X
ಹೋಮ್ ಚಲನಚಿತ್ರಗಳ ಒಳನೋಟ

ಬಿಗ್‌ಬಾಸ್ ಮನೆಯಲ್ಲಿ ಪರಸ್ಪರ ಕಿತ್ತಾಡಿಕೊಳ್ಳುವ ಈ ಸ್ಪರ್ಧಿಗಳು ಏನು ಓದಿಕೊಂಡಿದ್ದಾರೆ ಗೊತ್ತಾ?

Author Sowmya Bairappa | Published: Saturday, November 4, 2023, 04:39 PM [IST]

ಶಿಕ್ಷಣ ಎಲ್ಲರ ಬದುಕಿಗೆ ಅತ್ಯಗತ್ಯ. ಆದರೆ, ಶಿಕ್ಷಣ ಇಲ್ಲದಿದ್ದರೂ ಸಾಧನೆ ಮಾಡಬಹುದು ಎಂಬುದನ್ನು ಅನೇಕ ಸಾಧಕರ ತಿಳಿಸಿಕೊಟ್ಟಿದ್ದಾರೆ. ಓದು ಇಷ್ಟವಿಲ್ಲದ ಅನೇಕರು ತಮ್ಮ ಕನಸಿನ ಬೆನ್ನುಹತ್ತಿ ಇಂದು ಬಹುದೊಡ್ಡ ಸಾಧನೆ ಮಾಡಿದ್ದಾರೆ. ಇಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 10ರ ಮೂಲಕ ಸುದ್ದಿಯಾಗುತ್ತಿರುವ ಸ್ಪರ್ಧಿಗಳ ವಿದ್ಯಾಭ್ಯಾಸ ಏನು ಎಂಬುದನ್ನು ನೋಡೋಣ.


cover image
Video Thumbnail

ಮೈಕಲ್ ಅಜಯ್

ವರದಿಗಳ ಪ್ರಕಾರ, ನೈಜೀರಿಯಲ್ ಕನ್ನಡಿಗರಾಗಿರುವ ಮೈಕಲ್ ಅಜಯ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಓದಿದ್ದಾರೆ. ಓದಿನ ಜೊತೆಗೆ ಕ್ರೀಡೆಯಲ್ಲೂ ಮುಂದಿದ್ದ ಮೈಕಲ್, ನ್ಯಾಷನಲ್ ಲೆವೆಲ್ ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಕೂಡ ಆಗಿದ್ದಾರೆ. ಸದ್ಯ ಮಾಡೆಲ್ ಹಾಗೂ ಉದ್ಯಮಿಯಾಗಿರುವ ಅವರು, ಬಿಗ್‌ಬಾಸ್ ಕನ್ನಡ ಸೀಸನ್ 10ರ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. 

 

Video Thumbnail

ನಮ್ರತಾ ಗೌಡ

ಮೂಲತಃ ಬೆಂಗಳೂರಿನವರಾದ ನಮ್ರತಾ ಗೌಡ, 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು. ಇವರು ಆಚಾರ್ಯ್ ಎನ್‌ಆರ್‌ವಿ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದಿದ್ದಾರೆ. 

Video Thumbnail

ರ್ಯಾಪರ್ ಈಶಾನಿ

ಮೂಲತಃ ಸಾಂಸ್ಕೃತಿಕ ನಗರಿ ಮೈಸೂರಿನವರಾದ ಈಶಾನಿ, ದುಬೈನ heriot-watt ಯೂನಿವರ್ಸಿಟಿಯಲ್ಲಿ ಬಿಬಿಎ ಪದವಿ ಪಡೆದುಕೊಂಡಿದ್ದಾರೆ. ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ ಅವರು,  17 ಇಂಗ್ಲಿಷ್ ಆಲ್ಬಂ ಸಾಂಗ್‌ನಲ್ಲಿ ಹಾಡಿದ್ದಾರೆ. 

