X
ಹೋಮ್ ಚಲನಚಿತ್ರಗಳ ಒಳನೋಟ

ದೀಕ್ಷಿತ್ ಶೆಟ್ಟಿ ಟು ನವೀನ್‌ ಶಂಕರ್: ಬಿಗ್‌ ರೋಲ್‌ಗೆ ಅರ್ಹರಾಗಿರುವ ಚಂದನವನದ ಅದ್ಭುತ ಪ್ರತಿಭೆಗಳಿವರು!

Author Sowmya Bairappa | Published: Monday, July 8, 2024, 04:10 PM [IST]

ಪ್ರತಿವರ್ಷ ಅನೇಕ ನಾಯಕ-ನಾಯಕಿಯರು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಕೆಲವರು ಮೊದಲ ಸಿನಿಮಾದಲ್ಲೇ ಗೆಲುವು ಸಾಧಿಸಿದ್ರೆ, ಮತ್ತೆ ಕೆಲವರು ಹಲವಾರು ಸವಾಲುಗಳನ್ನು ಎದುರಿಸಿ ಅವಕಾಶ ಗಿಟ್ಟಿಸಿಕೊಂಡು ಯಶಸ್ಸು ಗಳಿಸಿದ್ದಾರೆ. ಆರಂಭದಲ್ಲಿ ಚಿಕ್ಕ-ಪುಟ್ಟ ಪಾತ್ರಗಳಿಂದ ನಟನೆಗೆ ಇಳಿದ ಕನ್ನಡದ ಅನೇಕ ನಟರು, ಇಂದು ತಮ್ಮ ಪ್ರತಿಭೆಯಿಂದಲೇ ಗುರುತಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ನಟನೆ, ಶ್ರಮ, ಶ್ರದ್ದೆ ಹಾಗೂ ಅವರಿಗೆ ಸಿನಿಮಾದ ಮೇಲಿರುವ ಆಸಕ್ತಿ. ಪ್ರಸ್ತುತ ಚಂದನವನದಲ್ಲಿ ಒಳ್ಳೊಳ್ಳೆಯ ಪ್ರತಿಭೆಗಳು ಹುಟ್ಟಿಕೊಳ್ಳುತ್ತಿದ್ದಾರೆ.


cover image
ನವೀನ ಶಂಕರ್

ಮೂಲತಃ ಬಾಲಗಕೋಟೆ ಜಿಲ್ಲೆಯ ಇಳಕಲ್ ಮೂಲದರಾದ ನವೀನ್‌ ಶಂಕರ್ 'ಗುಳ್ಟೂ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. 2018ರಲ್ಲಿ ತೆರೆಕಂಡಿದ್ದ ಈ ಚಿತ್ರ ಆಗಿನ ಸಮಯಕ್ಕೆ ಸಿನಿ ಪ್ರೇಕ್ಷಕರಿಂದ 'ಕನ್ನಡದಲ್ಲಿ ಒಳ್ಳೆ ಪ್ರಯೋಗಾತ್ಮಕ ಸಿನಿಮಾ ಬರಲ್ಲ ಅಂತೀರಲ್ಲ ಬಂದಿದೆ ನೋಡಿ' ಎಂಬ ಒಳ್ಳೆಯ ವಿಮರ್ಶೆ ಪಡೆದುಕೊಂಡಿತ್ತು. ಶತದಿನದ ಸಂಭ್ರಮ ಆಚರಿಸಿಕೊಂಡಿದ್ದ ಗುಳ್ಟೂ ಚಿತ್ರವನ್ನು ಇಂದಿಗೂ ಸಹ ಕನ್ನಡ ಸಿನರಸಿಕರು ಇತರೆ ಪ್ರೇಕ್ಷಕರಿಗೆ ನೋಡಿ ಎಂದು ಸಲಹೆ ನೀಡುವಂತಹ ಚಿತ್ರವಾಗಿ ಉಳಿದಿದೆ. ನಂತರ ಡಾಲಿ ಧನಂಜಯ್, ಕ್ಷೇತ್ರಪತಿ, ಹೊಂದಿಸಿ ಬರೆಯಿರಿ ಸಿನಿಮಾಗಳಲ್ಲಿ ಅದ್ಭುತ ನಟನೆ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದು, ಮುಂದಿನ ದಿನಗಳಲ್ಲಿ ಸ್ಟಾರ್ ನಟನಾಗುವ ಭರವಸೆಯಿದೆ.

