X
ಹೋಮ್ ಚಲನಚಿತ್ರಗಳ ಒಳನೋಟ

ಬಾಲಕೃಷ್ಣ ಟು ಆದಿ ಲೋಕೇಶ್: ಅಂಗವೈಕಲ್ಯತೆ ಮೆಟ್ಟಿನಿಂತು ಸಿನಿಮಾರಂಗದಲ್ಲಿ ಸಕ್ಸಸ್ ಆದ ನಟರಿವರು..!

Author Sowmya Bairappa | Published: Saturday, July 13, 2024, 01:17 PM [IST]

ಅಂಗವೈಕಲ್ಯ ಎಂಬುದು ಶಾಪವಲ್ಲ. ಸಾಧಿಸುವ ಛಲವೊಂದಿದ್ದರೆ ಯಾರೂ ಬೇಕಾದರೂ, ಎಂಥವರು ಬೇಕಾದರೂ ಸಾಧನೆ ಮಾಡಬಹುದು. ಅದಕ್ಕೆ ಸಿನಿಮಾರಂಗದಲ್ಲಿರುವ ಕೆಲ ಕಲಾವಿದರೆ ಸಾಕ್ಷಿ. ಇಲ್ಲಿ ತಮ್ಮ ದೇಹದ ನ್ಯೂನ್ಯತೆಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಸ್ಟಾರ್‌ಗಳಾಗಿರುವ ನಟ-ನಟಿರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.


cover image
ರಾಣಾ ದಗ್ಗುಬಾಟಿ

ಬಾಹುಬಲಿ-2 ಚಿತ್ರದ 'ಬಲ್ಲಾಳದೇವ' ಪಾತ್ರದ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ತಮ್ಮದೇ ಛಾಫು ಮೂಡಿಸಿರುವ ರಾಣಾ ದಗ್ಗುಬಾಟಿ ಅವರಿಗೆ ಒಂದು ಕಣ್ಣು ಕಾಣಿಸುವುದಿಲ್ಲ ಎಂಬ ಸಂಗತಿ ಹಲವರಿಗರ ತಿಳಿದಿಲ್ಲ. ಹೌದು...ತೆಲುಗು ನಿರ್ಮಾಪಕ, ಪದ್ಮಭೂಷಣ ಡಿ.ರಾಮಾನಾಯ್ಡು ಅವರ ಮೊಮ್ಮಗ... ತೆಲುಗು ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು ಅವರ ಪುತ್ರನಾಗಿರುವ ರಾಣಾ ಅವರ ಬಲಗಣ್ಣಿಗೆ ದೃಷ್ಟಿ ಇಲ್ಲ ಎಂದರೆ ನಂಬಲು ಅಸಾಧ್ಯ. ಆದ್ರೆ, ಇದೇ ಸತ್ಯ. ಈ ಕುರಿತು ತೆಲುಗಿನ ಜೆಮಿನಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಣಾ ದಗ್ಗುಬಾಟಿ, ನನ್ನ ಒಂದು ಕಣ್ಣಿಗೆ ಮಾತ್ರ ದೃಷ್ಟಿಯಿದೆ. ಬಾಲ್ಯದಿಂದಲೂ ನನ್ನ ಬಲಗಣ್ಣಿಗೆ ದೃಷ್ಟಿ ಇಲ್ಲ. ಎಡಗಣ್ಣು ಮುಚ್ಚಿದರೆ ನನಗೆ ನೀವ್ಯಾರೂ ಕಾಣಲ್ಲ ಎಂದಿದ್ದರು. ತಮ್ಮ ಸಮಸ್ಯೆಯನ್ನ ಮೀರಿ ಅಜಾನುಬಾಹು ಆಗಿ ಬೆಳೆದಿರುವ ರಾಣಾ ಇಂದು ಟಾಲಿವುಡ್‌ನ ಬಹುಬೇಡಿಕೆಯ ನಟ ಆಗಿದ್ದಾರೆ. 

