X
ಹೋಮ್ ಚಲನಚಿತ್ರಗಳ ಒಳನೋಟ

ಬೆಡ್‌ಶೀಟ್ ವಿಚಾರವಿಟ್ಟುಕೊಂಡು ಗಲಾಟೆ: ರಕ್ಷಕ್‌ಗೆ ಮಾತಲ್ಲೇ ಚಾಟಿ ಬೀಸಿದ ಡ್ರೋನ್ ಪ್ರತಾಪ್

Author Sowmya Bairappa | Published: Thursday, January 18, 2024, 02:51 PM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10 ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿಯಿದ್ದು, ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಲಾಗುತ್ತಿದೆ. ದೊಡ್ಮನೆಗೆ ಈ ವಾರ ಎಲಿಮಿನೇಟ್ ಆಗಿ ಹೊರಹೋಗಿದ್ದ ಸ್ಪರ್ಧಿಗಳು ಆಗಮಿಸಿದ್ದರು. ಈ ಸಂದರ್ಭ ಜೋಕರ್ ವೇಷದಲ್ಲಿ ಎಂಟ್ರಿಕೊಟ್ಟಿದ್ದ ರಕ್ಷಕ್ ಬುಲೆಟ್, ಡ್ರೋನ್ ಪ್ರತಾಪ್‌ಗೆ ಟಾರ್ಚರ್ ಕೊಡಲು ಮುಂದಾಗಿದ್ದರು. ಇದನ್ನು ಹಲವರು ಖಂಡಿಸಿದ್ದಾರೆ.


cover image
ಬೆಡ್‌ಶೀಟ್ ವಿಚಾರವಾಗಿ ಖ್ಯಾತೆ

ಬಿಗ್‌ಬಾಸ್‌ ಮನೆಗೆ ಮರಳಿದ್ದ ಎಲಿಮಿನೇಟೆಟ್ ಸ್ಪರ್ಧಿಗಳು ಅಂದು ಅಲ್ಲೇ ಮಲಗುವವರಿದ್ದರು. ಈ ಸಂದರ್ಭ ಡ್ರೋನ್ ಪ್ರತಾಪ್ ಬಳಿ ಬಂದ ರಕ್ಷಕ್, ನನ್ನ ಬೆಡ್‌ಶೀಟ್ ನೀಡಿ, ನನ್ನ ಬೆಡ್‌ಶೀಟ್ ನೀಡಿ ಎಂದು ಕಾಡಲು ಶುರು ಮಾಡಿದರು. ಆ ಕೂಲ್ ಆಗಿಯೇ ಉತ್ತರಿಸಲು ಮುಂದಾದ ಪ್ರತಾಪ್, ಯಾವ ಬೆಡ್‌ಶೀಟ್ ಅಂತ ಕೇಳಿದರು. ಈ ವೇಳೆ ರಕ್ಷಕ್ ಹೇಳಿಕೆ ನೀಡೋಕೆ ಮೊದಲು ಯೋಚನೆ ಮಾಡಬೇಕಿತ್ತು ಅಂತ ಅವಾಜ್ ಹಾಕಿದ್ದಾರೆ. ಅದಕ್ಕೆ ಪ್ರತಾಪ್ ಮಕ್ಕಳ ತರಹ ಮಾಡಬೇಡಿ, ಹೋಗಿ ಮಲಗಿಕೊಳ್ಳಿ ಅಂತ ಬುದ್ದಿವಾದ ಹೇಳಿದರು. ತಕ್ಷಣ ಅಲ್ಲಿಗೆ ಹೋದ ಸಂಗೀತಾ, ಈ ಜಗಳ ತಾರಕಕ್ಕೇರುವ ಮುನ್ನ ತಿಳಿ ಮಾಡಿದ್ದಾರೆ. ಬೆಡ್ ಶೀಟ್ ತಂದುಕೊಟ್ಟು ಸಮಾಧಾನ ಮಾಡಿದ್ದಾರೆ.  ಮರುದಿನ ಈ ವಿಚಾರವನ್ನು ಸ್ನೇಹಿತ್ ಅವರು ಮೈಕಲ್ ಅವರ ಬಳಿ ಚರ್ಚಿಸಿದ್ದಾರೆ. ರಕ್ಷಕ್ ಹೋಗಿ ಪ್ರತಾಪ್‌ಗೆ ಟಾರ್ಚರ್ ಮಾಡಿದ್ದು ನನಗೆ ಸರಿ ಅನಿಸಲಿಲ್ಲ ಅಂತ ಹೇಳಿದ್ದಾರೆ. ಮೈಕಲ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. 

ಕಾರಣ ಏನು?

