X
ಹೋಮ್ ಚಲನಚಿತ್ರಗಳ ಒಳನೋಟ

ಬ್ರದರ್ಸ್‌ ಡೇ ಸ್ಪೆಷಲ್: ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಸಹೋದರರಿವರು!

Author Sowmya Bairappa | Updated: Wednesday, May 24, 2023, 11:33 AM [IST]

ರಾಮ-ಲಕ್ಷ್ಮಣ, ಲವ-ಕುಶ, ಕೃಷ್ಣ-ಬಲರಾಮ ಭಾರತೀಯ ಪುರಾಣಗಳಲ್ಲಿ ಪ್ರಸಿದ್ಧ ಸಹೋದರರು. ಒಡಹುಟ್ಟಿದವರು ಉತ್ತಮ ಸ್ನೇಹಿತರ ಜೊತೆ ಮಾರ್ಗದರ್ಶಕರು ಆಗಿರುತ್ತಾರೆ. ಬಾಲ್ಯವನ್ನು ಒಟ್ಟೊಟ್ಟಿಗೆ ಕಳೆಯುವ ಒಡಹುಟ್ಟಿದವರ ನಡುವೆ ಜಗಳ, ಕಿತ್ತಾಟ ಇದ್ದೇ ಇರುತ್ತದೆ. ಕನ್ನಡ ಚಿತ್ರರಂಗದಲ್ಲೂ ಅನೇಕ ಸಹೋದರರು ತಮ್ಮದೇಯಾದ ಚಾಪು ಮೂಡಿಸಿದ್ದಾರೆ. ಇಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಸಹೋದರರ ಪಟ್ಟಿಯನ್ನು ನೀಡಲಾಗಿದೆ.


cover image
ಶಂಕರ್ ನಾಗ್ ಮತ್ತು ಅನಂತ್ ನಾಗ್
1

ಕನ್ನಡ ಚಿತ್ರರಂಗದ ಪ್ರಸಿದ್ಧ ಸಹೋದರರಲ್ಲಿ ಶಂಕರ್ ನಾಗ್ ಮತ್ತು ಅನಂತ್ ನಾಗ್ ಮೊದಲಿಗರು. ಇವರಿಬ್ಬರು ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ. 1973ರಲ್ಲಿ ಸಂಕಲ್ಪ ಸಿನಿಮಾ ಮೂಲಕ ವೃತ್ತಿಜೀವನ ಆರಂಭಿಸಿದ ಅನಂತ್ ನಾಗ್, 1978ರಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರದ ಮುಖಾಂತರ ಶಂಕರ್ ನಾಗ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಈ ಇಬ್ಬರು ಕೂಡ ಕನ್ನಡ ಸಿನಿರಸಿಕರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಅನಂತ್ ನಾಗ್ ತಮ್ಮ ಸ್ವಾಭಾವಿಕ ನಟನಾ ಶೈಲಿಯಿಂದಲೇ ಗಮನ ಸೆಳೆದರೆ, ಶಂಕರ್ ನಾಗ್ ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ.  

ಶಿವಣ್ಣ, ರಾಘಣ್ಣ ಮತ್ತು ಅಪ್ಪು
2

ಶಿವ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರನ್ನು ಸ್ಯಾಂಡಲ್‌ವುಡ್‌ನ ತ್ರಿಮೂರ್ತಿಗಳು ಎಂದೇ ಕರೆಯಲಾಗುತ್ತೆ. ವರನಟ ರಾಜ್‌ಕುಮಾರ್ ಅವರ ಮುದ್ದಿನ ಮಕ್ಕಳಾದ ಇವರು, ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್‌ಗಳಾಗಿ ಮಿಂಚಿದ್ದಾರೆ. ಈ ಮೂವರು ಸಹೋದರರು ಒಟ್ಟಿಗೆ ತೆರೆಹಂಚಿಕೊಂಡಿಲ್ಲ. ಶಿವಣ್ಣ 1996ರಲ್ಲಿ ಆನಂದ್ ಮೂಲಕ ಸಿನಿ ಜರ್ನಿ ಆರಂಭಿಸಿದ್ರೆ, ಬಾಲಕಲಾವಿದರಾಗಿದ್ದ ಪುನೀತ್ 2002ರಲ್ಲಿ ಅಪ್ಪು ಚಿತ್ರದ ಮೂಲಕ ನಾಯಕ ನಟರಾದರು. ರಾಘಣ್ಣ 1978ರಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 

