X
ಹೋಮ್ ಚಲನಚಿತ್ರಗಳ ಒಳನೋಟ

ಡ್ರೋನ್ ಪ್ರತಾಪ್ ಮಾತಿನ ಬಾಣಕ್ಕೆ ಸುಸ್ತಾದ ವಿನಯ್: ದೊಡ್ಮನೆಯಲ್ಲಿ ಸುಳ್ಳಿನ ಅರಮನೆ ಕಟ್ಟೋದು ಯಾರು ಗೊತ್ತಾ?

Author Sowmya Bairappa | Published: Monday, January 8, 2024, 02:51 PM [IST]

ಬಿಗ್‌ಬಾಸ್‌ ಸೀಸನ್ 10ರ ಗ್ರ್ಯಾಂಡ್ ಫಿನಾಲೆಗೆ ಇನ್ನೂ ಕೆಲವೇ ವಾರಗಳು ಬಾಕಿಯಿದ್ದು, ಸ್ಪರ್ಧಿಗಳ ನಡುವಿನ ಪೈಪೋಟಿ ಕೂಡ ಹೆಚ್ಚುತ್ತಿದೆ. ಕಳೆದ ಶನಿವಾರದ ಸಂಚಿಕೆಯಲ್ಲಿ ಕಿಚ್ಚಸುದೀಪ್ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಿದ್ದರು. ಈ ಸಂದರ್ಭ ಪ್ರತಾಪ್ ಬಿಟ್ಟ ಮಾತಿನ ಬಾಣಕ್ಕೆ ವಿನಯ್ ಗೌಡ ಸುಸ್ತಾಗಿದ್ದಾರೆ.


cover image
ಪ್ರತಾಪ್ ಮಾತಿನ ಬಾಣ

ವಾರಾಂತ್ಯ ಸಂಚಿಕೆಯಲ್ಲಿ ಯಾರು ಯಾವ ಪುಸ್ತಕ ಬರೆದರೆ ಸೂಕ್ತ ಎಂಬ ಚಟುವಟಿಯನ್ನು ಸುದೀಪ್ ಮನೆಯ ಸದಸ್ಯರಿಗೆ ನೀಡಿದ್ದರು. ಈ ವೇಳೆ ಡ್ರೋನ್ ಪ್ರತಾಪ್ 'ಬೇರೆಯವರನ್ನು ತುಳಿದು ಬೆಳೆಯೋದು ಹೇಗೆ? ಎಂಬ ಪುಸ್ತಕವನ್ನು ವಿನಯ್‌ಗೆ ನೀಡಿದರು. ಯಾಕೆಂದರೆ, ಇಲ್ಲುವರೆಗೂ ಯಾರ್ಯಾರು ವಿನಯ್ ಜೊತೆಯಲ್ಲಿದ್ದರೋ... ಎಲ್ಲಾ ಫ್ರೆಂಡ್ಸ್, ಹಾಗೆ ಹೀಗೆ ಅಂದುಕೊಂಡು ಅವರೆಲ್ಲಾ ತಪ್ಪು ಮಾಡ್ತಿದ್ದಾರೆ ಎಂಬ ಅಭಿಪ್ರಾಯವನ್ನೇ ವಿನಯ್ ಕೊಟ್ಟಿಲ್ಲ.ಇಂತಹ ಕಡೆ ತಪ್ಪು ಮಾಡ್ತಿದ್ದಾರೆ ಅಂತ ವಿನಯ್ ಹೇಳೇ ಇಲ್ಲ. ಸರಿ ಎಂದುಕೊಂಡೇ ಜೊತೆಯಲ್ಲಿ ಇದ್ದವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್‌ ಇವರ ಬೆಡ್ ಸೇರಿಕೊಳ್ತು ಎಂದರು. ಪ್ರತಾಪ್ ಮಾತಿನಿಂದ ವಿನಯ್ ಶಾಕ್ ಆಗಿದ್ದು, ಅದು ಕೋಪಕ್ಕೆ ತಿರುಗಿದೆ.  

ಯಾರಿಗೆ ಯಾವ ಪುಸ್ತಕ?

