X
ಹೋಮ್ ಚಲನಚಿತ್ರಗಳ ಒಳನೋಟ

ಈ ವಾರ ನಾಮಿನೇಟ್ ಆದ 9 ಸ್ಪರ್ಧಿಗಳ ಪೈಕಿ ಎಲಿಮಿನೇಟ್ ಆಗುವವರು ಇವರೇ!

Author Sowmya Bairappa | Published: Thursday, October 24, 2024, 12:59 PM [IST]

ಬಿಗ್‌ಬಾಸ್ ಕನ್ನಡ ಸೀಸನ್ 11ರ ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ವಾರ ದೊಡ್ಮನೆಯಿಂದ ಹೊರಹೋಗಲು ಒಂಬತ್ತು ಮಂದಿ ನಾಮಿನೇಟ್ ಆಗಿದ್ದಾರೆ. ಇಲ್ಲಿ ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ? ಯಾರು, ಯಾರನ್ನು, ಯಾವ ಕಾರಣಕ್ಕೆ ನಾಮಿನೇಟ್ ಮಾಡಿದ್ದಾರೆ? ಎಂಬ ಮಾಹಿತಿಯನ್ನು ನೀಡಲಾಗಿದೆ.


cover image
ಗೌತಮಿ ಮತ್ತು ಮೋಕ್ಷಿತಾ

ಗೌತಮಿ 'ಅವಶ್ಯಕತೆ ಇಲ್ಲದ್ದನ್ನು ಮಾತನಾಡುತ್ತಾರೆ' ಅಂತ ಗೋಲ್ಡ್ ಸುರೇಶ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಜೊತೆಗೆ  'ಇನ್ನೊಬ್ಬರನ್ನು ತುಳಿದು ಮೇಲೆ ಹೋಗ್ತೀನಿ' ಅನ್ನುವ ಭವ್ಯಾ ಗೌಡ ಮಾತು ನನಗೆ ಇಷ್ಟವಾಗಲಿಲ್ಲ ಅಂತ ಅವರನ್ನು ನಾಮಿನೇಟ್ ಮಾಡಿದ್ದಾರೆ. ಮೋಕ್ಷಿತಾ ಅವರು, ಚೈತ್ರಾ ಅನವಶ್ಯಕವಾಗಿ ಜಗಳ ಮಾಡುತ್ತಾರೆ. ಇಬ್ಬರ ಜಗಳದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ ಅಂತ ಅವರನ್ನು ನಾಮಿನೇಟ್ ಮಾಡಿದ್ದಾರೆ. ಜೊತೆಗೆ ಧನರಾಜ್ ಅವರಿಗೆ ಬಾತ್‌ರೂಮ್ ಕ್ಲೀನ್ ಆಯ್ತಾ ಅಂತ ಕೇಳಿದೆ. ಹಾ ಅಲ್ಲೇ ಬಂದು ತಿಂಡಿ ತಿನ್ನಬಹುದು ಅಂದರು. ಆ ಮಾತು ನನಗೆ ಇಷ್ಟವಾಗಲಿಲ್ಲ ಅಂತ ಹೇಳಿದ್ದಾರೆ. 

ಉಗ್ರಂ ಮಂಜು ಮತ್ತು ಚೈತ್ರಾ

ಉಗ್ರಂ ಮಂಜು ಅವರು 'ಹಂಸ ಯಾವುದೇ ಟಾಸ್ಕ್ ಅನ್ನು ವೈಯಕ್ತಿಕವಾಗಿ ಆಡಿಲ್ಲ. ಅವರ ವೈಯಕ್ತಿಕ  ಪರ್ಫಾಮೆನ್ಸ್ ಏನೂ ಇಲ್ಲ. ಇನ್ನು ಭವ್ಯಾ ಗೌಡ ಟಾಸ್ಕ್‌ನಲ್ಲೂ ಅಷ್ಟಕಷ್ಟೇ. ಅವರಲ್ಲಿ ನಾನು ಅನ್ನೋದು ಜಾಸ್ತಿಯಿದೆ ಅಂತ ಅವರಿಬ್ಬರನ್ನು ನಾಮಿನೇಟ್ ಮಾಡಿದರು. ಚೈತ್ರಾ ಕುಂದಾಪುರ ಅವರು, 'ಮೋಕ್ಷಿತಾ ತಮ್ಮ ಕಂಫರ್ಟ್ ಜೋನ್ ಬಿಟ್ಟು ಹೊರಗೆ ಬರ್ತಿಲ್ಲ ಅಂತ ಅನಿಸುತ್ತಿದೆ. ಇನ್ನು ಎಲ್ಲರೂ ಒಂದು ದಿಕ್ಕಿನಲ್ಲಿ ಯೋಚನೆ ಮಾಡುತ್ತಿದ್ದರೆ, ಗೋಲ್ಡ್ ಸುರೇಶ್ ಇನ್ನೊಂದು ದಿಕ್ಕಿನಲ್ಲಿ ಯೋಚನೆ ಮಾಡುತ್ತಿರುತ್ತಾರೆ. ಎಲ್ಲದರಲ್ಲೂ ಅನುಮಾನ ಹುಡುಕುತ್ತಾರೆ ಎಂಬ ಕಾರಣಗಳನ್ನು ನೀಡಿದ್ದಾರೆ.  


