X
ಹೋಮ್ ಚಲನಚಿತ್ರಗಳ ಒಳನೋಟ

ಅಂದು ಚಂದನವನದಲ್ಲಿ ಬಾಲ ಕಲಾವಿದರಾಗಿ ಮಿಂಚಿದ್ದವರು ಈಗ ಹೇಗಿದ್ದಾರೆ ನೋಡಿ..!!

Author Sowmya Bairappa | Updated: Wednesday, June 26, 2024, 10:08 AM [IST]

ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಬಾಲ ಕಲಾವಿದರು ಮಿಂಚಿದ್ದಾರೆ. ಈಗಿನವರು ಬಹುತೇಕ ನಿಮಗೆ ಗೊತ್ತಿದೆ. ಆದರೆ, ಕೆಲ ವರ್ಷಗಳ ಹಿಂದೆ ಬಾಲನಟರಾಗಿ ಮಿಂಚಿದ್ದ ಕಲಾವಿದರು ಈಗ ಹೇಗಿದ್ದಾರೆ ಎಂಬ ಕುತೂಹಲವಿರುತ್ತೆ. ಈ ಪೈಕಿ ಕೆಲವರು ನಟನಾ ಕ್ಷೇತ್ರದಲ್ಲೇ ಮುಂದುವರೆದರೆ, ಇನ್ನೂ ಕೆಲವರು ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇಲ್ಲಿ ಚಂದನವನದಲ್ಲಿ ಬಾಲಕಲಾವಿದರಾಗಿ ಗಮನ ಸೆಳೆದಿದ್ದ ಕಲಾವಿದರು ಈಗ ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಮಾಹಿತಿಯನ್ನು ನೀಡಲಾಗಿದೆ..


cover image
ರೋಹಿತ್  ಶ್ರೀನಾಥ್

ಕನ್ನಡ ಚಿತ್ರರಂಗದ ನಟ ಶ್ರೀನಾಥ್ ಅವರ ಪುತ್ರ ರೋಹಿತ್ ಬಾಲನಟರಾಗಿ ಮನೋರಂಜನೆ ನೀಡಿದ್ದರು. ಪಲ್ಲವಿ ಅನುಪಲ್ಲವಿ ಸಿನಿಮಾದಲ್ಲಿನ 'ನಗು ಎಂದಿದೆ ಮಂಜಿನ ಬಿಂದು' ಹಾಡಿನಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಮಾಲ್ಗುಡಿ ಡೇಸ್ ಚಿತ್ರದಲ್ಲಿ ರಾಜಂ ಆಗಿ ಕಾಣಿಸಿಕೊಂಡಿದ್ದರು. ರೋಹಿತ್ ಶ್ರೀನಾಥ್ ಸದ್ಯ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. 


ಬೇಬಿ ಶ್ಯಾಮಿಲಿ

ಬೇಬಿ ಶ್ಯಾಮಿಲಿ ಯಾರಿಗೆ ಗೊತ್ತಿಲ್ಲ ಹೇಳಿ. 90ರ ದಶಕದಲ್ಲಿ ಎಲ್ಲರ ನೆಚ್ಚಿನ ಬಾಲನಟಿ ಈಕೆ. ಮತ್ತೆ ಹಾಡಿತು ಕೋಗಿಲೆ, ಭೈರವಿ, ಶಾಂಭವಿ, ದಾಕ್ಷಾಯಿಣಿ, ಶ್ವೇತಾಗ್ನಿ, ಪೊಲೀಸ್ ಲಾಕಪ್, ಕಾದಂಬರಿ, ಮಕ್ಕಳ ಸಾಕ್ಷಿ, ಹೂವು ಹಣ್ಣು, ಚಿನ್ನ ನೀನು ನಗುತಿರು, ಕರುಳಿನ ಕುಡಿ, ಜಗದೀಶ್ವರಿ ಮುಂತಾದ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿದ್ದರು. ಬಾಲನಟಿಯಾಗಿ ಸೂಪರ್ ಸಕ್ಸಸ್ ಕಂಡ ಈ ನಟಿ, ಹೀರೋಯಿನ್ ಆಗಿ ಗೆಲ್ಲಲಿಲ್ಲ. ಇವರು ನಾಯಕಿಯಾಗಿ ಮೂರು ಸಿನಿಮಾಗಳಲ್ಲಿ ನಟಿಸಿದ್ದು, ಯಾವುದೂ ಯಶಸ್ವಿಯಾಗಲಿಲ್ಲ. 

