X
ಹೋಮ್ ಚಲನಚಿತ್ರಗಳ ಒಳನೋಟ

ನಿಮ್ಮ ಹಾಗೆ ನಾಮಿನೇಟ್ ಆಗ್ಬಿಟ್ಟೆ ಅಂತ ಸಾಯೋನಲ್ಲ: ಹೇಡಿ ಎಂದ ಧನರಾಜ್‌ಗೆ ಧರ್ಮ ತಿರುಗೇಟು

Author Sowmya Bairappa | Published: Saturday, October 26, 2024, 12:49 PM [IST]

ಬಿಗ್‌ಬಾಸ್‌ ಮನೆಯಲ್ಲಿ ಧರ್ಮ ಕೀರ್ತಿರಾಜ್ ಸುಮ್ಮನೆ ಯಾರ ಬಳಿಯೂ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲಲ್ಲ. ಅವರಿಗೆ ತಪ್ಪು ಎನಿಸಿದಾಗ ಸುಮ್ಮನೆ ಕುಳಿತಿಲ್ಲ. ಅವಶ್ಯಕತೆ ಬಿದ್ದಾಗ ಧ್ವನಿ ಏರಿಸಿದ್ದಾರೆ. ಧರ್ಮ ಕೀರ್ತಿರಾಜ್ ಇರುವುದೇ ಹಾಗೆ. ಕಳೆದ ಸಂಚಿಕೆಯಲ್ಲಿ ಧನರಾಜ್ 'ಹೇಡಿ' ಎಂಬ ಹಣೆಪಟ್ಟಿ ಕೋಡುವುದಕ್ಕೆ ಬಂದಾಗ ಅಕ್ಷರಶಃ ಘರ್ಜಿಸಿದ್ದಾರೆ. ತಮ್ಮ ತಂಟೆಗೆ ಬಂದವರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿ ಶುಕ್ರವಾರದ ಸಂಚಿಕೆಯಲ್ಲಿ ಬಿಗ್‌ಬಾಸ್ ಮನೆಯಲ್ಲಿ ಏನೆಲ್ಲಾ ಆಯ್ತು ಎಂಬ ಮಾಹಿತಿ ನಿಡಲಾಗಿದೆ.


cover image
ಹೊಸ ಟಾಸ್ಕ್

ಕಳೆದ ಸಂಚಿಕೆಯಲ್ಲಿ ಬಿಗ್‌ಬಾಸ್ ಟಾಸ್ಕ್‌ವೊಂದನ್ನು ನೀಡಿದ್ದರು. ಎರಡು ಪಕ್ಷಗಳ ಚರ್ಚಾಕೂಡ ನಡೆಸಲು 'ಮುಖಾಮುಖಿ' ಎಂಬ ವಿಶೇಷ ಚಟುವಟಿಕೆಯನ್ನು ನೀಡಿದ್ದರು. ಇದರ ಅನುಸಾರ ಬಿಗ್‌ಬಾಸ್ ನೀಡುವ ವಿಷಯದ ಮೇಲೆ ಎದುರಾಳಿ ಪಕ್ಷದ ಮೇಲೆ ಆರೋಪ ಮತ್ತು ತಮ್ಮ ಪಕ್ಷದ ಸಮರ್ಥನೆ ಮಾಡಿಕೊಳ್ಳಬೇಕಿತ್ತು. ವಾದ ಆಲಿಸಿ ನ್ಯೂಸ್ ಆಂಕರ್ ರಾಧಾ ಹಿರೇಗೌಡ ಅವರು ಗೆದ್ದ ಪಕ್ಷ ಯಾವುದೆಂದು ನಿರ್ಧರಿಸಬೇಕಿತ್ತು. 


ಹೇಡಿ ಯಾರು?

ಬಿಗ್‌ಬಾಸ್ ನೀಡಿದ ಎರಡನೇ ವಿಷಯ ಈ ಮನೆಯ ಹೇಡಿ ಯಾರು? ಎಂಬುದಾಗಿತ್ತು. ಆಗ ಧನರಾಜ್ ಅವರು 'ಈ ಮನೆಯ ಹೇಡಿ ಧರ್ಮ'. ಯಾಕಂದ್ರೆ ಇಲ್ಲಿವರೆಗೂ ಯಾವುದೇ ವಿಷಯಕ್ಕೆ ಅವರು ಧ್ವನಿ ಎತ್ತಿಲ್ಲ. ನಾಮಿನೇಷನ್ ಬಂದಾಗ ಆ ಪಾಯಿಂಟ್‌ನ ಒಪ್ತಾರೆ. ಶಿಶಿರ್ ಮುಂದೆ ವಾದ ಮಾಡದೇ, ನನ್ನ ಮುಂದೆ ಹೇಳ್ತಾರೆ. ಪ್ರಶ್ನೆ ಮಾಡಿ ಅಂತ ನಾನು ಹೇಳಿದೆ. ಈಸಿ ಟಾರ್ಗೆಟ್ ಆಗ್ತಿದ್ದೀನಿ ಅಂತ ಅವರೇ ಹೇಳ್ತಿದ್ದಾರೆ ಅಂದರು. ಆಗ ರಾಧಾ ಅವರು ' ಅಂದ್ರೆ ತಮ್ಮ ಪರವಾಗಿ ತಾವೇ ಧ್ವನಿ ಎತ್ತದೆ ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದಾರಾ ಧರ್ಮ ಅವರು? ಅಂತ ಪ್ರಶ್ನಿಸಿದರು. ಆಗ ಧನರಾಜ್, ಶಿಶಿರ್ ಬಳಿ ಹೇಳದೇ ನನ್ನ ಬಳಿ ಹೇಳಿದ್ದಾರೆ ಅಂದರು. ಆಗ ರಾಧಾ ಹಿರೇಗೌಡ, ಶಿಶಿರ್ ಬಳಿ ಹೇಳೋಕೆ ಧೈರ್ಯವಿಲ್ಲದೇ ನಿಮ್ಮ ಬಳಿ ಹೇಳಿದ್ದಾರಾ? ಎಂದಾಗ, ಹೌದು ಎಂದರು. 


