X
ಹೋಮ್ ಚಲನಚಿತ್ರಗಳ ಒಳನೋಟ

ವಿಷ್ಣುವರ್ಧನ್ to ಪುನೀತ್ ರಾಜ್‌ಕುಮಾರ್ : ಸುಳ್ಳು ಆರೋಪಗಳಿಗೆ ಗುರಿಯಾದ ಸ್ಯಾಂಡಲ್‌ವುಡ್‌ನ ನಟ-ನಟಿಯರಿವರು!

Author Sowmya Bairappa | Published: Tuesday, July 9, 2024, 12:20 PM [IST]

ಸೆಲೆಬ್ರಿಟಿಗಳು ಅಂದಾಕ್ಷಣ ವಿವಾದಗಳು ಮತ್ತು ಗಾಸಿಪ್‌ಗಳು ಕಾಮನ್. ಆದರೆ, ಕೆಲವೊಂದು ಗಾಸಿಪ್ ಅಥವಾ ಸುಳ್ಳು ಸುದ್ದಿಗಳು ಅವರ ಜೀವನದ ಕೊನೆವರೆಗೂ ಉಳಿದುಕೊಂಡು ಬಿಡುತ್ತವೆ. ಇದರಿಂದ ಅವರ ಸೆಲೆಬ್ರಿಟಿ ಲೈಫ್ ಮೇಲೆ ಸಾಕಷ್ಟು ಪರಿಣಾಮ ಕೂಡ ಉಂಟಾಗುತ್ತದೆ. ಇದೇ ರೀತಿ ಚಂದನವನದ ಅನೇಕ ನಟ-ನಟಿಯರ ಬಗ್ಗೆಯೂ ಹರಡಿದ ಕೆಲ ವಿವಾದಗಳು ಅವರ ಸಿನಿ ಕರಿಯರ್ ಮೇಲೆ ಕಪ್ಪುಚುಕ್ಕೆಯಾಗಿ ಉಳಿದುಕೊಂಡುಬಿಟ್ಟಿವೆ.


cover image
ವಿಷ್ಣುವರ್ಧನ್

ನಾಗರಹಾವು ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸಂಪತ್ ಕುಮಾರ್ ಮುಂದೆ ವಿಷ್ಣುವರ್ಧನ್ ಹೆಸರಿನಿಂದ ಕನ್ನಡ ಸಿನಿಪ್ರಿಯರ ಹೃದಯ ಸಾಮ್ರಾಜ್ಯದಲ್ಲಿ ಸಾಹಸಸಿಂಹನಾಗಿ ಶಾಶ್ವತವಾಗಿ ನೆಲೆಸಿದ್ದಾರೆ. ವಿಷ್ಣುವರ್ಧನ್ ಹಾಗೂ ಡಾ.ರಾಜ್‌ಕುಮಾರ್ ಜೊತೆಯಾಗಿ 'ಗಂಧದಗುಡಿ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಚಿತ್ರದಲ್ಲಿ ಅಣ್ಣಾವ್ರು ನಾಯಕನಾಗಿದ್ದರೆ, ವಿಷ್ಣು ವಿಲನ್ ಆಗಿ ಕಾಣಿಸಿಕೊಂಡಿದ್ರು.  ಗಂಧದಗುಡಿಯ ಒಂದು ಫೈಟ್ ಸೀನ್‌ನಲ್ಲಿ ವಿಷ್ಣುವರ್ಧನ್ ಅವರು ರಾಜ್‌ಕುಮಾರ್ ಅವರಿಗೆ ಶೂಟ್ ಮಾಡುವ ಸಂದರ್ಭವಿತ್ತು. ಆದರೆ, ಕೆಲವರು ಚಿತ್ರೀಕರಣದ ವಿಷ್ಣು ಅವರು ಅಣ್ಣಾವ್ರುರಿಗೆ ಒರಿಜಿನಲ್ ಗನ್‌ನಿಂದ ಶೂಟ್ ಮಾಡಿದ್ದರು ಎಂಬ ಗಾಸಿಪ್ ಹರಡಿಸಿದ್ದರು. ಇದು ಸಾಹಸಸಿಂಹನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು.

