X
ಹೋಮ್ ಚಲನಚಿತ್ರಗಳ ಒಳನೋಟ

ಲಾಯರ್ ಜಗದೀಶ್ ವರ್ತನೆಗೆ ಬೇಸತ್ತು ಉಗ್ರರೂಪ ತಾಳಿದ ಮನೆಮಂದಿ: ಈ ವಾರ ಮನೆಯಿಂದ ಹೊರಹೋಗ್ತಾರ ವಕೀಲ್ ಸಾಬ್?

Author Sowmya Bairappa | Published: Wednesday, October 16, 2024, 11:28 AM [IST]

ಬಿಗ್‌ಬಾಸ್ ಮನೆಯಲ್ಲಿ ಮೊದಲ ವಾರ ರಂಪಾಟ ಮಾಡಿದ್ದ ಲಾಯರ್ ಜಗದೀಶ್, ಎರಡನೇ ವಾರ ಲವರ್ ಬಾಯ್ ತರಹ ಕಾಣಿಸಿಕೊಂಡಿದ್ದರು. ಆದರೆ, 15ನೇ ದಿನ ದೊಡ್ಮನೆಯಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಬಿಗ್‌ಬಾಸ್ ಕಾರ್ಯಕ್ರಮದ ಬಗ್ಗೆ ಬಿಪ್ ಪದಗಳನನ್ನು ಬಳಿಸಿರುವ ಜಗದೀಶ್, ಮತ್ತೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಳೆದ ಸಂಚಿಕೆಯಲ್ಲಿ ದೊಡ್ಮನೆಯಲ್ಲಿ ಏನೇನಾಯ್ತು ಎಂಬ ಮಾಹಿತಿ ಇಲ್ಲಿದೆ.


cover image
 ಕ್ಯಾಮರಾ ಮುಂದೆ ಜಗದೀಶ್ ಹೇಳಿದ್ದೇನು?

15ನೇ ದಿನ ರಾತ್ರಿ ಜಗದೀಶ್ ಕ್ಯಾಮರಾ ಮುಂದೆ ಕೂಗಾಡಲು ಆರಂಭಿಸಿದರು. ನಾನು ಕಾಣಿಸಿದ್ರೆ ಅವನ್ಯಾರೀ ಈಡಿಯೆಟ್, ರಾಸ್ಕಲ್ ವಲ್ಗರ್ ಆಗಿ ಮಾತನಾಡ್ತಾನೆ. ಏಯ್...ಗತಿ ಇಲ್ಲದೇ ಬಂದಿಲ್ಲ ನಾನು. ಡೋರ್ ಓಪನ್ ಮಾಡಿ, ಈಗಲೇ ಹೋಗ್ತೀನಿ. ಲಗೇಜ್ ಅಲ್ಲೇ ಬಿದ್ದು ಸಾಯಲಿ. ಊಟಕ್ಕೆ ಒಬ್ಬಳು ಕೇಳ್ತಾಳೆ. ಯಾವ ರೂಲ್ಸ್ ನಿಮ್ಮದು? ನನಗೆ 100 ಜನಕ್ಕೆ ಊಟ ಹಾಕುವ ಯೋಗ್ಯತೆಯಿದೆ. ಅವನ್ಯಾರೋ ಹೇಳ್ತಾನೆ ಮೆಂಟಲ್ ನನ್ ಮಗನೇ ಅಂತ.. ನಾನು ರಿಯಾಕ್ಟ್ ಮಾಡಿದ್ರೆ ಎಲ್ಲಿ ಹೋಗ್ತೀರಾ ನೀವು? ನನಗೆ ಈಗಲೇ ವಿವರಣೆ ಬೇಕು. ಐ ವಿಲ್ ವಾಕ್ ಔಟ್.. ನಿನ್ನ ಪ್ರೋಗ್ರಾಂ ನೀನೇ ಮಾಡ್ಕೋ ಅಂತ ಕಿಡಿಕಾರಿದ್ದಾರೆ. ಮತ್ತೆ ಸ್ವಲ್ಪ ಹೊತ್ತಿನ ಬಳಿಕ ಬೀಪ್ ಪದಗಳನ್ನು ಉಪಯೋಗಿಸಿದರು. ಇದರಿಂದಾಗಿ ಉಗ್ರಂ ಮಂಜು, ರಂಜಿತ್ ಸಿಡಿದೆದ್ದರು. ಈ ಸಂದರ್ಭ ಬಿಗ್‌ಬಾಸ್ ಕರೆಮಾಡಿ, ಇದು ಸೂಕ್ಷ್ಮವಾದ ವಿಚಾರ. ಮನೆಯ ಸದಸ್ಯರು ಮಧ್ಯೆ ಪ್ರವೇಶಿಸುವ ಅವಶ್ಯಕತೆಯಿಲ್ಲ ಎಂದರು. 

