X
ಹೋಮ್ ಚಲನಚಿತ್ರಗಳ ಒಳನೋಟ

ಡಾ.ರಾಜ್‌ಕುಮಾರ್ ಟು ಭಾವನಾ: ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್ ಆದ ಸಿನಿಮಾ ನಟ-ನಟಿಯರಿವರು!

Author Sowmya Bairappa | Published: Wednesday, July 31, 2024, 12:53 PM [IST]

ಸಿನಿಮಾ ತಾರೆಯರು ಎಲ್ಲೇ ಹೋಗಬೇಕಾದರೂ ಸಿಕ್ಕಾಪಟ್ಟೆ ಸೆಕ್ಯೂರಿಟಿ ಇರುತ್ತದೆ. ನಟ-ನಟಿಯರು ಯಾವುದಾದರೊಂದು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವಾಗ ಅಭಿಮಾನಿಗಳಿಂದ ಅಥವಾ ವಿರೋಧಿಗಳಿಂದ ತೊಂದರೆಯಾಗಬಹುದು ಎಂಬ ಹಿತದೃಷ್ಟಿಯಿಂದ ಪೊಲೀಸ್ ಸುರಕ್ಷತೆ ಕೂಡ ಇರುತ್ತದೆ. ಇಷ್ಟೆಲ್ಲಾ ಸೆಕ್ಯೂರಿಟಿಯಿದ್ದರೂ ಕೆಲ ಸೆಲೆಬ್ರಿಟಿಗಳನ್ನು ಕಿಡ್ನಾಪ್ ಮಾಡಲಾಗಿದೆ. ಇಲ್ಲಿ ಥೇಟ್ ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್ ಆದ ನಟ-ನಟಿಯರು ಯಾರು? ಎಂಬ ಮಾಹಿತಿ ನೀಡಲಾಗಿದೆ.


cover image
ನಮಿತಾ

ಸೌತ್ ಸಿನಿಮಾರಂಗದಲ್ಲಿ ಗ್ಲ್ಯಾಮರಸ್ ಗೊಂಬೆಯಾಗಿ ಮಿಂಚಿದ್ದ ನಟಿ ನಮಿತಾ ಅವರನ್ನು 2010ರಲ್ಲಿ ಅಭಿಮಾನಿಯೊಬ್ಬ ಅಪಹರಿಸಲು ಪ್ರಯತ್ನಿಸಿದ್ದ ಘಟನೆ ಜರುಗಿತ್ತು. ಕರೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ನಮಿತಾ ತಮ್ಮ ಮ್ಯಾನೇಜರ್ ಜಾನ್ ಅವರೊಂದಿಗೆ ವಿಮಾನದಲ್ಲಿ ತಿರುಚ್ಚಿಗೆ ಬಂದಿಳಿದಿದ್ದರು. ಇಲ್ಲಿಂದ ಕರೂರಿಗೆ ಅವರು ಕಾರಿನಲ್ಲಿ ಹೊರಡಬೇಕಾಗಿತ್ತು. ತಿರುಚ್ಚಿಯ ವಿಮಾನ ನಿಲ್ದಾಣದಲ್ಲಿ ಎದುರಾದ ವ್ಯಕ್ತಿಯೊಬ್ಬ ತನ್ನ ಹೆಸರು ಪೆರಿಯಾಸ್ವಾಮಿ, ಕಾರು ಚಾಲಕ ಎಂದು ಪರಿಚಯಿಸಿಕೊಂಡಿದ್ದ. ಅಲ್ಲದೇ, ಕಾರ್ಯಕ್ರಮ ಪ್ರಾಯೋಜಕರು ತಮ್ಮನ್ನು ಕಾರಿನಲ್ಲಿ ಕರೆತರುವಂತೆ ಹೇಳಿದ್ದಾರೆ ಎಂದು ನಮಿತಾಗೆ ಹೇಳಿದ್ದ. ಆತನ ಮಾತು ನಂಬಿದ ನಟಿ, ಸೀದಾ ಹೋಗಿ ಆತನ ಕಾರಿನಲ್ಲಿ ಕುಳಿತಿದ್ದರು. ಇದನ್ನು ನೋಡಿದ ನಿಜವಾದ ಚಾಲಕ, ತನ್ನ ಕಾರಿನಲ್ಲಿ ನಕಲಿ ಚಾಲಕನ ಕಾರನ್ನು ಚೇಸ್ ಮಾಡಿ ಹಿಡಿದಿದ್ದ. ಬಳಿಕ ಪೊಲೀಸರು ಪೆರಿಯಾಸ್ವಾಮಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ತಾನೊಬ್ಬ ನಮಿತಾ ಅವರ ಅಪ್ಪಟ ಅಭಿಮಾನಿ. ಅವರನ್ನು ನೋಡುವ ಸಲುವಾಗಿ ಹೀಗೆ ಮಾಡಿದೆ ಅಂತ ತಪ್ಪೊಪ್ಪಿಕೊಂಡಿದ್ದ. 


