X
ಹೋಮ್ ಚಲನಚಿತ್ರಗಳ ಒಳನೋಟ

ದೊಡ್ಮನೆ ಆನೆಗೆ ಎಲಿಮಿನೇಷನ್ ಭಯ: ಇಷ್ಟುದಿನ ನನ್ನ ಆಟ ಬದಲಿಸಿಕೊಳ್ಳಲ್ಲ ಅಂತಿದ್ದ ವಿನಯ್ ಈಗ ಬದಲಾಗಲು ಇದೇ ಕಾರಣ?

Author Sowmya Bairappa | Published: Tuesday, December 26, 2023, 02:37 PM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10ರಲ್ಲಿ ಬಹಳ ಅಗ್ರೆಸ್ಸಿವ್ ಆಗಿ ಆಡುವ ಸ್ಪರ್ಧಿಯೆಂದರೆ ವಿನಯ್. ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ವಿನಯ್, ದೊಡ್ಮನೆಯಲ್ಲಿ ನಡೆದ ಹಲವು ಟಾಸ್ಕ್‌ಗಳಲ್ಲಿ ತಳ್ಳಾಟ, ಜಗಳಗಳಿಗೆ ಸಾಕ್ಷಿಯಾಗಿದ್ದಾರೆ. ಅವರ ಅಗ್ರೆಸ್ಸಿವ್ ಆಟದಿಂದ ಸಾಕಷ್ಟು ಹಿನ್ನೆಡೆ ಕೂಡ ಆಗಿದೆ. ಇಷ್ಟದರೂ ವಿನಯ್ ತಮ್ಮ ಆಟವನ್ನು ನಾನು ಬದಲಿಸಿಕೊಳ್ಳಲ್ಲ ಎಂದು ಹೇಳುತ್ತಿದ್ದರು. ಆದ್ರೀಗ ತಮ್ಮ ನಿರ್ಧಾರ ಬದಲಿಸಿಕೊಂಡಿದ್ದು, ಅಗ್ರೆಸ್ಸಿವ್ ಆಗಿ ಆಡಲ್ಲ ಅಂತಿದ್ದಾರೆ. ಅದಕ್ಕೆ ಕಾರಣ ಇಲ್ಲಿದೆ.


cover image
ನಾನು ಹೊಡೆದಾಡಲ್ಲ, ಡಿಸೈಡ್ ಮಾಡಿಬಿಟ್ಟಿದ್ದೀನಿ

ದಿನಸಿ ಟಾಸ್ಕ್ ಆದಮೇಲೆ ನಮ್ರತಾ, ಈ ತರಹದ ಟಾಸ್ಕ್ ಕೊಡಬೇಕು. ಕ್ರೇಜಿ ಟಾಸ್ಕ್, ಮಜಾ ಇರುತ್ತೆ. ಅದ್ಯಾವುದೋ ಹೊಡೆದಾಡೋದು ಬಿಟ್ಟು ಎಂದರು. ಆಗ ವಿನಯ್, ಇಲ್ಲ ಗುರು, ನಾನು ಹೊಡೆದಾಡಲ್ಲ. ಡಿಸೈಡ್ ಮಾಡಿಬಿಟ್ಟಿದ್ದೀನಿ ಎಂದರು. ಆಗ ನಮ್ರತಾ, ವಿನ್ ಪ್ರಾಮಿಸ್ ಮಾಡೇಬಿಟ್ಟರು. ಅದನ್ನು ಕಂಡ ನಮ್ರತಾ ಶಾಕ್ ಆದರು.  
ನಮ್ರತಾ: ಬಿಗ್‌ಬಾಸ್‌ ವಿನಯ್ ಪ್ರಾಮಿಸ್ ಮಾಡಿದ್ದಾರೆ. ಅಗ್ರೆಸ್ಸಿವ್ ಆಗಿ ಆಡೋದಿಲ್ಲ ಅಂತ ಹೇಳಿದರು.
ತನಿಷಾ: ಏನೋ ನಡೆಯುತ್ತಿದೆ ಇಲ್ಲಿ.
ತುಕಾಲಿ ಸಂತು: ನಾನು ಪ್ರಾಮಿಸ್ ಮಾಡಲ್ಲಪ್ಪಾ. 
ಕಾರ್ತಿಕ್: ನಾನು ಹೊಡೆದಾಡೋದಿಲ್ಲ.
ನಮ್ರತಾ: ನೀವೆ ಕೆರಳಿಸೋದು ಎಂದರು.

