X
ಹೋಮ್ ಚಲನಚಿತ್ರಗಳ ಒಳನೋಟ

ಉಗ್ರಂ ಟು ಟಗರು: ಸೀಕ್ವೆಲ್‌ಗೆ ಅರ್ಹವಾದ 8 ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

Author Sowmya Bairappa | Published: Friday, July 14, 2023, 05:23 PM [IST]

ಯಾವುದೇ ಒಂದು ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ಅದರ ಮುಂದಿನ ಭಾಗದ ಬಗ್ಗೆ ಚರ್ಚಿಸಲಾಗುತ್ತದೆ. ಇತ್ತಿಚೇಗೆ ಸ್ಯಾಂಡಲ್‌ವುಡ್‌ನಲ್ಲಿ ಸೀಕ್ವೆಲ್ ಟ್ರೆಂಡೇ ಸೃಷ್ಟಿಯಾಗಿದೆ. ಕೆಲ ಸಿನಿಮಾಗಳು ಒಂದಕ್ಕಿಂತ ಹೆಚ್ಚು ಸೀಕ್ವೆಲ್‌ಗಳನ್ನು ಹೊಂದಿವೆ. ಹಾಗಂತ ಮೊದಲನೇ ಭಾಗದ ಮುಂದುವರೆದ ಕಥೆಯೇ ಚಿತ್ರದಲ್ಲಿರುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಕೆಲವೊಮ್ಮೆ ಕಥೆ, ಪಾತ್ರ ಎಲ್ಲವೂ ಕೂಡ ಬದಲಾಗಿರುತ್ತದೆ. ಆದರೆ, ಎಲ್ಲಾ ಸೀಕ್ವೆಲ್ ಸಿನಿಮಾಗಳು ನಿರೀಕ್ಷಿಸಿದಷ್ಟು ಯಶಸ್ಸು ಕಂಡಿಲ್ಲ. ಅಂತೆಯೇ ಕೆಲವೊಂದು ಸಿನಿಮಾಗಳ ನಿರೀಕ್ಷೆಗೂ ಮೀರಿ ಸಕ್ಸಸ್ ಕಂಡಿವೆ. ಇಲ್ಲಿ ಸೀಕ್ವೆಲ್‌ಗೆ ಅರ್ಹವಾದ ಕೆಲ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಉಗ್ರಂ

2014ರಲ್ಲಿ ಬಂದ ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಸಿನಿಮಾ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಬಿಗ್ ಬ್ರೇಕ್ ನೀಡಿತ್ತು. ಇದು ಪ್ರಶಾಂತ್ ನೀಲ್ ನಿರ್ದೇಶನದ ಮೊದಲ ಸಿನಿಮಾ. ಲವ್, ಸೆಂಟಿಮೆಂಟ್, ಸಾಹಸ ಎಲ್ಲಾ ದೃಶ್ಯಗಳನ್ನು ಬೆರೆಸಿ ಸುಂದರವಾಗಿ ತೆರೆಮೇಲೆ ಬಂದಿದ್ದ ಈ ಸಿನಿಮಾ ಅದ್ಭುತ ಯಶಸ್ಸು ಕಂಡಿತ್ತು. ಉಗ್ರಂ ಚಿತ್ರ ಬಾಲ್ಯದ ಗೆಳೆಯರಾದ ಬಾಲ ಹಾಗೂ ಅಗಸ್ತ್ಯ ಅವರ ಸಂಘರ್ಷದೊಂದಿಗೆ ಕೊನೆಗೊಂಡಿದ್ದರಿಂದ ಇದು ಸೀಕ್ವೆಲ್‌ಗೆ ಅರ್ಹವಾಗಿದೆ. ಇನ್ನೊಂದು ವಿಶೇಷವೆಂದರೆ, ಉಗ್ರಂ ಸಿನಿಮಾ ನಂತರ ಶ್ರೀಮುರಳಿ ಸುಮಾರು 67 ಚಿತ್ರದ ಆಫರ್‌ಗಳನ್ನು ನಿರಾಕರಿಸಿದ್ದರು. 

