ತುಕಾಲಿ ಸಂತು ಈ ಹಿಂದೆ ವಿನಯ್ ಗೌಡ ಅವರ ಗುಂಪಿನಲ್ಲಿ ಗುರತಿಸಿಕೊಂಡಿದ್ದರು. ಆದರೆ, ವರ್ತೂರು ಸಂತೋಷ್ ಅವರು ಕೆಲ ವಿಚಾರಗಳನ್ನು ಹೇಳಿದ್ಮೇಲೆ ಹಾಗೂ ಕೆಲ ವಿಷಯಗಳು ತಮ್ಮ ಗಮನಕ್ಕೆ ಬಂದಮೇಲೆ ಪಾಪರೆಡ್ಡಿಪಾಳ್ಯ ಗ್ಯಾಂಗ್ನಿಂದ ಹೊರಬಂದಿದ್ದರು. ತುಕಾಲಿ ಸಂತು ಸದ್ಯ ವಿನಯ್ ಬಳಿ ಅಷ್ಟಕಷ್ಟೆ ಮಾತನಾಡುತ್ತಿದ್ದಾರೆ. ನೀತು ಕೂಡ ವಿನಯ್ ಟೀಂನಿಂದ ಔಟ್ ಆಗಿದ್ದಾರೆ. ಇದನ್ನೆಲ್ಲಾ ಗಮನಿಸಿದ ವಿನಯ್, ತುಕಾಲಿ ಸಂತು ಅವರನ್ನು ಕೆಟ್ಟಹುಳ ಎಂದಿದ್ದಾರೆ. ಜೊತೆಗೆ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗವಹಿಸುವ ವಿಚಾರವಾಗಿ ಇಬ್ಬರ ನಡುವೆ ದೊಡ್ಡ ಫೈಟ್ ನಡೆದಿದೆ.