ವಿಜಯ್ ರಾಘವೇಂದ್ರ

ಕನ್ನಡದಲ್ಲಿ ಚಿನ್ನಾರಿ ಮುತ್ತ ಅಂತಲೇ ಖ್ಯಾತಿ ಪಡೆದ ವಿಜಯ್ ರಾಘವೇಂದ್ರ ಬಾಲನಟರಾಗಿ ಗುರುತಿಸಿಕೊಂಡವರು. ಇವರು ಚಲಿಸುವ ಮೋಡಗಳು, ಪರಶುರಾಮ್, ಅರಳಿದ ಹೂವುಗಳು, ಜಗ ಮೆಚ್ಚಿದ ಹುಡುಗ, ಕೊಲ್ಲೂರ ಶ್ರೀಮೂಕಾಂಬಿಕ, ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು (ನ್ಯಾಷನಲ್ ಅವಾರ್ಡ್), ಸ್ವಾಮಿ ವಿವೇಕಾನಂದ ಸಿನಿಮಾಗಳಲ್ಲಿ ಬಾಲನಟನಾಗಿ ಅದ್ಭುತವಾಗಿ ನಟಿಸಿದ್ದರು. ನಂತರ ನಿನಗಾಗಿ ಮೂಲಕ ನಾಯಕನಾಗಿ ಚಂದನವನ ಪ್ರವೇಶಿಸಿದ ಇವರು, ಇಂದಿಗೂ ನಾಯಕನಾಗಿ ಅಭಿನಯಿಸುತ್ತಿದ್ದಾರೆ. 

ಮಾಸ್ಟರ್ ಕಿಶನ್

ಬಾಲನಟನಾಗಿ ಮಾತ್ರವಲ್ಲದೇ, ಬಾಲ ನಿರ್ದೇಶಕನಾಗಿ ಗಿನ್ನಿಸ್ ದಾಖಲೆ ಬರೆದವರು ಮಾಸ್ಟರ್ ಕಿಶನ್. ಗ್ರಾಮ ದೇವತೆ, ಹಲೋ ನಾರದ, ವಂಶಕೊಬ್ಬ, ಲಾಲಿಹಾಡು, ಎಕ್ಸ್ಯೂಸ್ ಮಿ, ಸ್ವಾತಿಮುತ್ತು, ಮಹಾರಾಜ, ಜೋಗಿ, ಕೇರ್ ಆಫ್ ಫೂಟ್‌ಪಾತ್ ಸೇರಿದಂತೆ ೨೪ ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದರು. ನಾಯಕನಾಗಿ ಕೂಡ ಒಂದೆರಡು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ.  

ಮಾಸ್ಟರ್ ಆನಂದ್

ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮಾಸ್ಟರ್ ಆನಂದ್, ಇಂದು ಕನ್ನಡ ಕಿರುತೆರೆಯಲ್ಲಿ ನಿರೂಪಕನಾಗಿ ಮೋಡಿ ಮಾಡುತ್ತಿದ್ದಾರೆ. ಇವರು ಗೌರಿ ಗಣೇಶ, ಶಾಂತಿ ಕ್ರಾಂತಿ, ಕಿಂದರಿ ಜೋಗಿ, ಮುತ್ತಿಹಾರ, ಕರ್ಪೂರದ ಗೊಂಬೆ ಸಿನಿಮಾಗಳಲ್ಲಿ ತಮ್ಮ ತಮ್ಮ ಮಾತಿನ ಶೈಲಿ ಮೂಲಕವೇ ಪ್ರೇಕ್ಷಕರ ಮನಗೆದ್ದಿದ್ದರು. ಈಗಲೂ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