ಈ ಹಿಂದೆ ವಿನಯ್ ಗ್ರೂಪ್‌ನಲ್ಲಿದ್ದವರೆಲ್ಲಾ ಒಬ್ಬೊಬ್ಬರೇ ಔಟ್ ಆಗ್ತಿದ್ದಾರೆ ಅಂತ ಪ್ರತಾಪ್ ಆರೋಪಿಸಿದ್ದರು. ಇದು ಹಲವರಿಗೆ ಸರಿ ಎನಿಸಿತ್ತು. ವಾರಾಂತ್ಯ ಸಂಚಿಕೆಯಲ್ಲಿ ಯಾರು ಯಾವ ಪುಸ್ತಕ ಬರೆದರೆ ಸೂಕ್ತ ಎಂಬ ಚಟುವಟಿಯನ್ನು ಕಿಚ್ಚ ಸುದೀಪ್  ನೀಡಿದ್ದರು. ಈ ವೇಳೆ ಡ್ರೋನ್ ಪ್ರತಾಪ್ 'ಬೇರೆಯವರನ್ನು ತುಳಿದು ಬೆಳೆಯೋದು ಹೇಗೆ? ಎಂಬ ಪುಸ್ತಕವನ್ನು ವಿನಯ್‌ಗೆ ನೀಡಿದ್ದರು. ಇಲ್ಲಿವರೆಗೂ ಯಾರ್ಯಾರು ವಿನಯ್ ಜೊತೆಯಲ್ಲಿದ್ದರೋ... ಎಲ್ಲಾ ಫ್ರೆಂಡ್ಸ್, ಹಾಗೆ ಹೀಗೆ ಅಂದುಕೊಂಡು ಅವರೆಲ್ಲಾ ತಪ್ಪು ಮಾಡ್ತಿದ್ದಾರೆ ಎಂಬ ಅಭಿಪ್ರಾಯವನ್ನೇ ವಿನಯ್ ಕೊಟ್ಟಿಲ್ಲ. ಇಂತಹ ಕಡೆ ತಪ್ಪು ಮಾಡ್ತಿದ್ದಾರೆ ಅಂತ ಹೇಳೇ ಇಲ್ಲ. ಸರಿ ಎಂದುಕೊಂಡೇ ಜೊತೆಯಲ್ಲಿ ಇದ್ದವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್‌ ಇವರ ಬೆಡ್ ಸೇರಿಕೊಳ್ತು ಎಂದಿದ್ದರು.

 

ರಕ್ಷಕ್ ಪೋಸ್ಟ್

ಈ ವಿಚಾರವಾಗಿ ರಕ್ಷಕ್ ಬುಲೆಟ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದರು. ಎಲ್ಲರಿಗೂ ನಮಸ್ಕಾರ...ತಂಡ ಕಟ್ಟೋಕೆ ಅಥವಾ ಯಾವುದೇ ಗುಂಪುಗಾರಿಕೆ ಮಾಡೋಕೆ ನಾನು ಬಿಗ್‌ಬಾಸ್‌ ಮನೆಯೊಳಗೆ ಹೋಗಿರಲಿಲ್ಲ. ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಲು ನಾನು ಅಲ್ಲಿಗೆ ಹೋಗಿದ್ದೆ. ನನ್ನ ಬೆಡ್‌ಶೀಟ್ ನನ್ನ ಬಳಿ ಜೋಪಾನವಾಗಿದೆ ಎಂದಿದ್ದರು. 

 

ದೊಡ್ಮನೆಯಿಂದ ತನಿಷಾ ಔಟ್

ಈ ವಾರ ಮಿಡ್ ಎಲಿಮಿನೇಷನ್ ಇರಲಿದೆ ಅಂತ ಎಲ್ಲರೂ ಊಹಿಸಿದ್ದರು. ಅದರಂತೆ ವಾರದ ಮಧ್ಯೆದಲ್ಲಿ ತನಿಷಾ ಕುಪ್ಪಂಡ ಎಲಿಮಿನೇಟ್ ಆಗಿದ್ದಾರೆ. ಮೊದಲು ಎಲ್ಲರನ್ನು ಗಾರ್ಡನ್ ಏರಿಯಾಗೆ ಕರೆತರಲಾಯಿತು. ನಂತರ ಬಿಗ್‌ಬಾಸ್‌ ಸೂಚಿಸುವ ವ್ಯಕ್ತಿ ಮನೆಯಿಂದ ಹೊರಹೋಗಬೇಕು ಎಂಬ ಆದೇಶ ಬಂತು. ಅದರಂತೆ ಕಣ್ಣೀರಿಡುತ್ತಾ ತನಿಷಾ ದೊಡ್ಮನೆಯಿಂದ ಆಚೆ ಬಂದಿದ್ದಾರೆ. 

 

ಅತಿಥಿಗಳು ಹೊರಹೋಗಲಿ ಎಂದ ನಮ್ರತಾ

ಕಳೆದ ಸಂಚಿಕೆಯಲ್ಲಿ ದೊಡ್ಮನೆಗೆ ಬಂದ ಸದಸ್ಯರೆಲ್ಲರು ಹೊರಗಿನ ವಿಚಾರವನ್ನು ಸ್ಪರ್ಧಿಗಳೊಂದಿಗೆ ಚರ್ಚಿಸಿದ್ದಾರೆ. ಅದರಲ್ಲೂ ಕಾರ್ತಿಕ್ ಜೊತೆ ನಮ್ರತಾ ಫ್ಲರ್ಟ್ ಮಾಡಿದ್ದು ಹೊರಗೆ ಕೆಟ್ಟದಾಗಿ ಕಾಣುತ್ತಿದೆ, ಟ್ರೋಲ್ ಆಗುತ್ತಿದೆ ಅಂತ ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಕೇಳಿದ ನಮ್ರತಾ ಕಣ್ಣೀರು ಸುರಿಸಿದ್ದಾರೆ. ನಂತರ ನಡೆದ ಚಟುವಟಿಯಕೆಯಲ್ಲಿ ಸಿರಿ ಅವರು, ನಮ್ರತಾ ಮತ್ತು ವಿನಯ್ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುತ್ತಾರೆ ಅಂತ ಅಂದುಕೊಂಡಿರಲಿಲ್ಲ ಅಂತ ಹೇಳಿದ್ದರು. ಇದೂ ಕೂಡ ನಮ್ರತಾ ಬೇಸರಕ್ಕೆ ಕಾರಣವಾಗಿದ್ದು, ಬಂದ ಅತಿಥಿಗಳು ಹೊರಹೋಗಲಿ ಅಂತ ಕಣ್ಣೀರು ಹಾಕಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+