X
ಹೋಮ್ ಚಲನಚಿತ್ರಗಳ ಒಳನೋಟ

ಕೈ-ಕೈ ಮಿಲಾಯಿಸಿದ ವಿನಯ್-ಕಾರ್ತಿಕ್, ನಮ್ರತಾ-ಸಂಗೀತಾ: ನೋಡ್ಕೊಂಡು ಸುಮ್ಮನಿದ್ದ ಕ್ಯಾಪ್ಟನ್ ಸ್ನೇಹಿತ್

Author Sowmya Bairappa | Published: Wednesday, December 6, 2023, 11:29 AM [IST]

ಒಂಬತ್ತನೇ ವಾರ ಬಿಗ್‌ಬಾಸ್‌ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ಮಾಡಲಾಗಿದೆ. ಒಂದು ತಂಡದವರು ಗಂಧರ್ವರಾಗಿದ್ದರೆ, ಇನ್ನೊಂದು ತಂಡ ರಾಕ್ಷಸರಾಗಿದ್ದಾರೆ. ಈ ಕಾಲ್ಪನಿಕ ಬಿಗ್‌ಬಾಸ್‌ ಲೋಕಕ್ಕೆ ಸ್ನೇಹಿತ್ ಒಡೆಯ. ಆದರೆ, ಬಿಗ್‌ಬಾಸ್ ಕೊಟ್ಟ ಚಟುವಟಿಕೆ ವೇಳೆ ವಿನಯ್-ಕಾರ್ತಿಕ್ ಹಾಗೂ ನಮ್ರತಾ-ಸಂಗೀತಾ ನಡುವೆ ಪರಸ್ಪರ ಕಿತ್ತಾಟ ನಡೆದಿದ್ದು, ಇದನ್ನು ನೋಡ್ಕೊಂಡು ಕ್ಯಾಪ್ಟನ್ ಸ್ನೇಹಿತ್ ಸುಮ್ಮನಿದ್ದಾರೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.


cover image
ಬಿಗ್‌ಬಾಸ್‌ ಕೊಟ್ಟ ಚಟುವಟಿಕೆ

ಬಿಗ್‌ಬಾಸ್‌ ರಾಕ್ಷಸರು ಹಾಗೂ ಗಂಧರ್ವರಿಗೆ ಬಾವುಟದ ಚಟುವಟಿಕೆಯನ್ನು ನೀಡಿದ್ದರು. ಇದರ ಪ್ರಕಾರ, ಟಾಸ್ಕ್ ಮುಗಿಯುವ ಹೊತ್ತಿಗೆ ಯಾರ ಬಾವುಟ ಹೆಚ್ಚಿರುತ್ತೋ ಅವರು ಗೆದ್ದಂತೆ. ಸಂಗೀತಾ ನೇತೃತ್ವದ ತಂಡ ರಾಕ್ಷಸರಾಗಿದ್ದರೆ, ವರ್ತೂರು ಸಂತೋಷ್ ತಂಡ ಗಂಧರ್ವರಾಗಿದ್ದರು. ರಾಕ್ಷಸರ ತಂಡದವರು ಕೆಂಪು ಧ್ವಜ ನೆಡಬೇಕು, ಗಂಧರ್ವರು ಬಳಿ ಧ್ವಜ ನೆಟ್ಟು ಅದನ್ನು ಎದುರಾಳಿಗಳ ಕೈಗೆ ಸಿಗದಂತೆ ಕಾಪಾಡಬೇಕು ಎಂಬುದು ಟಾಸ್ಕ್ ಆಗಿತ್ತು. 

 

ಟಾಸ್ಕ್ ವೇಳೆ ಮಾರಾಮಾರಿ

ವಿನಯ್ ಅವರು ನಮ್ರತಾಗೆ ಕಾಲುಗಳನ್ನು ಲಾಕ್ ಮಾಡಿಟ್ಟುಕೋ.. ಉಸಿರಾಡೋಕೆ ಆಗಬಾರದು. ಎಷ್ಟು ಗಟ್ಟಿಯಾಗುತ್ತೋ, ಅಷ್ಟು ಗಟ್ಟಿಯಾಗಿ ಹಿಡಿದಿಟ್ಟುಕೋ ೩೦ ಸೆಕೆಂಡ್ಸ್ ಎಂದು ಹೇಳಿಕೊಟ್ಟರು. ಇತ್ತ ಕಾರ್ತಿಕ್ ಡಿಫೆಂಡ್ ಮಾಡುತ್ತಿದ್ದರು. ಆಗ ವಿನಯ್ ಕಾರ್ತಿಕ್‌ ಅವರನ್ನು ತಳ್ಳಿದರು. ಈ ವೇಳೆ ಇಬ್ಬರ ನಡುವೆ ಮಾರಾಮಾರಿ ನಡೆಯಿತು. ಅತ್ತ ನಮ್ರತಾ ಮತ್ತು ಸಂಗೀತಾ ನಡುವೆಯೂ ಫಿಸಿಕಲ್ ಅಟ್ಯಾಕ್ ಆಯ್ತು. ಕಾರ್ತಿಕ್‌ನ ತಮ್ಮ ಕೈಯಿಂದ ಪದೇ ಪದೇ ವಿನಯ್ ತಳ್ಳಿದರು. 

