X
ಹೋಮ್ ಚಲನಚಿತ್ರಗಳ ಒಳನೋಟ

ಜ್ಯೋತಿ ರೈ To ಛಾಯಾ ಸಿಂಗ್: ಪರಭಾಷಾ ನಟರನ್ನು ಮದುವೆಯಾದ ಕನ್ನಡ ಕಿರುತೆರೆ ನಟಿಯರಿವರು!

Author Sowmya Bairappa | Updated: Saturday, March 1, 2025, 09:23 AM [IST]

ಕನ್ನಡ ಕಿರುತೆರೆಯ ಅನೇಕ ನಟ-ನಟಿಯರು ತಮಿಳು, ತೆಲುಗು ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ. ಒಂದೆರಡು ಕನ್ನಡ ಸೀರಿಯಲ್‌ನಲ್ಲಿ ನಟಿಸಿ, ಬಳಿಕ ಪರಭಾಷೆಯತ್ತ ಮುಖ ಮಾಡುತ್ತಿದ್ದಾರೆ. ಜೊತೆಗೆ ಅಲ್ಲಿಯೇ ಸಾಕಷ್ಟು ಖ್ಯಾತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಈ ನಡುವೆ ಹಲವು ನಟಿಯರು ಅಲ್ಲಿನ ಸಹನಟ, ಸಿನಿಮಾಟೋಗ್ರಾಫರ್ ಜೊತೆ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದಾರೆ. ಇಲ್ಲಿ ಪರಭಾಷಾ ನಟರನ್ನು ಮದುವೆಯಾದ ಕನ್ನಡ ಕಿರುತೆರೆ ನಟಿಯರ ಪಟ್ಟಿಯನ್ನು ನೀಡಲಾಗಿದೆ.


cover image
ಛಾಯಾ ಸಿಂಗ್
1

ಛಾಯಾ ಸಿಂಗ್ ಸದ್ಯ ಅಮೃತಧಾರೆ ಧಾರವಾಹಿಯಲ್ಲಿ ನಾಯಕಿ ಭೂಮಿಕಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈ ಪಾತ್ರಕ್ಕೆ ಪ್ರೇಕ್ಷಕರ ಸಿಕ್ಕಾಪಟ್ಟೆ ಮೆಚ್ಚುಗೆ ಕೂಡ ಸಿಕ್ಕಿದೆ. ಅಂದ್ಹಾಗೆ, ಇವರ ನಟನೆಯ ಮೊದಲ ಕನ್ನಡ ಸಿನಿಮಾ ಮುನ್ನುಡಿ. ಬಳಿಕ ಕೆಲ ಕನ್ನಡ ಚಿತ್ರಗಳಲ್ಲಿ ನಟಿಸಿದ ಇವರು, ನಂತರ ತಮಿಳು ಚಿತ್ರರಂಗ ಪ್ರವೇಶಿಸಿ ಅಲ್ಲಿಯೂ ಒಳ್ಳೆಯ ಹೆಸರು ಗಳಿಸಿದರು. 2010ರಲ್ಲಿ ಆನಂದಪುರತು ಎಂಬ ತಮಿಳು ಸಿನಿಮಾದಲ್ಲಿ ನಟಿಸಿದ್ದ ಛಾಯಾ, ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ಕೃಷ್ಣ ವಿಲನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ೨೦೧೨ರಲ್ಲಿ ಛಾಯಾ ಹಾಗೂ ಕೃಷ್ಣ ವಿಲನ್ ವಿವಾಹ ನಡೆದಿತ್ತು.

ಚೈತ್ರಾ ರೆಡ್ಡಿ
2

ಅವನು ಮತ್ತು ಶ್ರಾವಣಿ ಸೀರಿಯಲ್ ಖ್ಯಾತಿಯ ನಟಿ ಚೈತ್ರಾ ರೆಡ್ಡಿ, ಕಳೆದ ಕೆಲ ವರ್ಷಗಳಿಂದ ತಮಿಳು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ತಮಿಳಿನಲ್ಲಿ ಕಲ್ಯಾಣಂ ಮುಧಾಲ್ ಕಾಧಲ್ ವರೈ, ಯಾರದಿ ಮೋಹಿನಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮಿಂಚಿರುವ ಇವರು, 2020ರಲ್ಲಿ ತಮಿಳು ಸಿನಿಮಾಟೋಗ್ರಾಫರ್ ರಾಕೇಶ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ಜ್ಯೋತಿ ರೈ
3

ಕನ್ನಡದ ಹಲವು ಹಿಟ್ ಸೀರಿಯಲ್‌ಗಳಲ್ಲಿ ನಟಿಸಿರುವ ಜ್ಯೋತಿ ರೈ ತಮ್ಮ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ ಎನ್ನಲಾಗಿದೆ. ಇವರಿಗೆ ಓರ್ವ ಪುತ್ರನಿದ್ದಾನೆ. ಸದ್ಯ ತಮಿಳು, ತೆಲುಗು ಭಾಷೆಯ ಸಿನಿಮಾ, ವೆಬ್‌ ಸೀರಿಸ್‌ಗಳಲ್ಲಿ ಬ್ಯುಸಿಯಾಗಿರುವ ಈ ನಟಿ, ಪರಭಾಷಾ ನಿರ್ದೇಶಕ ಸುಕುಮಾರ್ ಜೊತೆ ಮದುವೆಯಾಗಿದ್ದಾರೆ.