ಕಡ್ಡಿ ಪುಡಿ

ದುನಿಯಾ ಸೂರಿ ನಿರ್ದೇಶನದ ಕಡ್ಡಿಪುಡಿ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ರಾಧಿಕಾ ಪಂಡಿತ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಇದೊಂದು ರೌಡಿಸಂ ಕುರಿತಾದ ಸಿನಿಮಾವಾಗಿದೆ. ಈ ಚಿತ್ರದಲ್ಲಿ ರಾಧಿಕಾ ಅವರು ಉಮಾ ಎಂಬ ಜೂನಿಯರ್ ಆರ್ಟಿಸ್ಟ್‌ ಪಾತ್ರದಲ್ಲಿ ನಟಿಸಿದರು. ಬಡತನದಲ್ಲಿ ಬೆಳೆಯುವ ಯುವತಿ ಪ್ರಸ್ತುತ ಒಳ್ಳೆಯ  ದಾರಿಯಲ್ಲಿ ಸಾಗುತ್ತಿರುವ, ಆದರೆ ರೌಡಿಸಂ ಹಿನ್ನಲೆಯಿರುವ ವ್ಯಕ್ತಿಯನ್ನು ವಿವಾಹವಾದಾಗ ಎದುರಾಗುವ ಸವಾಲುಗಳನ್ನು ಚಿತ್ರ ತೋರಿಸಿತ್ತು. ಕಡ್ಡಿಪುಡಿ ಸಿನಿಮಾ ಚಿಕ್ಕ ಹುಡುಗನೊಬ್ಬ ನಾಯಕ ವಿರುದ್ಧ ಸೇಡು ತೀರಿಸಿಕೊಳ್ಳುವ ನಿರ್ಧಾರದೊಂದಿಗೆ ಕೊನೆಗೊಂಡಿದೆ. ಹೀಗಾಗಿ, ಈ ಚಿತ್ರ ಸೀಕ್ವೆಲ್ ಅರ್ಹವಾಗಿದೆ. 

 

ಟಗರು

2018ರಲ್ಲಿ ತೆರೆಕಂಡ ಟಗರು ಚಿತ್ರ ಪೊಲೀಸ್ ಮತ್ತು ಡೆಡ್ಲಿ ರೌಡಿಗಳ ಕಣ್ಣಾಮುಚ್ಚಾಲೆಯನ್ನು ತೋರಿಸಿತ್ತು. ಖಡಕ್ ಪೊಲೀಸ್ ಅಧಿಕಾರಿಯಾಗಿ ಶಿವಣ್ಣ ಮತ್ತು ಕ್ರೌರ್ಯದ ಪ್ರತಿರೂಪ ಡಾಲಿಯಾಗಿ ಧನಂಜಯ ಮಿಂಚಿದ್ದರು. ಕರ್ತವ್ಯದಲ್ಲಿ ಪೊಲೀಸ್, ಆದರೆ ಮನಸ್ಸಿನ ತೃಪ್ತಿಗಾಗಿ ಖಾಕಿ ಧರಿಸಿ ಕೆಲಸ ಮಾಡುವ ನಾಯಕ (ಶಿವರಾಜ್ ಕುಮಾರ್), ಪುಡಿ ರೌಡಿ ಆಗಿದ್ದುಕೊಂಡು ಡಾನ್ ಆಗಬೇಕೆಂಬ ಕನಸು ಹೊತ್ತು ಟಗರಿನ ಮುಂದೆ ಕಾಳಗಕ್ಕೆ ಇಳಿಯುವ ಖಳನಾಯಕ ಡಾಲಿ ಅಲಿಯಾಸ್ ನಿಂಬೆ (ಧನಂಜಯ) ಯುವ ಕವಿಯಾಗಿ ಯಾರದ್ದೋ ಪ್ರೀತಿಗೆ ಸಹಾಯ ಮಾಡಲು ಹೋಗಿ ರೌಡಿ ಆಗುವ ಮತ್ತೊಬ್ಬ ಖಳನಾಯಕ ಚಿಟ್ಟೆ ಅಲಿಯಾಸ್ ಚಿತ್ತರಂಜನ್ (ವಸಿಷ್ಠ ಸಿಂಹ). ಡಾಲಿ ತಮ್ಮ ಕಾಕ್ರೋಚ್ ಇವರುಗಳ ಜೊತೆ ನಾಯಕಿಯರಾಗಿ ಮಾನ್ವಿತಾ ಹರೀಶ್ ಹಾಗೂ ಭಾವನಾ. ಪೊಲೀಸ್ ಹಾಗೂ ರೌಡಿಗಳ ಮಧ್ಯೆ ನಡೆಯೋ ಸಮರವೇ 'ಟಗರು' ಸಿನಿಮಾದ ಜೀವಾಳವಾಗಿತ್ತು.

