X
ಹೋಮ್ ಚಲನಚಿತ್ರಗಳ ಒಳನೋಟ

ನಾನು ಮಾತನಾಡ್ತಿರೋದನ್ನ ಆ 'ಫ್ರಾಡ್' ಕುಟುಂಬವೂ ನೋಡುತ್ತಿರುತ್ತೆ, ಅವರಿಗೆ ಉತ್ತರ ಕೊಡ್ತೇನೆ: ವರ್ತೂರು ಸಂತೋಷ್

Author Sowmya Bairappa | Published: Friday, December 1, 2023, 04:38 PM [IST]

ಬಿಗ್‌ಬಾಸ್‌ ಮನೆ ಸ್ಪರ್ಧಿಗಳ ನೋವು-ನಲಿವುಗಳಿಗೆ ಕನ್ನಡಿ ಹಿಡಿಯುತ್ತದೆ. ತಮ್ಮ ಜೀವನದ ನೋವುಗಳನ್ನು ಹೇಳಿಕೊಂಡು ಹಗುರಾಗಲು ಅವಕಾಶ ಒದಗಿಸುತ್ತದೆ. ಅದರಂತೆ ಕಳೆದ ಸಂಚಿಕೆಯಲ್ಲಿ ಸ್ಪರ್ಧಿಗಳೆಲ್ಲರೂ ತಮ್ಮ ಜೀವನದಲ್ಲಾದ ನೋವಿನ ಕಥೆಗಳನ್ನು ಹಂಚಿಕೊಳ್ಳಬೇಕಿತ್ತು. ಈ ವೇಳೆ ವರ್ತೂರು ಸಂತೋಷ್ ತಮ್ಮ ಜೀವನದ ಖಾಸಗಿ ವಿಚಾರಗಳನ್ನು ಹೇಳಿಕೊಂಡಿದ್ದಾರೆ.


cover image
ದೊಡ್ಡಪ್ಪನಿಗೆ ಕೊಟ್ಟ ಮಾತು

ನಮ್ಮದು ಕೂಡು ಕುಟುಂಬ. ನಾಲ್ಕು ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡೆ. ಆದರೆ ನನ್ನ ದೊಡ್ಡಪ್ಪಂದಿರು ನನಗೆ ಯಾವುದೇ ಕೊರತೆಯಿಲ್ಲದಂತೆ ಬೆಳಸಿದರು. ಡ್ರಿಗ್ರಿ ಓದುತ್ತಿರುವಾಗಲೇ ನನಗೆ ಸಂಸಾರದ ಜವಾಬ್ದಾರಿ ಬಂತು. ತಮ್ಮ ತಾಯಿ ಹಾಳು ಮಾಡಿದರೂ ನಿಂದೆ, ಚೆನ್ನಾಗಿ ಮಾಡಿದರೂ ನಿಂದೆ ಅಂತ ಎಲ್ಲವನ್ನೂ ನನಗೆ ಬಿಟ್ಟಿದ್ರು. ನಾನು ದನ, ಕರು ಅಂತಲೇ ಆರಂಭಿಸಿದೆ. ಆಗ ನಮ್ಮವರೇ ಇವನೇನು ದನ, ಕರು, ಹಸು ಅಂದುಕೊಂಡಿದ್ದಾನೆ ಅಂದರು. ಇವತ್ತು ಆ ದನ-ಕರುಗಳೇ ನಾನು ಇಷ್ಟು ದೊಡ್ಡ ವೇದಿಕೆಗೆ ಬರೋಕೆ ಕಾರಣ. ನಂತರ ಊರಲ್ಲಿ ಇದ್ದರೆ ಅವನ ಹಾಗೆ ಇರಬೇಕಯ್ಯಾ ಅಂತ ಹೊಗಳಿದರು. ನಾನು ಮದುವೆಯಾಗುವ ವಯಸ್ಸಿಗೆ ಬಂದಾಗ ನನ್ನ ದೊಡ್ಡಪ್ಪನಿಗೆ ನೀವು ತೋರಿಸಿದ ಹುಡುಗಿಗೆ ತಾಳಿ ಕಟ್ಟುತ್ತೇನೆ ಎಂದು ಮಾತು ಕೊಟ್ಟೆ. 

