X
ಹೋಮ್ ಚಲನಚಿತ್ರಗಳ ಒಳನೋಟ

ನನ್ನನ್ನು ಕ್ಷಮಿಸಿ: ಕಾರ್ತಿಕ್ ತಾಯಿ ಬಳಿ ಕ್ಷಮೆ ಕೇಳಿದ ಸಂಗೀತಾ ಶೃಂಗೇರಿ

Author Sowmya Bairappa | Published: Thursday, December 28, 2023, 11:10 AM [IST]

ದೊಡ್ಮನೆಯಲ್ಲಿ ಸದ್ಯ ಫ್ಯಾಮಿಲಿ ವೀಕ್ ಚಾಲ್ತಿಯಲ್ಲಿದೆ. ಸ್ಪರ್ಧಿಗಳ ಕುಟುಂಬಸ್ಥರು ಬಿಗ್‌ಬಾಸ್‌ ಮನೆಗೆತೆರಳಿ ತಮ್ಮವರ ಯೋಗಕ್ಷೇಮಾ ಆಲಿಸುತ್ತಿದ್ದಾರೆ. ಕಳೆದ ಸಂಚಿಕೆಯಲ್ಲಿ ಕಾರ್ತಿಕ್ ಮಹೇಶ್ ಅವರ ತಾಯಿ 'ನನ್ನ ಮುದ್ದು ತಾರೆ ನಗುತಲಿ ಬಾರೆ' ಅಂತ ಹಾಡುತ್ತಾ ಬಿಗ್‌ಬಾಸ್‌ ಮನೆಗೆ ಆಗಮಿಸಿದ್ದಾರೆ. ಈ ವೇಳೆ ಸಂಗೀತಾ ಶೃಂಗೇರಿ ತಾವು ಮಾಡಿದ ತಪ್ಪಿಗೆ ಕಾರ್ತಿಕ್ ತಾಯಿ ಬಳಿ ಕ್ಷೆಮೆ ಕೇಳಿದ್ದಾರೆ.


cover image
ಕಾರ್ತಿಕ್ ಕಣ್ಣೀರು

ಎಲ್ಲರಿಗೂ ಪಾಸ್ ಕೊಟ್ಟಾಗ ಕಾರ್ತಿಕ್ ತಾಯಿ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟರು. ಮಗನಿಗೆ ಒಂದೇ ಒಂದು ಮುತ್ತನ್ನು ಕೊಟ್ಟು, ಕಂದ ಚೆನ್ನಾಗಿ ಆಡು ಎಂದರು. ಕಾರ್ತಿಕ್‌ ನನ್ನ ತಂಗಿ ಮಗು ಹೇಗಿದೆ ಅಂತ ಕೇಳಿದಾಗ, ಮಗು ನಿನ್ನ ಥರನೇ ಇದೆ. ಪುಟ್ಟಿ ಚೆನ್ನಾಗಿದ್ದಾಳೆ ಎಂದರು. ಕಾರ್ತಿಕ್‌, ನನಗೆ ಪಾಪು ನೋಡಬೇಕು ಅಂತ ಹೇಳಿದಾಗ, ನಾನು ಬಿಗ್‌ಬಾಸ್‌ಗೆ ಹೇಳ್ತೀನಿ ಎಂದರು. ಈ ವೇಳೆ ಬಿಗ್‌ಬಾಸ್‌, ಮೀನಾಕ್ಷಿ ಅವರೇ ಗಾರ್ಡನ್ ಏರಿಯಾದಲ್ಲಿ ಒಂದು ಬೋರ್ಡ್ ಇದೆ. ಅಲ್ಲಿ ನಿಮ್ಮ ಮಗನಿಗಾಗಿ ಒಂದು ಸಂದೇಶ ಬರೆಯಿರಿ ಎಂದರು. ನಂತರ ಕಾರ್ತಿಕ್ ಅವರನ್ನು ಹೊರತುಪಡಿಸಿ, ಯಾರು ಕ್ಯಾಪ್ಟನ್ ಆಗಲು ಬಯಸುತ್ತೀರಿ ಎಂದರು. ಆಗ ತನಿಷಾ ಎಂದು ಹೇಳಿದರು. ಬಳಿಕ ಬಿಗ್‌ಬಾಸ್‌ ಮನೆಯಿಂದ ಮರೆಯಾದರು. ಇದು ಕಾರ್ತಿಕ್‌ಗೆ ಅತೀವ ನೋವು ತಂದಿತ್ತು. ಏಕೆಂದರೆ ಅಮ್ಮನನ್ನು ಸರಿಯಾಗಿ ಮಾತನಾಡಿಸಲು ಆಗಲಿಲ್ಲ. ಅಮ್ಮನನ್ನ ಮಾತನಾಡಿಸಿ, ಒಂದು ಅಪ್ಪುಗೆಯನ್ನು ಕೊಡಲು ಆಗಲಿಲ್ಲ ಎಂದು ಕಣ್ಣೀರನ್ನು ಹಾಕಿದರು. ಸಣ್ಣ ಮಕ್ಕಳು ಹಠ ಮಾಡುವಂತೆ ಅಮ್ಮ ಬಾರಮ್ಮ ಎಂದು ಜೋರಾಗಿ ಕೂಗಿದರು.  

