X
ಹೋಮ್ ಚಲನಚಿತ್ರಗಳ ಒಳನೋಟ

ಬಿಗ್‌ಬಾಸ್‌ಮನೆಯಲ್ಲಿ ತಲೆಕೆಳಗಾದ ಡ್ರೋನ್ ಪ್ರತಾಪ್ ಲೆಕ್ಕಚಾರ: ಕರ್ಮ ಅಂತಾರಾ ಇದಕ್ಕೆ? ಎಂದ ಸಂಗೀತಾ

Author Sowmya Bairappa | Published: Thursday, November 30, 2023, 11:26 AM [IST]

ಮೊದಲ ಬಾರಿ ಕ್ಯಾಪ್ಟನ್ ಆಗಿದ್ದಾಗ ದುರ್ಬಲ ತಡವನ್ನಿಟ್ಟುಕೊಂಡು ಎದುರಾಳಿ ತಂಡವನ್ನು ಸೋಲಿಸಿದ್ದ ಡ್ರೋನ್ ಪ್ರತಾಪ್ ಈ ಬಾರಿ ಮುಗ್ಗರಿಸಿದ್ದಾರೆ. ಎರಡನೇ ಬಾರಿ ಕ್ಯಾಪ್ಟನ್ ಆದಾಗ ಪ್ರಬಲ್ ಸ್ಪರ್ಧಿಯಾಗಿದ್ದ ಕಾರ್ತಿಕ್ ಅವರನ್ನು ಹೊರಗಿಟ್ಟು ಪ್ರತಾಪ್ ತಪ್ಪು ಮಾಡಿದ್ದರು. ಇದರ ಪರಿಣಾಮ ಪ್ರತಾಪ್ ತಂಡಕ್ಕೆ ಬ್ಯಾಕ್‌ ಟು ಬ್ಯಾಕ್ ಸೋಲು ಎದುರಾಗಿದ್ದು, ಸಂಗೀತಾ ಕರ್ಮ ಅಂತಾರಾ ಇದಕ್ಕೆ? ಎಂದು ವ್ಯಂಗ್ಯವಾಡಿದ್ದಾರೆ.


cover image
ಕ್ಯಾಪ್ಟನ್ಸಿ ರೇಸ್‌ನಿಂದ ಹೊರಬಿದ್ದ ಪ್ರತಾಪ್ ತಂಡ

ಎಂಟನೇ ವಾರದ ಎಲ್ಲಾ ಟಾಸ್ಕ್‌ಗಳಲ್ಲೂ ಪ್ರತಾಪ್ ನೇತೃತ್ವದ 'ಮಣ್ಣಿನ ಮಕ್ಕಳು' ತಂಡ ಸೋಲು ಅನುಭವಿಸಿದೆ. ಇದರ ಪರಿಣಾಮ ಪ್ರತಾಪ್ ತಂಡದ ಎಲ್ಲಾ ಸದಸ್ಯರು ಕ್ಯಾಪ್ಟನ್ಸಿ ಓಟದಿಂದ ಹೊರಬಿದ್ದಿದ್ದಾರೆ. ಮೊದಲ ವಾರ ಮೈಂಡ್‌ ಗೇಮ್‌ನಿಂದ ಜಯ ಸಾಧಿಸಿದ್ದ ಡ್ರೋನ್ ಪ್ರತಾಪ್ ಲೆಕ್ಕಾಚಾರ ಈ ಬಾರಿ ಸಂಪೂರ್ಣ ಉಲ್ಟಾಪಲ್ಟಾ ಆಗಿದೆ. 

ಕಾರ್ತಿಕ್ ಕ್ಯಾಪ್ಟನ್ಸಿ ರೇಸ್‌ಗೆ

ಈ ಬಾರಿ ಎರಡು ತಂಡದ ಉಸ್ತುವಾರಿ ವಹಿಸಿಕೊಂಡಿದ್ದ ಕಾರ್ತಿಕ್ ಮಹೇಶ್ ತಮ್ಮ ಕೆಲಸವನ್ನು ಉತ್ತಮವಾಗಿ ನಿಭಾಯಿಸಿದರು ಎಂದು ನಮ್ರತಾ, ವಿನಯ್, ಸ್ನೇಹಿತ್, ಸಿರಿ, ಪವಿ, ಮೈಕಲ್, ಅವಿನಾಶ್ ಹೇಳಿದರು. ಆದರೆ, ತುಕಾಲಿ ಸಂತೋಷ್, ವರ್ತೂರು ಸಂತೋಚ್ ಹಾಗೂ ಡ್ರೋನ್ ಪ್ರತಾಪ್ ಉತ್ತಮವಾಗಿರಲಿಲ್ಲ ಎಂದರು. ಬಹುತೇಕ ಸದಸ್ಯರು 'ಉತ್ತಮ' ಎಂದು ಹೇಳಿದ್ದರಿಂದ ಕಾರ್ತಿಕ್ ಕ್ಯಾಪ್ಟನ್ಸಿ ರೇಸ್‌ಗೆ ಮರಳಿ ಬಂದಿದ್ದಾರೆ. 