ನೋಡ್ಕೊಂಡು ಸುಮ್ಮನಿದ್ದ ಸ್ನೇಹಿತ್

ಅವರಿಬ್ಬರ ನಡುವೆ ಮಾರಾಮಾರಿ ನಡೆಯುತ್ತಿದ್ದಾಗ ತನಿಷಾ 'ಉಸ್ತುವಾರಿಯಾಗಿ ನೀವು ಏನಾದರೂ ನಿರ್ಧಾರ ತಗೊಳ್ಳಿ' ಎಂದು ಹೇಳುತ್ತಲೇ ಇದ್ದರು. ಆಗ ಸ್ನೇಹಿತ್, ಕುಸ್ತಿ ಮಾಡಬೇಡಿ, ಬಾವುಗಳಳನ್ನು ಕಿತ್ತುಕೊಳ್ಳಿ ಎಂದರು. ತನಿಷಾ ಮತ್ತೆ ಜೋರಾಗಿ ಹೇಳಿದಾಗ, ನಾನು ಏನು ಮಾಡಬೇಕು ಅಂತ ನನಗೆ ಗೊತ್ತು ಎಂದರು. ಕಾರ್ತಿಕ್ ಮತ್ತು ವಿನಯ್ ಮಧ್ಯೆ ಹೊಡೆದಾಟ ತಾರಕಕ್ಕೇರಿದಾಗ ಇಬ್ಬರಿಗೂ ಹರ್ಟ್ ಆಗುತ್ತೆ. ಉಸ್ತುವಾರಿ ಏನ್ಮಾಡ್ತಿದ್ದೀರಾ? ಎಂದು ತನಿಷಾ ಕಿರುಚಿದರು. ಆಗ ಸ್ನೇಹಿತ್, ಬಾವುಟ್.. ಇದು ಕುಸ್ತಿಯಲ್ಲ ಎಂದದಷ್ಟೇ ಹೇಳಿದರು. ತನಿಷಾ ಏನಾದರೂ ನಿರ್ಧಾರ ಮಾಡಿ ಇಲ್ಲವೆಂದರೆ ಇದು ದೊಡ್ಡದಾಗುತ್ತೆ ಎಂದು ಹೇಳಿದರೂ ಸ್ನೇಹಿತ್ ಸುಮ್ಮನಿದ್ದರು. 

ಮಧ್ಯಪ್ರವೇಶಿಸಿದ ಬಿಗ್‌ಬಾಸ್

ಸ್ಪರ್ಧಿಗಳ ನಡುವೆ ಫಿಸಿಕಲ್ ಅಟ್ಯಾಕ್ ಹೆಚ್ಚಾಗುತ್ತಿದ್ದಂತೆ ಬಿಗ್‌ಬಾಸ್ ಮಧ್ಯಪ್ರವೇಶಿಸಿದರು. ಜೊತೆಗೆ ಆಟವನ್ನು ಇಲ್ಲಿಗೆ ನಿಲ್ಲಿಸಿ ಅಂತ ಘೋಷಿಸಿದರು. ಆಟ ನಿಲ್ಲಿಸಿ ಎಂದ ಮೇಲಯೂ ಕಾರ್ತಿಕ್ ಹಾಗೂ ಸಂಗೀತಾ ಅವರನ್ನು ವಿನಯ್ ಕೆಣಕುತ್ತಲೇ ಇದ್ದರು.

 

