X
ಹೋಮ್ ಚಲನಚಿತ್ರಗಳ ಒಳನೋಟ

ಕಾರ್ತಿಕ್‌ಗೆ ಲೇ ತಗಡು ಎದೆಮೇಲೆ ಕಾಲಿಟ್ಟೇ ನಿನ್ನ ತುಳಿಯೋದು ಎಂದ ವಿನಯ್: ಸತ್ಯ ಹೇಳಿದ ಮೈಕಲ್

Author Sowmya Bairappa | Published: Friday, December 8, 2023, 12:12 PM [IST]

ರಾಕ್ಷಸರು ವರ್ಸಸ್ ಗಂಧರ್ವರ ಟಾಸ್ಕ್‌ನಲ್ಲಿ ಇಡೀ ಬಿಗ್‌ಬಾಸ್ ಮನೆ ರಣರಂಗವಾಗಿ ಮಾರ್ಪಟ್ಟಿದೆ. ರಾಕ್ಷಸರು ಹೇಳಿದಂತೆ ನಡೆದುಕೊಳ್ಳುವುದು ಬೇಡ ಎಂದು ಸಂಗೀತಾ ತಮ್ಮ ತಂಡದವರಿಗೆ ಸೂಚಿಸಿದ್ದರಿಂದ ಆಟ ಹಳ್ಳ ಹಿಡಿದಿದೆ. ಇದರಿಂದ ದೊಡ್ಮನೆ ಹೊತ್ತಿ ಉರಿದಿದ್ದು, ಯಾರು ನಿಯಂತ್ರಿಸಲು ಸಾಧ್ಯವಾಗಿಲ್ಲ.


cover image
ಚಪ್ಪಲಿ ಎಸೆತ ಪ್ರಕರಣ

ರಾಕ್ಷಸರು ವರ್ಸಸ್ ಗಂಧರ್ವರು ಆಟದ ಸಂದರ್ಭ ಕಾರ್ತಿಕ್ ಮತ್ತು ವಿನಯ್ ನಡುವೆ ಜೋರು ಜಗಳ ನಡೆದಿದೆ. ಇದರಿಂದ ಸಿಟ್ಟಾದ ಕಾರ್ತಿಕ್ ಚಪ್ಪಲಿಯನ್ನು ಎತ್ತಿ ನೆಲಕ್ಕೆ ಎಸೆದಿದ್ದಾರೆ. ಅದು  ರೀ ಬೌಂಡ್‌ ಆಗಿ ವಿನಯ್‌ಗೆ ತಾಗಿದೆ. ಇದರಿಂದ ರೊಚ್ಚಿದ್ದ ವಿನಯ್, ಚಪ್ಪಲಿಯಲ್ಲಿ ಹೊಡೆದರೆ ನಾನು ಸುಮ್ಮನೆ ಇರಬೇಕಾ? ಚಪ್ಪಲಿಯಲ್ಲಿ ಹೇಗೆ ಹೊಡೆದೆ. ಇಂತಹ ಕಿತ್ತೋದ್ ಮಕ್ಕಳಿಂದ ಚಪ್ಪಲಿಯಲ್ಲಿ ಹೊಡೆಸಿಕೊಳ್ಳಬೇಕಾ? ನಾನು ರೀ ಬೌಂಡ್‌ನಲ್ಲಿ ಹೊಡೆಯಲಾ ನಿನಗೆ. ನನಗೆ ಇದಕ್ಕೆ ಆನ್ಸರ್ ಬೇಕು. ಇವತ್ತು ಚಪ್ಪಲಿಯಲ್ಲಿ ಹೊಡೆದ. ಏನು ಅಂದುಕೊಂಡಿದ್ದಾನೆ ಅವನು. ಬಾರೋ ಇಲ್ಲಿ, ನಿನ್ನ ಬಿಟ್ತೀನಿ ಅಂದುಕೊಂಡಿದ್ದೀಯಾ ಅಂತ ವಿನಯ್ ಕೆಂಡಕಾರಿದ್ದಾರೆ. 

