X
ಹೋಮ್ ಚಲನಚಿತ್ರಗಳ ಒಳನೋಟ

ದರ್ಶನ್ ಟು ಗಣೇಶ್: ಅಂದಿನ ಕಿರುತೆರೆ ನಟರೇ ಇಂದು ಸ್ಯಾಂಡಲ್‌ವುಡ್ ಬಾಕ್ಸಾಫೀಸ್ ಸುಲ್ತಾನ್‌ಗಳು!

Author Sowmya Bairappa | Updated: Monday, February 12, 2024, 10:16 AM [IST]

ಒಳ್ಳೆಯ ನಟರಾಗಬೇಕು, ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸು ಗಳಿಸಬೇಕು ಎಂಬೆಲ್ಲಾ ಕನಸುಗಳನ್ನು ಹೊತ್ತು ಬಂದವರಿಗೆ ಮೊದಲು ಮಣೆ ಹಾಕಿದ್ದು ಕನ್ನಡ ಕಿರುತೆರೆ. ಕನ್ನಡ ಚಿತ್ರರಂಗಕ್ಕೆ 'ಕಿರುತೆರೆ' ಸಾಕಷ್ಟು ಪ್ರತಿಭಾವಂತ ಕಲಾವಿದರನ್ನು ನೀಡಿದೆ. ಅವರಲ್ಲಿ ಕೆಲವರು ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಇಲ್ಲಿ ಸೀರಿಯಲ್‌ಗಳಲ್ಲಿ ನಟಿಸಿ, ಬೆಳ್ಳಿತೆರೆಗೆ ಬಂದು ಯಶಸ್ಸು ಕಂಡ ನಾಯಕರ ಪಟ್ಟಿ ನೀಡಲಾಗಿದೆ.


cover image
ಸುದೀಪ್

ಸ್ಯಾಂಡಲ್‌ವುಡ್‌ ಬಾದ್‌ಷಾ ದಯಾನಂದ ಸಾಗರ್ ಕಾಲೇಜಿನಲ್ಲಿ ಓದುತ್ತಿದ್ದಾಗ ಅಂಡರ್  17 ಮತ್ತು ಅಂಡರ್ 19 ಕ್ರಿಕೆಟ್‌ನಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ್ದರು. ನಟನೆ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದ ಕಿಚ್ಚ, ಮುಂಬೈನ ರೋಚನ್ ತನೇಜಾ ಆಕ್ಟಿಂಗ್ ಸ್ಕೂಲ್‌ನಲ್ಲಿ ತರಬೇತಿ ಪಡೆದರು. ಸುದೀಪ್ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಉದಯ ಟಿವಿಯಲ್ಲಿ ಪ್ರಸಾರವಾದ 'ಪ್ರೇಮದ ಕಾದಂಬರಿ' ಧಾರಾವಾಹಿಯಲ್ಲಿ. ಬಳಿಕ ತಾಯವ್ವ ಮತ್ತು ಪತ್ಯರ್ಥ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಪಡೆದರು. ತಾಯವ್ವ ಸಿನಿಮಾಗೂ ಮೊದಲು ಸುದೀಪ್ ಬ್ರಹ್ಮ ಮತ್ತು ಈ ಕುಸುಮಾ ಬಾಲೆ ಎಂಬ ಸಿನಿಮಾಗಳಲ್ಲಿ ನಟಿಸಿದ್ರು. ಕಾರಣಾಂತರಗಳಿಂದ ಆ ಚಿತ್ರಗಳು ಬಿಡುಗಡೆಯಾಗಲಿಲ್ಲ. ಅಭಿನಯ ಚಕ್ರವರ್ತಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದು ಸ್ಪರ್ಶ ಮತ್ತು ಹುಚ್ಚ ಸಿನಿಮಾಗಳು. ಇಲ್ಲಿಂದ ಸುದೀಪ್ ಹಿಂತಿರುಗಿ ನೋಡೇ ಇಲ್ಲ. ಗಾಂಧಿನಗರದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ, ಗಾಯಕನಾಗಿ ಸುದೀಪ್ ಜನಪ್ರಿಯತೆ ಪಡೆದಿದ್ದಾರೆ. 

ದರ್ಶನ್

'ನೀನಾಸಂ'ನಲ್ಲಿ ನಟನೆಯ ತರಬೇತಿ ಪಡೆದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಿನಿಲೋಕಕ್ಕೂ ಮುನ್ನ ಕಿರುತೆರೆ ಲೋಕದ ಪರಿಚಯವಾಗಿತ್ತು. ಅವರ ಮೊದಲ ಸಿನಿಮಾ 'ಮೆಜಿಸ್ಟಿಕ್' ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಸಿನಿಮಾಗೂ ಮೊದಲು ದರ್ಶನ್ ಮಹಾಭಾರತ ಮತ್ತು ದೇವರ ಮಗ ಚಿತ್ರಗಳಲ್ಲಿ ದರ್ಶನ್ ಚಿಕ್ಕ ಪಾತ್ರ ನಿರ್ವಹಿಸಿದ್ರು.ಇದಕ್ಕೂ ಮುನ್ನ 'ಚಂದ್ರಿಕಾ' ಎಂಬ ಸೀರಿಯಲ್‌ನಲ್ಲಿ ದರ್ಶನ್ ಬಣ್ಣ ಹಚ್ಚಿದ್ದರು. ನಂತರ ಸಿನಿಮಾರಂಗಕ್ಕೆ ಕಾಲಿಟ್ಟ ಅವರು ಇಂದು ಸ್ಯಾಂಡಲ್‌ವುಡ್ ಬಾಕ್ಸಾಪೀಸ್ ಸುಲ್ತಾನ ಅಂತಲೇ ಬಿರುದು ಪಡೆದಿದ್ದಾರೆ. 