 

Video Thumbnail

ನೀತು ವನಜಾಕ್ಷಿ

ಮೂಲತಃ ಗದಗದವರಾದ ನೀತು ವನಜಾಕ್ಷಿಯವರಿಗೆ ಚಿತ್ರಕಲೆ ಬಗ್ಗೆ ಸಾಕಷ್ಟು ಆಸಕ್ತಿಯಿದೆ. ಹೀಗಾಗಿ, ವಿಶುವಲ್ ಆರ್ಟ್ಸ್ ವಿಷಯದಲ್ಲಿ ಪದವಿ ಪಡೆದಿದ್ದಾರೆ.  ಹೂ ಕಟ್ಟುವ ಮಧ್ಯಮ ಕುಟುಂಬದಲ್ಲಿ ಗಂಡಾಗಿ ಹುಟ್ಟಿದ್ದ ಇವರಿಗೆ ಮಂಜುನಾಥ್ ಎಂಬ ಹೆಸರಿಡಲಾಗಿತ್ತು. ಏಳನೇ ತರಗತಿವರೆಗೆ ನಾರ್ಮಲ್ ಆಗಿದ್ದ ಮಂಜುನಾಥ್ ದೇಹದಲ್ಲಿ ಬದಲಾವಣೆಗಳಾಗತೊಡಗಿದವು. ಆದರೆ, ಅವರು ಭಯದಿಂದ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ನಂತರ ಅಕ್ಕನ ಬಳಿ ಎಲ್ಲಾವನ್ನ ಹೇಳಿಕೊಂಡ ಇವರು, ಅಕ್ಕನ ಬೆಂಬಲದಿಂದ ನೀತು ವಜಜಾಕ್ಷಿಯಾಗಿ ಬದಲಾದರು.

Video Thumbnail

ಸಂಗೀತಾ ಶೃಂಗೇರಿ

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಬಿಗ್‌ಬಾಸ್ ಮನೆಯಲ್ಲಿ ತಮ್ಮ ಗಟ್ಟಿತನದ ಮೂಲಕ ಕರ್ನಾಟಕ ಕ್ರಶ್ ಆಗಿ ಗುರುತಿಸಿಕೊಂಡಿದ್ದಾರೆ. ಕೇಂದ್ರಿಯ ವಿದ್ಯಾಲಯ ಶಾಲೆಯಲ್ಲಿ ಓದಿದ್ದಾರೆ. ಕಾಲೇಜು ದಿನಗಳಲ್ಲಿ ಎನ್‌ಸಿಸಿ ಕ್ರೆಡೆಟ್ ಆಗಿದ್ದ ಸಂಗೀತಾ ಕರ್ನಾಟಕ ಖೋಖೋ ತಂಡ ಪ್ರತಿನಿಧಿಸಿ ಗೋಲ್ಡ್ ಮೆಡಲ್ ಪಡೆದಿದ್ದರು. 

 

Video Thumbnail

ಡ್ರೋನ್ ಪ್ರತಾಪ್

ಬಿಗ್‌ಬಾಸ್ ಕನ್ನಡ ಸೀಸನ್ 10 ಡ್ರೋನ್ ಪ್ರತಾಪ್‌ಗೆ ಪಾಸಿಟಿವ್ ಇಮೇಜ್ ನೀಡಿದೆ. ದೊಡ್ಮನೆಯಲ್ಲಿ ಪ್ರತಾಪ್ ನಡವಳಿಕೆಗೆ ಕರ್ನಾಟಕದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡ್ರೋನ್ ಪ್ರತಾಪ್ ಮೂಲತಃ ಮಂಡ್ಯ ಜಿಲ್ಲೆಯ ನೆಟ್ಕಲ್ ಗ್ರಾಮದವರಾಗಿದ್ದು, ಮಳವಳ್ಳಿ ಪಟ್ಟಣದ ರೋಟರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವರೆಗೆ ಶಿಕ್ಷಣ ಪಡೆದರು. ನಂತರ ಭಾರತೀನಗರದ ಜಿ.ಮಾದೇಗೌಡ ಪದವಿಪೂರ್ಣ ಕಾಲೆಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ ಪ್ರತಾಪ್, ಸಾಂಸ್ಕೃತಿಕ ನಗರಿ ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಬಿಎಸ್‌ಸಿ (ಸಿಬಿಜಡ್) ತೆಗೆದುಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಅವರಿಗೆ  ಬಿಎಸ್‌ಸಿ ಮುಗಿಸಲು ಆಗಿಲ್ಲ. 

Video Thumbnail

ಗೌರೀಶ್ ಅಕ್ಕಿ

ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಎರಡನೇ ವಾರ ಹೊರಬಂದ ಪತ್ರಕರ್ತ ಗೌರೀಶ್ ಅಕ್ಕಿ ಮೂಲತಃ ಕೊಪ್ಪಳ ಜಿಲ್ಲೆಯ ಮುಧೋಳದವರು. ಇವರು 1997ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರಾವಾಡದಲ್ಲಿ ಇಂಗ್ಲಿಷ್‌ ಸಾಹಿತ್ಯದಲ್ಲಿ ಎಂ.ಎ ಪದವಿಯನ್ನು ಪಡೆದುಕೊಂಡಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+