X
ಹೋಮ್ ಚಲನಚಿತ್ರಗಳ ಒಳನೋಟ

ಸಂಗೀತಾಗೆ ಖೆಡ್ಡಾ: ತಮ್ಮ ಒಗ್ಗಟ್ಟಿನ ಬಲದಿಂದ ದೊಡ್ಮನೆ ಸದಸ್ಯರನ್ನು ಆಡಿಸುತ್ತಿರುವ ಸಂತು-ಪಂತು

Author Sowmya Bairappa | Published: Friday, January 19, 2024, 12:59 PM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10 ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ, ಮನೆಯ ಸದಸ್ಯರು ಫಿನಾಲೆ ತಲುಪಲು ಶಕ್ತಿಮೀರಿ ಯತ್ನಿಸುತ್ತಿದ್ದಾರೆ. ಕಡೆಯ ವಾರದಲ್ಲಿ ಬಿಗ್‌ಬಾಸ್‌ ಕೆಲ ಟಾಸ್ಕ್‌ಗಳನ್ನು ನೀಡಿದ್ದು, ಎಲ್ಲರೂ ಆಡಿ ತಮ್ಮ ಶಕ್ತಿ, ಪ್ರತಿಭೆ ಫ್ರೂವ್ ಮಾಡಿಕೊಳ್ಳುವ ಕಾತರದಲ್ಲಿದ್ದಾರೆ. ಈ ನಡುವೆ ಸಂತು-ಪಂತು ಪ್ಲ್ಯಾನ್ ಮಾಡಿಕೊಂಡು ಇತರ ಸದಸ್ಯರನ್ನು ಆಡಸುತ್ತಿದ್ದಾರೆ.


cover image
ಸಂತು-ಪಂತು ಪ್ಲ್ಯಾನ್

ಬಿಗ್‌ಬಾಸ್‌ ನೀಡಿದಾಗ ಯಾರು ಈ ಟಾಸ್ಕ್ ಆಡಬೇಕೆಂಬ ಗೊಂದಲ ಪ್ರತಿಬಾರಿ ಉಂಟಾಗುತ್ತದೆ. ಆದ್ರೀಗ ದೊಡ್ಮನೆಯಲ್ಲಿ ಟಾಸ್ಕ್ ಯಾರು ಆಡಬೇಕು ಎಂಬುದನ್ನು ನಿರ್ಧರಿಸುವ ಯತ್ನ ಮಾಡುತ್ತಿರುವುದು ಸಂತು-ಪಂತು ಜೋಡಿ. ಪ್ರತಿಯೊಬ್ಬರೂ ಸಹ ಟಾಸ್ಕ್ ಅನ್ನು ತಾವು ಆಡಬೇಕು ಅಂತ ಅವಕಾಶಕ್ಕಾಗಿ ಕ್ಯಾಪ್ಟನ್ ಸಂಗೀತಾ ಬಳಿ ಬೇಡಿಕೆಯಿಡುತ್ತಿದ್ದಾರೆ. ಇದರಿಂದಾಗಿ ಇಷ್ಟವಿಲ್ಲದಿದ್ದರೂ ವೋಟಿಂಗ್‌ಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೆ, ಮನೆಯ ಇತರೆ ಸದಸ್ಯರ ಮತಗಳು ಮೊದಲೇ ಇಂಥಹವರಿಗೆಂದು ನಿರ್ಧಾರಿತವಾಗಿರುವ ಕಾರಣ ಎಲ್ಲರಿಗೂ ತಲಾ ಒಂದೊಂದು ಮತಗಳು ಸಿಗುತ್ತಿವೆ. ಕೊನೆಗೆ ಸಂತು-ಪಂತು ಯಾರಿಗೆ ಮತ ಹಾಕುತ್ತಾರೋ ಅವರು ಆಡುವಂತಾಗುತ್ತಿದೆ. ಇದನ್ನು ಅರಿತುಕೊಂಡಿರುವ ಈ ಜೋಡಿ ತಮ್ಮ ಒಗ್ಗಟ್ಟಿನ ಪವರ್ ಅನ್ನೇ ಇಟ್ಟುಕೊಂಡು ಮುಂದಿನ ಟಾಸ್ಕ್‌ನಲ್ಲಿ ಯಾರಿಗೆ ಅವಕಾಶ ಕೊಡಬೇಕು ಯಾರಿಗೆ ಕೊಡಬಾರದೆಂಬುದನ್ನು ನಿರ್ಣಯಿಸಲು ಶುರು ಮಾಡಿದ್ದಾರೆ. 