ಧನರಾಜ್ ಮತ್ತು ಹಂಸ

ಧನರಾಜ್ ಅವರು 'ಕೆಲ ದಿನಗಳ ಕಾಲ ನಾನು ಗೋಲ್ಡ್ ಸುರೇಶ್ ಅವರ ಒಡನಾಟ ಹೊಂದಿದ್ದೆ. ಆಗ ಅವರು ಒಂದಷ್ಟು ಮಾತುಗಳನ್ನು ಹೇಳಿದರು. ಅವರು ಸುಳ್ಳು ಎಂಬುದು ಆನಂತರ  ಗೊತ್ತಾಯ್ತು. ಇನ್ನು ಚೈತ್ರಾ ಕುಂದಾಪುರ ಕ್ಯಾರೆಕ್ಟರ್‌ನಲ್ಲಿ ನನಗೆ ಎರಡು ಮುಖ ಕಾಣಿಸುತ್ತಿದೆ ಅಂತ ನಾಮಿನೇಟ್ ಮಾಡಿದರು.  ಹಂಸಾ ಅವರು 'ನನ್ನ ಬಗ್ಗೆ ಸುರೇಶ್ ಮಾತನಾಡಿದ್ದಾರೆ. ರಂಜಿತ್, ತ್ರಿವಿಕ್ರಮ್ ಮತ್ತು ನನ್ನ ನಡುವೆ ಲವ್ ಸ್ಟೋರಿಯಿದೆ ಅಂತ ಹೇಳಿದ್ದಾರೆ. ಇಲ್ಲಿ ಆ ರೀತಿ ಯಾವುದೂ ಇಲ್ಲ. ಮೋಕ್ಷಿತಾ ಅವರನ್ನು ನರಕದಲ್ಲಿ ಕನೆಕ್ಟ್ ಆಗೋಕೆ ಆಗಲಿಲ್ಲ. ಆದರೆ, ಈಗ ಅವರು ಬರೀ ಗೌತಮಿ ಜೊತೆಗೆ ಇರುತ್ತಾರೆ ಎಂದು ಇಬ್ಬರನ್ನು ನಾಮಿನೇಟ್ ಮಾಡಿದರು. 

ಶಿಶಿರ್ ಮತ್ತು ಧರ್ಮ

ಧರ್ಮ ಅವರು 'ಶಿಶಿರ್ ಗಡಿಯಾರ ಟಾಸ್ಕ್‌ನಲ್ಲಿ ಯಾರನ್ನೂ ಬಿಡಲ್ಲ ಅನ್ನುತ್ತಿದ್ದರು ಹಾಗಾಗಿ ಅವರನ್ನು ಹಾಗೂ ಗೌತಮಿ ಯಾರ ಜೊತೆಗೆ ಬೆರೆಯುತ್ತಿಲ್ಲ ಎಂಬ ಕಾರಣ ನೀಡಿ ಇಬ್ಬರನ್ನು ನಾಮಿನೇಟ್ ಮಾಡಿದರು. ಇನ್ನು ಶಿಶಿರ್ ಅವರು 'ಚೈತ್ರಾ ಆತುರದ ಮಾತುಗಳನ್ನು ಆಡುತ್ತಿರುತ್ತಾರೆ. ಕೆಲ ವಿಷಯಗಳಲ್ಲಿ ಅವರು ಸ್ಥಿಮಿತ ಕಳೆದುಕೊಂಡರು. ಭವ್ಯಾ ಅವರ ಮಾತುಗಳೇ ಸಮಸ್ಯೆಯಾಗಿವೆ. ಅವರು ಸಂದರ್ಭಕ್ಕೆ ಸೂಕ್ತವಲ್ಲದ ಮಾತುಗಳನ್ನು ಆಡುತ್ತಾರೆ ಎಂದರು. 