 

ವಾಪಾಸ್ ಬಂದ ಕಾರ್ತಿಕ್ ತಾಯಿ

ಆನಂತರ ಸಿರಿ ಅವರ ಅಕ್ಕ, ಅಕ್ಕನ ಮಗಳು ದೊಡ್ಮನೆಗೆ ಬಂದ ನಂತರದದಲ್ಲಿ ಮತ್ತೆ ಕಾರ್ತಿಕ್ ತಾಯಿ ಮೀನಾಕ್ಷಿ ಮನೆಗೆ ಬಂದರು. ವಿಶೇಷವೆಂದರೆ ಕಾರ್ತಿಕ್ ತಾಯಿ ಮನೆಯಿಂದ ವಾಂಗಿಬಾತ್ ಮಾಡಿ ತಂದಿದ್ದರು. ಕಾರ್ತಿಕ್ ಕೂಡ ವಾಂಗಿಬಾತ್ ಮಾಡಲು ರೆಡಿಯಾಗಿದ್ದರು. ಇಬ್ಬರು ಮಾತನಾಡಿಕೊಳ್ಳದೇ ಒಟ್ಟಿಗೆ ವಾಂಗಿಬಾತ್ ಮಾಡಿರುವ ವಿಚಾರ ನೆನಪಿಸಿಕೊಂಡು ನಕ್ಕಿದ್ದಾರೆ. ಮನೆಯವರಿಗೂ ಈ ವಿಷಯ ಖುಷಿ ಕೊಟ್ಟಿದೆ. ಜೊತೆಗೆ  ತಮ್ಮ ಮಗಬಿಗ್‌ಬಾಸ್‌ ಮನೆಯಲ್ಲಿ ಅಡುಗೆ ಮಾಡುತ್ತಿರೋದು ಖುಷಿ ಕೊಟ್ಟಿದೆಯಂತೆ. ನನ್ನ ಮಗ ಕಾರ್ತಿಕ್ ಅಂತ ಹೇಳೋಕೆ ತುಂಬಾ ಖುಷಿಯಾಗ್ತಿದೆ. ಅವನು ಚಿಕ್ಕ ವಯಸ್ಸಿನಿಂದ ತುಂಬಾ ತರಲೆ ಅಂತ ಹೇಳಿದರು.

 

ಕ್ಷಮೆ ಕೇಳಿದ ಸಂಗೀತಾ

ಕಾರ್ತಿಕ್ ಹಾಗೂ ಸಂಗೀತಾ ನಡುವಿನ ಮನಸ್ತಾಪದಿಂದ ಇಬ್ಬರ ಮಧ್ಯೆ ಜಗಳವಾಗಿತ್ತು. ಇದೇ ವಿಚಾರವಾಗಿ ಮೀನಾಕ್ಷಿ ಅವರಿಗೆ ಸಂಗೀತಾ ಕ್ಷಮೆ ಕೇಳಿದ್ದಾರೆ. ನಾವಿಬ್ಬರು ಟಾಸ್ಕ್ ವಿಚಾರಕ್ಕೆ ಜಗಳ ಆಡಿದ್ದೆವು. ಅದನ್ನು ಬಿಟ್ಟು ಏನೂ ಇಲ್ಲ. ನನ್ನಿಂದ ನಿಮ್ಮ ಮಗ ಹೆಡ್ ಶೇವ್ ಮಾಡಿಕೊಳ್ಳುವ ಹಾಗೆ ಆಯ್ತು, ಕ್ಷಮಿಸಿ. ನನಗೆ ಬೈಯ್ಯೋದಿದ್ರೆ ಬೈಯ್ಯಿರಿ ಅಂತ ಕ್ಷಮೆ ಕೇಳಿದರು. ಅದಕ್ಕೆ ಮೀನಾಕ್ಷಿ ಅವರು ನಿನಗ್ಯಾಕಮ್ಮ ನಾನು ಬೈಯ್ಯಲಿ, ಅಳಬೇಡ ಅಂತಿದ್ದಾರೆ.

