X
ಹೋಮ್ ಚಲನಚಿತ್ರಗಳ ಒಳನೋಟ

ಇಷ್ಟುದಿನ ಪ್ರತಾಪ್ ಅಂದ್ರೆ ಒಂಥರಾ ಉರಿಯಿತ್ತು, ಈಗ ಸೀದಾ ಹೋಗಿ ಬಕೆಟ್ ಹಿಡಿದುಬಿಟ್ಟ: ತುಕಾಲಿ ಸಂತುಗೆ ಕೆಟ್ಟ ಹುಳ ಎಂದ ವಿನಯ್

Author Sowmya Bairappa | Published: Friday, November 17, 2023, 01:32 PM [IST]

ತುಕಾಲಿ ಸಂತು ಈ ಹಿಂದೆ ವಿನಯ್ ಗೌಡ ಅವರ ಗುಂಪಿನಲ್ಲಿ ಗುರತಿಸಿಕೊಂಡಿದ್ದರು. ಆದರೆ, ವರ್ತೂರು ಸಂತೋಷ್ ಅವರು ಕೆಲ ವಿಚಾರಗಳನ್ನು ಹೇಳಿದ್ಮೇಲೆ ಹಾಗೂ ಕೆಲ ವಿಷಯಗಳು ತಮ್ಮ ಗಮನಕ್ಕೆ ಬಂದಮೇಲೆ ಪಾಪರೆಡ್ಡಿಪಾಳ್ಯ ಗ್ಯಾಂಗ್‌ನಿಂದ ಹೊರಬಂದಿದ್ದರು. ತುಕಾಲಿ ಸಂತು ಸದ್ಯ ವಿನಯ್ ಬಳಿ ಅಷ್ಟಕಷ್ಟೆ ಮಾತನಾಡುತ್ತಿದ್ದಾರೆ. ನೀತು ಕೂಡ ವಿನಯ್ ಟೀಂನಿಂದ ಔಟ್ ಆಗಿದ್ದಾರೆ. ಇದನ್ನೆಲ್ಲಾ ಗಮನಿಸಿದ ವಿನಯ್, ತುಕಾಲಿ ಸಂತು ಅವರನ್ನು ಕೆಟ್ಟಹುಳ ಎಂದಿದ್ದಾರೆ. ಜೊತೆಗೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸುವ ವಿಚಾರವಾಗಿ ಇಬ್ಬರ ನಡುವೆ ದೊಡ್ಡ ಫೈಟ್ ನಡೆದಿದೆ.


cover image
ಸ್ನೇಹಿತ್-ವಿನಯ್ ಮಾತುಕತೆ

ತುಕಾಲಿ ಸಂತು ಅವರ ಗೇಮ್ ಪ್ಲ್ಯಾನ್ ಬಗ್ಗೆ ಸ್ನೇಹಿತ್ ಹಾಗೂ ವಿನಯ್ ಮಾತನಾಡಿಕೊಂಡಿದ್ದಾರೆ. ಈ ಸಂದರ್ಭ ಸ್ನೇಹಿತ್ ಅವರು ತುಕಾಲಿ ಸಂತು ಎಷ್ಟು ಖರಾಬು ಗೇಮ್ ಆಡ್ತಿದ್ದಾರೆ ಅಲ್ವಾ? ಅಂತ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವಿನಯ್, ಕೆಟ್ಟ ಹುಳ ಅವನು. ಇಷ್ಟುದಿನ ಪ್ರತಾಪ್ ಅಂದರೆ ಅವನಿಗೆ ಒಂಥರಾ ಉರಿಯಿತ್ತು. ಪ್ರತಾಪ್‌ನನ್ನು ನಾವು ಯಾವಾಗ ಹೊಗಳು ಆರಂಭಿಸಿದ್ವೋ, ಆಗ ಸೀದಾ ಹೋಗಿ ಬಕೆಟ್ ಹಿಡಿದುಬಿಟ್ಟ ಎಂದರು. ಅದಕ್ಕೆ ಸ್ನೇಹಿತ್, ಇಲ್ಲಿಂದ ದೂರವಾದ ಮೇಲೆ ಬೇರೆ ಆಪ್ಷನ್ ಇಲ್ಲ. ಬಕೆಟ್ ಹಿಡಿಯಲೇಬೇಕು ಅಂತ ಬಕೆಟ್ ಹಿಡಿಯುತ್ತಿದ್ದಾರೆ ಎಂದರು. 

