X
ಹೋಮ್ ಚಲನಚಿತ್ರಗಳ ಒಳನೋಟ

ಬಿಗ್‌ಬಾಸ್‌ ಮನೆಯಲ್ಲಿ ಡ್ರೋನ್ ಪ್ರತಾಪ್‌ ಕಣ್ಣೀರು ಹಾಕಲು ಕಾರಣ ಏನು: ವೀಕ್ಷಕರು ಏನಂದ್ರು?

Author Sowmya Bairappa | Published: Wednesday, October 25, 2023, 12:07 PM [IST]

ಡ್ರೋನ್ ವಿಚಾರವಾಗಿ ಸಾಕಷ್ಟು ಟ್ರೋಲ್ ಹಾಗೂ ಟೀಕೆಗೊಳಗಾಗಿದ್ದ ಪ್ರತಾಪ್ ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ ೧೦ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ದೊಡ್ಮನೆಗೆ ಎಂಟ್ರಿಕೊಟ್ಟ ಮೊದಲನೇ ಡ್ರೋನ್ ಪ್ರತಾಪ್ ಸಾಕಷ್ಟು ಲೇವಡಿಗೆ ಒಳಗಾಗಿದ್ದರು. ಬಳಿಕ ಕಿಚ್ಚ ಸುದೀಪ್ ಅದನ್ನು ಖಂಡಿಸಿದ್ದರು. ಇದಾದ ಬಳಿಕ ಪ್ರತಾಪ್ ಕೊಂಚ ಧೈರ್ಯ ತಂದುಕೊಂಡಿದ್ದರು. ಆದರೆ, ಮೂರನೇ ವಾರ ಮನೆಯವರ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಲಾಗದೇ ಪ್ರತಾಪ್ ಗಳಗಳನೇ ಕಣ್ಣೀರು ಹಾಕಿದ್ದಾರೆ.


cover image
ಊಟದಲ್ಲಿ ಏನಾದ್ರು ಹಾಕಿ ಸಾಯಿಸಿಬಿಡು ಎಂದ್ರು

ವಿಜಯದಶಮಿ ಪ್ರಯುಕ್ತ ನಟಿ ತಾರಾ ಬಿಗ್‌ಬಾಸ್‌ ಮನೆಗೆ ಅತಿಥಿಯಾಗಿ ಆಗಮಿಸಿದ್ದರು. ದೊಡ್ಮನೆಯ ಸದಸ್ಯರೊಂದಿಗೆ ಸ್ವಲ್ಪ ಹೊತ್ತು ಕಾಲಕಾಳೆದ ಅವರು, ನಂತರ ಡ್ರೋನ್ ಪ್ರತಾಪ್ ಜೊತೆ ಮುಕ್ತವಾಗಿ ಮಾತನಾಡಿದರು.  ನನ್ನ ನಿನ್ನ ತಾಯಿ ಅಂತ ತಿಳಿದುಕೋ, ನನ್ನತ್ರ ಹೇಳಿಕೋ. ನಿನ್ನೊಂದಿಗೆ ಮಾತನಾಡುವುದಾಕ್ಕಾಗಿಯೇ ನಾನಿಲ್ಲಿ ಬಂದಿರೋದು. ಎಲ್ಲರೂ ತಪ್ಪು ಮಾಡ್ತಾರೆ ಕಣೋ. ನೀನು ಒಬ್ನೇನಾ ತಪ್ಪು ಮಾಡಿರೋದು ಅಂತ ಸಮಾಧಾನ ಹೇಳಿದ್ರು. ಈ ವೇಳೆ ನೋವು ತೋಡಿಕೊಂಡ ಡ್ರೋನ್ ಪ್ರತಾಪ್, ನಿನ್ನ ಮಗನನ್ನು ಯಾಕೆ ಉಳಿಸಿದ್ದೀಯಾ? ಊಟದಲ್ಲಿ ಏನಾದ್ರೂ ಹಾಕಿ ಸಾಯಿಸಿಬಿಡು ಅಂತ ಸಂಬಂಧಿಕರು ನನ್ನ ತಾಯಿಗೆ ಹೇಳಿದ್ರು. ಎಲ್ಲರ ಹತ್ತಿರ ಹಣ ತೆಗೆದುಕೊಂಡುಬಿಟ್ಟಿದ್ದೀನಿ ಅಂತಾರೆ ಎಂದು ಕಣ್ಣೀರಿನ ಕೋಡಿ ಹರಿಸಿದ್ದಾರೆ. 

