X
ಹೋಮ್ ಚಲನಚಿತ್ರಗಳ ಒಳನೋಟ

ಇದೊಂದು ಸ್ಕ್ರಿಪ್ಟೆಡ್ ಶೋ ಎಂದುಕೊಂಡಿದ್ದೆ, ಅದು ಸುಳ್ಳಾಯಿತು: ಕ್ಯಾಮರಾ ಮುಂದೆ ಲಾಯರ್ ಜಗದೀಶ್ ಮಾತು

Author Sowmya Bairappa | Published: Saturday, October 12, 2024, 11:59 AM [IST]

ಬಿಗ್‌ಬಾಸ್ ಕನ್ನಡ ಸೀಸನ್ 11 ಆರಂಭವಾಗಿ 12 ದಿನಗಳು ಕಳೆದಿವೆ. ೧೨ನೇ ದಿನದಂದು ದೊಡ್ಮನೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಇತ್ತ ಬಿಗ್‌ಬಾಸ್ ಸೇರಿದ ಮೊದಲ ವಾರವೇ ಎಕ್ಸ್‌ಫೋಸ್ ಮಾಡ್ತೀನಿ, ನನ್ನನ್ನು ಎದರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್‌ಬಾಸ್ ಓಡುಸ್ತೀರಾ ಅಂತೆಲ್ಲಾ ಸವಾಲು ಹಾಕಿದ್ದ ಲಾಯರ್ ಜಗದೀಶ್ ಈಗ ಸಾಕಷ್ಟು ಬದಲಾಗಿದ್ದಾರೆ. ಅವರ ಆಲೋಚನೆಗಳು ಕೂಡ ಬದಲಾಗಿವೆ.


cover image
'ನಾನು ಅಂದುಕೊಂಡಿದ್ದೆಲ್ಲವೂ ಸುಳ್ಳಾಯಿತು'

ಕಳೆದ ಸಂಚಿಕೆಯಲ್ಲಿ ಲಾಯರ್ ಜಗದೀಶ್ ಕ್ಯಾಮರಾ ಮುಂದೆ ಮಾತನಾಡುತ್ತಾ, ನಾನು ಬಿಗ್‌ಬಾಸ್‌ನ ಇಷ್ಟಪಡುತ್ತಿದ್ದೇನೆ. ಇದೊಂದು ಸ್ಕ್ರಿಪ್ಟೆಡ್ ಶೋ ಎಂದುಕೊಂಡಿದ್ದೆ. ಅದು ಸುಳ್ಳಾಯಿತು. ಎಲ್ಲಾ ಸೆಟಪ್ ಇರುತ್ತೆ ಅಂದುಕೊಂಡಿದ್ದೆ. ಅದು ಕೂಡ ಸುಳ್ಳಾಗಿದೆ. ಒಟ್ಟಾರೆ ನಾನು ಅಂದುಕೊಂಡಿದ್ದೆಲ್ಲವೂ ಸುಳ್ಳಾಯಿತು ಅಂತ ತಮ್ಮ ಮನದಾಳದ ಮಾತು ಹೇಳಿಕೊಂಡಿದ್ದಾರೆ.  


ಸ್ವರ್ಗ-ನರಕ ಕಾನ್ಸೆಪ್ಟ್ ಕ್ಲೋಸ್

ಬಿಗ್‌ಬಾಸ್ ಕನ್ನಡ ಸೀಸನ್ 11ರ ಕಾರ್ಯಕ್ರಮವನ್ನು ಹೊಸ ಅಧ್ಯಾಯ ಅಂತ ಕಲರ್ಸ್ ವಾಹಿನಿ ಘೋಷಿಸಿತ್ತು. ಅದರ ಭಾಗವಾಗಿ ದೊಡ್ಮನೆಯನ್ನು ಸ್ವರ್ಗ ಮತ್ತು ನರಕ ಅಂತ ಎರಡು ಭಾಗಗಳನನ್ನಾಗಿ ಮಾಡಲಾಗಿತ್ತು. ಅದಂತೆ ಕೆಲ ಸ್ಪರ್ಧಿಗಳು ಸ್ವರ್ಗ ಸೇರಿದ್ದರೆ, ಮತ್ತೆ ಕೆಲವರು ನರಕ ಸೇರಿದ್ದರು. ಈ ಸೀನಸ್ ಪೂರ್ತಿ ಇದೇ ಕನ್ಸೆಪ್ಟ್ ಮುಂದುವರೆಯಲಿದೆ ಅಂತ ಊಹಿಸಲಾಗಿತ್ತು. ಆದ್ರೀಗ ಸ್ವರ್ಗ ಹಾಗೂ ನರಕ ಕಾನ್ಸೆಪ್ಟ್ ತೆಗೆಯಲಾಗಿದೆ. ಎರಡಾಗಿದ್ದ ಮನೆ ಒಂದಾಗುತ್ತೆ. ಒಂದಾದ ಮನೆ ಸ್ವರ್ಗವಾಗಿ ಉಳಿಯುತ್ತಾ? ಇಲ್ಲವೇ ನರಕವಾಗುತ್ತಾ ಅನ್ನೋದು ನಿಮ್ಮ ಕೈಯಲ್ಲಿದೆ ಅಂತ ಬಿಗ್‌ಬಾಸ್ ಘೋಷಿಸಿದ್ದಾರೆ. 