ಸೌಂದರ್ಯ

ಸಹಜ ಸೌಂದರ್ಯಕ್ಕೆ ಹೆಸರುವಾಸಿಯಾದ ಸೌತ್ ಇಂಡಿಯಾದ ಖ್ಯಾತ ನಟಿ ಸೌಂದರ್ಯ ಹಾಗೂ ಜಗಪತಿ ಬಾಬು ತುಂಬಾ ಒಳ್ಳೆಯ ಫ್ರೆಂಡ್ಸ್‌ ಆಗಿದ್ದರು. ಇವರಿಬ್ಬರು ಒಟ್ಟಿಗೆ ಹಲವು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದರು. ಇವರಿಬ್ಬರು ಬೆಸ್ಟ್ ಫ್ರೆಂಡ್ಸ್‌ ಆಗಿದ್ದ ಕಾರಣ ಫಂಕ್ಷನ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು, ಹೊರಗಡೆ ಒಟ್ಟಿಗೆ ಓಡಾಡುವುದು ಮಾಡುತ್ತಿರುತ್ತಾರೆ. ಬಳಿಕ ಇವರಿಬ್ಬರ ನಡುವೆ ಅಫೇರ್ ಇದೆ ಅಂತ ಸುದ್ದಿ ಹರಡುತ್ತದೆ. ಪ್ರೆಸ್‌ನವರು ಎಲ್ಲಾ ಸಂದರ್ಶನಗಳಲ್ಲೂ ಈ ಬಗ್ಗೆ ಕೇಳುತ್ತಿರುತ್ತಾರೆ. ಇದರಿಂದ ಸೌಂದರ್ಯ ಸಾಕಷ್ಟು ಸಮಸ್ಯೆ ಎದುರಿಸುತ್ತಾರೆ. ಇದೇ ಕಾರಣಕ್ಕೆ ಸೌಂದರ್ಯ ಪ್ರೆಸ್‌ನವರ ಮೇಲೆ ಗಲಾಟೆ ಕೂಡ ಮಾಡಿದ್ದರು.

ರವಿಚಂದ್ರನ್

90ರ ದಶಕದಲ್ಲಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಸ್ಯಾಂಡಲ್‌ವುಡ್‌ನ ಸ್ಟಾರ್ ನಟ, ನಿರ್ದೇಶಕನಾಗಿ ಜನಪ್ರಿಯತೆ ಗಳಿಸಿದ್ದರು. ಜೊತೆಗೆ ಅತಿಹೆಚ್ಚು ಸಂಭಾವನೆ ಪಡೆಯುವ ನಟರಾಗಿ ಗುರುತಿಸಿಕೊಂಡಿದ್ದರು. ಇಂತಹ ವೇಳೆ ರವಿಚಂದ್ರನ್ ಮೇಲೆ ಹುಟ್ಟಿಕೊಳ್ಳುತ್ತದೆ. ಸಂದರ್ಶನವೊಂದರಲ್ಲಿ ಕ್ರೇಜಿಸ್ಟಾರ್, ಬೇರೆ ಭಾಷೆಯ ಚಿತ್ರರಂಗಕ್ಕೆ ಕಂಪೇರ್ ಮಾಡಿದ್ರೆ, ನಮ್ಮ ಕನ್ನಡ ಚಿತ್ರರಂಗ ಇನ್ನೂ ಬೆಳೀಯಬೇಕು. ಟೆಕ್ನಿಕಲಿ ಮಾತ್ರವಲ್ಲ, ಫೈನಾಶಿಯಲಿ ಬೆಳೀಯಬೇಕು. ಇದಕ್ಕೆ ನಮ್ಮ ಕನ್ನಡ ನಿರ್ಮಾಪಕರು ಮುಂದೆ ಬರಬೇಕು ಎಂದಿದ್ದರು. ಆದರೆ, ಈ ಸ್ಟೇಟ್‌ಮೆಂಟ್‌ಗೆ ಬೇರೆ ರೂಪ ಕೊಟ್ಟು ಬೇರೆ ಸಿನಿಮಾರಂಗಕ್ಕೆ ಸ್ಯಾಂಡಲ್‌ವುಡ್‌ಗೆ ಕಂಪೇರ್ ಮಾಡಿ, ಕನ್ನಡ ಚಿತ್ರರಂಗವನ್ನು ಮತ್ತು ಕನ್ನಡಿಗರನ್ನು ರವಿಚಂದ್ರನ್ ಅವಮಾನ ಮಾಡಿದ್ದಾರೆ ಎಂಬ ಸುಳ್ಳುಸುದ್ದಿ ಹರಡುತ್ತದೆ. ಇದರಿಂದ ರವಿಚಂದ್ರನ್ ಮನೆ ಮೇಲೆ ಕಲ್ಲುತೂರಾಟ ಮಾಡಿ, ಅವರ ಆಫೀಸ್‌ಗೂ ಹಾನಿ ಮಾಡಿ ಪ್ರತಿಭಟಿಸಲಾಗಿತ್ತು. ಕೊನೆಗೆ ಡಾ.ರಾಜ್‌ಕುಮಾರ್ ಮಧ್ಯೆ ಬಂದು ಈ ಸಮಸ್ಯೆ ಬಗೆಹರಿಸುತ್ತಾರೆ.

