X
ಹೋಮ್ ಚಲನಚಿತ್ರಗಳ ಒಳನೋಟ

ತುಂಬಾ ನಂಬಿದ್ರಿ, ಆ ನಂಬಿಕೆ ದ್ರೋಹದಿಂದಲೇ ಜೀವನದಲ್ಲಿ ಬಹಳ ಬೇಸರ ಬಂದಿದೆ: ಸಂಗೀತಾ ಬಗ್ಗೆ ಗುರೂಜಿ ಭವಿಷ್ಯ

Author Sowmya Bairappa | Published: Wednesday, January 3, 2024, 12:13 PM [IST]

ಹೊಸ ವರ್ಷದ ಹಿನ್ನೆಲೆ ಕಳೆದ ಸಂಚಿಕೆಯಲ್ಲಿ ಬಿಗ್‌ಬಾಸ್‌ ಮನೆಗೆ ಅತಿಥಿಯಾಗಿ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಆಗಮಿಸಿದ್ದರು. ಮೊದಲು ದೇವಿಗೆ ಪೂಜೆ ಸಲ್ಲಿಸಿದ ಸ್ವಾಮೀಜಿ, ನಂತರ ಸ್ಪರ್ಧಿಗಳನ್ನು ಕೂರಿಸಿಕೊಂಡು ಅವರ ಮುಂದಿನ ಭವಿಷ್ಯ ನುಡಿದರು. ಹಾಗಾದ್ರೆ, ಗುರೂಜಿ ಯಾವ ಸ್ಫರ್ಧಿಗಳ ಬಗ್ಗೆ ಏನು ಹೇಳಿದ್ರು? ಈ ಬಾರಿ ಯಾರು ಬಿಗ್‌ಬಾಸ್‌ ಟ್ರೋಫಿ ಗೆಲ್ಲಲಿದ್ದಾರೆ? ಸ್ವಾಮೀಜಿ ನುಡಿದ ಭವಿಷ್ಯವೇನು? ಎಂಬ ಮಾಹಿತಿ ಇಲ್ಲಿದೆ.


cover image
ನಂಬಿಕೆ ದ್ರೋಹದಿಂದ ನಿಮಗೆ ಬೇಸರ ಬಂದಿದೆ

ಸ್ವಾಮೀಜಿ ಬಳಿ ಮಾತನಾಡಿದ ಸಂಗೀತಾ, ನನ್ನ ಹುಟ್ಟು ಹೆಸರು ಶ್ರೀದೇವಿ. ಜಾತಕದಲ್ಲಿ ಅದೇ ಇದೆ. ನನ್ನ ಪೂರ್ತಿ ಹೆಸರು ಸಂಗೀತಾ ಶೃಂಗೇರಿ ಅಂತ ಇಂಡಸ್ಟ್ರಿಗೆ ಕೊಟ್ಟಿದ್ದೇನೆ ಎಂದರು. ಆಗ ಗುರೂಜಿ, ಎಲ್ಲದರಲ್ಲೂ ಪ್ರಥಮ ಬೇಕು ಅಂತ ಕೇಳ್ತಿರಾ. ಮನಸ್ಸಿನಲ್ಲಿ ತುಂಬಾ ಹಿಂಸೆಯಿದೆ, ಇಲ್ಲಿ ಅಂತಲ್ಲ. ಆಗಲಿಂದಲೂ ಅಷ್ಟೇ. ಏನೋ ಉದ್ವೇಗ. ಏನೋ ಒಂದು ರೀತಿ ಮನಸ್ಸಿಗೆ ಸಂಬಂಧಪಟ್ಟ ವ್ಯಾಕುಲತೆ. ತುಂಬಾ ನಂಬಿದ್ರಿ, ಅದ್ಯಾಕೋ ಕೈ ಹಿಡಿಯಲಿಲ್ಲ, ಆ ನಂಬಿಕೆ ದ್ರೋಹದಿಂದಲೇ ಜೀವನದಲ್ಲಿ ಬಹಳ ಬೇಸರ ಬಂದಿರಬೇಕಲ್ವಾ? ಎಲ್ಲರ ಜೀವನದಲ್ಲೂ ಕೊರೆಗಳು ಬಂದಿರುತ್ತವೆ. ನಾವು ಮುಂದೆ ಹೋಗಬೇಕು. ಆ ಕೊರೆಯನ್ನು ನೀಗಿಸುವಂತಹ ಇನ್ನೊಬ್ಬರ ಪ್ರವೇಶವಾಗುತ್ತೆ. ಅಲ್ಲಿಂದ ನಿಮ್ಮ ಬದುಕಿನಲ್ಲಿ ಹೊಸ ಬೆಳಕು ಮೂಡುತ್ತೆ. ನಿಮ್ಮ ವೃತ್ತಿ ಜೀವನ ಮೇಲೆ ಹೋಗುತ್ತೆ, ಕೆಳಗೂ ಬರುತ್ತೆ. 2024ರಲ್ಲಿ ನಿಮ್ಮ ಕೆರಿಯರ್ ಹಾಗೂ ಪರ್ಸನಲ್ ಲೈಫ್ ತುಂಬಾ ಚೆನ್ನಾಗಿ ಹೋಗುತ್ತೆ ಅಂತ ಹೇಳಿದರು.