ಮೈಕಲ್ ಅವರು ಡಾಮಿನೇಟ್ ಮಾಡೋದು ಹೇಗೆ? ಎಂಬ ಪುಸ್ತಕವನ್ನು ತನಿಷಾಗೆ ನೀಡಿ, ತನಿಷಾಗೆ ಡಾಮಿನೇಟ್ ಮಾಡೋದ್ರಲ್ಲಿ ಅನುಭವಿದೆ ಎಂದರು. ನಮ್ರತಾ, ಮುಖವಾಡ ಹಾಕಿಕೊಂಡು ಮಗುಳು ನಗುವುದು ಹೇಗೆ? ಪುಸ್ತಕವನ್ನು ತುಕಾಲಿ ಸಂತುಗೆ ನೀಡಿದ್ರು. ನಾನು ಹಾರ್ಟ್‌ನಲ್ಲಿ ಪ್ಯೂರ್ ಇಲ್ಲ ಎಂದುಕೊಂಡು ತುಕಾಲಿ ಸಂತು ನನ್ನ ಬಳಿ ನಗಾಡಿಕೊಂಡು, ಜೋಕ್ಸ್ ಮಾಡಿಕೊಂಡು ಇದ್ದರು. ನನ್ನ ಮೇಲೆ ಪ್ರಾಬ್ಲಂ ಇದ್ದರೂ ಇಷ್ಟುದಿನ ಮುಖವಾಡ ಹಾಕಿಕೊಂಡಿದ್ದರು ಅಂದರು. ಕಾರ್ತಿಕ್ 'ಯಶಸ್ವಿ ಅವಕಾಶಾದಿ ಆಗೋದು ಹೇಗೆ? ಎಂಬ ಪುಸ್ತಕವನ್ನು ಸಂಗೀತಾಗೆ ನೀಡಿದರು. ಜೊತೆಗೆ ಎಲ್ಲೆಲ್ಲಿ ಅವಕಾಶ ಸಿಕ್ಕಿದ್ಯೋ..ಬೇಡದೆ ಇದ್ದರೂ ಅವಕಾಶ ತಗೊಂಡು ಸಂಗೀತಾ ಮಾತನಾಡೋಕೆ ಬರ್ತಾರೆ ಎಂದರು. 

 

ಸಿಂಪಥಿ ಬರಿಸೋದು ಹೇಗೆ?

ವರ್ತೂರು ಸಂತೋಷ್  ಅವರು ಸಿಂಪಥಿ ಬರಿಸೋದು ಹೇಗೆ? ಎಂಬ ಪುಸ್ತಕವನ್ನು ಡ್ರೋನ್ ಪ್ರತಾಪ್‌ಗೆ ನೀಡಿದರು. ಸಿಂಪಥಿ ಕ್ರಿಯೇಟ್ ಮಾಡೋದ್ರಲ್ಲಿ ಪ್ರತಾಪ್ ಜಾಸ್ತಿ ಅಂತ ಹೇಳಿದ್ದಾರೆ. ಸಂಗೀತಾ ಅಹಂಕಾರದಿಂದ ಮೆರೆಯೋದು ಹೇಗೆ? ಎಂಬ ಪುಸ್ತಕವನ್ನು ಕಾರ್ತಿಕ್‌ಗೆ ನೀಡಿದರು. ಕಾರ್ತಿಕ್ ಸಿಕ್ಕಾಪಟ್ಟೆ ಅಹಂಕಾರದಿಂದ ಕಾರ್ತಿಕ್ ಮಾತಡ್ತಾರೆ. ಕ್ಷಮೆ ಕೇಳಿಸಿದೆ ಅಂತ ಕೀಳಾಗಿ, ಅಹಂಕಾರದಿಂದ ಕಾರ್ತಿಕ್ ಹೇಳಿದ್ದರೆಂದು ಸಂಗೀತಾ ಹೇಳಿದರು. ವಿವೇಚನೆ ಇಲ್ಲದೆ ಮಾತನಾಡೋದು ಹೇಗೆ? ಎಂಬ ಪುಸ್ತಕವನ್ನು ವರ್ತೂರು ಸಂತೋಷ್‌ಗೆ ಡ್ರೋನ್ ಪ್ರತಾಪ್ ಕೊಟ್ಟರು. ಯಾವ ವಿಷಯದಲ್ಲಿ ಏನು ಮಾತಾಡ್ತೀನಿ ಎಂಬ ಪರಿಪೂರ್ಣತೆಯಿಲ್ಲ. ಏನೋ ಒಂದು ಕೊಡಬೇಕು ಅಂತ ಅದಕ್ಕೆ ಏನಾದರೂ ಒಂದು ಕಾರಣ ಕೊಡ್ತಾರೆ ಎಂದರು. 