 

ಕಾರ್ತಿಕ್ ತಪ್ಪಿಲ್ಲ ಎಂದ ಮೈಕಲ್

ಬಿಗ್‌ಬಾಸ್‌ ಮನೆಯಲ್ಲಿ ಮನೆಯಲ್ಲಿ ಮೈಕಲ್ ತಮ್ಮ ನೇರನುಡಿಯ ಮೂಲಕ ಜನರ ಮನಗೆದ್ದಿದ್ದಾರೆ. ವಿನಯ್ ಅವರ ತಂಡದಲ್ಲಿದ್ದ ಮಾತ್ರಕ್ಕೆ ಅವರ ಪರ ಕುಣಿಯುವುದಿಲ್ಲ. ನಿನ್ನೆ ನಡೆದ ಚಪ್ಪಲಿ ಎಸೆತ ಪ್ರಕರಣದಲ್ಲಿ ಮೈಕಲ್ ಕಾರ್ತಿಕ್ ಪರ ನಿಂತಿದ್ದಾರೆ. ವಿನಯ್‌ ಬಳಿ ಕಾರ್ತಿಕ್‌ ನೆಲಕ್ಕೆ ಎಸೆದ ಚಪ್ಪಲಿ ಆಕಸ್ಮಿಕವಾಗಿ ನಿಮಗೆ ತಗುಲಿದೆ ಅಂತ ಮನವರಿಗೆ ಮಾಡಲು ಪ್ರಯತ್ನಿಸಿದ್ದಾರೆ. ಇದರಿಂದ ಕೋಪಗೊಂಡ ವಿನಯ್, ಆ ಮೈಕಲ್ ಮಾತನಾಡೋದು ನೋಡು, ಕಾರ್ತಿಕ್‌ ನೆಲಕ್ಕೆ ಚಪ್ಪಲಿ ಎಸೆದಿದ್ದು. ಅದು ರೀಬೌಂಡ್ ಆಗಿ ನಿಮಗೆ ಬಂದಿದ್ದು ಎನ್ನುತ್ತಾನೆ ಅಂತ ಕೂಗಾಡಿದ್ದಾರೆ. 

ಎದೆಮೇಲೆ ಕಾಲಿಟ್ಟೇ ನಿನ್ನ ತುಳಿಯೋದು

ಇವರಿಬ್ಬರ ಜಗಳದ ಬಗ್ಗೆ ಉಸ್ತುವಾರಿ ಸ್ನೇಹಿತ್, ಕಾರ್ತಿಕ್‌ ಬಳಿ ಕ್ಲಾರಿಟಿ ತೆಗೆದುಕೊಂಡಿದ್ದಾರೆ. ಗಂಧರ್ವರಾಗಿ ನೀವು ಈ ರೀತಿ ನಡೆದುಕೊಳ್ಳಬಾರದು ಎಂದಿದ್ದಾರೆ. ಇದಕ್ಕೆ ಕಾರ್ತಿಕ್, ಚಪ್ಪಲಿಯನ್ನು ನಾನು ಅವನಿಗೆ ಹೊಡೆದಿಲ್ಲ. ಕೆಳಗೆ ಎತ್ತಿ ಎಸೆದಾಗ ಬೌನ್ಸ್ ಆಗಿದೆ. ಅದು ನತಾದೃಷ್ಟವಶಾತ್ ಆವನಿಗೆ ಬಿದ್ದಿದೆ. ನಾನು ಏನಪ್ಪ ಮಡಲಿ ಎಂದಿದ್ದಾರೆ. ಇದರಿಂದ ಮತ್ತೆ ರೊಚ್ಚಿಗೆದ್ದ ವಿನಯ್, ಲೇ ತಗಡು ಎದೇ ಮೇಲೆ ಕಾಲಿಟ್ಟೇ ತುಳಿಯೋದು ನಿನ್ನ ಎಂದರು. ಅದಕ್ಕೆ ಕಾರ್ತಿಕ್, ಇಂಥ ಕುರಿಗಳನ್ನು ಸಾಕಷ್ಟು ನೋಡಿದ್ದೇನೆ ಎಂದರು. ನಂತರ ವಿನಯ್ ಹೊರಗೆ ಬಾ ನಿನಗೆ ಇಡೀ ಸಿನಿಮಾ ತೋರಿಸ್ತೀನಿ ಎಂದು ಎಚ್ಚರಿಗೆ ನೀಡಿದರು. 