 

ಬಿಗ್‌ಬಾಸ್‌ ಗೆಲ್ತಾರಾ ಸಂಗೀತಾ?

ಮದುವೆ ಆಗ್ಬೇಕಾ ಅಂತ ಗುರೂಜಿ ಕೇಳಿದಾಗ, ಸಂಗೀತಾ ಇಲ್ಲ ಅಂದರು. ಅದಕ್ಕೆ ಗುರೂಜಿ, ನಾನು ಖಂಡಿತವಾಗಿ ಹೇಳುತ್ತೇನೆ. 2025ರ ನಂತರ ನಿಮಗೆ ಮದುವೆಯಾಗುತ್ತೆ ಅಂದರು. ಅದಕ್ಕೆ ಸಂಗೀತಾ, ನನಗೆ ಮದುವೆ ಆಗೋಕೆ ಇಷ್ಟವಿಲ್ಲ ಎಂದರು. ಈ ಸಂದರ್ಭ ಒಂದು ಸಣ್ಣ ಬಿಸಿಗಾಯದಿಂದ ನಮ್ಮ ಜೀವನದಲ್ಲಿ ಬೆಂಕಿಯೇ ಬೇಡ ಅನ್ನಬಾರದು. ನದುಕಿನಲ್ಲಿ ಮದುವೆ ನಂತರ ಚೆನ್ನಾಗಿರುತ್ತೀರಾ. ಅದರ ಬಗ್ಗೆ ಆಲೋಚನೆ ಮಾಡಿ. ಬೇಡ ಅಂದಿದ್ದು ನಮ್ಮ ಲೈಫ್‌ನಲ್ಲಿ ಬರುತ್ತಲೇ ಇರುತ್ತೆ. ಯಾವುದು ಬೇಡ ಅಂತ ಸಂಗೀತಾ ಓಡುತ್ತಿದ್ಲೋ ಅದೇ ಬಂದಿರೋದು ಎಂದರು. ಅದಕ್ಕೆ ಸಂಗೀತಾ, ಹೌದು ಬಿಗ್‌ಬಾಸ್‌ ಕೂಡ ಅಂತ ಹೇಳಿದರು. 

ಕಾರ್ತಿಕ್ ಬಗ್ಗೆ ಹೇಳಿದ್ದೇನು?

ಬದುಕಿನಲ್ಲಿ ಯಾವುದೂ ಸರಿಯಿಲ್ಲ. ಅಂದುಕೊಳ್ಳೋದು ಒಂದು, ಜೀವನದಲ್ಲು ನಡೆಯೋದೇ ಇನ್ನೊಂದು. ದೇಹದಲ್ಲಿ ಏನಾದರೂ ಒಂದು ಪೆಟ್ಟು ಆಗುತ್ತಲೇ ಇರುತ್ತೆ. ಅದರಲ್ಲೂ ಲೋವರ್ ಬ್ಯಾಕ್ ಪ್ಲಾಬ್ಲಂ ಇದೆ. ಸಂಪಾದನೆ ಇದೆ, ಖರ್ಚು ಅದಕ್ಕೂ ಮೀರಿದೆ. ಇಷ್ಟು ದಿನದ ಜೀವನ ರೀತಿಯೊಂದು, ಇಲ್ಲಿಂದ ಹೋದ್ಮೇಲೆ ಇನ್ನೊಂದು ರೀತಿಯ ಜೀವನ. ಯಾಕೆಂದರೆ, ವೇದಿಕೆ ಅಪಾರ ಹೆಸರು ತಂದುಕೊಟ್ಟಿರುತ್ತೆ. ಯಾರ ಬದುಕೂ ಸುಂದರವಾಗಿಲ್ಲ. ಅದನ್ನು ರೂಪಿಸಿಕೊಳ್ಳಬೇಕು, ತುಂಬಾ ತಲೆಬಿಸಿ ಬೇಡ ಎಂದರು. 