'ಚಪ್ಪಲಿ ಎಸೆದ ಮಂಜು'

ಆನಂತರ ಮನೆಯ ಕ್ಯಾಪ್ಟನ್ ಶಿಶಿರ್ ಜಗದೀಶ್ ಅವರನ್ನು ಸಮಾಧಾನ ಮಾಡುತ್ತಿದ್ದರು. ಆಗ ಜಗದೀಶ್, ಅವಳೇನು ಚೈತ್ರಾ ಹಾಗೆ ಮಾತಾಡ್ತಾಳೆ? ಅವಳ ಮೇಲೆ 28 ಕೇಸ್‌ಗಳಿವೆ. ನಮಗೇನು ದೊಡ್ಡ ವಿಚಾರವಲ್ಲ. ಮಾತಾಡೋಕೆ ಆಕೆ ಯಾರು? ಆಕೆಗೇನು ಫಾಲೋವರ್ಸ್ ಇರೋದು? ನನಗೂ ಇದ್ದಾರೆ. ಆರೋಪಿ ತರಹ ಕೈಕಟ್ಟಿಕೊಂಡು ಬಂದೋರೆಲ್ಲಾ ನಮ್ಮ ಹತ್ತಿರ ಮಾತಾಡಿಬಿಟ್ಟರೆ..? ಗ್ಯಾಂಗ್ ಕಟ್ಟಿಕೊಳ್ಳಲಿ ನನಗೂ ಮಾತನಾಡೋಕೆ ಬರುತ್ತೆ ಅಂತ ಹೇಳುತ್ತಿದ್ದಾ ಚೈತ್ರಾ ಅದನ್ನು ಕೇಳಿಸಿಕೊಂಡರು. ಅದರಿಂದ ಕೆಂಡವಾದ ಚೈತ್ರಾ, ಯಾರ ಬಗ್ಗೆ ಮಾತನಾಡಿದ್ದು ಅಂತ ನೇರವಾಗಿ ಕೆಳಿದರು. ಆಗ ಜಗದೀಶ್, ನನ್ನ ಬಗ್ಗೆ ಮಾತನಾಡೋಕೆ ನೀನ್ಯಾರು? ಅಂದರು. ಮಾತು ಮುಂದುವರೆಸಿದ ಚೈತ್ರಾ, ನಾನು ಮಾತನಾಡಿದ್ನಾ? ಮಾತನಾಡಿದ್ನಾ? ಮಾತನಾಡಿದ್ನಾ? ಅಂತ ಗುರಾಯಿಸಿದರು. ಈ ವೇಳೆ ಚೈತ್ರಾ ಕೊಟ್ಟ ಲುಕ್‌ಗೆ ಜಗದೀಶ್ ಸುಮ್ಮನಾದರು. ಆ ದೃಶ್ಯ ಕಂಡ ಉಗ್ರಂ ಮಂಜು ಚಪ್ಪಾಳೆ ತಟ್ಟಿದರು. ಆಗ ಜಗದೀಶ್, ಇದಕ್ಕೆ ಸರಿ ನೀನು...ಇನ್ನೇನಕ್ಕೂ ಲಾಯಕ್ ಇಲ್ಲ ಅಂದರು. ಆಗ ಮಂಜು ಚಪ್ಪಲಿ ಎಸೆದರು. ಆಗ ಚಪ್ಪಲಿ ನನಗಲ್ಲ ಅದು..ನಿನಗೆ ನೀನೇ ಹೊಡೆದುಕೊಂಡಿದ್ದೀಯಾ ಎಂದರು ಜಗದೀಶ್. 