ರೊಚ್ಚಿಗೆದ್ದ ನಮ್ರತಾ

ಸಂಗೀತಾ ವಿಚಾರಕ್ಕೆ ಮೊದಲು ಕೋಪಗೊಂಡ ನಮ್ರತಾ, ಅವಳನ್ನ ಕಳುಹಿಸಿ. ಅವನು ಯಾವನು ಗುರು ಚಪ್ಪಲಿಯಲ್ಲಿ ಹೊಡೆಯುವುದಕ್ಕೆ. ಆ ರಾಣಿ ಹೇಳಿರುವುದಂತೆ. ಅವಳು ಯಾವ ಸೀಮೆ ರಾಣಿ ಗುರು? ತಲೆಲಿ ಬುದ್ದಿ ಇಲ್ವಾ. ನೀವು ಇಂಡಿವಿಷ್ಯುವಲ್ ಗೇಮ್ ಆಡೋಕೆ ತಾನೇ ಬಂದಿರೋದು. ಇದು ಗೇಮ್ ಸ್ಟ್ರಾಟರ್ಜಿ. ಪ್ಲೀಸ್ ಬ್ರೋ ಹೀಗೆಲ್ಲಾ ಕೋಪ ಮಾಡಿಕೊಳ್ಳಬೇಡಿ ಎಂದು ವಿನಯ್ ಅವರನ್ನು ಸಮಾಧಾನ ಮಾಡಿದ್ದಾರೆ. ಬಳಿಕ ಕಾರ್ತಿಕ್ ಬಳಿ ಜಗಳಕ್ಕೆ ಬಿದ್ದ ನಮ್ರತಾ, ನಾನು ಲೈವ್‌ನಲ್ಲಿ ನೋಡಿದ್ದೀನಿ. ನಿಮ್ಮ ಗ್ರೂಪ್ ಅಂತ ಹೇಳುವಾಗ ಅಮ್ಮ ಅಂದಿರುವುದನ್ನು ನೋಡಿದ್ದೀನಿ. ನನ್ನ ಇಮಿಟೇಟ್ ಮಾಡಿದರೆ ಸರಿ ಇರಲ್ಲ. ಮುಚ್ಕೊಂಡು ಹೋಗುತ್ತಾ ಇರು. ನೀನು ಮತ್ತು ಅವಳೇ (ಸಂಗೀತಾ? ಅಸಯ್ಯ ಎಂದಿದ್ದಾರೆ. 

 

ಇವರನ್ನೆಲ್ಲಾ ನುಂಗಿ ನೀರು ಕುಡಿದೇ ಹೋಗೋದು

ಬಳಿಕ ವಿನಯ್, ನಮ್ರತಾ ಹಾಗೂ ತುಕಾಲಿ ಸಂತು ಅವರುಗಳು ವರ್ತೂರು ಸಂತೋಷ್ ಹಾಗೂ ಡ್ರೋನ್ ಪ್ರತಾಪ್‌ಗೆ ಪ್ರಾಂಕ್ ಮಾಡಿದರು. ಈ ವೇಳೆ ವಿನಯ್, ಸಾಕಾಯ್ತು ಗುರು..ಒಂದ್ ಮಾತು ಹೇಳ್ತೀನಿ. ಇಲ್ಲಿ ಕಪ್ ತೆಗೆದುಕೊಳ್ಳದೇ ಹೋಗೋದಿಲ್ಲ. ಅರ್ಥ ಆಯ್ತಾ? ಇವರನ್ನೆಲ್ಲಾ ನುಂಗಿ ನೀರ ಕುಡಿದು, ತೇಗಿ, ಕಕ್ಕ ಮಾಡೇ ಹೋಗೋದು ನಾನು ಎಂದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+