ಭಾವನಾ ಮೆನನ್

ಕನ್ನಡದಲ್ಲಿ ಜಾಕಿ ಭಾವನಾ ಅಂತಲೇ ಖ್ಯಾತಿ ಪಡೆದಿರುವ ಭಾವನಾ ಮೆನನ್ ಅವರು 2017ರ ಫೆಬ್ರವರಿ 17ರಂದು ತನ್ನ ಕಾರಿನಲ್ಲಿ ತ್ರಿಶೂರ್‌ನಿಂದ ಕೊಚ್ಚಿ ಹೋಗುತ್ತಿರುವಾಗ ಕಿಡ್ನಾಪ್ ಮಾಡಲಾಗಿತ್ತು. ವ್ಯಕ್ತಿಗಳ ಗುಂಪೊಂದು ಭಾವನಾ ಅವರನ್ನು ಕಿಡ್ನಪ್ ಮಾಡಿ, ಎರಡುವರೆ ಗಂಟೆ ಕಾರಿನಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದರು. ಜೊತೆಗೆ ಅಸಭ್ಯವಾಗಿ ಚಿತ್ರಗಳನ್ನು ತೆಗೆದು, ಪೊಲೀಸರಿಗೆ ಈ ವಿಷಯ ಹೇಳಿದ್ರೆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದರು.  ನಂತರ ಕಾಕಿನಾಡದ ಹತ್ತಿರ ಬಿಟ್ಟು ಓಡಿಹೋಗಿದ್ದರು. ತಕ್ಷಣ ಭಾವನಾ ಹತ್ತಿರದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಘಟನೆ ಮಲಯಾಳಂ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿತ್ತು. 