ವಿನಯ್‌ಗೆ ರಾಜಯೋಗ

ವಿನಯ್ ಜೊತೆ ಮಾತನಾಡಿದ ಗುರೂಜಿ, ನಿಮ್ಮ ಜೀವನದಲ್ಲಿ ಸುಖ-ಸೌಕರ್ಯವೆಲ್ಲಾ ಪ್ರಾಪ್ತವಾಗೋದು ಸ್ತ್ರಿಯಿಂದ ಮಾತ್ರ. ಅದರಲ್ಲೂ ಮನದನ್ನೆಯಿಂದ ಮಾತ್ರ ಸಿಗುವಂಥಹದ್ದು. ಬಹಳಷ್ಟು ನೋವು, ಕಷ್ಟ ಹೆಣ್ಣೀನಿಂದಲೇ ಅನುಭವಿಸಿರುತ್ತೀರಿ. ಆ ಗುರುತುಗಳು ಸಿಗುವುದು ಹೆಣ್ಣಿನಿಂದಲೇ. ನಿಮ್ಮ ಹೆಂಡತಿಯ ಬಿಗಿ ಹಿಡಿತದ ಒಳಗಡೆ ನಿಮ್ಮ ಜೀವನ ಸರಾಗವಾಗಿ ನಡೀತಿದೆ, ಆ ಹಿಡಿತ ಸ್ವಲ್ಪ ಬಿಟ್ಟರೂ ಬದು ಅಲ್ಲೋಲ, ಕಲ್ಲೋಲ. ಅದು ಯಾವಾಗಲೂ ತಲೆಯಲ್ಲಿ ಹಾಗೃತವಾಗಿರಬೇಕು. ಅದೃಷ್ಟದ ಮಚ್ಚೆ ಎರಡೂ ಕಿವಿಗಳಲ್ಲಿದೆ. ಆದನ್ನು ಉಳಿಸಿಕೊಳ್ಳಬೇಕು. ಈ ವರ್ಷ ದೊಡ್ಡಮಟ್ಟದ ರಾಜಯೋಗವಿದೆ. ಬದಲಾವಣೆಯ ಯೋಗ ಕೆರಿಯರ್ ಲೈಫ್‌ನಲ್ಲಿ. ಅಂದುಕೊಂಡಿದ್ದನ್ನು ಸಾದಿಸುವ ಯೋಗವಿದೆ ಎಂದರು. 

 

ಕುಟುಂಬದಿಂದ ದೂರವೇ ಇರಬೇಕಾಗುತ್ತೆ

ಡ್ರೋನ್ ಪ್ರತಾಪ್ ಕುರಿತು, ಸಾಧನೆ ಕಷ್ಟವಾಗುತ್ತಿದೆ. ಅಂದುಕೊಂಡಿರೋದು ಒಂದು, ಕೆಲಸ ಕಾರ್ಯಗಳಲ್ಲಿ ಆಗ್ತಿರೋದು ಇನ್ನೊಂದು. ದುಡ್ಡು, ಕಾಸು ಬರೋದು ಭಾರೀ ಕಡಿಮೆ. ಸರಿಯಾಗಿ ನಿದ್ದೆ ಮಾಡಬೇಕು. ಈ ವರ್ಷ ಹಣಕಾಸು ವಿಚಾರದಲ್ಲಿ ಭಾರೀ ಅಭಿವೃದ್ದಿಯಾಗುತ್ತೆ, ಆದ್ರೆ ಉಳಿಸಿಕೊಳ್ಳೋದು ಕಡಿಮೆ. ನೀನು ಕುಟುಂಬದಿಂದ ದೂರವೇ ಇರಬೇಕಾಗುತ್ತೆ. ಕುಟುಂಬದ ಜೀವನ ಯಾಕೋ ಅಷ್ಟು ಸರಿಯಿಲ್ಲ. ನೀನು ದೂರ ಇದ್ದಷ್ಟು ನಿನಗೂ ಕ್ಷೇಮ. ದೂರವಿದ್ದಷ್ಟೂ ಧೂಪದ ಘಮಲು, ಹತ್ತಿರವಿದ್ದರೆ ಹೇಸಿಗೆ ಘಮಲು. ದೂರವಿದ್ದು ಧೂಪ ಆಗ್ತಿಯೋ, ಹತ್ತಿರವಿದ್ದು ಹೇಸಿಗೆ ಆಗ್ತಿಯೋ ನಿನಗೆ ಬಿಟ್ಟಿದ್ದು. ಕುಟುಂಬ ಜೀವನ ಅಷ್ಟು ಚೆನ್ನಾಗಿ ತೋರಿಸಿಲ್ಲ ಎಂದರು.  