ಅಭಿನಯ

ಸೌತ್ ಮಾಡೆಲ್ ಕಮ್ ನಟಿಯಾಗಿರುವ ಅಭಿನಯ ಅವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಹುಡುಗರು' ಸಿನಿಮಾದಲ್ಲಿ ಅಪ್ಪು ತಂಗಿಯಾಗಿ ಅಭಿನಯಿಸಿದ್ದರು. ನಿಜ ಜೀವನದಲ್ಲಿ ಈ ನಟಿಗೆ ಮಾತು ಬರುವುದಿಲ್ಲ ಜೊತೆಗೆ ಕಿವಿಯೂ ಕೇಳಿಸುವುದಿಲ್ಲ. ಆದರೂ ತಮ್ಮ ಅದ್ಭುತ ಅಭಿನಯದ ಮೂಲಕ ಸಿನಿಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. 

ಆದಿ ಲೋಕೇಶ್

ಸುಮಾರು ಮುನ್ನೂರಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದ ಮೈಸೂರು ಲೋಕೇಶ್ ಪುತ್ರ ಆದಿ ಅವರು, ಜೋಗಿ ಸಿನಿಮಾದಲ್ಲಿ ಬಿಡ್ಡ ಪಾತ್ರದಲ್ಲಿ ನಟಿಸುವ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ಆನಂತರ ಪೂಜಾರಿ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ರು. ಬಳಿಕ ಸಾಕಷ್ಟು ಚಿತ್ರಗಳಲ್ಲಿ ಖಳನಾಯಕನಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ. ಇವರಿಗೆ ಚಿಕ್ಕಂದಿನಿಂದಲೂ ಬಲ ಕಣ್ಣು ಸರಿಯಾಗಿ ಕಾಣುವುದಿಲ್ಲ. ಈ ವಿಷಯವನ್ನೇ ಅವರು ಬಿಗ್‌ಬಾಸ್‌ ಕನ್ನಡ ಸೀಸನ್ ೨ಕ್ಕೆ ಸ್ಪರ್ಧಿಯಶಗಿ ಹೋದಾಗ ಹೇಳಿಕೊಂಡಿದ್ದರು. 

ಬಾಲಕೃಷ್ಣ

ಕನ್ನಡದ ಪ್ರಖ್ಯಾತ ಹಾಸ್ಯನಟ ಬಾಲಣ್ಣ (ಬಾಲಕೃಷ್ಣ) ಸುಮಾರು 560ಕ್ಕೂ ಹೆಚ್ಚು ಚಿತ್ರಗಳಲ್ಲಿ, ಹಲವಾರು ಬಗೆಯ ಪಾತ್ರಗಳಿಗೆ ತಮ್ಮ ವಿಶಿಷ್ಟ ಅಭಿನಯದಿಂದ ಜೀವ ತುಂಬಿದ್ದರು. ರಾಜ್‌ಕುಮಾರ್ ಅವರ ಜೊತೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದ ಇವರಿಗೆ, ಬಾಲ್ಯದಿಂದಲೇ ಕಿವಿ ಕೇಳಿಸುತ್ತಿರಲಿಲ್ಲ. ಕೇವಲ ಲಿಪ್‌ ಮೂಮೆಂಟ್ ಅರ್ಥ ಮಾಡಿಕೊಂಡು ಡೈಲಾಗ್ ಹೇಳುತ್ತಿದ್ದರು. 

ಧ್ರುವ್ ಶರ್ಮಾ

ಸ್ಯಾಂಡಲ್‌ವುಡ್ ನಟ ಮತ್ತು ಕರ್ನಾಟಕ ಸೆಲಿಬ್ರಿಟಿ ಕ್ರಿಕೆಟ್ ತಂಡದ ಆಟಗಾರ ಧ್ರುವಾ ಶರ್ಮಾ ಅವರು ಸ್ನೇಹಾಂಜಲಿ, ತಿಪ್ಪಜ್ಜಿ ಸರ್ಕಲ್, ಹಿಟ್ ಲಿಸ್ಟ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದಿದ್ದರು. ಇವರಿಗೂ ಮಾತು ಬರುತ್ತಿರಲಿಲ್ಲ, ಕಿವಿ ಕೇಳಿಸುತ್ತಿರಲಿಲ್ಲ. ಧ್ರುವಾ ಅವರು 2017ರ ಆಗಸ್ಟ್‌ನಲ್ಲಿ ಹೃದಯಾಘಾತ ಮತ್ತು ಬಹು ಅಂಗವೈಫಲ್ಯದಿಂದ ಮೃತಪಟ್ಟರು.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+