 

ಅಪ್ಪ ಕಟ್ಟಿಸಿದ ಮನೆ ಮಾರುವ ಪರಿಸ್ಥಿತಿ ಬಂತು

ಈ ವೇಳೆ ತಮ್ಮ ತಾಯಿಯ ಬಗ್ಗೆ ಮಾತನಾಡಿದ ಕಾರ್ತಿಕ್, ನನ್ನ ತಾಯಿ ತುಂಬಾ ಕಷ್ಟಪಟ್ಟಿದ್ದಾರೆ. ಅವರಿಗೆ ಕಷ್ಟ ಹೇಳಿಕೊಳ್ಳಲು ಇಷ್ಟವೇ ಇಲ್ಲ. ಹಾಗಾಗಿ ನಾನು ಕೆಲವೊಂದನ್ನು ಮಾತನಾಡೋದಿಲ್ಲ. ನಮ್ಮ ತಂದೆ ಸಾಯು ೫ ವರ್ಷ ಮುಂಚೆ ಎಲ್ಲಾ ದುಶ್ಚಟ ಬಿಟ್ಟು ಅಮ್ಮನನ್ನು ತುಂಬಾ ಪ್ರೀತಿ ಮಾಡಿದರು. ನಮ್ಮ ತಂದೆ ಇಷ್ಟೊಂದು ಪ್ರೀತಿ ಮಾಡ್ತಾರಾ ಅನಿಸ್ತು. ತಂದೆ ಕಟ್ಟಿಸಿದ ದೊಡ್ಡ ಮನೆಯನ್ನು ಅವರು ಕಟ್ಟಿಸಿದ್ದಕ್ಕಿಂತ ಕಡಿಮೆ ದುಡ್ಡಿಗೆ ಮಾರುವ ಪರಿಸ್ಥಿತಿ ಬಂತು. ನನ್ನ ತಾಯಿಗೆ ಮನೆ ಕಟ್ಟಿಸಿಕೊಡಬೇಕು ಎನ್ನುವ ಆಸೆಯಿದೆ. ನನ್ನ ತಾಯಿ ಜೊತೆಗೆ ಇದ್ರೆ ನಾನು ಏನು ಬೇಕಿದ್ರೂ ಮಾಡ್ತೀನಿ. ಯಾವ ಪರಿಸ್ಥಿತಿ ಬೇಕಿದ್ರೂ ಎದುರಿಸ್ಥಿನಿ ಅಂತ ಹೇಳಿದರು. 

ಮನೆಯವರಿಗೆ ಏನಂದ್ರು?

ಸಿರಿ ಅವರು ತಾಯಿಯ ಹಾಗೆ ಕಾರ್ತಿಕ್‌ಗೆ ಬುದ್ಧಿ ಹೇಳಿರೋದಕ್ಕೆ ಮೀನಾಕ್ಷಿ ಅವರು ಥ್ಯಾಂಕ್ಸ್ ಹೇಳಿದ್ದಾರೆ. ಸಂಗೀತಾಗೆ ಅಳಬೇಡ, ಜಾಸ್ತಿ ಮಾತಾಡ್ತೀರಾ, ಮಾತಾಡಬೇಡಿ, ವಾದ ಮಾಡಬೇಡಿ ಅಂತ ಹೇಳಿದರು. ವಿನಯ್‌ಗೆ ಕೋಪ ಕಮ್ಮಿ ಮಾಡಿಕೊಳ್ಳಿ. ಕೋಪದ ಕೈಯಲ್ಲಿ ಬುದ್ಧಿ ಕೊಡಬೇಡಿ. ನೀನು ಕೂಡ ನನ್ನ ಮಗನೇ ಅಂತ ಹೇಳಿದರು. ತುಕಾಲಿ ಸಂತುಗೆ ನಿಮ್ಮ ಕಾಮಿಡಿ ಸೂಪರ್, ಆದ್ರೆ ಹಿಂದೆ ಮಾತನಾಡೋದು ಬೇಡ ಅಂತ ಹೇಳಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+