ಸ್ನೇಹಿತ್ ವಿರುದ್ಧ ಕಿಡಿಕಾರಿದ ರಾಕ್ಷಸರು

ವಿನಯ್ ನನ್ನ ಕುತ್ತಿಗೆ ಹಿಡಿದಿದ್ದ. ಉಸ್ತುವಾರಿಯಾಗಿ ಏನ್ಮಾಡ್ತಿದ್ದೀರಾ? ಯಾವ ಸೀಮೆ ಉಸ್ತುವಾರಿ ನೀವು ಅಂತ ಸ್ನೇಹಿತ್ ವಿರುದ್ದ ಕಾರ್ತಿಕ್ ಕೆಂಡಕಾರಿದರು. ತನಿಷಾ ಕೂಡ ಫಿಸಿಕಲ್ ಅಟ್ಯಾಕ್ ಆಗ್ತಿರೋವಾಗ ನಿಲ್ಲಿಸಬೇಕಿತ್ತು ಅಂತ ಹೇಳಿದರು. ಆಗ ಸ್ನೇಹಿತ್, ಇಬ್ಬರು ಅಗ್ರೆಸ್ಸಿವ್ ಆಗಿ ಆಡಿದ್ರಿ. ಒಬ್ಬರು ಮಾತ್ರ ಅಲ್ಲ ಅಂತ ಹೇಳಿದರು. ಆಗ ತನಿಷಾ ಒಬ್ಬರಿಗೆ ನೋವು ಆಗುತ್ತಿರುವಾಗ ಹೇಗೆ ನೋಡಿಕೊಂಡು ಸುಮ್ಮನೆ ಇರ್ತೀರಾ? ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು ಸರಿಯಾದ ಸಮಯದಲ್ಲಿ ತೆಗೆದುಕೊಂಡಿಲ್ಕ ಅಂದ್ರೆ ಹೇಗೆ? ಕ್ಯಾಪ್ಟನ್ ಆಗೋಕೆ ಲಾಯಕ್ಕಿಲ್ಲ. ಸುಮ್ಮನೆ ನಿಂತುಕೊಂಡರೆ ಅರ್ಥ ಏನು? ಇಬ್ಬರಿಗೂ ಹಾರ್ಟ್ ಆಗ್ತಿದೆ, ಒಬ್ಬರಿಗೆ ಮಾತ್ರವಲ್ಲ ಎಂದರು. ಸಂಗೀತಾ ಕೂಡ ಮಧ್ಯೆಪ್ರವೇಶಿಸಿ, ರಕ್ತ ಸುರಿಸಬೇಕಾ? ಇದೇನಾ ನಿಮಗೆ ಬೇಕಾಗಿರೋದು. ಸೋಲುತ್ತಿದ್ದಾಗ ಮಾತ್ರ ಉಸ್ತುವಾರಿ ಮಾಡೋಕೆ ಬರ್ತಾರೆ ಎಂದರು. 

ನಮ್ರತಾ ಹೇಳಿದಂತೆಯೇ ಸ್ನೇಹಿತ್ ನಿರ್ಧಾರ

ಇತ್ತೀಚೆಗೆ ಸ್ನೇಹಿತ್, ನಮ್ರತಾ ಅವರನ್ನು ಇಂಪ್ರೆಸ್ ಮಾಡುವುದಕ್ಕೆ ಟ್ರೈ ಮಾಡುತ್ತಲೇ ಇದ್ದಾರೆ. ಈಗ ಅವರೇಳಿದ ಮಾತಿನ ಮೇಲೆಯೇ ನಿರ್ಧಾರ ತೆಗೆದುಕೊಂಡಿದ್ದಾರೆ. ಮೊದಲಿಗೆ ಮನೆಯ ಸದಸ್ಯರಿಗೆ ತಂಡಗಳನ್ನು ಸೇರಿಕೊಳ್ಳುವ ಅವಕಾಶವನ್ನು ನೀಡಲಾಗಿತ್ತು. ಆದರೆ, ಒಂದೇ ತಂಡಕ್ಕೆ ಹೆಚ್ಚಿನ ಜನ ಸೇರಿದ ಮೇಲೆ ಕ್ಯಾಪ್ಟನ್ ಸ್ನೇಹಿತ್‌ಗೆ ಬಿಗ್‌ಬಾಸ್‌, ಎರಡು ತಂಡದಲ್ಲೂ ಬಲಿಷ್ಠ ಸ್ಪರ್ಧಿಗಳು ಇರುವಂತೆ ಹಂಚಿಕೆ ಮಾಡಬೇಕು ಎಂದು ಹೇಳಿದ್ದರು. ಆದರೆ, ಸ್ಬೇಹಿತ್ ಅವರು ಸಂಗೀತಾ ತಂಡಕ್ಕೆ ಎಲ್ಲಾ ಕೊಂಚ ವೀಕ್ ಇರುವವರನ್ನು ಹಾಕಿ, ವರ್ತೂರು ಸಂತೋಷ್ ತಂಡಕ್ಕೆ ಎಲ್ಲಾ ಬಲಿಷ್ಠ ಸ್ಪರ್ಧಿಗಳನ್ನು ಹಾಕಿದ್ದಾರೆ. ಸಂಗೀತಾ ಸಾಕಷ್ಟು ಬಾರೀ ವಾದ ಮಾಡಿದರೂ, ತಾನೂ ಮಾಡಿದ್ದೆ ಸರಿ ಎಂದು ಸ್ನೇಹಿತ್ ಹೇಳಿದ್ದಾರೆ.  ನಮ್ಮ ಟೀಂನಲ್ಲಿ ವಿನಯ್ ಹಾಗೂ ಮೈಕೆಲ್ ಇದ್ದರೆ ತುಂಬಾ ಒಳ್ಳೆಯದು ಎಂದು ನಮ್ರತಾ ಹೇಳಿದಂತೆಯೇ ಸ್ನೇಹಿತ್ ನಿರ್ಧಾರ ತೆಗೆದುಕೊಂಡಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+