 

ಪ್ರೊವೋಕ್ ಮಾಡೋದೆ ವಿನಯ್

ನಮ್ರತಾ ಹೇಳಿಕೆ ಬಳಿಕ ಮಾತನಾಡಿದ ಕಾರ್ತಿಕ್, ಕೆರಳಿಸೋದು ವಿನಯ್. ಪ್ರೊವೋಕ್ ಮಾಡೋದೆ ವಿನಯ್. ಈಗ ಅವನೇ ಬಿಟ್ಟಿದ್ದಾನೆ ಅಂದ್ರೆ ನಾನು ಯಾಕೆ ಮಾಡಲಿ? ಎಂದರು. 
ವಿನಯ್: ಎಷ್ಟು ನೀಟ್ ಆಗಿ ಆಡೋಕೆ ಆಗುತ್ತೋ, ಅಷ್ಟು ನೀಟ್ ಆಗಿ ಆಡೋಣ. ಇನ್ಮುಂದೆ ಥ್ಯಾಂಕ್ಯು ಮೈಕಲ್ ಎಂದರು.
ನಮ್ರತಾ: ಮೈಕಲ್ ಜ್ಞಾನೋದಯ ಮಾಡಿಸಿದ್ದಾ? 
ತುಕಾಲಿ ಸಂತು: ನಮಗೆ ನೀಟ್ ಆಗಿ ಆಡೋಕೆ ಬರಲ್ಲ ಎಂದರು.

 

ಶೈನ್ ಶೆಟ್ಟಿ ಮಾತನ್ನು ಗಂಭೀರವಾಗಿ ಪರಿಗಣಿಸಿದ ವಿನಯ್

ವಾರಾಂತ್ಯದಲ್ಲಿ ಬಿಗ್‌ಬಾಸ್‌ ಮನೆಗೆ ಗೆಸ್ಟ್ ಆಗಿ ಬಂದಿದ್ದ ಶೈನ್ ಶೆಟ್ಟಿ, ಫಿಸಿಕಲ್ ಟಾಸ್ಕ್‌ನಲ್ಲಿ ಅಗ್ರೆಷನ್‌ನಿಂದ ಏಟು, ಪೆಟ್ಟುಗಳಾಗಿವೆ. ಅದು ಮತ್ತೆ ಮರುಕಳಿಸಿದ್ರೆ ಬಿಗ್‌ಬಾಸ್‌ ಸ್ಟ್ರಿಕ್ಟ್ ಆಕ್ಷನ್ ತೆಗೆದುಕೊಳ್ಳಬೇಕಾಗುತ್ತೆ. ಅದರಿಂದ ನೀವು ನೇರವಾಗಿ ಎಲಿಮಿನೇಟ್ ಕೂಡ ಆಗಬಹುದು. ನಿಮ್ಮನ್ನ ನೀವು ಬದಲಾಯಿಸಿಕೊಳ್ಳೋಕೆ ಇದು ಫೈನಲ್ ಅವಕಾಶ. ಅಗ್ರೆಷನ್ ನಿಮ್ಮ ಹತೋಟಿಯಲ್ಲಿರಲಿ. ಗೆಲುವು ಮುಖ್ಯ, ಆಟ ಮುಖ್ಯ. ಆದರೆ, ಬದುಕೋದು ಎಲ್ಲದಕ್ಕಿಂತ ಇಂಪಾರ್ಟೆಂಟ್. ವ್ಯಕ್ತಿತ್ವ, ಮನುಷತ್ವ. ಇವರೆರಡೂ ಇಟ್ಟುಕೊಂಡು ಕಿಲ್ ಇಟ್ ಎಂದು ಸ್ಪರ್ಧಿಗಳಿಗೆ ಶೈನ್ ಶೆಟ್ಟಿ ಹೇಳಿದ್ದರು. ಇದಾದಮೇಲೆ ವಿನಯ್ ಅವರಿಗೆ ಎಲಿಮಿನೇಷನ್ ಭಯ ಕಾಡುತ್ತಿದ್ಯಾ? ಎಂಬ ಅನುಮನ ಮೂಡಿದೆ. 