'ನಾನು ಸಂಪಾದಿಸಿದ ಜನರನ್ನು ಬಿಟ್ಟು ಬರಬೇಕು ಎಂದರು'

ನಾನು ಮಾತು ಕೊಟ್ಟಿದ್ದರಿಂದ ನನ್ನ ದೊಡ್ಡಪ್ಪ ಒಂದು ಕಡೆ ಹೆಣ್ಣು ನೋಡಲು ಹೋದರು.  ಅವರು ಬಣ್ಣದ ಮಾತುಗಳಿಂದ ದೊಡ್ಡಪ್ಪನನ್ನು ಮರಳು ಮಾಡಿದರು. ಒಳಗೆ ಝೀರೋ, ಆದರೆ ಮಾತುಗಳಿಂದ ಮರಳು ಮಾಡಿದರು. ಯಾವತ್ತೂ ನಾಟಕೀಯವಾಗಿ ಮಾತನಾಡುವವರನ್ನು ನಂಬಲೇಬೇಡಿ. ಯಾರೇ ಆದರೂ ಹೆಣ್ಣು ಕೊಡುವಾಗ ಆಥವಾ ತರುವಾಗ ದಯವಿಟ್ಟು ಆ ಊರಿನ ಜನರನ್ನು ಮತ್ತು ಅಕ್ಕಪಕ್ಕದ ಮನೆಯರನ್ನು ವಿಚಾರಿಸಿ. ನಂತರ ದೊಡ್ಡಪ್ಪನಿಗೆ ಕೊಟ್ಟ ಮಾತಿನಂತೆಯೇ ಆ ಹುಡುಗಿಯನ್ನೇ ಮದುವೆಯಾದೆ. ದಿನ ಕಳೆದಂತೆ ಆಕೆ ನನ್ನ ತಾಯಿಯನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದರು. ನಾನು ಕಷ್ಟಪಟ್ಟು ಸಂಪಾದಿಸಿದ ಜನರನ್ನು ಬಿಟ್ಟು ಬರಬೇಕು ಅಂತ ಹೇಳಿದರು. ನಾನು ಕಟ್ಟಿದ ಕೋಟೆ, ನಾನು ಸಂಪಾದಿಸಿದ ಜನ, ನಾನು ಕಟ್ಟಿದ ಮನೆ ತೊರೆದು ಇವರ ಹಿಂದೆ ಹೋಗ್ಬೇಕು ಅಂದರೆ ಅದು ನನ್ನಿಂದ ಸಾಧ್ಯವಿಲ್ಲ. 

ಗೇಟ್‌ನಿಂದ ಹೊರಹೋಗು ಅಂದರು

ನನ್ನ ತಾಯಿ ಇದು ಒಂದು ಹೆಣ್ಣುಮಗಳ ಜೀವನ. ಹಾಗೆಲ್ಲಾ ಮಾಡಬಾರದು ಅಂದಾಕ್ಷಣ ನಾನು ಅವರ ಮನೆಗೆ ಹೋದೆ. ಆ ಸಂದರ್ಭ ಅವರ ತಂದೆ ಇರಲಿಲ್ಲ. ನನ್ನ ಮಾತಿನ ಪ್ರಕಾರ ಬಂದರೆ ನೀನು ರಾಣಿಯೇ ಇವತ್ತಿಗೂ ಬಾ ಅಂತ ಕರೆದೆ. ಅಪ್ಪ ಬರಬೇಕು ಅಂದರು. ಅಪ್ಪ ಬಂದ ಮೇಲೆ ಏನೇನೋ ಮಾತುಗಳು ನಡೆಯುತ್ತವೆ. ಬಳಿಕ ಅವಳು ಮೊದಲು ಗೇಟ್‌ನಿಂದ ಹೊರಗಡೆ ಹೋಗು ಅಂತ ಹೇಳಿದಳು. ಅಂದು ಮಾತು ಕೊಟ್ಟಿದ್ದೆ, ಆ ಮಾತಿನ ಮೇಲೆ ಇಂದು ಕೂಡ ನಿಂತಿದ್ದೇನೆ. ನೀನು ಮಾಡಿರೋದು ನಾಲ್ಕು ಜನರ ಮುಂದೆ ಅವಮಾನ, ನಾನು ಒಂದಿನ ಉತ್ತರ ಕೊಡೋ ದಿನ ನಾಲ್ಕು ಸಾವಿರ ಜನರ ಮುಂದೆ ಅಂತ ಹೇಳಿ ಬಂದೆ. ಮನೆಗೆ ಬಂದು ಯಾರೂ ಫೋನ್ ಹಾಗೂ ಮಾತುಕತೆ ಮಾಡಬಾರದು ಅಂತ ಹೇಳಿದೆ. ಇದು ನಮ್ಮ ಸಂಬಂಧಿಕರಿಗೆ ಕೆಲವರಿಗೆ ಗೊತ್ತು, ಕರ್ನಾಟಕದ ಜನತೆಗೆ ಗೊತ್ತಿಲ್ಲ. ವರ್ತೂರು ಸಂತೋಷ್ ಒಳಗಡೆ ಏನಿದೆ ಅನ್ನೋದಕ್ಕೆ ಹೇಳಿದ್ದೇನೆ ಎಂದರು. 