ಸ್ನೇಹದಲ್ಲಿ ಬಿರುಕು

ಆರನೇ ವಾರದ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್‌ಬಾಸ್ ವಿಶೇಷವಾಗಿ ನಡೆಸಿದ್ದಾರೆ. ಈ ಬಾರಿ ಲೂಡೋ ಗೇಮ್ ಆಡುವ ಮೂಲಕ ನಾಮಿನೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ನಾಮಿನೇಷ್‌ನಲ್ಲಿ ಸಂಗೀತಾ ಶೃಂಗೇರಿ ಸೇಫ್ ಆಗಿದ್ದು, ತನಿಷಾ-ಕಾರ್ತಿಕ್ ನಾಮಿನೇಟ್ ಆಗಿದ್ದಾರೆ. ಆದರೂ ಕಾರ್ತಿಕ್ ಹಾಗೂ ತನಿಷಾ ತಮ್ಮನ್ನು ಸೇಫ್ ಮಾಡಲೂ ಅವಕಾಶವಿದ್ದರೂ ಮಾಡಲಿಲ್ಲ ಎಂಬ ಕಾರಣಕ್ಕೆ ಸಂಗೀತಾ ಅವರಿಬ್ಬರ ಮೇಲೆ ಕೋಪಗೊಂಡಿದ್ದಾರೆ. ಇದೇ ವಿಚಾರವಾಗಿ ಮೂವರ ನಡುವೆ ಜಗಳ ನಡೆದು ಕಣ್ಣೀರು ಹಾಕಿದ್ದಾರೆ. 

ಬಿಗ್‌ಬಾಸ್ ಪ್ರಶ್ನೆಗೆ ಸ್ಪರ್ಧಿಗಳು ಶಾಕ್

ಬಿಗ್‌ಬಾಸ್ ಮನೆಯಲ್ಲಿ ಆರನೇ ವಾರ ಹೊಸ ಟಾಸ್ಕ್ ನೀಡಲಾಗಿತ್ತು. ೬ ವಾರಗಳಿಂದ ಹೊರ ಜಗತ್ತಿನ ಸಂಪರ್ಕವಿಲ್ಲದೇ ಬಿಗ್‌ಬಾಸ್‌ ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ಮನೆಯವರ ಪತ್ರಗಳು ಸಿಗುತ್ತಿವೆ. ಆದರೆ, ಅದಕ್ಕಾಗಿ ಟಾಸ್ಕ್ ಆಡಬೇಕು. ಅದರಲ್ಲಿ ಗೆದ್ದವರಿಗೆ ಮಾತ್ರ ಲೆಟರ್ ಕೊಡುವುದಾಗಿ ಬಿಗ್‌ಬಾಸ್ ಸೂಚಿಸಿದ್ದರು. ಮೊನ್ನೆ ವಿನಯ್ ಹಾಗೂ ನಮ್ರತಾ ಮನೆಯವರ ಪತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಸಂಚಿಕೆಯಲ್ಲಿ ಪತ್ರ ಪಡೆಯಲು ಸ್ಪರ್ಧಿಗಳು 'ಬಿಗ್‌ಬಾಸ್' ಕೇಳುವ ಪ್ರಶ್ನೆಗೆ ಉತ್ತರಿಸಬೇಕಿತ್ತು. ಈ ಪ್ರಶ್ನೋತ್ತರ ಟಾಸ್ಕ್‌ನಲ್ಲಿ ಬಿಗ್‌ಬಾಸ್ ಕೇಳಿದ ಪ್ರಶ್ನೆಗೆ ಸ್ಪರ್ಧಿಗಳು ಶಾಕ್ ಆಗಿದ್ದರು. ಬಿಗ್‌ಬಾಸ್ ಟಾಸ್ಕ್, ಸ್ಪರ್ಧಿಗಳು ದಿನನಿತ್ಯ ನೋಡುವ ವಸ್ತುಗಳು ಸೇರಿದಂತೆ ಅಲ್ಲಿನ ವಿಷಯಗಳನ್ನಿಟ್ಟುಕೊಂಡೇ ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದ್ದರು. ಕೊನೆಯಲ್ಲಿ ಸಂಗೀತಾ ಹಾಗೂ ಸಿರಿ ಮನೆಯವರ ಪತ್ರ ಪಡೆದಿದ್ದಾರೆ. 