ಕಾಲು ಕೆರೆದು ಜಗಳವಾಡೋದು ಯಾರು?

ತನಿಷಾ 'ಸ್ವಾರ್ಥಿಯಾಗಿ ಆಡೋದು ಹೇಗೆ?' ಎಂಬ ಪುಸ್ತಕವನ್ನು ವಿನಯ್‌ಗೆ ಕೊಟ್ಟರು. ವಿನಯ್ ಕಾಲು ಕೆರೆದು ಜಗಳ ಆಡೋದು ಹೇಗೆ? ತನಿಷಾಗೆ ನೀಡಿದರು. ಸುಳ್ಳಿನ ಅರಮನೆ ಕಟ್ಟೋದು ಹೇಗೆ? ಪುಸ್ತಕವನ್ನು ಡ್ರೋನ್ ಪ್ರತಾಪ್‌ಗೆ ತುಕಾಲಿ ಸಂತು ಕೊಟ್ಟರು. ಯಾವುದೇ ಸತ್ಯ ಹೇಳಲ್ಲ. ಸುಳ್ಳನ್ನ ಹೇಳಿ ಸತ್ಯದ ತರಹ ವಾದ ಮಾಡ್ತಾರೆ. ಪ್ರತಾಪ್ ಹೇಳವ ವಿಷಯಗಳಲ್ಲಿ ಕ್ಲಾರಿಟಿ ಇರಲ್ಲ. ಅದೆಲ್ಲಾ ಸುಳ್ಳು ಅಂತ ತುಕಾಲಿ ಸಂಉ ಹೇಳಿದರು. ಕುತಂತ್ರಿ ಆಗೋದು ಹೇಗೆ? ಎಂಬ ಪುಸ್ತಕನ್ನು ತುಕಾಲಿ ಸಂತುಗೆ ವರ್ತೂರು ನೀಡಿದರು. ಯಾಕೆಂದರೆ, ತುಕಾಲಿ ಸಂತು ಯಾರ ಬಗ್ಗೆಯೂ ಮಾತನಾಡದೇ ಇದ್ದದ್ದೇ ಇಲ್ಲ. ನನ್ನ ಬಗ್ಗೆಯೂ ಬಿಟ್ಟಿಲ್ಲ. ನನ್ನ ಹಿಂದೆಯೂ ಮಾತನಾಡಿದದಾರೆ. ಅದು ಮೊನ್ನೆ ಗೊತ್ತಾಯಿತು. ಕುತಂತ್ರಿ ಅಂದ್ರೆ ಬೇರೆಯವರ ಬಗ್ಗೆ ಮಾತನಾಡೋದು ಮಾಡ್ತಾರೆ. ಅದಕ್ಕೆ ಈ ಪುಸ್ತಕ ಎಂದರು. 

 

ಗುಂಪು ಗಾರಿಕೆ ಮಾಡೋದ್ಯಾರು

ಕಾರ್ತಿಕ್ ಗುಂಪುಗರಿಕೆ ಮಾಡೋದು ಹೇಗೆ? ಪುಸ್ತಕವನ್ನು ವಿನಯ್‌ಗೆ ನೀಡಿದರು. ಮೊದಲನೇ ವಾರದಿಂದಲೂ ವಿನಯ್ ಗುಂಪುಗಾರಿಕೆ ಮಾಡಿದ್ದಾನೆ ಈಗ ಒಬ್ಬನೇ ಇದ್ದಾನೆ. ಗುಂಪುಗಾರಿಕೆ ಮಾಡೋಕೆ ಯಾರೂ ಇಲ್ಲ ಎಂದರು. ಬೆನ್ನಿಗೆ ಚೂರಿ ಹಾಕೋದು ಹೇಗೆ? ಪುಸ್ತಕವನ್ನು ಕಾರ್ತಿಕ್‌ಗೆ  ವಿನಯ್ ಹೇಳಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+