ಸಿಡಿದೆದ್ದ ಧರ್ಮ

ಇದರಿಂದ ಸಿಡಿದೆದ್ದ ಧರ್ಮ, ನಾನು ನಾಮಿನೇಷನ್ ಟಾಪಿಕ್‌ನ ಶಿಶಿರ್ ಮುಂದೆಯೇ ಮಾತನಾಡಿದ್ದೆ. ಯಾಕ್ಹೀಗೆ ಮಾಡಿದ್ರಿ ಅಂತ ನಾನು ಕೇಳಿ ಕ್ಲಾರಿಫಿಕೇಷನ್ ತೆಗೆದುಕೊಂಡಿದ್ದೇನೆ ಅಂತ ಹೇಳಿದರು. ಅದಕ್ಕೆ ಶಿಶಿರ್ ಕೂಡ ಹೌದು ಎಂದರು. ನಾನು ಇವರ ಥರ ನಾಮಿನೇಟ್ ಆದಾಕ್ಷಣ ಹೆದರಿಕೊಂಡು...ಅಯ್ಯೋ..ನಾಮಿನೇಟ್ ಆಗ್ಬಿಟ್ಟೆ ಅಂತ ಸಾಯೋನಲ್ಲ. ನಾಮಿನೇಟ್ ಆದಾಕ್ಷಣ ಇವರಿಗೆ ಭಯ ಆಗಿಬಿಡುತ್ತೆ ಅಂತ ತಿರುಗೇಟು ಕೊಟ್ಟರು. ಆತ ಧನರಾಜ್, ಭಯಪಟ್ಟು ಸಾಯೋದಾಗಿದ್ದರೆ ಇಲ್ಲಿ ಬರುತ್ತಿರಲಿಲ್ಲ. ಇದೆನಾ ಆತ್ಮಾನಾ? ಅಂತ ಪ್ರಶ್ನಿಸಿದರು.  ಆಗ ರಾಧಾ ಅವರು 'ನೀವು ಒಂಥರಾ ಮಲಗಿರುವ ಸಿಂಹವನ್ನು ಕರಳಿಸಿದ್ದೀರಿ. ಇವತ್ತು ಧರ್ಮ ಅವರು ಕಂಪರ್ಟ್ ಝೋನ್ ಬಿಟ್ಟು ಹೊರಗೆ ಬಂದಿದ್ದಾರೆ. ಧರ್ಮ ಈ ತರಹ ಮಾತಾಡಿರೋದನ್ನು ನಾನು ನೋಡಿಲ್ಲ ಅಂದರು. ಆಗ ಶಿಶಿರ್ 'ಆಟಕ್ಕೆ ಅಂತ ಬಂದಾಗ...ಆಟ ಆಡದೇ ಹಿಂದೆ ಹೋಗುವ ವ್ಯಕ್ತಿ 'ಹೇಡಿ'. ಅದು ಧನರಾಜ್. ಟಾಸ್ಕ್ ಆಡೋಕೆ ಧನರಾಜ್ ಮುಂದೆ ಬರಲ್ಲ ಅಂದರು. 


ದೊಡ್ಮನೆಯ ನಯವಂಚಕಿ ಯಾರು?

ಮೋಕ್ಷಿತಾ ಅವರು 'ಚೈತ್ರಾ ಕುಂದಾಪುರ ಅವರು ಬಿಗ್‌ಬಾಸ್ ಮನೆಯ ನಯವಂಚಕಿ' ಎಂದಿದ್ದಾರೆ. ಕಳೆದವಾರ ಅಪ್ರಾಮಾಣಿಕ, ಕುತಂತ್ರಿ ಚಟುವಟಿಕೆ ನೀಡಲಾಗಿತ್ತು. ಅದರಲ್ಲಿ ಅತೀಹೆಚ್ಚು ವೋಟ್ ಬಂದಿದ್ದು ಚೈತ್ರಾ ಅವರಿಗೆ. ತ್ರಿವಿಕ್ರಮ್ ಜೊತೆಗೆ ಚೆನ್ನಾಗಿದ್ದರೆ, ಈ ಮನೆಯಲ್ಲಿ ಜಾಸ್ತಿ ಕಾಲ ಉಳಿಯಬಹುದು. ತರಹದ ಪ್ಲ್ಯಾನ್ ಮಾಡುತ್ತಿದ್ದಾರೆ' ಅಂತ ಐಶ್ವರ್ಯಾ ಬಳಿ ಚೈತ್ರಾ ಹೇಳಿದ್ದಾರೆ. ಯಾರು ಅಂತ ಕೇಳಿದಾಗ 'ಭವ್ಯಾ ಅವರನ್ನು ಚೈತ್ರಾ ತೋರಿಸಿದ್ದಾರೆ' ಎಂದಿದ್ದಾರೆ.





Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+