 

ಕರ್ಮ ಅಂತಾರಾ ಇದಕ್ಕೆ? ಎಂದ ಸಂಗೀತಾ

ಬಿಗ್‌ಬಾಸ್ ಕಾರ್ತಿಕ್ ಅವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸಬಹುದು. ಪ್ರತಾಪ್ ನೀವು ಕಾರ್ತಿಕ್ ಭಾವಚಿತ್ರದಿಂದ ಕ್ರಾಸ್ ಗುರುತನ್ನು ತೆಗೆಯಿರಿ ಎಂದು ಸೂಚಿಸಿದರು. ಈ ವೇಳೆ ಸಂಗೀತಾ 'ಕರ್ಮ ಅಂತಾರಾ ಇದಕ್ಕೆ? ಎಂದು ವ್ಯಂಗ್ಯವಾಡಿದ್ದಾರೆ.  ಆಗ ವಿನಯ್, ಈಗ ಕ್ಯಾಪ್ಟನ್ಸಿ ಆಡೋಕೆ ಮಜಾ ಇರುತ್ತೆ ಅಂತ ಹೇಳಿದರು. 

 

ಎಡವಿದ ಪ್ರತಾಪ್

ನಾನು ಪ್ರತಾಪ್ ತಂಡವನ್ನು ಸೇರೋದಿಕ್ಕೆ ಇಷ್ಟಪಡ್ತೀನಿ. ಯಾಕೆಂದರೆ ಅವನೊಬ್ಬ ಉತ್ತಮ ತಂತ್ರಗಾರ. ಪ್ರತಾಪ್ ಒಳ್ಳೆಯ ಕ್ಯಾಪಟ್ಟನ್ ಅಂತ ಈಗಾಗಲೇ ಫ್ರೂವ್ ಮಾಡಿಕೊಂಡಿದ್ದಾನೆ. ಜೊತೆಗೆ ನಾನು ಮೊದಲನೇ ಲೀಡರ್ ಆಗಿದ್ದಾಗ, ಮೂರು ಜನರು ನನ್ನ ತಂಡಕ್ಕೆ ಬರಲು ನಿರಾಕರಿಸಿದಾಗ ನನ್ನೊಂದಿಗೆ ನಿಂತಿದ್ದು ಪ್ರತಾಪ್ ಎಂದು ನಿಯತ್ತು ಮತ್ತು ಕೃತಜ್ಞತಾ ಭಾವ ಪ್ರತಾಪ್ ತಂಡಕ್ಕೆ ಬಂದಿದ್ದರು. ಆದರೆ, ಪ್ರತಾಪ್ ಅವರು ಕಾರ್ತಿಕ್‌ ಅವರನ್ನು ತಂಡದಿಂದ ಹೊರಗಿಟ್ಟು ತಪ್ಪು ಮಾಡಿದ್ದರು. ಜೊತೆಗೆ ತಂಡದವರ ಮಾತಿಗೆ ಬೆಲೆ ಕೊಡದೆ, ತಮ್ಮ ನಿರ್ಧಾರವನ್ನೇ ಹೇರಿದ್ದರು. ಪರಿಣಾಮ ಅವರ ತಂಡ ಸೋಲುವುದರ ಜೊತೆಗೆ ಪ್ರತಾಪ್ ಕೂಡ ಕ್ಯಾಪ್ಟನ್ಸಿ ರೇಸ್‌ನಿಂದ ಹೊರಬಿದ್ದಿದ್ದಾರೆ. 

 

ಒಬ್ಬ ಒಳ್ಳೆಯ ಪ್ಲೇಯರ್‌ನ ಹೊರಗಿಟ್ಟುಬಿಟ್ಟೆ

ಟಾಸ್ಕ್ ಬಳಿಕ ಪ್ರತಾಪ್ ಜೊತೆ ಮಾತನಾಡಿದ ತುಕಾಲಿ ಸಂತೋಷ್, ಜನರಿಗೆ ಹೇಗೆ ಅನಿಸುತ್ತೆ ಗೊತ್ತಾ? ಒಬ್ಬ ಒಳ್ಳೆಯ ಪ್ಲೇಯರ್‌ನ ಹೊರಗಿಟ್ಟುಬಿಟ್ಟೆ. ಎದುರಾಳಿ ತಂಡದ ಜೊತೆ ಕಿರುಚಾಡಲು ಅವನು ಬೇಕು. ಕಿರುಚಾಡಲಿಲ್ಲ ಅಂದ್ರೆ ಆಗಲ್ಲ ಕಣೋ. ನೀನು ಒಳ್ಳೆಯ ನಿರ್ಧಾರ ತಗೋತಿಯಾ ಅಂದುಕೊಂಡಿದ್ವಿ. ಅದಕ್ಕೆ ನಾವು ಏನು ಮಾತನಾಡಲಿಲ್ಲ ಎಂದರು. ನಂತರ ವರ್ತೂರು ಸಂತೋಷ್, ಹೊಸಬರು ಅಂತ ನಾವೆಲ್ಲರೂ ಪವಿಗೆ ವೋಟ್ ಹಾಕಿದ್ವಿ. ನೀನು ನಮ್ರತಾ ಅವರನ್ನು ಔಟ್ ಮಾಡಿದೆ. ನಾವೇನಾದರೂ ಮಾತನಾಡೋಕೆ ಆಯ್ತಾ? ಅಂತ ಪ್ರಶ್ನಿಸಿದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+