ದೀಕ್ಷಿತ್ ಶೆಟ್ಟಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ದೀಕ್ಷಿತ್ ಶೆಟ್ಟಿ, ಸದ್ಯ ಕನ್ನಡ ಚಿತ್ರರಂಗ ಭರವಸೆಯ ನಾಯಕನಾಗಿ ಹೊರಮೊಮ್ಮಿದ್ದಾರೆ. ಇವರಿಗೆ ಬಿಗ್ ಬ್ರೇಕ್ ನೀಡಿದ ಸಿನಿಮಾ 2020ರಲ್ಲಿ ತೆರೆಕಂಡ ದಿಯಾ. ಈ ಚಿತ್ರದ ಬಳಿಕ ಇವರಿಗೆ ಹಲವಾರು ಅವಕಾಶಗಳು ಅರಸಿ ಬಂದವು. ಇತ್ತೀಚೆಗೆ ಬ್ಲಿಂಕ್ ಸಿನಿಮಾ ಮೂಲಕ ಕಮಾಲ್ ಮಾಡಿದ್ದರು. ಈ ಚಿತ್ರದ ಇವರ ಅಭಿನಯ ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ದೀಕ್ಷಿತ್ ಕನ್ನಡ ಮಾತ್ರವಲ್ಲದೇ, ತೆಲುಗು ಸಿನಿಮಾರಂಗದಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.

ಪೃಥ್ವಿ ಅಂಬರ್

2016ರಲ್ಲಿ ಕರ್ವಾ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ ಪೃಥ್ವಿ ಅಂಬರ್, ಇಂದು ಕನ್ನಡ ಚಿತ್ರರಂಗದ ಭರವಸೆಯ ನಾಯಕನಾಗಿ ಹೊರಹೊಮ್ಮಿದ್ದಾರೆ. ಇವರು ಚಿತ್ರರಂಗಕ್ಕೆ ಕಾಲಿಡುವ ಮುನ್ನ ರಾಧಾ ಕಲ್ಯಾಣ, ಲವಲವಿಕೆ ಧಾರಾವಾಹಿಗಳಲ್ಲಿ ನಟಿಸಿದ್ದರು. ಇವರು ಕೇವಲ ನಟ ಮಾತ್ರವಲ್ಲದೇ, ಉತ್ತಮ ನಿರೂಪಕ ಮತ್ತು ನೃತ್ಯಗಾರ ಕೂಡ ಹೌದು. ಇವರಿಗೆ 2020ರಲ್ಲಿ ತೆರೆಕಂಡ 'ದಿಯಾ' ಸಿನಿಮಾ ಬಿಗ್ ಬ್ರೇಕ್ ನೀಡಿತ್ತು.

ಪೃಥ್ವಿ ಶಾಮನೂರು

'ಪದವಿ ಪೂರ್ವ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಪೃಥ್ವಿ ಶಾಮನೂರು, ತಮ್ಮ ಮೊದಲ ಸಿನಿಮಾದಲ್ಲೇ ವಿಮರ್ಶಕರು ಮತ್ತು ಪ್ರೇಕ್ಷಕರ ಮನಗೆದ್ದರು. ಇದಾದ ಬಳಕ ಗರಡಿ, ಕೋಟಿ ಸಿನಿಮಾದಲ್ಲಿ ಫೋಷಕ ಪಾತ್ರದಲ್ಲಿ ನಟಿಸಿದರು. ಸದ್ಯ ಯೋಗರಾಜ್ ಭಟ್ ನಿರ್ದೇಶನದ ಉಡಾಳ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಪ್ರಮೋದ್ ಮಂಜು

ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಪ್ರಮೋದ್ ಪಂಜು, ರತ್ನನ್ ಪ್ರಪಂಚ ಚಿತ್ರದ ದ್ವಿತೀಯಾರ್ಧದಲ್ಲಿ ಅಪ್ಪಟ ಉತ್ತರ ಕರ್ನಾಟಕದ ಹೈದ 'ಉಡಾಳ್ ಬಾಬು ರಾವ್' ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು. ಇದಾದ ಬಳಿಕ ಬಾಂಡ್ ರವಿ ಸಿನಿಮಾದಲ್ಲಿ ನಟಿಸಿದ್ದು,  ಪ್ರಮೋದ್ ಖಡಕ್ ಅಂಡ್ ಮಾಸ್ ಆಕ್ಟಿಂಗ್ ಎಲ್ಲರ ಗಮನ ಸೆಳೆದಿತ್ತು. ಇತ್ತೀಚೆಗೆ  ಸಲಾರ್ ಸಿನಿಮಾದಲ್ಲಿ ವರದರಾಜ ಮನ್ನಾರ್(ಬಾಲ) ಸಹೋದರನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಸೌರವ್ ಲೋಕೇಶ್

ಶಿವರಾಜ್‌ಕುಮಾರ್ ಅಭಿನಯದ ಭಜರಂಗಿ ಚಿತ್ರದಲ್ಲಿ ಖಳನಟನ ಪಾತ್ರದಿಂದ ಗಮ ಸೆಳೆದ ಲೋಕಿ ಅವರು, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಖಳನಾಯಕ ಮಾತ್ರವಲ್ಲದೇ, ಫೋಷಕ ಪಾತ್ರಗಳಲ್ಲಿಯೂ ಮಿಂಚಿದ್ದಾರೆ. ಇವರು ಕೂಡ ಸಲಾರ್ ಸಿನಿಮಾದಲ್ಲಿ ನಟಿದ್ದು, ಕನ್ನೆದಲ್ಲೂ ದೊಡ್ಡ ಪಾತ್ರಕ್ಕೆ ಅರ್ಹತೆ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+