'ಅವತ್ತೇ ಚಪ್ಪಲಿಯಲ್ಲಿ ಬೀಳಬೇಕಿತ್ತು'

ನನ್ನ ಹುಟ್ಟುಹಬ್ಬದ ದಿನ ಗೌತಮಿನಾ ತಡೆದೆ. ಅವತ್ತೇ ಚಪ್ಪಲಿ ತಗೊಂಡು ಬಿದ್ದಿರೋದು ಅಂತ ಉಗ್ರಂ ಮಂಜು ಹೇಳಿದ್ರು. ಈ ಸಂದರ್ಭ ಜಗದೀಶ್ ಹಾಗೂ ಮಂಜು ನಡುವೆ ಮಾತಿನ ಚಕಮಕಿ ನಡೆಯಿತು. ರಂಜಿತ್ 'ಒದೆ ತಿನ್ನೋಕೆ ಕಾಯ್ತಾವ್ನಾ? ಒದೆ ತಿನ್ನಿಸಿಕೊಂಡೇ ಹೋಗ್ತಾನಾ? ಅಂತ ಕೇಳಿದಕ್ಕೆ ಚೈತ್ರಾ, ಅದೇ ಉದ್ದೇಶ. ನಾವು ಕೈ ಎತ್ತಲಿ ಅನ್ನೋದೆ ಅವರ ಉದ್ದೇಶ ಅಂದರು. ಆಗ ರಂಜಿತ್ ಕೈಎತ್ತಿ ನಮ್ರತ್ರ ಹೊಡೆಸಿಕೊಂಡು, ಹೊರಗಡೆ ಹೀರೋ ಆಗೋಕೆ ಪ್ಲ್ಯಾನ್ ಅಂದರು. 


 ಗಂಡಸಾದ್ರೆ ನನ್ನ ಎದುರಿಗೆ ಮಾತಾಡು

ನನ್ನ ಪರ್ಸನಲ್ ವಿಷಯಕ್ಕೆ ಬಂದರೆ ಸರಿ ಇರಲ್ಲ.  50 ಕೇಸ್ ಬೇಕಾದ್ರೂ ಹಾಕಿಸಿಕೊಳ್ಳುತ್ತೇನೆ. ನನಗೆ ಧಮ್ ಇದೆ. ನಾನು ಹಾಕಿಸಿಕೊಳ್ಳುತ್ತೇನೆ, ಏನಿವಾಗ? ಗಂಡಸಾದ್ರೆ ನನ್ನ ಎದುರಿಗೆ ಮಾತಾಡು. ಅಪ್ಪಂಗೆ ಹಿಟ್ಟಿದ್ರೆ ನನ್ನ ಕಣ್ಣೆದುರಿಗೆ ನಿಂತುಕೊಂಡು ಮಾತನಾಡಲಿ. ಹಿಂದೆ ಮಾತನಾಡುವುದಲ್ಲ. ನನ್ನ ಕೇಸ್ ಬಗ್ಗೆ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ. 100 ಕೇಸ್ ಬೇಕಾದ್ರೂ ಹಾಕಿಸಿಕೊಳ್ತೀನಿ. ಕೊಚ್ಚೆ ಮೇಲೆ ಕಲ್ಲು ಹಾಕಬಾರದೆಂದು ಮೊನ್ನೆಯಿಂದ ಕಂಟ್ರೋಲ್ ಮಾಡಿಕೊಂಡು ಇದ್ದೇನೆ. ಪರ್ಸನಲ್ ವಿಷಯದ ಬಗ್ಗೆ ಮಾತಾಡೋ ರೈಟ್ಸ್ ಯಾವ ನಾಯಿಗೂ ಇಲ್ಲ. ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ ಅಂತ ಕೂಗಾಡಿದ್ರು. 

ಮಿಡ್ ವೀಕ್‌ ಎಲಿಮಿನೇಷನ್‌ನಲ್ಲಿ ಹೋಗ್ತಾರ ಜಗದೀಶ್?

ಸದ್ಯ ಬಿಗ್‌ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಒಬ್ಬಂಟಿಯಾಗಿದ್ದಾರೆ. ದೊಡ್ಮನೆಯಲ್ಲಿ ಯಾರೂ ಕೂಡ ಅವರ ಬಳಿ ಮಾತನಾಡುತ್ತಿಲ್ಲ. ಎರಡನೇ ವಾರ ಕರ್ನಾಟಕ ಕ್ರಶ್ ಅಂತ ವೀಕ್ಷಕರಿಂದ ಕರೆಸಿಕೊಂಡಿದ್ದ ಲಾಯರ್ ಜಗದೀಶ್, ಈ ವಾರದ ಮಧ್ಯದಲ್ಲೇ ಬಿಗ್‌ಬಾಸ್‌ನಿಂದ ಹೊರಹೋದರೂ ಹೋಗಬಹುದು. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+