X
ಹೋಮ್ ಚಲನಚಿತ್ರಗಳ ಒಳನೋಟ

ಮತ್ತೆ ಹೆಚ್ಚಿದ ವಿನಯ್‌-ಸಂಗೀತಾ ದ್ವೇಷದ ಕಿಡಿ: ವಿನಯ್‌ಗೆ ಯು ಪ್ಲೀಸ್‌ ಶಟ್‌ಅಪ್ ಎಂದ ಸಂಗೀತಾ

Author Sowmya Bairappa | Published: Tuesday, December 5, 2023, 05:30 PM [IST]

ಬಿಗ್‌ಬಾಸ್‌ ಕನ್ನಡ ಸೀಸನ್ 10 ಈಗ ಒಂಬತ್ತನೇ ವಾರಕ್ಕೆ ಕಾಲಿಟ್ಟಿದ್ದೆ. ಈ ವಾರ ಮನೆಯಿಂದ ಹೊರಹೋಗಲು ಒಂಬತ್ತು ಮಂದಿ ಆಯ್ಕೆಯಗಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ಕೂಡ ಹೆಚ್ಚಿದೆ. ಕಳೆದ ಸಂಚಿಕೆಯ ಆರಂಭದಲ್ಲಿ ಇತರರ ಬಗೆಗಿನ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಉದ್ದೇಶದಿಂದ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಚಟುವಟಿಕೆಯೊಂದನ್ನು ನೀಡಿದ್ದರು. ಇಂದಿನ ಸಂಚಿಕೆಯಲ್ಲಿ ಫ್ಲವರ್ v/s ಫೈಯರ್ ಟೆಸ್ಟ್ ನಡೆದಿದ್ದು, ಮತ್ತೆ ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ನಡುವೆ ಹಳೆಯ ಕಿಡಿ ಹೊತ್ತಿಕೊಂಡಿದೆ.


cover image
ಮತ್ತೆ ಹೆಚ್ಚಿದ ವಿನಯ್‌-ಸಂಗೀತಾ ದ್ವೇಷದ ಕಿಡಿ

ಇಂದಿನ ಸಂಚಿಕೆಯಲ್ಲಿ ಫ್ಲವರ್  v/s ಫೈಯರ್ ಟೆಸ್ಟ್ ನಡೆದಿದ್ದು, ಮತ್ತೆ ವಿನಯ್ ಗೌಡ ಹಾಗೂ ಸಂಗೀತಾ ಶೃಂಗೇರಿ ನಡುವೆ ಹಳೆಯ ಕಿಡಿ ಹೊತ್ತಿಕೊಂಡಿದೆ. ಇಂದು ಮನೆಯ ಸದಸ್ಯರಿಗೆ ಚಟುವಟಿಕೆಯೊಂದನ್ನು ನೀಡಿದ್ದಾರೆ. ಅದರ ಪ್ರಕಾರ ಒಂದಿಷ್ಟು ಬಿಳಿ, ಮತ್ತೊಂದಿಷ್ಟು ಕಪ್ಪುಗಳನ್ನು ಇಡಲಾಗಿದೆ. ಒಬ್ಬೊಬ್ಬ ಸದಸ್ಯರು ಮನೆಯೊಳಗೆ ತಮ್ಮ ದೃಷ್ಟಿಯಲ್ಲಿ ಅತ್ಯಂತ ಧನಾತ್ಮಕ ವ್ಯಕ್ತಿ ಯಾರು? ಅತ್ಯಂತ ಋಣಾತ್ಮಕ ವ್ಯಕ್ತಿ ಯಾರೆಂಬುದನ್ನು ತಿಳಿಸಿ ಹೂ ನೀಡಬೇಕು. ಈ ಟಾಸ್ಕ್‌ನಲ್ಲಿ ಕಪ್ಪು ಹೂವು ಪಡೆದವರ ಮನದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ನೆಗೆಟಿವಿಟಿ ಬೇರು