 

ವಿನಯ್‌ ವಿರುದ್ಧ ಸಿಡಿದೆದ್ದ ತುಕಾಲಿ ಸಂತು

ಇಂದಿನ ಸಂಚಿಕೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್, ಕಳಪೆ ಹಾಗೂ ಉತ್ತಮ ಆಯ್ಕೆ ನಡೆಯಲಿದೆ. ದೊಡ್ಮನೆಯಲ್ಲಿ ನಡೆಯುವ ಎಲ್ಲಾ ಟಾಸ್ಕ್‌ಗಳಿಗಿಂತ ಕ್ಯಾಪ್ಟನ್ಸಿ ಟಾಸ್ಕ್ ಬಹಳ ಮಜವಾಗಿರುತ್ತೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾರು ಭಾಗವಹಿಸಬೇಕು? ಯಾರನ್ನು ಸಪೋರ್ಟ್ ಮಾಡಬೇಕು ಎಂಬ ಲೆಕ್ಕಚಾರಗಳು ನಡೆಯುತ್ತೆ. ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸುವುದರ ಕುರಿತು ವಿನಯ್ ಗೌಡ ವಿರುದ್ಧ ತುಕಾಲಿ ಸಂತು ಮೊದಲ ಬಾರಿ ಸಿಡಿದೆದ್ದಿದ್ದಾರೆ. 

 

ಕಾರಣ ಏನು?

ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಐದು ಸ್ಪರ್ಧಿಗಳು ಆಡಬೇಕು. ಯಾವ ಸದಸ್ಯರು ಆಡಬೇಕು ಅಂತ ನೀವೇ ನಿರ್ಧಾರ ಮಾಡಿ ಅಂತ ಬಿಗ್‌ಬಾಸ್ ಸೂಚಿಸಿದ್ದಾರೆ. ಮನೆಯ ಸದಸ್ಯರು ನಮ್ರತಾ, ಸಿರಿ, ಕಾರ್ತಿಕ್, ವರ್ತೂರು ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಆಡಬೇಕು ಅಂತ ವೋಟಿಂಗ್ ಮೂಲಕ ಆರಿಸಿದ್ದಾರೆ. ವೋಟಿಂಗ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ತುಕಾಲಿ ಸಂತು, ಕರೆಕ್ಟಾಗಿ ವೋಟಿಂಗ್ ಆಗಿಲ್ಲ. ನಾವು ಭಾಗವಹಿಸಬೇಕು ಅಂತ ಇರುತ್ತೆ ಅಂತ ಕಿಡಿಕಾರಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಿನಯ್, ನೀವು ಆಡಿರುವುದು ಒಂದೇ ಟಾಸ್ಕ್ ಎಂದಿದ್ದಾರೆ. ಅದಕ್ಕೆ ತುಕಾಲಿ ಒಂದೇ ಟಾಸ್ಕ್‌ನಲ್ಲಿ ನನ್ನನ್ನು ನಾನು ಸಾಭೀತು ಮಾಡಿಕೊಂಡಿದ್ದೀನಿ ಅಂತ ಹೇಳಿದ್ದು, ಇದೇ ವಿಚಾರಕ್ಕೆ ಇಬ್ಬರ ನಡುವೆ ಜಟಾಪಟಿ ನಡೆದಿದೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+