 

ಡಿಪ್ರೆಷನ್‌ಗೆ ಹೋದೆ

ನಾನು ಕಷ್ಟಪಟ್ಟು ಒಬ್ಬರಿಗೂ ಮೋಸ ಮಾಡದೇ, ನನ್ನ ಬಾಯಲ್ಲಿ ಒಂದು ಸುಳ್ಳು ಬಂದರೆ ನಾನು ದಿನವೆಲ್ಲಾ ನೋವು ತಿನ್ನುತ್ತೇನೆ. ಹಾಗೆ ಬದುಕಿರುವವನು ನಾನು. ನನಗೆ ನಮ್ಮ ತಾಯಿ ಅಷ್ಟು ಶಿಸ್ತು ಕಲಿಸಿದ್ದಾರೆ. ಆಮೇಲೆ ನನ್ನ ಜೀವನ ನೋಡಿಬಿಟ್ಟು ನಾನು ಫುಲ್ ಡಿಪ್ರೆಷನ್‌ಗೆ ಹೋದೆ. ಅವಾಗ ಕೆಲವರು ಆವನು ಇನ್ನೊಂದು ತಿಂಗಳಿಗೆ ಸತ್ತೋಗಿ ಬಿಡ್ತಾನೆ ಅಂತ ಹೇಳಿದರು. ನಾನು ಹಾಗಾಗಿ ಬಿಟ್ಟಿದ್ದೆ. ಆಮೇಲೆ ಎದ್ದುನಿಂತೆ. ಇದನ್ನು ಆ ಫ್ರಾಡ್ ಫ್ಯಾಮಿಲಿ ಕೂಡ ಪಕ್ಕಾ ನೋಡುತ್ತಿರುತ್ತೆ. ಅವರಿಗೆ ಉತ್ತರ ಕೊಡಬೇಕಂತೆ ಹೇಳುತ್ತಿರುವುದು ಎಂದರು.

ಮದುವೆಯಾದ ಮೇಲೆ ಪ್ರೀತಿ

ಚಿಕ್ಕ ವಯಸ್ಸಿನಲ್ಲಿ ಹೀಗಾಯ್ತು ಅಂತ ಬೇಸರವಾದಾಗ ಒಂದು ಹುಡುಗಿಗೆ ಮಿಸ್ ಕಾಲ್ ಕೊಟ್ಟು ಫೋನ್ ಮಾಡಿದೆ. ಆ ಹುಡುಗಿ ನಮ್ಮ ಸಂಬಂಧಿ ಆಗಿರೋದರಿಂದ ಅವರಿಗೆ ಎಲ್ಲವೂ ಗೊತ್ತಿತ್ತು. ಇಂದು ನಾನು ಬೆಳಗ್ಗೆ ತಿಂಡಿ ತಿಂದಾಗಿನಿಂದ ರಾತ್ರಿಯವರೆಗೆ ಎಲ್ಲದನ್ನು ಕೇಳುತ್ತಾರೆ. ಅಲ್ಲಿಂದ ಜೀವನದ ಮೇಲೆ ಆಸಕ್ತಿ ಬಂತು ಎಂದಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+