'ದೂರು ಕೊಡಲಾಗಿತ್ತು'

ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಸ್ವರ್ಗ-ನರಕ ಕಾನ್ಸೆಪ್ಟ್ ಕುರಿತಾಗಿ ರಾಜ್ಯ ಮಹಿಳಾ ಆಯೋಗ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡಲಾಗಿತ್ತು. ನರಕದಲ್ಲಿ ಮಹಿಳೆಯರ ಮೂಲಭೂತ ಸೌಕರ್ಯಗಳಿಗೆ ಧಕ್ಕೆ ಉಂಟಾಗಿದೆ ಎಂದುದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ರಾಮನಗರದ ಎಸ್‌ಪಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸೂಚನೆ ನೀಡಿದ್ದರು. ಇದಾದ ಬೆನ್ನಲ್ಲೇ ಬಿಗ್‌ಬಾಸ್ ಮನೆಯ ನರಕ ಧ್ವಂಸ ಮಾಡಿ, ಎಲ್ಲರಿಗೂ ಸಮಾನವಾದ ಸ್ಥಾನಮಾನ ಮತ್ತು ಮೂಲ ಸೌಕರ್ಯ ಕಲ್ಪಿಸಲಾಗಿದೆ. 

'ದೂರು ಕೊಡಲಾಗಿತ್ತು'

ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಸ್ವರ್ಗ-ನರಕ ಕಾನ್ಸೆಪ್ಟ್ ಕುರಿತಾಗಿ ರಾಜ್ಯ ಮಹಿಳಾ ಆಯೋಗ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡಲಾಗಿತ್ತು. ನರಕದಲ್ಲಿ ಮಹಿಳೆಯರ ಮೂಲಭೂತ ಸೌಕರ್ಯಗಳಿಗೆ ಧಕ್ಕೆ ಉಂಟಾಗಿದೆ ಎಂದುದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ರಾಮನಗರದ ಎಸ್‌ಪಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸೂಚನೆ ನೀಡಿದ್ದರು. ಇದಾದ ಬೆನ್ನಲ್ಲೇ ಬಿಗ್‌ಬಾಸ್ ಮನೆಯ ನರಕ ಧ್ವಂಸ ಮಾಡಿ, ಎಲ್ಲರಿಗೂ ಸಮಾನವಾದ ಸ್ಥಾನಮಾನ ಮತ್ತು ಮೂಲ ಸೌಕರ್ಯ ಕಲ್ಪಿಸಲಾಗಿದೆ. 

ಕ್ಯಾಪ್ಟನ್ ಆದ ಶಿಶಿರ್

ಎರಡನೇ ವಾರದ ಕ್ಯಾಪ್ಟನ್ ರೇಸ್‌ನಲ್ಲಿ ನಾಮಿನೇಷನ್‌ನಿಂದ ಪಾರಾದ ಮೋಕ್ಷಿತಾ ಪೈ, ಉಗ್ರಂ ಮಂಜು, ಗೌತಮಿ ಜಾದವ್, ಚೈತ್ರಾ ಕುಂದಾಪುರ, ಶಿಶಿರ್ ಶಾಸ್ತ್ರಿ ಇದ್ದರು. ಮನೆಯ ಸದಸ್ಯರೆಲ್ಲರೂ ಈ ವಾರ ಯಾರು ಕ್ಯಾಪ್ಟನ್ ಆಗಬೇಕು, ಯಾರು ಆಗಬಾರದು ಎಂಬುದನ್ನು ಸೂಕ್ತ ಕಾರಣಗಳೊಂದಿಗೆ ನೀಡಬೇಕಿತ್ತು. ಅದರಂತೆ ಮನೆಯ ಸದಸ್ಯರು ಮೂವರನ್ನು ಆಯ್ಕೆ ಮಾಡಿದರು. ಆ ಮೂವರಿಗೆ ಬಿಗ್‌ಬಾಸ್‌ ಬಲೆ ಬಿಡಿಸಿಕೊಂಡು ಹೋಗುವ ಟಾಸ್ಕ್‌ ನೀಡಿದರು. ಈ ಟಾಸ್ಕ್‌ನಲ್ಲಿ ಗೆದ್ದು ಶಿಶಿರ್ ಕ್ಯಾಪ್ಟನ್ ಆದರು.

ಎಲಿಮಿನೇಷನ್ ಇಲ್ಲ

ಈ ವಾರ ಮನೆಯಿಂದ ಹೊರಹೋಗಲು ಭವ್ಯಾ ಗೌಡ, ಧನರಾಜ್, ಧರ್ಮ ಕೀರ್ತಿರಾಜ್, ರಂಜಿತ್, ತ್ರಿವಿಕ್ರಮ್, ಮಾನಸಾ, ಐಶ್ವರ್ಯಾ ಸಿಂಧೋಗಿ, ಗೋಲ್ಡ್ ಸುರೇಶ್, ಹಂಸಾ, ಜಗದೀಶ್ ಹಾಗೂ ಅನುಷಾ ರೈ ನಾಮಿನೇಟ್ ಆಗಿದ್ದರು. ಆದರೆ, ವೋಟಿಂಗ್ ಲೈನ್ಸ್ ತೆರೆದಿರುವುದಿಲ್ಲ ಎಂಬ ಸೂಚನೆ ನೀಡಲಾಗಿದೆ. ಹೀಗಾಗಿ, ಈ ವಾರ ಎಲಿಮಿನೇಷನ್ ಇಲ್ಲ. ಇಂದು ವಿಜಯ ದಶಮಿ ಇರುವ ಕಾರಣ ಹಬ್ಬದಂದು ಯಾರನ್ನೂ ಎಲಿಮಿನೇಟ್ ಮಾಡುವುದಿಲ್ಲ. 

 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+