X
ಹೋಮ್ ಚಲನಚಿತ್ರಗಳ ಒಳನೋಟ

ನನಗೆ ನಿನ್ ಥರ ಡವ್ ಮಾಡೋದಕ್ಕೆ ಬರಲ್ಲ, ನೀನ್ ಯಾವಳೇ ನಂಗೆ ಹೇಳೋಕೆ?- ಐಶ್ವರ್ಯಾ ವಿರುದ್ಧ ತುಕಾಲಿ ಮಾನಸ ಕಿಡಿ

Author Sowmya Bairappa | Published: Thursday, October 24, 2024, 10:53 AM [IST]

ಬಿಗ್‌ಬಾಸ್ ಮನೆಯಲ್ಲಿ ಈ ವಾರ ತ್ರಿವಿಕ್ರಮ್ ಹಾಗೂ ಐಶ್ವರ್ಯಾ ಸಿಂಧೋಗಿ ಜೋಡಿ ಕ್ಯಾಪ್ಟನ್ ಆಗಿದ್ದಾರೆ. ಅವರಿಗೆ ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ವಿಶೇಷ ಅಧಿಕಾರ ಸಿಕ್ಕಿದ್ದು, ಉಗ್ರಂ ಮಂಜು ಮತ್ತು ತುಕಾಲಿ ಮಾನಸ ಅವರನ್ನು ಆಯ್ಕೆ ಮಾಡಿದ್ದಾರೆ. ತಮ್ಮನ್ನು ನೇರ ನಾಮಿನೇಟ್ ಮಾಡಿರುವುದು ಮಾನಸಾಗೆ ಸಿಕ್ಕಾಪಟ್ಟೆ ಕೋಪ ತರಿಸಿದೆ. ಹೀಗಾಗಿ, ಐಶ್ವರ್ಯಾ ಮೇಲೆ ಕೆಂಡಕಾರಿದ್ದಾರೆ.


cover image
 ನೀನ್ ಯಾವಳೇ ನಂಗೆ ಹೇಳೋಕೆ?

ಕ್ಯಾಪ್ಟನ್ ಐಶ್ವರ್ಯಾ ಮೆಚ್ಯೂರಿಟಿ ಇಲ್ಲ ಅಂತ ಹೇಳಿದ್ದಕ್ಕೆ ಕೆರಳಿದ ಮಾನಸ, ನಾನಿಲ್ಲಿ ಯಾರಿಗೋಸ್ಕರವೂ ಬದುಕೋಕೆ ಬಂದಿಲ್ಲ, ಸಾಯೋಕು ಬಂದಿಲ್ಲ. ನನ್ನಿಷ್ಟದಂತೆ ನಾನು ಇರುತ್ತೇನೆ. ನಾನು ಅಳುತ್ತೇನೆ, ದಿನವೆಲ್ಲಾ ಅಳುತ್ತೇನೆ. ಊಟ ಮಾಡೋದಿಲ್ಲ. ಅದೆಲ್ಲಾ ನನ್ನ ಸ್ವಂತ ಹಕ್ಕು. ನನ್ನ ಸಮಾಧಾನ ಮಾಡೋದಕ್ಕೆ ನೀನು ಯಾರು? ನನ್ನ ಅಕ್ಕನಾ, ತಂಗಿನಾ, ಯಾರು ನೀನು? ನಾನು ನನ್ನ ಆಟ ಆಡೋದಕ್ಕೆ ಬಂದಿದ್ದೇನೆ. ನೀನು ನಿನ್ನ ಆಟ ಆಡೋದಕ್ಕೆ ಬಂದಿದ್ದೀಯಾ ಅಷ್ಟೇ. ನೀನ್ ಯಾವಳೇ ನಂಗೆ ಹೇಳೋಕೆ? ಅಂತ ಕಿಡಿಕಾರಿದ್ದಾರೆ. 

'ನನಗೆ ನಿನ್ ಥರ ಡವ್ ಮಾಡೋದಕ್ಕೆ ಬರಲ್ಲ'

ಮತ್ತೆ ಮಾತು ಮುಂದುವರೆಸಿದ ಮಾನಸ, ಹಾಗೇ ನೋಡಿದ್ರೆ ನನ್ನನ್ನು ನೇರವಾಗಿ ನಾಮಿನೇಟ್ ಮಾಡುವ ಬದಲು ನಿನ್ನನ್ನೇ ನಾಮಿನೇಟ್ ಮಾಡಬಹುದು. ನನಗಿಂತ ನಿನ್ನ ಬಗ್ಗೆಯೇ ಬೇಜಾನ್ ಕಾರಣಗಳಿವೆ. ನೀನು ಯಾರನ್ನೋ ಮೆಚ್ಚಿಸುವುದಕ್ಕೋಸ್ಕರ ಅಳುತ್ತೀಯಾ, ಯಾರನ್ನೋ ಮೆಚ್ಚಿಸುವುದಕ್ಕೋಸ್ಕರ ನಗುತ್ತೀಯಾ. ಚೆನ್ನಾಗಿ ನುಣುಚಿಕೊಳ್ಳುವುದನ್ನು ಕಲಿತಿದ್ದೀಯಾ. ನನ್ನೇನೂ ಇಲ್ಲಿಗೆ ಶೋಕಿ ಮಾಡೋದಕ್ಕೆ ಕರೆಸಿಲ್ಲ. ಇಷ್ಟು ಹೇಳಿದ ಮೇಲೆ ನಾನು ಕಿಚನ್ ವಿಭಾಗದಲ್ಲಿ ಕೆಲಸ ಮಾಡಲ್ಲ. ಜಾಸ್ತಿ ನಾಟಕ ಮಾಡಬೇಡ. ನನಗೆ ನಿನ್ ಥರ ಡವ್ ಮಾಡೋದಕ್ಕೆ ಬರಲ್ಲ. ನನ್ನ ಗುಣ ಡಿಸೈಡ್ ಮಾಡುವುದಕ್ಕೆ ನೀನು ಯಾವಳು? ನೀನು ಹೇಳಿದ್ದನ್ನಕೇಳಿಕೊಂಡು ಬಿದ್ದಿರೋದಕ್ಕೆ ನಾನು ನಿನ್ನ ಕೆಲಸದವಳಲ್ಲ ಅಂತ ಕೆಂಡಕಾರಿದರು.  


