬಿ ಶ್ರೀನಿವಾಸ್

ಡಾ.ರಾಜ್‌ಕುಮಾರ್ ಅವರ ಸಿನಿಜೀವನದುದ್ದಕ್ಕೂ ಅವರ ಶಾರೀರವಾಗಿದ್ದವರು ಪಿ ಬಿ ಶ್ರೀನಿವಾಸ್. ಅಣ್ಣಾವ್ರು ಸ್ವತಃ ಹಾಡಲು ಪ್ರಾರಂಭಿಸುವವರೆಗೆ, ಅವರ ಬಹುತೇಕ ಸಿನಿಮಾಗಳ ಹಾಡಿಗೆ  ಪಿ ಬಿ ಶ್ರೀನಿವಾಸ್ ಅವರೇ ಧ್ವನಿ ನೀಡಿದ್ದರು.

ರಾಜ್‌ಕುಮಾರ್ ಮತ್ತು ಶಂಕರ್‌ ನಾಗ್

ಕರಾಟೆ ಕಿಂಗ್ ಶಂಕರ್‌ ನಾಗ್ ಅವರೊಂದಿಗೆ ರಾಜ್‌ಕುಮಾರ್ ಅವರ ಅಪರೂಪದ ಫೋಟೋ.

ರಾಜ್‌ಕುಮಾರ್ ಅವರೊಂದಿಗೆ ದಿಗ್ಗಜರು

ವರನಟ ಡಾ.ರಾಜ್‌ಕುಮಾರ್ , ಬಾಲಕೃಷ್ಣ, ಜಿ ವಿ ಅಯ್ಯರ್ ಹಾಗೂ ನರಸಿಂಹರಾಜು ಅವರ ಅಪರೂಪದ ಫೋಟೋ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+