X
ಹೋಮ್ ಚಲನಚಿತ್ರಗಳ ಒಳನೋಟ

ವಿನಯ್ ಎಂಬ ದೀಪಕ್ಕೆ ಎಷ್ಟು ಎಣ್ಣೆ ಸುರಿತೀರಾ, ಕಾಮಿಡಿನೇ ಅಸ್ತ್ರ ಮಾಡ್ಕೋಬೇಡಿ ಎಂದ ಕಿಚ್ಚ: ಇನ್ನಾದ್ರೂ ಬದಲಾಗ್ತಾರಾ ತುಕಾಲಿ ಸಂತು?

Author Sowmya Bairappa | Published: Monday, November 6, 2023, 03:24 PM [IST]

ಬಿಗ್‌ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದವರು. ಸದ್ಯ ದೊಡ್ಮನೆಗೆ ಎಂಟ್ರಿಕೊಟ್ಟಿರುವ ಅವರು ಮಂಜು ಪಾವಗಡ ಅವರ ಹಾಗೆಯೇ ಪ್ರಬಲ ಸ್ಪರ್ಧಿಯಾಗಹುದು ಅಂತ ಎಲ್ಲರೂ ಭಾವಿಸಿದ್ದರು. ಜೊತೆಗೆ ಅವರಿಂದ ಸಾಕಷ್ಟು ಹಾಸ್ಯ, ಮನೋರಂಜನೆಯನ್ನು ನಿರೀಕ್ಷಿಸಿದ್ದರು. ಆದರೆ, ತುಕಾಲಿ ಸಂತು ಅವರ ಮೇಲೆ ಪ್ರೇಕ್ಷಕರು ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ಮನೆರಂಜನೆಯಲ್ಲಿ ವಿಫಲರಾದ ಅವರು, ವಿನಯ್‌ ಅವರನ್ನು ಬೆಂಬಲಿಸುತ್ತಾ ದಿನ ಕಳೆಯುತ್ತಿದ್ದಾರೆ. ದೊಡ್ಮನೆಯಲ್ಲಿ ಏನೇ ಹೇಳಿದರು ಕಾಮಿಡಿಗೆ ಹೇಳಿದೆ ಅಂತಿದ್ದ ಸಂತೋಷ್‌ ಅವರಿಗೆ ಕಿಚ್ಚ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.


cover image
ಡ್ರೋನ್ ಪ್ರತಾಪ್ ಬಗ್ಗೆ ಗಾಸಿಪ್

ಬಿಗ್‌ಬಾಸ್ ಸೀಸನ್ 10ರ ಆರಂಭದಲ್ಲಿಯೇ ತುಕಾಲಿ ಸಂತೋಷ್ ಅವರು ಡ್ರೋನ್ ಪ್ರತಾಪ್ ಅವರನ್ನು ಗುರಿಯಾಗಿಸಿಕೊಂಡಿದ್ದರು. ಪ್ರತಾಪ್‌ ಅವರನ್ನು ಶಿಷ್ಯರಾಗಿ ಸ್ವೀಕರಿಸಿದ್ದ ಸಂತೋಷ್, ಅವರ ಬಗ್ಗೆ ಹಿಂದೆಯಿಂದ ಕೆಟ್ಟದಾಗಿ ಮಾತನಾಡಲು ಶುರುಮಾಡಿದ್ದರು. ಪ್ರತಾಪ್ ಬಗ್ಗೆ ನೆಗೆಟಿವ್ ಟಾಕ್ ಶುರುವಾಗುವಂತೆ ಮಾಡಿದರು. ಹೀಗಾಗಿ ಮೊದಲ ವೀಕೆಂಡ್‌ನಲ್ಲೇ ಸುದೀಪ್ ಈ ವಿಚಾರವಾಗಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಪ್ರತಾಪ್‌ ಬಗ್ಗೆ ಮಾತನಾಡುವುದಿಲ್ಲ ಅಂತಲೇ ಗಾಸಿಪ್ ಮಾಡುತ್ತಿದ್ದರು.

 

ಭಾಗ್ಯಶ್ರೀ ಕಣ್ಣೀರು

ನಾಲ್ಕನೇ ವಾರ ಭಾಗ್ಯಶ್ರೀ ಅವರು ಸ್ನೇಹಿತ್ ಅವರನ್ನು ನಾಮಿನೇಟ್ ಮಾಡಿದ ಏಕೈಕ ಕಾರಣಕ್ಕೆ ಸಂತೋಷ್ ಭಾಗ್ಯಶ್ರೀಯವರನ್ನು ಟಾರ್ಗೆಟ್ ಮಾಡಿದ್ದರು. ಈ ವಿಚಾರಕ್ಕೆ ಶನಿವಾರ ಸುದೀಪ್ ಕ್ಲಾಸ್ ತೆಗೆದುಕೊಂಡರು. 'ನೀವು ಯಾವಾಗ್ಲೂ ಹೇಳ್ತಿರಲ್ಲ. ತುಂಬಾ ತಡೆದಿಟ್ಟುಕೊಂಡಿದ್ದೇನೆ ಅಂತ. ಅದೇನು ಅಂತ ಈಗ ಹೇಳಿ. ಎರಡು ನಿಮಿಷ ಸಮಯಾವಕಾಶ ಕೊಡುತ್ತೇನೆ ಎಂದರು. ಆಗ ಸಂತೋಷ್ ಅಣ್ಣಾ ಅದನ್ನು ಕಾಮಿಡಿಗೆ ಹೇಳಿದ ಅಂತ ನಕ್ಕರು. ಇದಕ್ಕೆ ಪ್ರತಿಕ್ರಿಯಿಸಿದ ಕಿಚ್ಚ, ಕಾಮಿಡಿನೇ ನಿಮ್ಮ ಅಸ್ತ್ರ ಮಾಡಿಕೊಳ್ಳಬೇಡಿ. ನೀವು ಕಾಮಿಡಿಯನ್ ಆಗಿರುವುದೇ ಒಂದು ಅಡ್ವಾಂಟೇಜ್ ಆಗಲು ಸಾಧ್ಯವಿಲ್ಲ ಎಂದ ಗಂಭೀರವಾಗಿ ಹೇಳಿದರು.