ಕೂಲ್ ಆಗಿ ಉತ್ತರಿಸಿದ ಐಶ್ವರ್ಯಾ

ತುಕಾಲಿ ಮಾನಸ ಕೋಪದಿಂದ ಜಗಳವಾಡುತ್ತಿದ್ದರೂ ಐಶ್ವಯಾ್ ಅದನ್ನು ಕೂಲ್ ಆಗಿಯೇ ಹ್ಯಾಂಡಲ್ ಮಾಡಿದರು. ಯಾರಾದರೂ ನಿಮ್ಮನ್ನು ಸಮಾಧಾನ ಮಾಡಲು ಬಂದಾಗ, ಅವರನ್ನು ಗೌರವಿಸುವುದನ್ನು ಕಲಿಯಿರಿ. ಬೇಸಿಕ್ ಕಾಮನ್ ಸೆನ್ಸ್ ಇರಲಿ ಮಾನಸ. ನಿಮ್ಮ ಈ ಮಾತಿನ ಶೈಲಿಗೆ, ನಿಮ್ಮ ಈ ಗುಣಕ್ಕೆ ನಾಮಿನೇಟ್ ಆಗಿರುವುದು. ಯಾವಳು ಅಂತೆಲ್ಲಾ ಮಾತನಾಡಬೇಡಿ. ಜನರು ನೋಡುತ್ತಿದ್ದಾರೆ ಅಂತ ಹೇಳಿದರು. 


ದೊಡ್ಮನೆಯಲ್ಲೀಗ ರಾಜಕೀಯ ಶುರು

ಸದ್ಯ ಬಿಗ್‌ಬಾಸ್ ಮನೆಯಲ್ಲಿ ಎರಡು ರಾಜಕೀಯ ಪಕ್ಷಗಳು ರಚನರಯಾಗಿದೆ. ದೊಡ್ಮನೆಯ ೧೪ ಸ್ಪರ್ಧಿಗಳನ್ನು ಎರಡು ಭಾಗ ಮಾಡಿ, ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನಾಗು ಮಾಡಲಾಗಿದೆ. ಈ ವಾರದ ಕ್ಯಾಪ್ಟನ್‌ಗಳಾಗಿರುವ ಐಶ್ವರ್ಯಾ ಹಾಗೂ ತ್ರಿವಿಕ್ರಮ್ ಅವರನ್ನು ಪಕ್ಷದ ಅಭ್ಯರ್ಥಿಗಳಾಗಿ ಮಾಡಲಾಗಿದೆ. ಒಂದು ಪಕ್ಷಕ್ಕೆ ಧರ್ಮಪರ ಸೇನಾ ಪಕ್ಷ ಅಂತ ಹೆಸರಿಡಲಾಗಿದೆ. ಮತ್ತೊಂದು ಪಕ್ಷಕ್ಕೆ ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ ಅಂತ ನಾಮಕರಣ ಮಾಡಲಾಗಿದೆ. ಎರಡು ಪಕ್ಷಗಳ ಸದಸ್ಯರು ಈಗ ಪ್ರಚಾರ ಆರಂಭಿಸಿದ್ದಾರೆ. 


ಯಾರ ಪಕ್ಷದಲ್ಲಿ ಯಾರಿದ್ದಾರೆ?

ಧರ್ಮ ಸೇನಾ ಪಕ್ಷದ ಅಭ್ಯರ್ಥಿಯಾಗಿರುವ ತ್ರಿವಿಕ್ರಮ್ ಪಾರ್ಟಿಯಲ್ಲಿ ಚೈತ್ರಾ ಕುಂದಾಪುರ, ಅನುಷಾ ರೈ, ಧನರಾಜ್ ಆಚಾರ್, ಮಾನಸ, ಭವ್ಯಾ ಗೌಡ, ಗೋಲ್ಡ್ ಸುರೇಶ್ ಇದ್ದಾರೆ. ಇನ್ನು ಐಶ್ವರ್ಯಾ ಸಿಂಧೋಗಿ ನೇತೃತ್ವದ ಪ್ರಾಮಾಣಿಕ ಸಮರ್ಥರ ನ್ಯಾಯವಾದಿ  ಪಕ್ಷದಲ್ಲಿ ಮೋಕ್ಷಿತಾ ಪೈ, ಉಗ್ರಂ ಮಂಜು, ಗೌತಮಿ ಜಾದವ್, ಶಿಶಿರ್, ಹನುಮಂತ, ಧರ್ಮ ಕೀರ್ತಿರಾಜ್ ಹಾಗೂ ಹಂಸ ಅವರಿದ್ದಾರೆ.  




Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+