puneeth rajkumar

2000ರ ಜುಲೈ ೩೦ರಂದು ವರನಟ ಡಾ.ರಾಜ್‌ಕುಮಾರ್ ಅವರನ್ನು ನರಹಂತಹ ವೀರಪ್ಪನ್ ಅಪಹರಣ ಮಾಡಿದ್ದ. ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಗ್ರಾನೈಟ್ ಬ್ಯುಸಿನೆಸ್ ಮಾಡುತ್ತಿದ್ದರು. ಈ ವಿಷಯವನ್ನು ಇಟ್ಟುಕೊಂಡು ಕೆಲವರು, ಅಪ್ಪು ಅವರು ಗ್ರಾನೈಟ್ ಬ್ಯುಸಿನೆಸ್‌ನಲ್ಲಿ ಕೆಲವರಿಗೆ ದುಡ್ಡು ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ಅವರೆಲ್ಲಾ ಸೇರಿ ವೀರಪ್ಪನ್‌ಗೆ ಹೇಳಿ ಅಣ್ಣಾವ್ರು ಅನ್ನು ಕಿಡ್ನಾಪ್ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪುನೀತ್ ಒಂದು ಸಂದರ್ಶನದಲ್ಲಿ ಮಾತನಾಡಿ, ನನಗೂ ಈ ವಿಷಯಕ್ಕೂ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು.

ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ೨೦೦೨ರಲ್ಲಿ ಹೆಚ್‌೨ಒ ಎಂಬ ಟ್ರಾಯಂಗಲ್ ಲವ್ ಸ್ಟೋರಿ ಸಿನಿಮಾ ಮಾಡುತ್ತಾರೆ. ಇದು ಒಬ್ಬ ತಮಿಳು ಹಾಗೂ ಇನ್ನೊಬ್ಬ ಕನ್ನಡದ ಹುಡುಗನ ಪ್ರೇಮಕಥೆಯಾಗಿದ್ದು, ಇಬ್ಬರು ಒಂದೇ ಹುಡುಗಿಯನ್ನು ಇಷ್ಟಪಡುತ್ತಿರುತ್ತಾರೆ. ಈ ಸಿನಿಮಾದಲ್ಲಿ ಬರುವ ನಾಯಕಿಯ ಹೆಸರು ಕಾವೇರಿ. ಈ ಕಾವೇರಿ ಯಾರಿಗೆ ಸೇರುತ್ತಾಳೆ ಎಂಬುದೇ ಸಿನಿಮಾದ ತಿರುಳು. ಈ ಚಿತ್ರ ರಿಲೀಸ್ ಆಗ್ತಿದ್ದಂತೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಗಲಾಟೆಗಳು ನಡೆದವು. ಈ ನಡುವೆ ಚಿತ್ರಕ್ಕೆ ಒಳ್ಳೇ ರೆಸ್ಪಾನ್ಸ್ ಸಿಕ್ಕಿತ್ತು. ಚಿತ್ರದ ಸ್ಟೋರಿ ಮತ್ತು ಸ್ಕ್ರೀನ್‌ಪ್ಲೇ ಅವರದ್ದೇ ಆಗಿತ್ತು. ಹೆಚ್‌೨ಒ ಬಳಿಕ ಉಪೇಂದ್ರ ನಿರ್ದೇಶನ ಮಾಡುವುದನ್ನು ಬಿಟ್ಟು ನಟನೆಯಲ್ಲಿ ಬ್ಯುಸಿಯಾದರು. ನಂತರ ಹೆಚ್‌೨ಒ ಪ್ರತಿಭಟನೆ ಬಳಿಕ ಉಪೇಂದ್ರ ಅವರನ್ನು ಡೈರೆಕ್ಷನ್‌ನಿಂದ ೧೦ ವರ್ಷ ಬ್ಯಾನ್ ಮಾಡಲಾಗಿದೆ ಎಂಬ ಸುಳ್ಳುಸುದ್ದಿ ಹರಡುತ್ತದೆ. ಈ ಬಗ್ಗೆ ಉಪ್ಪಿಯವರೇ ಕ್ಲಿಯರ್ ಮಾಡಿದ್ರೂ ಕೂಡ ಈಗಲೂ ಕೆಲ ಸಂದರ್ಶನಗಳಲ್ಲಿ ಈ ಬಗ್ಗೆ ಕೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+