ಕಾರ್ತಿಕ್‌ ಗೆಲ್ಲಿಸುವ ಪಣ

ಗುರುವಾರದ ಎಪಿಸೋಡ್‌ನಲ್ಲಿ ಸಂತು-ಪಂತು ಇದೇ ತಂತ್ರ ಉಪಯೋಗಿಸಿ ಕಾರ್ತಿಕ್‌ಗೆ ಆಡಲು ಅವಕಾಶ ಮಾಡಿಕೊಟ್ಟರು. ಅಂತೆಯೇ ಟಾಸ್ಕ್ ನಡೆದು ಕಾರ್ತಿಕ್ ಗೆದ್ದರು. ಇದರಿಂದ ಖುಷಿಯಾದ ಕಾರ್ತಿಕ್, ಇಷ್ಟುದಿನ ನಿಮ್ಮನ್ನು ಬೇರೆ ರೀತಿ ಟ್ರೀಟ್ ಮಾಡಿದ್ದೆ ಅಂತ ಕಣ್ಣೀರು ಸಹ ಹಾಕಿದರು. ನಂತರ ಕಾರ್ತಿಕ್ ಅವರನ್ನು ಸಮಾಧಾನಪಡಿಸಿದ ಸಂತು-ಪಂತು, ನಿನ್ನನ್ನು ಮುಂದೆಯೂ ಆಡಿಸುತ್ತೇವೆ. ಯೋಚನೆ ಮಾಡಬೇಡ ಅಂತ ಅಭಯ ನೀಡಿದರು. ಈ ತಂತ್ರಗಾರಿಕೆ ಅರಿತ ವಿನಯ್, ತುಕಾಲಿ ಸಂತು ಬಳಿಬಂದು ನೀವು ರಾಜಕೀಯ ಮಾಡುತ್ತೀದ್ದೀರಾ ಎಂದರು. ಅದಕ್ಕೆ ಅವರು ರಾಜಕೀಯ ಅಂತ ಹೆಸರಿಟ್ಟೆಯಾ? ಎಂದರು. ಅದಕ್ಕೆ ವಿನಯ್, ಇರಲಿ, ಇರಲಿ ಆಡಿ ನಿಮಗೆ ಇಷ್ಟಬಂದಂತೆ ಆಡಿ, ಇನ್ನೂ ಹತ್ತು ದಿನ ಇದೆಯಲ್ಲಾ, ಸರಿಯಾಗಿ ಮಾಡುತ್ತೇನೆ ಎಂದರು.

 

ಸಂಗೀತಾಗೆ ಖೆಡ್ಡಾ

ಕಾರ್ತಿಕ್ ಅವರನ್ನು ಗೆಲ್ಲಿಸುವ ಜೊತೆಗೆ ಸಂತು-ಪಂತು ಇನ್ನೊಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅದೇನೆಂದರೆ, ಸಂಗೀತಾ ಅವರನ್ನು ಸೋಲಿಸುವುದು. ಸಂಗೀತಾ ಬಳಿ ಯಾವ ಆಟವನ್ನು ಆಡೋಕೆ ಆಗೋದಿಲ್ಲವೋ ಆ ಟವನ್ನು ಅವಳ ಬಳಿ ಆಡಿಸೋಣ ಅಂತ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕಾರ್ತಿಕ್ ಅವರನ್ನು ಮೆಟ್ಟಿಲು ಹತ್ತಿರೋದು ಸಂಗೀತಾ ಅಂತ ವರ್ತೂರು ಸಂತೋಷ್ ಹೇಳಿದ್ದಾರೆ. ಇತ್ತ ಇವರಿಬ್ಬರ ವೋಟ್ ಪಾಲಿಟಿಕ್ಸ್ ಅರಿತಿರುವ ವಿನಯ್ ಕಿಡಿಕಾರಿದ್ದಾರೆ.

 

ಫಿನಾಲೆ ತಲುಪೋದು ಯಾರು?

ಸಂಗೀತಾ ಶೃಂಗೇರಿ ಈಗಾಗಲೇ ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದು ಫಿನಾಲೆ ಹಂತ ತಲುಪಿದ್ದಾರೆ. ಇವರೊಂದಿಗೆ ವಿನಯ್ ಗೌಡ, ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ಹಾಗೂ ವತೂರು ಸಂತೋಷ್ ಟಾಪ್‌ ೫ನಲ್ಲಿರುತ್ತಾರೆ ಎನ್ನಲಾಗಿದೆ. ಹೀಗಾಗಿ ಈ ವಾರಾಂತ್ಯದಲ್ಲಿ ನಮ್ರತಾ ಗೌಡ, ತುಕಾಲಿ ಸಂತೋಷ್ ಆಗಬಹುದು ಎನ್ನಲಾಗುತ್ತಿದೆ.

ಫಿನಾಲೆ ಯಾವಾಗ?

ಜನವರಿ 27 ಹಾಗೂ 28ರಂದು ಬಿಗ್‌ಬಾಸ್‌ ಕನ್ನಡ ಸೀಸನ್ ೧೦ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಅಂತ ಹೇಳಲಾಗಿದೆ. ಹೀಗಾಗಿ ಈಗಾಗಲೇ ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಡ್ಯಾನ್ಸ್ ತಯಾರಿ ಕೂಡ ಮಾಡುತ್ತಿದ್ದಾರಂತೆ. ಈ ತಿಂಗಳಾಂತ್ಯದಲ್ಲಿ ಫಿನಾಲೆ ನಡೆಯುಲಿದ್ದು,  20, 21ರಂದು ಈ ಸೀಸನ್‌ನ ಕೊನೆಯ ವೀಕೆಂಡ್ ಪಂಚಾಯಿತಿ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+