ಸದ್ಯ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸಂಗೀತಾ ಅವರು ವಿನಯ್‌ಗೆ ಕಪ್ಪು ಹೂವು ನೀಡಿ, ಮೊದಲಿನಿಂದಲೂ ನೆಗೆಟಿವಿಟಿಯ ಬೇರಿ ನೀವು ಅಂತ ಆರೋಪಿಸಿದ್ದಾರೆ. ಅದಕ್ಕೆ ಠಕ್ಕರ್ ನೀಡಿದ ವಿನಯ್, ನಾನು ನೆಗೆಟಿವಿಟಿ ಬೇರು. ಬೇರು ಬಿಡಬೇಕು ಅಂದ್ರೆ ಬೀಜ ನಡೆಬೇಕಲ್ವಾ? ಆ ಬೀಜವೇ ಸಂಗೀತಾ. ಇಲ್ಲದಿರೋ ಕಾರಣಕ್ಕೆ ಮೂಗು ತೂರಿಸಿ ಅದನ್ನೊಂದು ಮೂಮೆಂಟ್ ಮಾಡಿದವರು ಅವರು ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ಸಂಗೀತಾ, ಇಂದಿಗೂ ನಾನು ನನ್ನ ಹೇಳಿಕೆಗೆ ಸ್ಟ್ಯಾಂಡ್ ತಗೋತಿನಿ ಎಂದರು. ಅದಕ್ಕೆ ವಿನಯ್, ಯು ಪ್ಲೀಸ್‌ ಶಟ್‌ಅಪ್ ಅಂತ ಕೋಪದಿಂದ ಹೇಳಿದ್ದಾರೆ. ಸಂಗೀತಾ ಕೂ ಸುಮ್ಮನಿದರೆ ಮೈಂಡ್ ಯುವರ್ ಲಾಂಗ್ವೇಜ್ ಅಂದಿದ್ದಾರೆ. ಈ ಮೂಲಕ ಇವರಿಬ್ಬರ ಮಧ್ಯೆ ಮತ್ತೆ ದ್ವೇಷದ ಕಿಡಿ ಹೊತ್ತಿಕೊಂಡಿದ್ದು, ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ ಕಾದು ನೋಡಬೇಕು. 

 

ಬಳೆ ವಿಚಾರದ ಕಾವು

ಆರಂಭದಲ್ಲಿ ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಪದೇ ಪದೇ ಬಳೆ ವಿಷಯ ಪ್ರಸ್ತಾಪಿಸುವ ಮೂಲಕ ಹಲವು ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ಈ ಸಂದರ್ಭ ವಿನಯ್ ಪತ್ನಿ ಅವರಿಗೂ ಎಂಥಹ ಕೆಟ್ಟ ಪತಿಯೊಂದಿಗೆ ಇದ್ದೀರಾ ಅಂತೆಲ್ಲಾ ನಿಂದನೆ ಮತ್ತು ಬೆದರಿಕೆಗಳು ಬಂದಿದ್ದವು. ಈ ವಿಷಯವನ್ನು ಪವಿ ಮನೆಯೊಳಗೆ ಪ್ರಸ್ತಾಪಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ವಿನಯ್ ಡಲ್ ಆಗಿದ್ದರು. ಬಳಿಕ ಬಿಗ್‌ಬಾಸ್ ಸಮಾಧಾನ ಮಾಡಿದ್ದರು. ಬಳೆ ವಿಚಾರ ದೊಡ್ಡದಾಗಲು ಸಂಗೀತಾ ಕಾರಣ ಎಂಬುದು ವಿನಯ್ ಮನಸ್ಸಿನಲ್ಲಿದೆ. ಹೀಗಾಗಿ, ಅಂದಿನಿಂದ ವಿನಯ್ ತಮ್ಮ ಮೇಲೆ ದ್ವೇಷ ಕಾರುತ್ತಿದ್ದಾರೆ ಅಂತ ಸಂಗೀತಾ ಹೇಳಿಕೊಂಡಿದ್ದಾರೆ. 