ಉಳಿದವರು ಕಂಡಂತೆ

ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸುವುದಲ್ಲದೇ, ನಿರ್ದೇಶನ ಮಾಡಿದ್ದ 'ಉಳಿದವರು ಕಂಡಂತೆ' ಚಿತ್ರ ಒಂದು ವಿನೂತನ ಪ್ರಯತ್ನವಾಗಿತ್ತು. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಯಜ್ಞ ಶೆಟ್ಟಿ, ಕಿಶೋರ್, ಶೀತಲ್ ಶೆಟ್ಟಿ, ತಾರಾ, ಅಚ್ಯುತ್ ಕುಮಾರ್, ರಿಷಭ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಅರುಣ್ ಪ್ರಕಾಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದರು. ಹಲವು ಕೋನಗಳಲ್ಲಿ ಒಂದು ವ್ಯಕ್ತಿಯ ಕಥೆಯನ್ನು ಹೇಳುವ ಪರಿ ಪ್ರಶಂಸೆ ಪಡೆದಿತ್ತು. ಈ ಸಿನಿಮಾ ಕೂಡ ಸೀಕ್ವೆಲ್‌ಗೆ ಯೋಗ್ಯವಾಗಿದೆ. 

ಹಂಬಲ್ ಪೊಲಿಟಿಷಿನ್ ನೊಗ್ ರಾಜ್

ಸಾದ್ ಖಾನ್ ನಿರ್ದೆಶನದಲ್ಲಿ ಮೂಡಿಬಂದ ಹಂಬಲ್ ಪೊಲಿಟಿಷಿಯನ್ ನೊಗರಾಜ್ ಸಿನಿಮಾದಲ್ಲಿ ಡ್ಯಾನಿಶ್ ಸೇಠ್, ರೋಜರ್ ನಾರಾಯಣ್, ವಿಜಯ ಚೆಂಡೂರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಶ್ರುತಿ ಹರಿಹರನ್ ನಾಯಕಿಯಾಗಿ ಅಭಿನಯಿಸಿದ್ದರು. ನೊಗ್ ರಾಜ್ ಎಂಬ ಕ್ರೇಜಿ ರಾಜಕಾರಣಿ ಮತ್ತು ತಾನು ಶಾಸಕನಾಗಲು ಮಾಡುವ ಕ್ರೇಜಿ ಕೆಲಸಗಳನ್ನು ಈ ಚಿತ್ರ ಹಾಸ್ಯವಾಗಿ ತೋರಿಸಿತು. ಈ ಸಿನಿಮಾಗೆ ಪ್ರೇಕ್ಷಕರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದ್ದು, ಇದರ ಸೀಕ್ವೆಲ್‌ ಕೂಡ ಮಾಢಬಹುದಾಗಿದೆ. 

 

ಮಫ್ತಿ

ನರ್ತನ್ ಚೊಚ್ಚಲ ನಿರ್ದೇಶನದ 'ಮಫ್ತಿ' ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಶ್ರೀಮುರಳಿ ನಾಯಕನಾಗಿ ನಟಿಸಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. 2017ರಲ್ಲಿ ಬಿಡುಗಡೆಯಾದ ಈ ಸಿನಿಮಾ ಶಿವಣ್ಣನ ವೃತ್ತಿ ಜೀವನದಲ್ಲಿ ಅತಿಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಪಕ್ಕಾ ಮಾಸ್ ಆಗಿರುವ 'ಮಫ್ತಿ' ಚಿತ್ರದಲ್ಲಿ ಸಿಂಪಲ್ ಕಥೆ ಇದ್ದರೂ ಅದನ್ನು ಸೊಗಸಾಗಿ ತೋರಿಸಲಾಗಿತ್ತು. ಜೊತೆಗೆ ಚಿತ್ರದ ನಾಯಕ ಶ್ರೀಮರಳಿಯಾಗಿದ್ದರೂ ಶಿವಣ್ಣ ಪಾತ್ರಕ್ಕೆ ತಾಕತ್ತು ಹೆಚ್ಚಿತ್ತು. ನಂತರದ ದಿನಗಳಲ್ಲಿ ಮಫ್ತಿ ತಮಿಳಿಗೆ ರಿಮೇಕ್ ಆಯಿತು.  