ವಿನಯ್ ಎಂಬ ದೀಪಕ್ಕೆ ಎಷ್ಟು ಎಣ್ಣೆ ಸುರಿತೀರಾ?

ಇತ್ತೀಚೆಗೆ ಎಲ್ಲಾ ವಿಚಾರಕ್ಕೂ ಸಂತೋಷ್ ಅವರು ವಿನಯ್‌ಯವರನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ. ಇದಕ್ಕೆ ನೇರವಾಗಿ ತಿರುಗೇಟು ಕೊಟ್ಟ ಕಿಚ್ಚ, ನಿಮ್ಮ ರೂಮ್‌fನಲ್ಲಿ ಒಂದು ದೀಪವಿರುತ್ರೆ. ಆ ದೀಪವನ್ನು ವಿನಯ್ ಅಂದುಕೊಳ್ಳೋಣ. ಅದಕ್ಕೆ ಎಷ್ಟು ಅಂತ ಎಣ್ಣೆ ಹಾಕ್ತೀರಾ? ಎಣ್ಣೆ ಹಾಕಿದ್ರೆ ನಮ್ಮ ಮೇಲೆ ಬೆಳಕು ಬರುತ್ತೆ ಎಂದಿರಬೇಕು ಎಂದರು. ಇದರಿಂದ ತುಕಾಲಿ ಸಂತೋಷ್ ತಲೆ ತಗ್ಗಿಸಿದರು. ಮುಂದುವರೆದು ಮಾತನಾಡಿದ ಸುದೀಪ್, ಮಿಕ್ಕಿದವರು ಮಾತನಾಡಿದರೆ ತಪ್ಪು, ನೀವು ಮಾತನಾಡಿದರೆ ತಪ್ಪಲ್ಲ ಅಲ್ಲವೇ' ಎಂದ್ರು. ಆಗ ಸಂತೋಷ್ ತಲೆ ಎತ್ತಲಿಲ್ಲ. ತಲೆ ಎತ್ತಿ ಮಾತನಾಡಿ, ನೋಡೋಕೆ ಚೆನ್ನಾಗಿರುತ್ತೆ ಎಂದರು. 

ಸಂತೋಷ್‌ನ ತುಂಬಾನೇ ಹೇಟ್ ಮಾಡ್ತೀನಿ

ಕಳೆದ ವಾರ ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ ನಡುವೆ ದೊಡ್ಡ ಜಗಳ ಏರ್ಪಟ್ಟಿತ್ತು. ಈ ವೇಳೆ ಸಂಗೀತಾ ಸಂತೋಷ್‌ನ ತುಂಬಾನೇ ಹೇಟ್ ಮಾಡ್ತೀನಿ ಎಂದಿದ್ದರು. ಸಂತೋಷ್ ನಡೆದುಕೊಳ್ಳುವ ರೀತಿ ಸರಿಯಿಲ್ಲ. ಅವರು ಈ ಮನೆಯಯ ಶಕುನಿ. ಲೈಫ್‌ನಲ್ಲಿ ನಾನು ಯಾರನ್ನಾದರೂ ಮತ್ತೆ ಭೇಟಿಯಾಗೋಕೆ ಇಷ್ಟಪಡಲ್ಲ ಅಂದರೆ ಅದು ಸಂತೋಷ್ ಎಂದಿದ್ದರು.  

ಇನ್ನಾದ್ರೂ ಬದಲಾಗ್ತಾರಾ?

ತುಕಾಲಿ ಸಂತೋಷ್ ಪ್ರತಿ ವೀಕೆಂಡ್‌ನಲ್ಲಿ ಸುದೀಪ್ ಹೇಳುವ ಮಾತನ್ನು ಜೋಕ್ ಆಗಿ ತೆಗೆದುಕೊಳ್ಳುತ್ತಿದ್ದರು. ಕಿಚ್ಚನ ಪ್ರತಿ ಮಾತಿಗೂ ಅಣ್ಣಾ... ಅಂತ ರಾಗ ಎಳೆದು ನಗುತ್ತಿದ್ದರು. ಹೀಗಾಗಿ, ಸಂತೋಷ್ ವಾರದ ದಿನಗಳಲ್ಲಿ ಇರುವುದಕ್ಕೂ ವಾರಾಂತ್ಯದಲ್ಲಿ ಇರುವುದಕ್ಕೂ ತುಂಬಾ ವ್ಯಾತ್ಯಾಸವಿದೆ ಅಂತ ವೀಕ್ಷಕರು ಅಭಿಪ್ರಾಯಪಟ್ಟಿದ್ದರು. ಸಂತೋಷ್ ಇನ್ನಾದ್ರೂ ತಮ್ಮ ತಪ್ಪನ್ನ ತಿದ್ದಿಕೊಳ್ತಾರಾ ಅಂತ ಕಾದು ನೋಡಬೇಕಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+