 

ಯಶ್

ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಾಕಿಂಗ್ ಸ್ಟಾರ್ ಯಶ್ ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ಸಾಕಷ್ಟು ಕಷ್ಟಪಟ್ಟಿದ್ದಾರೆ. KGF ರೀತಿಯ ಸೆನ್ಸೇಷನ್‌ ಸಿನಿಮಾದಿಂದ ದೇಶ ವಿದೇಶದಲ್ಲೂ ರಾಕಿ ಭಾಯ್ ಆಗಿ ಚಿರಪರಿಚಿತರಾಗಿದ್ದಾರೆ. ಯಶ್ ಕಾಲ್‌ಶೀಟ್‌ಗಾಗಿ ಪರಭಾಷಾ ನಿರ್ಮಾಪಕರು ಕ್ಯೂ ನಿಂತಿದ್ದಾರೆ. ಆದರೆ, ಇದೇ ಯಶ್ ಒಂದು ಕಾಲದಲ್ಲಿ ಬಹುಬೇಡಿಕೆಯ ಸೀರಿಯಲ್ ನಟ. ಚಿತ್ರರಂಗ ಪ್ರವೇಶಿಸುವ ಮುನ್ನ ನಂದಗೋಕುಲ, ಪ್ರೀತಿ ಇಲ್ಲದ ಮೇಲೆ ಧಾರಾವಾಹಿಗಳಲ್ಲಿ ನಟಿಸಿದ್ದರು. 

ಗಣೇಶ್

ನಟ ಗಣೇಶ್ ಅವರು ಗೋಲ್ಡನ್ ಸ್ಟಾರ್ ಅಗವುದಕ್ಕೂ ಮುನ್ನ ಉದಯ ವಾಹಿನಿಯ 'ಕಾಮಿಡಿ ಟೈಮ್' ಎಂಬ ಕಾರ್ಯಕ್ರಮದ ನಿರೂಪಕರಾಗಿದ್ರು. ಒಂದ್ಕಾಲದಲ್ಲಿ ಅವರು ಕಾಮಿಡಿ ಟೈಮ್ ಗಣೇಶ್ ಅಂತಲೇ ಜನಪ್ರಿಯತೆ ಗಳಿಸಿದರು. ಇದಕ್ಕೂ ಮುನ್ನ ಅವರು ಸಿಹಿಕಹಿ ಚಂದ್ರ ನಿರ್ದೇಶನದ 'ಪಾಪ ಪಾಂಡು' ಧಾರಾವಾಹಿಯಲ್ಲಿ ಅಭಿನಯಿಸಿದ್ರು. ಹಾಗೆಯೇ ಯದ್ವಾ ತದ್ವಾ, ವಠಾರ ಸೀರಿಯಲ್‌ಗಳಲ್ಲೂ ನಟಿಸಿದ್ದರು. ನಂತರ  'ಚೆಲ್ಲಾಟ' ಮತ್ತು 'ಮುಂಗಾರು ಮಳೆ' ಸಿನಿಮಾಗಳ ಮೂಲಕ ಸ್ಯಾಂಡಲ್‌ನಲ್ಲಿ ಯಶಸ್ವಿ ಹೀರೋ ಆದರು.

 

ದುನಿಯಾ ವಿಜಯ್

ಕನ್ನಡ ಚಿತ್ರರಂಗದ ಯಶಸ್ವಿ ಹೀರೋಗಳ ಪೈಕಿ ದುನಿಯಾ ವಿಜಯ್ ಕೂಡ ಒಬ್ಬರು. ಇವರು ಸ್ಯಾಂಡಲ್‌ವುಡ್‌ಗೆ ಕಾಲಿಡುವುದಕ್ಕೂ ಮುನ್ನ 'ಪಾಪ ಪಾಂಡು' ಸೀರಿಯಲ್‌ನಲ್ಲಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದ್ದರು. ಬಳಿಕ ರಂಗ ಎಸ್‌ಎಸ್‌ಎಲ್‌ಸಿ, ಜೋಡಿ, ಶ್ರೀ ಸಿನಿಮಾಗಳಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದರು. ಅವರ ನಸೀಬು ಬದಲಾಯಿಸಿದ್ದು ಸೂರಿ ನಿರ್ದೇಶನ ದುನಿಯಾ ಚಿತ್ರ. ದುನಿಯಾ ವಿಜಯ್ ಇಂದು ಚಂದನವನ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+