ಚಲನಚಿತ್ರಗಳ ಒಳನೋಟ
ಬಿಗ್ಬಾಸ್ ಕನ್ನಡ ಸೀಸನ್ 11 ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಈ ಬಾರಿ ದೊಡ್ಮನೆಗೆ ಒಟ್ಟು ೧೭ ಮಂದಿ ಎಂಟ್ರಿಕೊಟ್ಟಿದ್ದರು. ಈ ಪೈಕಿ ತ್ರಿವಿಕ್ರಮ್, ಹನುಮಂತು, ಮೋಕ್ಷಿತಾ ಪೈ, ಭವ್ಯಾ ಗೌಡ, ರಜತ್ ಕಿಶನ್ ಹಾಗೂ ಉಗ್ರಂ ಮಂಜು ಫೈನಲ್ ಹಂತ ತಲುಪಿದ್ದರು. ಈ ಆರು ಮಂದಿಯ ಪೈಕಿ ಅಭಿಮಾನಿಗಳ ಆಸೆಯಂತೆ ಈ ಬಾರಿ ಹಳ್ಳಿಹೈದ ಹನುಮಂತ ಲಮಾಣಿ 'ಬಿಗ್ಬಾಸ್ ಟ್ರೋಫಿ' ಗೆದ್ದಿದ್ದಾರೆ. ವೈಲ್ಡ್ಕಾರ್ಡ್ ಸ್ಪರ್ಧಿಯಾಗಿ ಬಂದು ಇಡೀ ಕರ್ನಾಟಕ ಜನತೆಯ ಹೃದಯ ಗೆದ್ದಿದ್ದಾರೆ. ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಕಲರ್ಸ್ ವಾಹಿನಿ ಬಿಗ್ಬಾಸ್ ಫೈನಲಿಸ್ಟ್ಗಳನ್ನು ಯಾರನ್ನು ಬರಿಗೈಯಲ್ಲಿ ಕಳುಹಿಸಿಕೊಟ್ಟಿಲ್ಲ. ಅವರಿಗೆ ಕೂಡ ಒಂದಷ್ಟು ಕ್ಯಾಶ್ ಪ್ರೈಸ್ ಹಾಗೂ ಬಹುಮಾನಗಳು ಸಿಕ್ಕಿವೆ.