ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿದ್ದಾರೆ. ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ದರ್ಶನ್ ಪಾಲಿಗೆ ಇದು ಗಂಭೀರ ಕೇಸ್. ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ದರ್ಶನ್ಗೆ ಜೈಲು ಶಿಕ್ಷೆಯಾದರೆ ಮುಂದಿನ ಸಿನಿಮಾ ಗತಿಯೇನು ಎಂದು ನಿರ್ಮಾಪಕರು, ನಿರ್ದೇಶಕರು ಹಾಗೂ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಈಗಾಗಲೇ ಶೂಟಿಂಗ್ ಹಂತದಲ್ಲಿರುವ 'ಡೆವಿಲ್' ಚಿತ್ರದ ಭವಿಷ್ಯವೇನು ಎಂಬೆಲ್ಲಾ ಚರ್ಚೆಗಳು ನಡೆಯುತ್ತಿವೆ. ಇಲ್ಲಿ ದರ್ಶನ್ ಮುಂದಿನ ಸಿನಿಮಾಗಳು ಹಾಗೂ ಯಾವೆಲ್ಲಾ ಚಿತ್ರಗಳಿಗೆ ಸಹಿ ಹಾಕಿದ್ರು ಎಂಬ ಮಾಹಿತಿ ನೀಡಲಾಗಿದೆ.