ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ಬಿಗ್ಬಾಸ್ ಮನೆಯ ಸದಸ್ಯರಿಗೆ ಟಾಸ್ಕ್ವೊಂದನ್ನು ನೀಡಿದ್ದರು. ಇದರ ಪ್ರಕಾರ, ಯಾರಿಂದ ನೋವಾಗಿದೆ, ಯಾವ ಸ್ಪರ್ಧಿಯ ಗುಣ ಇಷ್ಟವಾಗಿಲ್ಲ ಅಂತ ಕಾರಣ ತಿಳಿಸಿ, ಅವರ ಫೋಟೋವನ್ನು ಮಡಿಕೆ ಮೇಲೆ ಹಚ್ಚಿ ಅದನ್ನು ಒಡೆಯಬೇಕಿತ್ತು. ಸುದೀಪ್ ನೀಡಿದ ಟಾಸ್ಕ್ನಲ್ಲಿ ವಿನಯ್, ಮೈಕಲ್, ಕಾರ್ತಿಕ್, ನಮ್ರತಾ ಹಾಗೂ ತುಕಾಲಿ ಸಂತು ಅವರುಗಳು ಸಂಗೀತಾ ಮುಖವಿರುವ ಮಡಕೆಗೆ ಜೋರಾಗಿ ಹೊಡೆದಿದ್ದಾರೆ. ಜೊತೆಗೆ ಕಾರಣವನ್ನು ನೀಡಿದ್ದಾರೆ.