ಭವ್ಯಾ & ಮಾನಸ

ಭವ್ಯಾ ಅವರು 'ಗೌತಮಿ & ಮೋಕ್ಷಿತಾ ನರಕದಲ್ಲಿ ಯಾವ ರೀತಿ ಇದ್ದರೋ, ಈಗಲೂ ಅದೇ ರೀತಿ ಇದ್ದಾರೆ. ಇಬ್ಬರು ಮೂಲೆಗುಂಪಾಗಿದ್ದಾರೆ. ಬೇರೆಯವರ ಜೊತೆ ಬೆರೆಯುತ್ತಿಲ್ಲ ಅಂತ ನಾಮಿನೇಟ್ ಮಾಡಿದರು. ಮಾನಸ ಅವರು 'ಮೋಕ್ಷಿತಾ ಎರಡು ವಾರಗಳ ನಂತರ ಬದಲಾಗಿದ್ದಾರೆ. ಗೌತಮಿ ಎಲ್ಲಾ ಸಮಯದಲ್ಲೂ ಪಾಸಿಟಿವ್ ಅಂದುಕೊಂಡೇ ಇರುತ್ತಾರೆ. ಎಲ್ಲೋ ಮೂಲೆಯಲ್ಲಿ ಇರುತ್ತಾರೆ ಅಂತ ನಾಮಿನೇಟ್ ಮಾಡಿದರು.


ಗೋಲ್ಡ್ ಸುರೇಶ್ & ಅನುಷಾ

ಗೋಲ್ಡ್ ಸುರೇಶ್ ಅವರು 'ಹಂಸ ಗುಂಪಿನಲ್ಲಿದ್ದರೆ ವಿನ್ ಆಗಬಹುದು, ಸೇಫ್ ಆಗಬಹುದು ಅಂತ ಅಂದುಕೊಂಡಿದ್ದಾರೆ. ಚೈತ್ರಾ ಕುಂದಾಪುರ ಮಾತಿನ ಭರದಲ್ಲಿ ಏನೇನೋ ಹೇಳುತ್ತಾರೆ. ಅದು ಎಲ್ಲರಿಗೂ ಇಷ್ಟವಾಗುತ್ತಿಲ್ಲ ಎಂಬ ಕಾರಣ ನೀಡಿ ಅವರಿಬ್ಬರನ್ನು ನಾಮಿನೇಟ್ ಮಾಡಿದರು. ಇನ್ನು ಅನುಷಾ 'ನಾನು ಆರಂಭದಲ್ಲಿ ನೋಡಿದ ಸುರೇಶ್ ಈಗ ಇಲ್ಲ. ಅವರ ಎನರ್ಜಿ ಡ್ರಾಪ್ ಆಗಿದೆ. ಶಿಶಿರ್ ಕ್ಯಾಪ್ಟನ್‌ಶಿಪ್ ಚೆನ್ನಾಗಿ ಮಾಡಿದ್ದರು. ಆದರೆ, ಅವರು ತೆಗೆದುಕೊಂಡ ನಿರ್ಧಾರಗಳಲ್ಲಿ ಪ್ರಾಮಾಣಿಕತೆ ಇರುತ್ತಿರಲಿಲ್ಲ ಎಂಬ ಕಾರಣ ನೀಡಿ ಇಬ್ಬರನ್ನು ನಾಮಿನೇಟ್ ಮಾಡಿದರು. 

ಹನುಮಂತ ನಾಮಿನೇಟ್ ಮಾಡಿದ್ದು ಯಾರನ್ನ?

ಇನ್ನು ವೈಲ್ಡ್ ಕಾರ್ಡ್ ಸ್ಪರ್ಧಿ ಹನುಮಂತ ಅವರು, ಯಾರನ್ನು ನಾಮಿನೇಟ್ ಮಾಡಬೇಕೆಂಬ ಗೊಂದಲಕ್ಕೆ ಸಿಲುಕಿದ್ದರು. ಬಳಿಕ ಬಿಗ್‌ಬಾಸ್ ಒತ್ತಾಯಿಸಿದ್ದಕ್ಕೆ 'ನೀನು ಸಂತೆಯಲ್ಲಿ ಕಳೆದು ಹೋದವರ ಥರ ಆಡುತ್ತಿದ್ಯಾ ಅಂತ ಹಂಸ ಅಕ್ಕ ಎರಡ್ಮೂರು ಬಾರಿ ಹೇಳಿದ್ರು. ಅದು ನನಗೆ ಬೇಜಾರಾಯ್ತು. ಇನ್ನು ಸುರೇಶಣ್ಣ ಬರೀ ನಿದ್ದೆ ಮಾಡ್ತಾನೆ ಅಂತ ಅವರಿಬ್ಬರನ್ನು ನಾಮಿನೇಟ್ ಮಾಡಿದರು. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+