X
ಹೋಮ್ ಚಲನಚಿತ್ರಗಳ ಒಳನೋಟ

Darshan Arrest: ಚಾಲೆಂಜಿಂಗ್ ಸ್ಟಾರ್ ಒಪ್ಪಿಕೊಂಡಿರುವ ಈ ಸಿನಿಮಾಗಳ ಗತಿಯೇನು?

Author Administrator | Published: Wednesday, June 12, 2024, 01:21 PM [IST]

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿದ್ದಾರೆ. ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ದರ್ಶನ್ ಪಾಲಿಗೆ ಇದು ಗಂಭೀರ ಕೇಸ್. ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ದರ್ಶನ್‌ಗೆ ಜೈಲು ಶಿಕ್ಷೆಯಾದರೆ ಮುಂದಿನ ಸಿನಿಮಾ ಗತಿಯೇನು ಎಂದು ನಿರ್ಮಾಪಕರು, ನಿರ್ದೇಶಕರು ಹಾಗೂ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಈಗಾಗಲೇ ಶೂಟಿಂಗ್ ಹಂತದಲ್ಲಿರುವ 'ಡೆವಿಲ್' ಚಿತ್ರದ ಭವಿಷ್ಯವೇನು ಎಂಬೆಲ್ಲಾ ಚರ್ಚೆಗಳು ನಡೆಯುತ್ತಿವೆ. ಇಲ್ಲಿ ದರ್ಶನ್ ಮುಂದಿನ ಸಿನಿಮಾಗಳು ಹಾಗೂ ಯಾವೆಲ್ಲಾ ಚಿತ್ರಗಳಿಗೆ ಸಹಿ ಹಾಕಿದ್ರು ಎಂಬ ಮಾಹಿತಿ ನೀಡಲಾಗಿದೆ.


cover image
ಡೆವಿಲ್

ಕೆಲ ದಿನಗಳ ಹಿಂದಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮಿಲನ ಪ್ರಕಾಶ್ ಕಾಂಬಿನೇಷನ್‌ನಲ್ಲಿ ಮೂಡಿರುತ್ತಿರುವ 'ಡೆವಿಲ್' ಸಿನಿಮಾವನ್ನು ಕ್ರಿಸ್‌ಮಸ್‌ಗೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಲಾಗಿತ್ತು. ಮೈಸೂರಿನಲ್ಲಿ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿತ್ತು. ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದರು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಕಾಟೇರ ಸಿನಿಮಾದ ಬಳಿಕ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರವಾಗಿದ್ದ 'ಡೆವಿಲ್' ಮೇಲೆ ಈಗ ಕಾರ್ಮೋಡ ಕವಿದಿದೆ. ಸದ್ಯ ಈ ಸಿನಿಮಾದ ಭವಿಷ್ಯ ಏನಾಗಲಿದೆ? ಈ ವರ್ಷವೇ ಬಿಡುಗಡೆಯಾಗಲಿದ್ಯಾ ಎಂಬ ಅನುಮಾನ ಮೂಡಿದೆ.

ಡಿ59

ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಈಗಾಗಲೇ ಬ್ಲಾಕ್‌ಬಸ್ಟರ್ ಆಗಿತ್ತು. ಇದಾದ ಬಳಿಕ ದರ್ಶನ್ 59ನೇ ಸಿನಿಮಾಕ್ಕೂ ಇವರೇ ಆಕ್ಷನ್ ಕಟ್ ಹೇಳಲು ಮುಂದಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಿಂಧೂರ ಲಕ್ಷ್ಮಣ ಅವರ ಜೀವನನ್ನಾಧರಿಸಿ ಸಿನಿಮಾ ಇದಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಪುರುಷ ವೀರ ಸಿಂಧೂರ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಯಜಮಾನ ಮತ್ತು ಕ್ರಾಂತಿಯಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಶೈಲಜಾ ನಾಗ್ ಮತ್ತು ಬಿ. ಸುರೇಶ್ ಇದೇ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. 

ದರ್ಶನ್-ಪ್ರೇಮ್ ಸಿನಿಮಾ

ಈಗಾಗಲೇ ದರ್ಶನ್ ಹಾಗೂ ಪ್ರೇಮ್ ಕಾಂಬಿನೇಷನ್ ಸಿನಿಮಾದ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಪ್ರೋಮೋನಲ್ಲಿ ಆಂಜನೇಯನ ಗದೆ ಕಾಣುತ್ತದೆ. ಜೊತೆಗೆ ನನ್ನ ಕೊನೆ ಉಸಿರಿರೋ ವರೆಗೂ ಈ ಭೂಮಿ ಮೇಲೆ, ನಿನ್ನ ಒಂದ್ ಹನಿ ರಕ್ತಾನೂ ಸೋಕೋದಕ್ಕೆ ನಾನ್ ಬಿಡಲ್ಲ ಎಂದು ದರ್ಶನ್​ರ ಹಿನ್ನೆಲೆ ಧ್ವನಿ ಕೇಳಿ ಬರುತ್ತದೆ. ಅದರ ಬೆನ್ನಲ್ಲೆ ಗಧೆ, ತ್ರಿಷೂಲ, ಭಗವಾ ಧ್ವಜ ಹಾರುತ್ತಿರುವ ಮಂದಿರ, ಚಿನ್ನದ ಬಣ್ಣದ ಅಲುಗಿನ ಭರ್ಜಿಗಳು ಕಾಣಿಸಿಕೊಳ್ಳುತ್ತವೆ. ಹಿನ್ನೆಲೆಯಲ್ಲಿ ಜೈ ಶ್ರೀರಾಮ್ ಘೋಷಣೆಗಳು ಕೇಳಿ ಬರುತ್ತದೆ. ಒಟ್ಟಾರೆ ಒಂದು ಪೌರಾಣಿಕ ಕಥೆಯನ್ನು ನೆನಪಿಸುವಂತಹ ಪ್ರೋಮೋ ಇದಾಗಿದ್ದು, ದರ್ಶನ್​ ಆಂಜನೇಯನ ಅಥವಾ ಆಂಜನೇಯನ ಭಕ್ತನ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿರಬಹುದು ಎನ್ನಲಾಗಿದೆ. ಈ ಸಿನಿಮಾದ ಟೈಟಲ್ ಇನ್ನೂ ಬಹಿರಂಗವಾಗಿಲ್ಲ.


ರಾಜವೀರ ಮದಕರಿನಾಯಕ

ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶದ 'ರಾಜವೀರ ಮದಕರಿನಾಯಕ' ಸಿನಿಮಾದಲ್ಲಿ ಕೂಡ ದರ್ಶನ್ ನಟಿಸಲಿದ್ದಾರೆ. ಚಿತ್ರದುರ್ಗದ ಕೊನೆಯ ಪಾಳೆಗಾರನಾದ ಮದಕರಿನಾಯಕನ ಜೀವನಾಧಾರಿತ ಚಿತ್ರ `ಗಂಡುಗಲಿ ಮದಕರಿ ನಾಯಕ'. ಮದಕರಿನಾಯಕನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿದ್ದು, ರಾಕಲೈನ್ ವೆಂಕಟೇಶ್ ನಿರ್ಮಿಸಲು ಮುಂದಾಗಿದ್ದರು. ಈ ಸಿನಿಮಾದ ಮೇಲೂ ದರ್ಶನ್ ಬಂಧನ ಕೆಟ್ಟ ಪರಿಣಾಮ ಉಂಟುಮಾಡಬಹುದು. 




Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+