X
ಹೋಮ್ ಚಲನಚಿತ್ರಗಳ ಒಳನೋಟ

ಯಾರೂ ಇಲ್ಲವೆಂದು ಕಾರ್ತಿಕ್‌ಗೆ ನೀಡಿದ್ರಾ ಅಥವಾ ನಿಜವಾಗಿಯೂ ಸಾಮರ್ಥ್ಯ ನೋಡಿ ಕೊಟ್ರಾ: ಕಿಚ್ಚನ ಚಪ್ಪಾಳೆ ಬಗ್ಗೆ ನಮ್ರತಾ ಅನುಮಾನ

Author Sowmya Bairappa | Published: Monday, December 11, 2023, 11:33 AM [IST]

ಕಿಚ್ಚ ಸುದೀಪ್ ಪ್ರತಿವಾರ ಬಿಗ್‌ಬಾಸ್‌ ಮನೆಯಲ್ಲಿ ಉತ್ತಮ ಪರ್ಫಾಮೆನ್ಸ್ ನೀಡಿದ ಓರ್ವ ಸ್ಪರ್ಧಿಗೆ 'ಕಿಚ್ಚನ ಚಪ್ಪಾಳೆ' ನೀಡುತ್ತಾರೆ. ಈ ಚಪ್ಪಾಳೆ ಸ್ಪರ್ಧಿಗಳು ಕೂಡ ಕಾತರದಿಂದ ಕಾಯುತ್ತಿರುತ್ತಾರೆ. ಎಂಟನೇ ಕಿಚ್ಚನ ಚಪ್ಪಾಳೆ ನಮ್ರತಾ ಗೌಡಗೆ ಸಿಕ್ಕಿತ್ತು. ಒಂಭತ್ತನೇ ವಾರ ಕಾರ್ತಿಕ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು, ಈ ಬಗ್ಗೆ ನಮ್ರತಾ ಅನುಮಾನ ವ್ಯಕ್ತಪಡಿಸಿದ್ದಾರೆ.


cover image
ನಮ್ರತಾ ಅನುಮಾನ

ಶನಿವಾರದ ಎಪಿಸೋಡ್ ಮುಗಿದ ಬಳಿಕ ನಮ್ರತಾ, ವಿನಯ್ ಹಾಗೂ ಮೈಕಲ್ 'ಕಿಚ್ಚನ ಚಪ್ಪಾಳೆ' ಕುರಿತು ಚರ್ಚೆ ಮಾಡಿದ್ದಾರೆ. ಈ ವೇಳೆ ನಮ್ರತಾ, ಕಿಚ್ಚನ ಚಪ್ಪಾಳೆಯನ್ನು ಯಾರೂ ಇಲ್ಲ ಅಂತ ಅವರಿಗೆ ನೀಡಿದ್ರಾ ಅಥವಾ ನಿಜವಾಗಿಯೂ ಅವರ ಸಾಮರ್ಥ್ಯ  ನೋಡಿ ಕೊಟ್ರಾ? ಅಂತ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ವಿನಯ್ 'ನಾನು ಕೆಟ್ಟದಾಗಿ ಆಡಿದೆ, ಅದಕ್ಕೆ ಕಾರ್ತಿಕ್‌ಗೆ ಸಿಕ್ತು ಅಂತ ಹೇಳಿದ್ದಾರೆ. ನಮ್ರತಾ ಅವರ ಈ ಹೇಳಿಕೆ ವೀಕ್ಷಕರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

 

ಸುದೀಪ್ ಮೆಚ್ಚುಗೆ

ಏನೂ ನಡೆಯದ ಸನ್ನಿವೇಶವನ್ನು ಇಟ್ಟುಕೊಂಡು ಪವಿ ಬಳಿ ಪದೇ ಪದೇ ಮಾತನಾಡಿ, ಏನೋ ಒಂದು ವಾತ ತಲೆಯಲ್ಲಿ ಕೂತುಕೊಳ್ಳುವ ಹಾಗೆ ಮಾಡಿ, ಸುಮ್ಮನೆ ಅಳಿಸಿ, ಅದನ್ನೇ ಕಾರಣ ಕೊಟ್ಟು ಕಳಪೆಗೆ ಹೋದಾಗ ಅದು ನೋಡುವವರಿಗೆ ಚೆನ್ನಾಗಿ ಕಾಣಿಸಲ್ಲ ಎಂದು ಟಾಯ್ಲೆಟ್ ವಿಚಾರವಾಗಿ ಪವಿ ಪೂವಪ್ಪ, ನಮ್ರತಾ, ವಿನಯ್ ಹಾಗೂ ಸ್ನೇಹಿತ್‌ಗೆ ಸುದೀಪ್ ಕಿವಿ ಹಿಂಡಿದ್ದರು. ಜೊತೆಗೆ ಇಷ್ಟೆಲ್ಲದರ ನಡುವೆ ಆಡಿ..ತಮ್ಮತನ ಬಿಟ್ಟುಕೊಡದ, ಹಠ ಇಟ್ಟುಕೊಂಡು ಆಡಿ, ಬಹಳಷ್ಟು ನೋಡಿದ ನಂತರ ನನಗೆ ಅನಿಸಿದ್ದು ಈ ವಾರದ ಕಿಚ್ಚನ ಚಪ್ಪಾಳೆ ಕಾರ್ತಿಕ್‌ ನಿಮಗೆ ಅಂತ ಸುದೀಪ್ ಹೇಳಿದ್ದರು.  