 

ದೊಡ್ಮನೆಯಲ್ಲಿ ಚೇಲನಾಗಿ ಉಳಿಯುವ ಸ್ಪರ್ಧಿ

ಇಡೀ ಸೀಸನ್‌ನಲ್ಲಿ ಕೊನೆಯವರೆಗೂ ಚೇಲನಾಗಿಯೇ ಇರುವ ಸದಸ್ಯ ಯಾರು ಎಂಬ ಪ್ರಶ್ನೆ ಬಂತು. ಇದಕ್ಕೆ ಬಹುತೇಕ ಸ್ಪರ್ಧಿಗಳು ಸ್ನೇಹಿತ್ ಎಂದೇ ಉತ್ತರಿಸಿದ್ದಾರೆ. ಮೊದಲು ಮಾತನಾಡಿದ ಡ್ರೋನ್ ಪ್ರತಾಪ್, ನಾನು ಸ್ನೇಹಿತ್ ಅಂತ ಹೇಳುತ್ತೇನೆ. ಯಾಕೆಂದರೆ ನಾನು ಹಲವು ಬಾರಿ ಗಮನಿಸಿದ್ದೇನೆ. ನನಗೂ ಅನುಭವವಾಗಿದೆ. ಎಷ್ಟೋ ವಿಚಾರಗಳಲ್ಲಿ ಸ್ನೇಹಿತ್ ಅವರು ವಿನಯ್, ನಮ್ರತಾ ಪರವಾಗಿದ್ದಾರೆ. ಚೇಲನಾಗಿಯೇ ನಡೆದುಕೊಳ್ತಾರೆ ಎಂದರು. ನಂತರ ಕಾರ್ತಿಕ್, ಬಾತ್‌ರೂಂ ವಿಚಾರವಾಗಿ ಸ್ನೇಹಿತ್ ನಡೆದುಕೊಂಡಿದ್ದು ನನಗೆ ಸರಿ ಅನಿಸಲಿಲ್ಲ. ಅದಕ್ಕೆ ಸ್ನೇಹಿತ್ ಎಂದರು. ಇನ್ನು ಸಂಗೀತಾ, ಮೊದಲನೇ ವಾರದಿಂದಲೂ ಸ್ನೇಹಿತ್ ಚೇಲ ಅಂತಲೇ ಅನಿಸುತ್ತೆ. ವಿನಯ್ ವಿರುದ್ಧ ಸ್ನೇಹಿತ್ ಧ್ವನಿ ಎತ್ತುವುದಿಲ್ಲ ಎಂದರು.

 

ಸ್ನೇಹಿತ್ ಹೇಳಿದ್ದೇನು?

ಈ ವಾರ ಮನೆಯ ಕ್ಯಾಪ್ಟನ್ ಆದ ಸ್ನೇಹಿತ್ ಮಾತ್ರ ನಾಮಿನೇಷನ್ ಅಧಿಕಾರವನ್ನು ಹೊಂದಿದ್ದರು. ಈ ವೇಳೆ ವಿನಯ್ ಅವರನ್ನು ಸೇಫ್ ಮಾಡಿದ ಸ್ನೇಹಿತ್, ವಿನಯ್ ಅವರಲ್ಲಿ ಈ ಆಟವನ್ನು ಗೆಲ್ಲಬೇಕೆಂಬ ಕಿಚ್ಚಿದೆ. ವಿನಯ್ ಅವರ ಸ್ವೀಟ್ ಸೈಡ್ ನಾನು ನೋಡಿದ್ದೇನೆ. ಟಾಸ್ಕ್‌ನಲ್ಲಿ ರಕ್ತ, ಬೆವರು ಸುರಿಸಿ ಆಡುತ್ತಾರೆ. ಅದು ನನಗೆ ಇಷ್ಟ. ಆ ತರಹದ ಪ್ಲೇಯರ್ ಇದ್ದರೆ, ನಮಗೂ ಒಂದು ಮೋಟಿವೇಷನ್. ನಾನು ವಿನಯ್ ಅವರಿಗೆ ಏನೂ ಮಾಡಿದ್ದೇನೆ ಅಂತ ಒಂದಷ್ಟು ಜನ ನೋಡಿರಬಹುದು. ಅದಕ್ಕೆ ನಾನು ಚೇಲ ಅನಿಸಿರಬಹುದು. ಆದ್ರೆ, ವಿನಯ್ ನನಗೇನು ಮಾಡಿದ್ದಾರೆ ಅಂತ ನನಗೆ ಮಾತ್ರ ಗೊತ್ತು ಎಂದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+