ಅಮ್ಮ ಒಂದು ಮದುವೆಗೂ ಹೋಗಲ್ಲ

ನನ್ನಿಂದಾಗಿ ನಮ್ಮಮ್ಮ ಒಂದೇ ಒಂದು ಮದುವೆ-ಮುಂಜಿಗೂ ಹೋಗಲ್ಲ. ಊರಲ್ಲಿ ಮನೆ ಕಟ್ಟಿದ್ರು. ಅದರ ಗೃಹಪ್ರವೇಶಕ್ಕೆ ಕರೆದರು. ಆದರೆ, ನಾನು ಹೋಗಲಿಲ್ಲ. ನನ್ನ ಹೆಸರನ್ನೂ ಎಲ್ಲೂ ಹೇಳಬೇಡಿ ಅಂತ ಹೇಳದ್ದೇನೆ ಅಂತ ಕಣ್ಣೀರಿಟ್ಟರು. ನನ್ನ ಅಪ್ಪ, ಅಮ್ಮ ಹಾಗೂ ತಂಗಿ ಎಲ್ಲರ ಫೋನ್ ನಂಬರ್ ಬ್ಲಾಕ್ ಮಾಡಿದ್ದೀನಿ. ನನ್ನಿಂದಾಗಿ ಅವರು ತುಂಬ ನೋವು ಅನುಭಿಸಿದ್ದಾರೆ ಎಂದರು. ನಾನು ತಪ್ಪು ಮಾಡಿದ್ದರೆ ನನನ್ನನ್ನು ತೆಗೆದುಕೊಂಡು ಹೋಗಿ ಜೈಲಿನಲ್ಲಿಡಿ. ಯಾಕೆ ನನಗೆ ಮಾದ್ಯಮಗಳಲ್ಲಿ ಮಾನಹರಣ ಮಾಡ್ತೀರಾ ಎಂದರು. 

 

ಅಪ್ಪ-ಅಮ್ಮನನ್ನು ನೋಡ್ಬೇಕು ಅನಿಸ್ತಿದೆ

ನನಗೆ ಮದುವೆಯಾಗಬೇಕಿರುವ ತಂಗಿ ಇದ್ದಾಳೆ. ಅದಕ್ಕೋಸ್ಕರ ಕಂಪನಿ ಮಾಡಿದ್ದೇನೆ. ಅಪ್ಪ-ಅಮ್ಮ ನನ್ನ ಮಾವನ ಮೂಲಕ ಈ ಶೋಗೆ ಹೋಗಬೇಡ ಅಂತ ಹೇಳಿ ಕಳುಹಿಸಿದ್ರು. ನಾನು ಬಿಗ್‌ಬಾಸ್ ಮನೆಗೆ ಬರುವಾಗಲೂ ಯಾರೂ ನನ್ನನ್ನು ಕಳುಹಿಸಿಕೊಡಲು ಬರಲಿಲ್ಲ. ನನಗೆ ತಂದೆ-ತಾಯಿಯನ್ನು ನೋಡ್ನೇಕು ಅನಿಸ್ತಿದೆ ಎಂದು ತಾರಾ ಬಳಿ ಮನವಿ ಮಾಡಿದರು.

 

ಪ್ರತಾಪ್‌ ಬಗ್ಗೆ ಸ್ಪರ್ಧಿಗಳು ಹೇಳಿದ್ದೇನು?