 

ಹೊರಗಿನ ದೇಶದಲ್ಲಿ ನೀನು ಅಭಿವೃದ್ಧಿ

ಸ್ವಾಮೀಜಿ ಪ್ರಶ್ನೆಗೆ ಪ್ರತಾಪ್ ದೂರ ಅಂದ್ರೆ ಬೇರೆ ದೇಶಕ್ಕಾ? ಅಂತ ಪ್ರಶ್ನಿಸಿದರು. ಆಗ ಹೊರಗಿನ ದೇಶದಲ್ಲಿ ನೀನು ಅಭಿವೃದ್ಧಿ ಆಗ್ತೀಯಾ. ಆದ್ರೆ, ಸರಿಯಾಗಿ ಪ್ರಯತ್ನ ಮಾಡಬೇಕು, ನಿನ್ನಲ್ಲಿ ಪ್ರಯತ್ನದ ಕೊರೆತೆಯಿದೆ. ಸರಿಯಾದ ಸಮಯದಕಲ್ಲಿ ಪ್ರಯತ್ನ ಮಾಡಲ್ಲ. ಅದು ವೀಕ್ನೆಸ್, ಅದೊಂದು ಸರಿ ಮಾಡಿಕೋ ಅಂತ ಸಲಹೇ ನೀಡಿದರು. 

 

ಪ್ರೇಮಸ್ಥಾನ ತೂತು ಬಿದ್ದಿದೆ

ನಮ್ರತಾ ಜೊತೆ ಮಾತನಾಡಿ, ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಈಗ ಉದಾಸೀನ ಮಾಡಿದ್ರೆ ಅದು ದೊಡ್ಡ ಆಕಾರ ತಾಳುವ ಸಾಧ್ಯತೆಯಿದೆ. ಅದೃಷ್ಟದ ಮಚ್ಚೆಗಳು ದೇಹದ ಬಲಭಾಗದಲ್ಲಿ ಇದ್ದಾವೆ. ನಿಮ್ಮ ಬದುಕಿನಲ್ಲಿ ಏಳಿಗೆಗೆ ಕಾರಣವಾದದ್ದೇ ಅದು. ಪ್ರೇಮಸ್ಥಾನ ತೂತು ಬಿದ್ದಿದೆ. ಹೊಸ ಹುಡುಕಾಟ. ಅದೇ ಬರುತ್ತೆ ಅಂದರು. ನಮ್ರತಾ ನನಗೆ ನಂಬಿಕೆಯಿಲ್ಲ ಎಂದಾಗ, ಒಮ್ಮೆ ಆಗಿದೆ, ಪದೇ ಪದೇ ಆಗಲ್ಲ. ಯಾಕಷ್ಟು ಘಾಸಿ ಕೊಡುತ್ತೆ ಅಂದ್ರೆ ತುಂಬಾ ದೀರ್ಘಕಾಲದ್ದು ಮನಸ್ಸಿಗೆ ತಡೆಯಲಾರದಷ್ಟು ನಂಬಿಕೆದ್ರೋಹ  ಆಗಿದ್ರಿಂದ. ಯಾರಿಗೆ ನಮ್ರತಾ ದುಡ್ಡು ಕೊಟ್ಟರೂ ವಾಪಾದ್ ಬಂದಿಲ್ಲ, ಬರಲ್ಲ. ಎಲ್ಲರಿಗೂ ಸಹಾಯ ಮಾಡೋಕೆ ಹೋಗಿ, ಕಷ್ಟಕ್ಕೆ ಸಿಲುಕುತ್ತೀರಾ. ನಿಮ್ಮ ಜೀವನದಲ್ಲಿಇನ್ನೊಂದು ಹೊಸ ಬೆಳಕು ಬರುತ್ತೆ. ವ್ಯಕ್ತಿಯ ಆಗಮನವಾಗುತ್ತೆ. ಅದು ನಿಮ್ಮ ಎಲ್ಲಾ ಹಳೇ ಘಟನೆಗಳನ್ನ ಮರೆಸಿ ಹೊಸ ಬಾಂಧವ್ಯಕ್ಕೆ ದಾರಿ ಮಾಡಿಕೊಳ್ಳುತ್ತೆ. ವೃತ್ತಿರಂಗದಲ್ಲಿ ಏಳಿಗೆಯಿದೆ. ಶತ್ರು ಕಾಟವಿದೆ, ಕೇರ್‌ಫುಲ್ ಆಗಿರಿ ಎಂದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+