ದರ್ಶನ್‌ ಹಾಗೂ ದಿನಕರ್
3

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಹಾಗೂ ದಿನಕರ್ ಸಹೋದರರು ವೃತ್ತಿ ಜೀವನದ ಆರಂಭಿಕ ಹಂತದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದಾರೆ. ಇವರು ಖ್ಯಾತ ಖಳನಟ ತೂಗುದೀಪ್ ಶ್ರೀನಿವಾಸ್ ಅವರ ಮಕ್ಕಳು.1990ರ ದಶಕದಲ್ಲಿ ಪೋಷಕ ಪಾತ್ರಗಳ ಮೂಲಕ ವೃತ್ತಿಜೀವನ ಆರಂಭಿಸಿದ ದರ್ಶನ್, 2002ರಲ್ಲಿ ಪಿ ಎನ್ ಸತ್ಯ ನಿರ್ದೇಶನದ ಮೆಜೆಸ್ಟಿಕ್ ಸಿನಿಮಾದಲ್ಲಿ ನಾಯಕನಾಗಿ ಬಣ್ಣ ಹಚ್ಚಿದರು. ಈ ಸಿನಿಮಾ ದರ್ಶನ್ ಸಿನಿ ಕರಿಯರ್‌ಗೆ ದೊಡ್ಡ ಬ್ರೇಕ್ ನೀಡಿತು. ಇದಾದ ಬಳಿಕ ದರ್ಶನ್ ಹಿಂದಿರುಗಿ ನೋಡಲೇ ಇಲ್ಲ. ಇನ್ನು ಜೊತೆ ಜೊತೆಯಲಿ ಚಿತ್ರದಿಂದ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದ ದಿನಕರ್ ತೂಗುದೀಪ್, ನವಗ್ರಹ, ಸಾರಥಿ , ಒಂದೂರಲ್ಲಿ ಒಬ್ಬ ರಾಜ'ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಿರ್ಮಾಪಕರಾಗಿ `ಬುಲ್- ಬುಲ್' ಮತ್ತು ಮದುವೆಯ ಮಮತೆಯ ಕರೆಯೋಲೆ ಚಿತ್ರಗಳನ್ನು ನಿರ್ಮಿಸಿದ್ದಾರೆ ಹಾಗೂ ದರ್ಶನ್ ಜೊತೆ ಸೇರಿ `ತೂಗುದೀಪ ಪ್ರೊಡಕ್ಷನ್ಸ್ ಮತ್ತು ಡಿಸ್ಟ್ರಿಬ್ಯೂಷನ್ ಸಂಸ್ಥೆ ನಡೆಸುತ್ತಿದ್ದಾರೆ.

ಜಗ್ಗೇಶ್ ಹಾಗೂ ಕೋಮಲ್
4

ನವರಸನಾಯಕ ಜಗ್ಗೇಶ್ ಹಾಗೂ ಕೋಮಲ್ ಸ್ಯಾಂಡಲ್‌ವುಡ್‌ನ ಕಾಮಿಡಿ ಸಹೋದರರು. ಇವರಿಬ್ಬರು ಫೋಷಕ ಪಾತ್ರದಲ್ಲಿ ನಟಿಸುವ ಮೂಲಕ ವೃತ್ತಿ ಜೀವನ ಆರಂಭಿಸಿದರು. ಇವರು ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಇಂದು ತಮ್ಮದೇಯಾದ ನಟನಾ ಶೈಲಿಯಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮದೇಯಾದ ಮ್ಯಾನರಿಸಂ ಮೂಲಕ ಪ್ರೇಕ್ಷಕರನ್ನು ನಕ್ಕುನಲಿಸುವ ಜಗ್ಗೇಶ್, 'ತರ್ಲೆ ನನ್ಮಗ' ಸಿನಿಮಾ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಈ ಸಿನಿಮಾವನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡಿದ್ದು, ಜಗ್ಗೇಶ್ ಹಾಗೂ ಉಪೇಂದ್ರ ಇಬ್ಬರಿಗೂ ದೊಡ್ಡ ಬ್ರೇಕ್ ನೀಡಿತು.  1992ರಲ್ಲಿ ನಟನಾ ವೃತ್ತಿ ಆರಂಭಿಸಿದ ಕೋಮಲ್, 2008ರಲ್ಲಿ ಮಿಸ್ಟರ್ ಗರಗಸ ಸಿನಿಮಾ ಮೂಲಕ ನಾಯಕನಾಗಿ ಮೋಡಿ ಮಾಡಿದರು. 