 

ಕಾರ್ತಿಕ್ ಭಾವುಕ

ಈ ವೇಳೆ ಕಾರ್ತಿಕ್ ಎದ್ದುನಿಂತು, ಎಲ್ಲೋ ಒಂದು ಕಡೆ ೮ ವಾರದಿಂದ ಅನಿಸುತ್ತಿತ್ತು. ಇದಕ್ಕಾಗಿ ಕೊರಗುತ್ತಿದ್ದೆ. ಯಾಕೆ ಬರ್ತಿಲ್ಲ? ಎಲ್ಲಾದರೂ ಮಿಸ್ ಆಗುತ್ತಿದ್ಯಾ ಅಂತ. ಇದು ನನಗೆ ತುಂಬಾ ಮುಖ್ಯ ಸರ್. ಥ್ಯಾಂಕ್ಯು ಸರ್. ಪ್ರತಿವಾರ ಒಬ್ಬೊಬ್ಬರಿಗೆ ಬರಬೇಕಾದರೆ, ನಾನೆಲ್ಲಿ ಮಿಸ್ ಹೊಡೆಯುತ್ತಿದ್ದೀನಿ ಅಂತ ಅನಿಸುತ್ತಿತ್ತು ಅಂತ ಭಾವುಕರಾದರು. ನಂತರ ವಾಲ್‌ ಆಫ್ ಮೂಮೆಂಟ್‌ನಲ್ಲಿ ಹಾಕಲು ಕಾರ್ತಿಕ್‌ಗೆ ತಾವು ಜೈಲಿನಲ್ಲಿದ್ದ ಫೋಟೋ ಸಿಕ್ಕಿತು. 

 

ಸ್ನೇಹಿತ್ ಎಲಿಮಿನೇಟ್

9ನೇ ವಾರ ಬಿಗ್‌ಬಾಸ್ ಮನೆಯಿಂಸ ಸ್ನೇಹಿತ್ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಸ್ನೇಹಿತ್ ಮತ್ತು ನಮ್ರತಾ ಮಧ್ಯೆ ಒಳ್ಳೆಯ ಫ್ರೆಂಡ್‌ಶಿಪ್ ಬೆಳೆದಿತ್ತು. ನಮ್ರತಾ ಅಂದ್ರೆ ಇಷ್ಟವೆಂದು ಸ್ನೇಹಿತ್ ಹಲವು ಬಾರಿ ಹೇಳಿಕೊಂಡಿದ್ದರು. ಇದೀಗ ಸ್ನೇಹಿತ್ ದೊಡ್ಮನೆಯಿಂದ ಹೊರಬಂದಿದ್ದು, ನಮ್ರತಾ ಕಣ್ಣೀರು ಹಾಕಿದ್ದಾರೆ. 

ಮತ್ತೆ ಚಿಗುರಿದ ಸ್ನೇಹ

ಕಳೆದ ವಾರದ ಟಾಸ್ಕ್‌ನಿಂದ ಎಲ್ಲಾ ಸ್ಪರ್ಧಿಗಳ ಮನದಲ್ಲಿ ಎದುರಾಳಿ ತಂಡದವರ ಬಗ್ಗೆ ದ್ವೇಷ ತುಂಬಿಕೊಂಡಿತ್ತು. ಇದನ್ನು ಹೋಗಲಾಡಿಸಲು ಭಾನುವಾರದ ಸಂಚಿಕೆಯಲ್ಲಿ ಚಿಕ್ಕ ಟಾಸ್ಕ್‌ವೊಂದನ್ನು ನೀಡಿದರು. ಕಾಗದದ ಬಿಳಿ ಗುಲಾಬಿ ಬುಟ್ಟಿ ಇಟ್ಟು, ಯಾರಿಗೆ ಕ್ಷಮೆ ಕೇಳಬೇಕೆನ್ನಿಸುತ್ತದೆಯೋ ಅವರಿಗೆ ಇದನ್ನು ಕೊಟ್ಟು ಕ್ಷಮೆ ಕೇಳಿ ಎಂದರು. ಆಗ ವಿನಯ್ ಕಾರ್ತಿ್‌ಗೆ ಗುಲಾಬಿ ನೀಡಿ ಕ್ಷಮೆ ಕೇಳಿದರು. ವಿನಯ್ ಕ್ಷಮೆ ಸ್ಬಿಕರಿಸಿದ ಕಾರ್ತಿಕ್, ಅವರನ್ನು ತಬ್ಬಿಕೊಂಡು ಮತ್ತೆ ಗೆಳೆತನ ಮುಂದುವರೆಸಿದರು.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+