ಮಾಸ್ಟರ್ ಚಂದನ್

ಸೂರ್ಯವಂಶ ಸಿನಿಮಾದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರನ್ನು ಹೇ...ಫ್ರೆಂಡು ಅಂತ ಮುದ್ದಾಗಿ ಕರೆಯುವ ಹುಡುಗ ನಿಮಗೆ ಗೊತ್ತಿರಬಹುದು ಅಲ್ವಾ? ಅವರೇ ಮಾಸ್ಟರ್ ಚಂದನ್. ಕದಂಬ, ವರ್ಷ, ನಮ್ಮಣ್ಣ ಚಿತ್ರಗಳಲ್ಲಿಯೂ ಬಾನನಟನಾಗಿ ಗುರುತಿಸಿಕೊಂಡಿದ್ದ ಇವರು, ನಂತರ ಶಿಕ್ಷಣಕ್ಕೆ ಒತ್ತು ನೀಡಿದರು. ಸದ್ಯ ಬರ್ಲಿನ್‌ನಲ್ಲಿ ಶಿಕ್ಷಣ ಪಡೆಯುತ್ತಿರುವ ಅವರು, ಅವಕಾಶ ಸಿಕ್ಕರೆ ಮತ್ತೆ ಸಿನಿಮಾರಂಗಕ್ಕೆ ಬರ್ತಾರಂತೆ. 

ಮಾಸ್ಟರ್ ಮಂಜುನಾಥ್

ಮಾಲ್ಗುಡಿ ಸಿನಿಮಾದ ಸ್ವಾಮಿಯನ್ನು ಯಾರು ಮರೆಯಲು ಸಾದ್ಯವೇ ಇಲ್ಲ. ಈ ಪಾತ್ರದಲ್ಲಿ ನಟಿಸಿದವರು ಮಾಸ್ಟರ್ ಮಂಜುನಾಥ್. ಬಾಲನಟನಾಗಿ ಕನ್ನಡದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಇವರು, ನಂತರ ಸಿನಿಮಾರಂಗದಿಂದ ದೂರ ಸರಿದರು. ರಣಧೀರ ಸಿನಿಮಾಲದಲ್ಲಿ ಇವರು ನಟಿಸಿ ಹಾಡಿರುವ 'ಏನ್ ಹುಡುಗೀರೋ ಅದ್ಯಾಕಿಂಗೆ ಆಡ್ತಿರೋ' ಹಾಡು ಇಂದಿಗೂ ಸಹ ಜನಪ್ರಿಯತೆ ಪಡೆದುಕೊಂಡಿದೆ.

ಅಮೂಲ್ಯ

ಅಮೂಲ್ಯ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ಬಾಲನಟಿಯಾಗಿ. ಇವರು, ಪರ್ವ, ಚಂದು, ಲಾಲಿಹಾಡು, ಮಹಾರಾಜ, ಮಂಡ್ಯ, ಸುಂಟರಗಾಳಿ, ಸಜನಿ, ನಮ್ಮ ಬಸವ, ಕಲ್ಲರಳಿ ಹೂವಾಗಿ, ತನನಂ ತನನಂ, ತಿಮ್ಮ ಸಿನಿಮಾಗಳಲ್ಲಿ ಬಾಲನಟಿಯಾಗಿ ಮಿಂಚಿದ್ದರು. ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಹೀರೋಯಿನ್ ಆದ ಇವರು ಹಲವು ಸಿನಿಮಾಗಳಲ್ಲಿ ನಟಿಸಿದರು. ಮದುವೆ ಬಳಿಕ ನಟನೆಯಿಂದ ದೂರ ಉಳಿದಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+