 

ಫುಲ್ ಒಳ್ಳೆಯವರ ತರಹ ಬಿಲ್ಡಪ್

ಈ ವಿಷಯವನ್ನು ವರ್ತೂರು ಸಂತೋಷ್ ಬಳಿ ಚರ್ಚೆ ನಡೆಸಿದ ತುಕಾಲಿ ಸಂತು, ಫುಲ್ ಒಳ್ಳೆಯವರ ತರಹ ಬಿಲ್ಡಪ್ ಕೊಟ್ಟುಕೊಂಡು...ಇನ್ಮೇಲೆ ಅಗ್ರೆಸ್ಸಿವ್ ಆಗಿ ಆಡಲ್ಲ, ಕೂಲ್ ಆಗಿ ಆಡ್ತೀನಿ ಅಂತೆಲ್ಲಾ ಹೇಳುತ್ತಿದ್ದಾರೆ. ಶೈನ್ ಶೆಟ್ಟಿ, ಶುಭಾ ಪೂಂಜಾ ಹೇಳಿ ಹೋದ್ಮೆಲೆ ಅವರಿಗೆ ಹಾಗೆ ಅನಿಸುತ್ತಿದೆ. ನಾವು ಯಾರನ್ನು ನಂಬಬಾರದು. ಸಂಗೀತಾ ಆಸ್ಪತ್ರೆಗೆ ಹೋಗಿ ಬಂದ ಮೇಲೆ ಎಲ್ಲರ ಬಳಿ ಮಾತನಾಡಬೇಕು ಅಂತ ಕಾಯುತ್ತಿದ್ದಳು. ಆದರೆ, ಯಾರು ಅವಳನ್ನು ಸ್ವಿಕರಿಸಲಿಲ್ಲ. ನಿನ್ನೆ ನ್ಯಾಯ ಪಂಚಾಯಿತಿ ಆದ್ಮೇಲೆ ಸ್ವೀಕರಿಸಿದರು. ನಾವು ಇಲ್ಲಿ ಯಾರನ್ನೂ ನಂಬೋದು ಬೇಡ ಎಂದರು. 

 

'ಮೂಲೆಯಲ್ಲಿ ಒಬ್ಬನೇ ಕುಳಿತುಕೊಳ್ಳಬೇಡ'

ಇತ್ತೀಚೆಗೆ ದೊಡ್ಮನೆಯಲ್ಲಿ ಡ್ರೋನ್ ಪ್ರತಾಪ್ ಸಿಕ್ಕಾಪಟ್ಟೆ ಸೈಲೆಂಟ್ ಆಗಿದ್ದಾರೆ. ಇದರಿಂದ ಆಗುವ ಸಮಸ್ಯೆಯನ್ನು ಸಂಗೀತಾ ಅವರು ಪ್ರತಾಪ್‌ಗೆ ವಿವರಿಸಿದ್ದಾರೆ. ಮೂಲೆಯಲ್ಲಿ ಒಬ್ಬನೇ ಕುಳಿತುಕೊಳ್ಳಬೇಡ. ಎಲ್ಲರ ಜೊತೆಗೂ ಮಾತಾಡು. ನಿನ್ನನ್ನು ನಗುತ್ತಾ ನೋಡಲು ನನಗೆ ಇಷ್ಟ. ಆದ್ರೆ, ನೀನು ಮಾತು ಆಡುವುದಿಲ್ಲ. ನನ್ನ ಮುಖವನ್ನು ಕೂಡ ನೀನು ನೋಡುತ್ತಿಲ್ಲ. ನಿನ್ನನ್ನು ನಾನು ಹೇಗೆ ನಗಿಸಲಿ ಎಂದಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+