ಡಾ.ರಾಜ್‌ಕುಮಾರ್

ಕನ್ನಡ ಚಿತ್ರರಂಗದಲ್ಲಿ ಮತ್ತು ಕರ್ನಾಟಕದ ಇತಿಹಾಸದಲ್ಲಿ ವರನಟ ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣ ಎಂದೂ ಮರೆಯಲಾಗದ ಘಟನೆಯಾಗಿದೆ. ಕಾಡುಗಳ್ಳ ವೀರಪ್ಪನ್ 2000ರ ಜುಲೈ 30ರಂದು ರಾತ್ರಿ ಗಾಜನೂರಿನ ಫಾರ್ಮ್ ಹೌಸ್‌ನಿಂದ ಅಣ್ಣಾವ್ರನ್ನು ಕಿಡ್ನಾಪ್ ಮಾಡಿದ್ದ. ರಾಜ್‌ಕುಮಾರ್ ರಾತ್ರಿ ಊಟ ಮುಗಿಸಿ ಹಳೆಯ ಮನೆಯ ಹಜಾರದಲ್ಲಿ ಎಲೆ ಅಡಿಕೆ ಹಾಕಿಕೊಳ್ಳುತ್ತಾ ಟಿ.ವಿ. ನೋಡುತ್ತಾ ಕುಳಿತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಸುಮಾರು 15 ಸಹಚರರ ಜತೆಗೆ ಮನೆಗೆ ನುಗ್ಗಿದ್ದ ವೀರಪ್ಪನ್, ರಾಜ್ ಕುಮಾರ್ ಅವರ ಬೆನ್ನಿಗೆ ಬಂದೂಕು ಇರಿಸಿ ಕೈಗಳನ್ನು ನೈಲಾನ್ ಹಗ್ಗದಿಂದ ಕಟ್ಟಿದ್ದ. ಪೊಲೀಸರಿಗೆ ಮಾಹಿತಿ ನೀಡಿದರೆ ಕೊಂದು ಬಿಡುತ್ತೇವೆ ಎಂದು ಬೆದರಿಕೆ ಪಾರ್ವತಮ್ಮ ಅವರ ಕೈಗೆ ಕ್ಯಾಸೆಟ್‌ವೊಂದನ್ನು ನೀಡಿದ್ದ. ಅದರಲ್ಲಿ ತನ್ನ ಬೇಡಿಕೆಗಳನ್ನು ಹೇಳಿದ್ದು, ಅದನ್ನು ಸರ್ಕಾರಕ್ಕೆ ತಲುಪಿಸುವಂತೆ ಹೇಳಿದ್ದ. ಈ ಸಂದರ್ಭ ಅಣ್ಣಾವ್ರ ಜೊತೆಗೆ ಅವರ ಅಳಿಯ ಎಸ್‌.ಎ.ಗೋವಿಂದರಾಜ್‌, ಸಹನಿರ್ದೇಶಕ ನಾಗಪ್ಪ ಮಾರಡಗಿ, ಸಂಬಂಧಿ ನಾಗೇಶ್ ಅವರನ್ನು ಕಿಡ್ನಾಪ್ ಮಾಡಿದ್ದ. ಈ ನಡುವೆ ರಾಜ್ಯದಲ್ಲಿ ಆತಂಕದ ಸನ್ನಿವೇಶಗಳು ಸೃಷ್ಟಿಯಾಗಿದ್ದವು. ರಾಜ್ಯಾದಂತ್ಯ ಪ್ರತಿಭಟನೆ, ಗಲಾಟೆ ಆರಂಭವಾಗಿದ್ದವು. ಸರ್ಕಾರಕ್ಕೆ ಇದು ಭಾರಿ ತಲೆನೋವು ತಂದಿತ್ತು. ಸತತ ಪ್ರಯತ್ನ ಹಾಗೂ ಸಂಧಾಗಳ ಬಳಿಕ  2000ರ  ನವೆಂಬರ್ 15ರಂದು ರಾಜ್‌ಕುಮಾರ್ ಅವರನ್ನು ಬಿಡುಗಡೆ ಮಾಡಲಾಗಿತ್ತು. 


ಕಮಲ್ ಹಾಸನ್ ಪುತ್ರಿಯರು

ಕಮಲ್ ಹಾಸನ್ ನಟ, ನಿರ್ದೇಶಕ, ಗಾಯಕ, ನಿರ್ಮಾಪಕ, ಗೀತ ಸಾಹಿತಿ, ಚಿತ್ರಕಥೆ, ಸಂಭಾಷಣೆ, ನೃತ್ಯ ಸಂಯೋಜಕೆ ಹೀಗೆ ಹಲವಾರು ಪ್ರಕಾರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಇವರ ಪುತ್ರಿಯರಾದ ಶೃತಿ ಹಾಸನ್ ಹಾಗೂ ಅಕ್ಷರ ಹಾಸನ್ ಕೂಡ ನಟಿಯರಾಗಿದ್ದು, ಇವರನ್ನು ಕಿಡ್ನಾಪ್ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಕಮಲ್ ಹಾಸನ್ ಅವರ ಮನೆ ಕೆಲಸದವರು ಅವರನ್ನು ಮಕ್ಕಳನ್ನು ಕಿಡ್ನಾಪ್ ಮಾಡಲು ಪ್ಲ್ಯಾನ್ ಮಾಡಿ, ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇದನ್ನು ಹೇಗೋ ತಿಳಿದುಕೊಂಡ ಕಮಲ್ ಹಾಸನ್, ಮಕ್ಕಳ ಸುರಕ್ಷತೆಗಾಗಿ ಕೊಲೆ ಮಾಡಲು ಸಿದ್ಧನಾಗಿದ್ದೆ ಅಂತ ಅಸಮಾಧಾನ ಹೊರಹಾಕಿದ್ದರು. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+