ಸಾಯಿಕುಮಾರ್ ಮತ್ತು ರವಿಶಂಕರ್
5

ಸಾಯಿಕುಮಾರ್ ಮತ್ತು ರವಿಶಂಕರ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರು. ಈ ಇಬ್ಬರು ಸಹೋದರರು ನಕಾರಾತ್ಮಕ ಪಾತ್ರಗಳಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಸಾಯಿಕುಮಾರ್ ಡಬ್ಬಿಂಗ್ ಕಲಾವಿದರಾಗಿ ವೃತ್ತಿಜೀವನ ಆರಂಭಿಸಿದರು. ನಂತರ 1996ರಲ್ಲಿ ಪೊಲೀಸ್ ಸ್ಟೋರಿ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ನಂತರ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ಜೊತೆಗೆ ಟಿವಿ ಶೋಗಳನ್ನು ಹೋಸ್ಟ್ ಮಾಡಿದ್ದಾರೆ.  ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ್ದ ರವಿಶಂಕರ್, ಹಳ್ಳಿ ಕೃಷ್ಣ ಡೆಲ್ಲಿ ರಾಧ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ತದನಂತರ 'ಮನಮೆಚ್ಚಿದ ಸೊಸೆ', 'ಕೋಟೆ' ಚಿತ್ರದಲ್ಲಿ ಮಿಂಚಿ, ವಾಯ್ಸ್ ಆರ್ಟಿಸ್ಟ್ ಆಗಿ ಉಳಿದವರು ನಟ ರವಿಶಂಕರ್. ಆದರೆ ಸುದೀಪ್ ಅವರ ಜೊತೆ 'ಕೆಂಪೇಗೌಡ' ಚಿತ್ರದಲ್ಲಿ 'ಆರ್ಮುಗಂ'ನಾಗಿ ಅಬ್ಬರಿಸಿ ಫೇಮಸ್ ಆದ ನಂತರ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆಯ ಖಳನಟನಾಗಿ ಹೊರಹೊಮ್ಮಿದ್ದಾರೆ.

ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ
6

ರಾಜ್‌ ಕುಟುಂಬದ ಸಹೋದರರಂತೆ ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಕೂಡ. ಇವರು ನಿರ್ಮಾಪಕ ಎಸ್.ಎ.ಚಿನ್ನೇಗೌಡ ಪುತ್ರರು ಹಾಗೂ ಡಾ.ರಾಜ್‌ಕುಮಾರ್ ಸೋದರಳಿಯರು. ಚಲಿಸುವ ಮೋಡಗಳು ಸಿನಿಮಾದಲ್ಲಿ ಬಾಲಕಲಾವಿದನಾಗಿ ಬಣ್ಣಹಚ್ಚಿದ ವಿಜಯ್ ರಾಘವೇಂದ್ರ, ಅತ್ಯುತ್ತಮ ಬಾಲಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದರು. ವಿಜಯ್ ಸಹೋದರ ಶ್ರೀಮುರಲಿ 2003ರಲ್ಲಿ ಚಂದ್ರ ಚಕೋರಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಸದ್ಯ ಇವರಿಬ್ಬರು ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟರಾಗಿ ಗುರುತಿಸಿಕೊಂಡಿದ್ದಾರೆ

ಧ್ರುವಾ ಸರ್ಜಾ ಮತ್ತು ಚಿರಂಜೀವಿ ಸರ್ಜಾ
7

ಧ್ರುವಾ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಕನ್ನಡದ ಹಿರಿಯ ನಟ ಶಕ್ತಿಪ್ರಸಾದ್ ಅವರ ಮೊಮ್ಮಕ್ಕಳು ಹಾಗೂ ನಟ ಅರ್ಜುನ್‌ ಸರ್ಜಾ ಅವರ ಸೋದರಳಿಯರು. ಇವರು ತಮ್ಮ ನಟನಾ ಕೌಶಲ್ಯದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಚಿರಂಜೀವಿ 2009ರಲ್ಲಿ ವಾಯುಪುತ್ರ ಸಿನಿಮಾ ಮೂಲಕ ಬೆಳ್ಳಿತೆರೆ ಎಂಟ್ರಿಕೊಟ್ಟರು. ಧ್ರುವ 2012ರಲ್ಲಿ ಅದ್ಧೂರಿ ಸಿನಿಮಾದ ಮುಖಾಂತರ ವೃತ್ತಿಜೀವನ ಆರಂಭಿಸಿದರು. ಆದರೆ, ಚಿರಂಜೀವಿ  2020ರ ಜೂನ್ 7ರಂದು ಬಾರದ ಲೋಕಕ್ಕೆ ಪಯಣ ಬೆಳೆಸಿದರು.  

ಅನೂಪ್‌ ಭಂಡಾರಿ ಮತ್ತು ನಿರೂಪ್ ಭಂಡಾರಿ
8

ಅನೂಪ್‌ ಭಂಡಾರಿ ಮತ್ತು ನಿರೂಪ್ ಭಂಡಾರಿ ಒಂದೇ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಆ ಸಿನಿಮಾ ಹೆಸರು. ಈ ಸಿನಿಮಾಗೆ ಅನೂಪ್‌ ಭಂಡಾರಿ ಆಕ್ಷನ್ ಕಟ್ ಹೇಳಿದ್ರೆ, ನಿರೂಪ್ ಭಂಡಾರಿ ನಾಯಕನಾಗಿ ನಟಿಸಿದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಬಳಿಕ ರಾಜಫಥ ಸಿನಿಮಾದಲ್ಲಿ  ಒಟ್ಟಿಗೆ ಕೆಲಸ ಮಾಡಿದರು. ಬಳಿಕ ಅನೂಪ್‌ ಭಂಡಾರಿ ಅವರು ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರದಲ್ಲಿ ಕೂಡ ನಿರೂಪ್ ಅಭಿನಯಿಸಿದ್ದರು. ಈ ಚಿತ್ರ ಕೂಡ ಬ್ಲಾಕ್ ಬಸ್ಟರ್ ಆಗಿತ್ತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+