ಬಿಗ್ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದವರು. ಸದ್ಯ ದೊಡ್ಮನೆಗೆ ಎಂಟ್ರಿಕೊಟ್ಟಿರುವ ಅವರು ಮಂಜು ಪಾವಗಡ ಅವರ ಹಾಗೆಯೇ ಪ್ರಬಲ ಸ್ಪರ್ಧಿಯಾಗಹುದು ಅಂತ ಎಲ್ಲರೂ ಭಾವಿಸಿದ್ದರು. ಜೊತೆಗೆ ಅವರಿಂದ ಸಾಕಷ್ಟು ಹಾಸ್ಯ, ಮನೋರಂಜನೆಯನ್ನು ನಿರೀಕ್ಷಿಸಿದ್ದರು. ಆದರೆ, ತುಕಾಲಿ ಸಂತು ಅವರ ಮೇಲೆ ಪ್ರೇಕ್ಷಕರು ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ಮನೆರಂಜನೆಯಲ್ಲಿ ವಿಫಲರಾದ ಅವರು, ವಿನಯ್ ಅವರನ್ನು ಬೆಂಬಲಿಸುತ್ತಾ ದಿನ ಕಳೆಯುತ್ತಿದ್ದಾರೆ. ದೊಡ್ಮನೆಯಲ್ಲಿ ಏನೇ ಹೇಳಿದರು ಕಾಮಿಡಿಗೆ ಹೇಳಿದೆ ಅಂತಿದ್ದ ಸಂತೋಷ್ ಅವರಿಗೆ ಕಿಚ್ಚ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.