 

ಶಿವಲಿಂಗ

ಶಿವಲಿಂಗ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ವೇದಿಕಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಪಿ ವಾಸು ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣ ಸಿ.ಐ.ಡಿ ಪಾತ್ರದಲ್ಲಿ ನಟಿಸಿದ್ದರು. ಬಿರಿಯಾನಿಗೆ ಫೇಮಸ್ ಆಗಿರುವ ರಹೀಮ್ (ಶಕ್ತಿ) ಕೊಲೆಗೀಡಾಗುವುದರಿಂದ ಈ ಚಿತ್ರ ಆರಂಭವಾಗುತ್ತೆ. ಅದು ಕೊಲೆ ಅಲ್ಲ, ಆತ್ಮಹತ್ಯೆ ಅಂತ ಕೋರ್ಟ್ ತೀರ್ಪು ನೀಡುತ್ತೆ. ನಡೆದಿರುವುದು ಕೊಲೆ ಎಂಬ ಶಂಕೆ ಮೇಲೆ ಕೇಸ್ ರೀ ಓಪನ್ ಆದಾಗ ತನಿಖೆ ಮಾಡಲು ಸಿಐಡಿ ಶಿವ ಆಯ್ಕೆಯಾಗ್ತಾರೆ. ಇಲ್ಲಿಂದಲೇ ಸಿನಿಮಾ ಕಥೆಗೆ ಟ್ವಿಸ್ಟ್ ಸಿಗುತ್ತದೆ. ರಹೀಮ್ ಕೊಲೆ ಕೇಸ್ ತನಿಖೆ ಮಾಡಲು ಒಪ್ಪಿಕೊಳ್ಳುವ ಶಿವ, ಸತ್ಯಭಾಮ (ವೇದಿಕಾ) ಜೊತೆ ಸಪ್ತಪದಿ ತುಳಿಯುತ್ತಾರೆ. ರಹೀಮ್ ಬಗ್ಗೆ ತಿಳಿಯದ ಸತ್ಯಭಾಮಗೆ 'ಸಮಸ್ಯೆ' ಕಾಡಲು ಶುರುವಾಗುತ್ತೆ. ಅದನ್ನು ಶಿವ ಹೇಗೆ ಭೇದಿಸುತ್ತಾರೆ ಎಂಬುದೇ ಕಥೆ. ಹಾರರ್ ಹಾಗೂ ಸಸ್ಪೆನ್ಸ್ ಹೊಂದಿದ್ದ ಈ ಸಿನಿಮಾದ ಸೀಕ್ವೆಲ್ ಕೂಡ ಮಾಡಬಹುದು. 

 

ಆಪರೇಷನ್ ಆಲಮೇಲಮ್ಮ

ಆಪರೇಷನ್ ಅಲಮೇಲಮ್ಮ ಚಿತ್ರದಲ್ಲಿ ರಿಷಿ ನಾಯಕನಾಗಿ ಹಾಗೂ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಅಭಿನಯಿಸಿದ್ದರು. ಇದೊಂದು ಕಥೆ ಪ್ರಧಾನವಾದ ಸಿನಿಮಾವಾಗಿದ್ದು, ಚಿತ್ರದಲ್ಲೊಂದು ಆಪರೇಷನ್ ನಡೆಯುತ್ತೆ. ದೊಡ್ಡ ಉದ್ಯಮಿ ಮಗ ಅಪಹರಣಕ್ಕೋಳಗಾಗುತ್ತಾನೆ. ಈ ಕಿಡ್ನಾಪ್ ಮಾಡಿದ್ದು ಯಾರು? ಈ ಕಿಡ್ನಾಪ್ ಯಾಕಾಯ್ತು? ಅವರನ್ನ ಹೇಗೆ ಹಿಡಿಯುವುದು ಎಂಬ ಹಲವು ಪ್ರಶ್ನೆಗಳೊಂದಿಗೆ ಕಳ್ಳ-ಪೊಲೀಸ್ ಆಟ ನಡೆಯುತ್ತೆ. ಈ 'ಆಪರೇಷನ್'ನಲ್ಲಿ ಆಕಸ್ಮಾತ್ ಆಗಿ ಸಿಕ್ಕಿ ಬೀಳುವ ನಾಯಕ ಹೇಗೆ ಇದರಿಂದ ಹೊರಬರುತ್ತಾನೆ ಎಂಬುದು ಚಿತ್ರದ ಕಥೆ. ಇದರ ಜೊತೆಗೆ ಶ್ರದ್ಧಾ ಹಾಗೂ ರಿಷಿ ಲವ್‌ ಸ್ಟೋರಿ ಕೂಡ ಪ್ರೇಕ್ಷಕರಿಗೆ ಸಖತ್ ಇಟಷ್ಟವಾಗಿತ್ತು. ಇಂತಹ ಸಿನಿಮಾಗಳು ಕನ್ನಡ ಚಿತ್ರಗಳಲ್ಲಿ ವಿರಳವಾಗಿದ್ದು, ಇದನ್ನು ಸೀಕ್ವೆಲ್ ಮಾಡಬಹುದು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+