ರಚಿತಾ ಮಹಾಲಕ್ಷ್ಮಿ
4

ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದೆ ಭಾಷೆಗಳ ಧಾರವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ರಚಿತಾ ಮಹಾಲಕ್ಷ್ಮೀ, ದಿನೇಶ್ ಎಂಬುವವರನ್ನು ಮದುವೆಯಾಗಿದ್ದಾರೆ.  ತಮಿಳು ಸೀರಿಯಲ್‌ನಲ್ಲಿ ನಟಿಸುವಾಗ ಸಹನಟ ದಿನೇಶ್ ಮೇಲೆ ರಚಿತಾ ಅವರಿಗೆ ಪ್ರೀತಿಯಾಗಿತ್ತು. ನಂತರ ಇಬ್ಬರು ತುಂಬಾ ಇಷ್ಟುಪಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಬಳಿಕವೂ ಇವರಿಬ್ಬರು ನಚಿಯಾರಪುರಂ ಎಂಬ ಧಾರವಾಹಿಯಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಸದ್ಯ ಈ ಜೋಡಿ ಮನಸ್ತಾಪದಿಂದ ದೂರವಾಗಿ ವಿಚ್ಛೇದನ ಪಡೆದುಕೊಂಡಿದೆ.  ಕಳೆದೆರಡು ವರ್ಷದ ಹಿಂದೆ ನಟಿ ರಚಿತಾ, ಪತಿ ದಿನೇಶ್ ತಮಗೆ ಹಿಂಸೆ ನೀಡುತ್ತಿರುವುದಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ದಿವ್ಯ ಶ್ರೀಧರ್
5

ಆಕಾಶ ದೀಪ ಧಾರವಾಹಿ ಖ್ಯಾತಿಯ ನಟಿ ದಿವ್ಯಾ ಶ್ರೀಧರ್ ಈ ಹಿಂದೆ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಆದರೆ, ನಂತರದಲ್ಲಿ ದಿನಗಳಲ್ಲಿ ಇವರಿಬ್ಬರು ಡಿವೋರ್ಸ್ ಪಡೆದರು. ನಂತರ ಪರಭಾಷಾ ಧಾರವಾಹಿಗಳಲ್ಲಿ ಸಕ್ರಿಯರಾದ ದಿವ್ಯಾ, ಸಹನಟ ಆರ್ನವ್ ಅಲಿಯಾಸ್ ಅಮ್ಝಾದ್ ಖಾನ್ ಜೊತೆ ಕೆಲ ವರ್ಷಗಳ ಕಾಲ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಬಳಿಕ ಈ ಜೋಡಿ ಮದುವೆ ಕೂಡ ಆಗಿತ್ತು. ಆದರೆ, ದಿವ್ಯಾ ಗರ್ಭಿಣಿಯಾಗುತ್ತಿದ್ದಂತೆ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು.  ದಿವ್ಯಾ ಆರ್ನವ್ ವಿರುದ್ಧ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಅನುಷಾ ಹೆಗಡೆ
6

ಕನ್ನಡದ ರಾಧಾ ರಮಣ ಧಾರವಾಹಿ ಖ್ಯಾತಿಯ ನಟಿ ಅನುಷಾ ಹೆಗಡೆ, ತೆಲುಗಿನ ನಿನ್ನೆ ಪೆಲ್ಲಾಡ್ತ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸಿದ್ದರು. ಪ್ರತಾಪ್ ಸಿಂಗ್ ಈ ಸೀರಿಯಲ್‌ ನಾಯಕನಾಗಿ ನಟಿಸಿದ್ದರು. ಈ ಸಮಯದಲ್ಲಿ ಪ್ರತಾಪ್ ಮನೆಯವರು ಅವರಿಗೆ ಹುಡುಗಿ ಹುಡುಕುತ್ತಿದ್ದರಂತೆ. ಹೀಗಾಗಿ ಪ್ರತಾಪ್ ಅವರು ಅನುಷಾ ಅವರ ಹತ್ತಿರ ನನ್ನನ್ನು ಮದುವೆ ಆಗ್ತೀಯಾ? ಅಂತ ಕೇಳಿದ್ದರಂತೆ. ಬಳಿಕ ಅನುಷಾ ಕುಟುಂಬಸ್ಥರ ಸಮ್ಮತಿ ಪಡೆದು 2019ರಲ್ಲಿ ಪ್ರತಾಪ್ ಅವರನ್ನು ಮದುವೆಯಾಗಿದ್ದರು.  



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+