ಮೂರನೇ ವಾರ ದೊಡ್ಮನೆ ಸದಸ್ಯರೆಲ್ಲರೂ ವಿನಯ್ ಹಾಗೂ ಡ್ರೋನ್ ಪ್ರತಾಪ್‌ಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ.  ನಮ್ರತಾ ನೀವು ಮೊದಲನೇ ವಾರ ಒಂಥರಾ ಇದ್ರಿ. ಎರಡನೇ ವಾರ ಬೇರೆ ಕ್ಯಾರೆಕ್ಟರ್‌ಗೆ ಶಿಫ್ಟ್ ಆದ್ರಿ...ಯಾಕೆ? ನನಗೆ ಉತ್ತರ ಬೇಕು ಎಂದರು. ನಂತರ ಸಿರಿ, ಹಿಂದೆ ಮಾತನಾಡೋದನ್ನು ಮುಂದೆ ಬಂದು ಯಾಕೆ ಕೇಳಲ್ಲ ಅಂತ ಪ್ರಶ್ನಿಸಿದ್ದಾರೆ. ಇನ್ನು ತುಕಾಲಿ ಸಂತು, ನಾಮಿನೇಷನ್ ಆದ ತಕ್ಷಣ ನನ್ನನ್ನು ಟಾರ್ಗೆಟ್ ಮಾಡಿದ್ರು ಅಂದ ಯಾಕೆ ಅಂದುಕೊಳ್ಳುತ್ತೀರಾ ಅಂತ ಕೇಳಿದ್ದಾರೆ. ದೊಡ್ಮನೆ ಸದಸ್ಯರ ಪ್ರಶ್ನೆಗೆ ಪ್ರತಾಪ್ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. 

 

ವೀಕ್ಷಕರು ಏನಂತಾರೆ?

ತಪ್ಪು ಮಾಡಿದ ವಿನಯ್‌ನ ಪ್ರಶ್ನೆ ಮಾಡುವುದಕ್ಕೆ ಬಿಗ್‌ಬಾಸ್ ಅವಕಾಶ ಕೊಟ್ಟಿದ್ದಾರೆ. ಆದರೆ, ಪಾಪ ಆ ಪ್ರತಾಪ್‌ನ ಪ್ರಶ್ನೆ ಮಾಡ್ತಿರಲ್ಲಾ..ಮುನುಷ್ಯರಾ ನಿವೆಲ್ಲಾ? ಎಂದಿದ್ದಾರೆ. ನಿನ್ನೆ ವಿನಯ್ ವಿರುದ್ಧ ಪ್ರತಾಪ್ ಮಾತನಾಡಿರುವ ಕಾರಣ ಇವತ್ತು ನಮ್ರತಾ ಪ್ರತಾಪ್ ಅವರನ್ನ ಟಾರ್ಗೆಟ್ ಮಾಡ್ತಿದ್ದಾರೆ. ವಿನಯ್‌ಗೆ ನಮ್ರತಾ ಬಕೆಟ್ ಹಿಡಿತ್ತಿದ್ದಾರೆ. ಪ್ರತಾಪ್ ಬೇರೆ ಕ್ಯಾರೆಕ್ಟರ್‌ಗೆ ಶಿಫ್ಟ್ ಆಗಿಲ್ಲ. ನೀವೇ ಆಗಿದ್ದು ನಮ್ರತಾ ಎಂದಿದ್ದಾರೆ ಹಲವರು. ಮೊದಲು ಪ್ರತಾಪ್ ಓಪನ್‌ಅಪ್ ಆಗ್ತಿಲ್ಲ ಅಂತ ನಾಮಿನೇಟ್ ಮಾಡ್ತಿದ್ರು. ಈಗ ಓಪನ್‌ಅಪ್ ಆಗಿದ್ದಕ್ಕೆ ನಾಮಿನೇಟ್ ಮಾಡುತ್ತಾ ಟಾರ್ಗೆಟ್ ಮಾಡ್ತಿದ್ದಾರೆ. ಒಬ್ಬ ಮನುಷ್ಯನಿಗೆ ಎಷ್ಟು ಅವಮಾನ ಮಾಡಬಹುದು ಮಾಡಿದ್ದೀರಾ? ಪ್ರತಾಪ್ ಅವರನ್ನು ಯಾಕೆ ಬಿಗ್‌ಬಾಸ್ ಮನೆಗೆ ಕರೆಸಿದ್ದು ಅಂತ ಕಲರ್ಸ್ ಕನ್ನಡ ವೀಕ್ಷಕರು ಹೇಳುತ್ತಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+