X
ಹೋಮ್ ಚಲನಚಿತ್ರಗಳ ಒಳನೋಟ

ದರ್ಶನ್ ಟು ಶಿವಣ್ಣ: ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸಿನಿರಸಿಕರ ಮನಗೆದ್ದ ಸ್ಯಾಂಡಲ್‌ವುಡ್ ಸ್ಟಾರ್ ನಟರಿವರು!

Author Sowmya Bairappa | Updated: Friday, July 28, 2023, 06:14 PM [IST]

ಸ್ಯಾಂಡಲ್‌ವುಡ್‌ನ ಎಲ್ಲಾ ನಟರು ತಮ್ಮದೇಯಾದ ರೀತಿಯಲ್ಲಿ ಪ್ರತಿಭಾವಂತ ನಟರಾಗಿದ್ದಾರೆ. ಕೆಲ ನಟರು ಈಗಾಗಲೇ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ತಮ್ಮ ವಿಶಿಷ್ಟ ಪ್ರತಿಭೆಯನ್ನು ತೋರಿಸಿದ್ದಾರೆ. ಇನ್ನೂ ಕೆಲ ನಟರು ಅಂತಹ ಪಾತ್ರಗಳ ಹುಡುಕಾಟದಲ್ಲಿದ್ದಾರೆ. ಇಲ್ಲಿ ವಿಭಿನ್ನ ಪಾತ್ರಗಳ ಮೂಲಕ ಸಿನಿರಸಿಕರ ಮನಗೆದ್ದ ಸ್ಯಾಂಡಲ್‌ವುಡ್ ಸ್ಟಾರ್ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ಸುದೀಪ್

ಭಾರತ ಸಿನಿಮಾರಂಗದಲ್ಲಿ ಹಲವು ಸ್ಟಾರ್ ನಟರಿದ್ದಾರೆ. ಅದರಲ್ಲಿ ಕೆಲವರಷ್ಟೆ ಎಂಥಹಾ ಪಾತ್ರಗಳಲ್ಲಿಯೂ ಉತ್ತಮವಾಗಿ ನಟಿಸಬಲ್ಲರು. ಅಂಥಹವರಲ್ಲಿ ಒಬ್ಬರು ಕನ್ನಡಿಗ ನಟ ಸುದೀಪ್. ಬಿಲ್ಡಪ್ ತುಂಬಿದ ನಾಯಕ ಪಾತ್ರಗಳನ್ನು ಸುದೀಪ್ ಹಲವು ಮಾಡಿದ್ದಾರೆ. ಆದರೆ, ಸುದೀಪ್ ಕೇವಲ ಅದೊಂದೇ ಮಾದರಿಯ ಪಾತ್ರಗಳಿಗೆ ಗಂಟು ಬಿದ್ದವರಲ್ಲ. ಆ ರೀತಿಯ ಪಾತ್ರಗಳನ್ನು ಅವರೇ ಅರಸಿ ಹೋದವರೂ ಅಲ್ಲ. ಬದಲಿಗೆ ಮಾಸ್ ಇಮೇಜಿನ ಪಾತ್ರಗಳ ನಡುವೆ ಒಳ್ಳೆಯ ಪಾತ್ರಗಳನ್ನು ಅರಸಿದ್ದಿದೆ, ಹಠಕ್ಕೆ ಬಿದ್ದು ನಟಿಸಿದ್ದಿದೆ. ಕಿಚ್ಚ ಸುದೀಪ್ ವೃತ್ತಿ ಜೀವನದ ಆರಂಭದಲ್ಲಿಯೇ 'ಮಾಸ್ ಹೀರೋ' ಇಮೇಜಿಗೆ ವಿರುದ್ಧವಾದ ಸಿನಿಮಾಗಳಲ್ಲಿ ನಟಿಸಿದವರು. ಸಿನಿಮಾದ ನಾಯಕ ಕೊನೆಯಲ್ಲಿ ವಿಲನ್ನುಗಳನ್ನು ಕೊಂದು ಗೆಲ್ಲಬೇಕು, ನಾಯಕಿಯನ್ನು ಬಿಗಿದು ತಬ್ಬಿಕೊಳ್ಳಬೇಕು ಎಂಬುದು ಇಂದಿಗೂ ಇದೆ. ಆದರೆ, ಕಿಚ್ಚನಿಗೆ ಹೆಸರು ತಂದುಕೊಟ್ಟ ಹುಚ್ಚ ಸಿನಿಮಾದಲ್ಲಿ ನಾಯಕ ಹುಚ್ಚನಾಗಿ ಹೋಗುತ್ತಾನೆ ಎಂಬುದು ಮಾಸ್ ಪ್ರೇಕ್ಷಕರಿಗೆ ಜೀರ್ಣವಾಗುವ ವಿಷಯವಲ್ಲ. ಆದರೆ, ಆ ಚಿತ್ರದಲ್ಲಿ ಹುಚ್ಚನಾಗಿ ಸುದೀಪ್ ನಟನೆ ಇಂದಿಗೂ ಪ್ರೇಕ್ಷಕರ ಕಣ್ಣಿಗೆ ಕಟ್ಟಿದೆ. 2001ರಲ್ಲಿ ತೆರೆಕಂಡ ಈ ಚಿತ್ರ ಸುದೀಪ್‌ಗೆ ಬಿಗ್ ಬ್ರೇಕ್ ನೀಡಿತ್ತು. 

ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೈಟ್​​ಬಾಯ್ ಆಗಿ ಚಿತ್ರರಂಗದಲ್ಲಿ ಕರಿಯರ್ ಆರಂಭಿಸಿ, ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವ ಮೂಲಕ ಇಂದು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾಗಿ ಹೊರಹೊಮ್ಮಿದ್ದಾರೆ. ಆರಂಭದ ಸಿನಿಮಾಗಳಲ್ಲಿ ರೌಡಿಸಂ ಹಾಗೂ ಲವರ್ ಬಾಯ್ ಪಾತ್ರಗಳಲ್ಲಿ ಮಿಂಚಿದ್ದ ದರ್ಶನ್, ಮೊದಲ ಬಾರಿಗೆ ಅಂಧನಾಗಿ ನಟಿಸಿದ ಚಿತ್ರ 'ನಮ್ಮ ಪ್ರೀತಿಯ ರಾಮು'. ಇದು ಮಲಯಾಳಂ ರಿಮೇಕ್ ಆಗಿತ್ತು. ಸಿನಿಮಾದಲ್ಲಿ ದರ್ಶನ್ ಅಂಧನಾಗಿ ಬಹಳ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರ ಬಾಕ್ಸಾಫೀಸ್​​ನಲ್ಲಿ ಸದ್ದು ಮಾಡದಿದ್ರೂ ದರ್ಶನ್ ಅಭಿನಯಕ್ಕೆ ಎಲ್ಲರಿಂದ ಪ್ರಶಂಸೆ ದೊರೆಯಿತು. ದರ್ಶನ್ ಕರಿಯರ್‌ನಲ್ಲೇ ಇದೊಂದು ವಿಭಿನ್ನ ಪಾತ್ರವಾಗಿತ್ತು. 

ಉಪೇಂದ್ರ

ನಟ ಉಪೇಂದ್ರಗೆ ರಿಯಲ್ ಸ್ಟಾರ್ ಎಂಬ ಬಿರುದು ಬಂದಿದ್ದೆ ಅವರ ರಿಯಾಲಿಸ್ಟಿಕ್ ಸಿನಿಮಾಗಳಿಂದ. ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟರ್ ಡೈರೆಕ್ಟರ್ ಆಗಿರುವ ರಿಯಲ್ ಸ್ಟಾರ್ ಉಪೇಂದ್ರ, ವಿಭಿನ್ನತೆ ಅಂದರೆ ಏನು ಅಂತ ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟವರು. ವಿಭಿನ್ನ ಕತೆ, ವಿಶಿಷ್ಟ ಸಂಭಾಷಣೆ, ವಿಶೇಷ ಹಾಡುಗಳಿಂದ ಪ್ರೇಕ್ಷಕರನ್ನು ರಂಜಿಸುವ ಉಪೇಂದ್ರ ಅವರು 'ಅನಾಥರು' ಸಿನಿಮಾದಲ್ಲಿ ಸವಾಲಿನ  ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಚಿತ್ರವನ್ನು ಸಾಧುಕೋಕಿಲ ನಿರ್ದೇಶನ ಮಾಡಿದ್ದು, ಉಪ್ಪಿ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಬಹಳ ಸೊಗಸಾಗಿ ನಟಿಸಿದ್ದರು. ಚಿತ್ರದಲ್ಲಿ 'ಹುಚ್ಚ ರುದ್ರ' ಪಾತ್ರದಲ್ಲಿ ಉಪೇಂದ್ರ ಅವರ ಅಭಿನಯಕ್ಕೆ ಸಿನಿರಸಿಕರು ಫಿದಾ ಆಗಿದ್ದರು. ತಮಿಳಿನ ಪೀತಮಗನ್ ಚಿತ್ರದ ರಿಮೇಕ್ ಆದ ಅನಾಥರು ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ಉಪೇಂದ್ರರ ನಟನೆ ಮತ್ತು ದರ್ಶನ್-ರಾಧಿಕಾ ಕಾಂಬಿನೇಶನ್ ಗಮನ ಸೆಳೆದಿತ್ತು. 

ಶಿವರಾಜಕುಮಾರ್

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಸುಮಾರು ಮೂರು ದಶಕಗಳಿಗೂ ಅಧಿಕ ತಮ್ಮ ಸಿನಿಜೀವನದಲ್ಲಿ 125 ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಯುವಪ್ರೇಮಿಯಾಗಿ, ರೌಡಿಯಾಗಿ, ಖಡಕ್ ಪೋಲಿಸ್ ಅಧಿಕಾರಿಯಾಗಿ ಹೀಗೇ ಹತ್ತು ಹಲವು ಪಾತ್ರಗಳನ್ನು ಜೀವಿಸಿದ್ದಾರೆ. ತಮ್ಮ ನಟನೆಗೆ ಹಲವು ಪ್ರಶಸ್ತಿಗಳ ಜೊತೆಗೆ ಗೌರವ ಡಾಕ್ಟರೇಟ್ ಕೂಡ ಪಡೆದಿದ್ದಾರೆ. ಶಿವಣ್ಣ ತಮ್ಮ ವೃತ್ತಿ ಜೀವನದಲ್ಲೇ ಮೊದಲ ಬಾರಿಗೆ 'ಕವಚ' ಚಿತ್ರದಲ್ಲಿ ವಿಶಿಷ್ಟ ಹಾಗೂ ವಿಭಿನ್ನ ಪಾತ್ರದಲ್ಲಿ ನಟಿಸಿದ್ದರು. ಮಲೆಯಾಳಂನ 'ಒಪ್ಪಂ' ಸಿನಿಮಾದ ರಿಮೇಕಾಗಿದ್ದ ಈ ಚಿತ್ರ ಶಿವಣ್ಣನ ನಟನಾ ಸಾಮರ್ಥ್ಯವನ್ನು ತೋರಿಸಿತ್ತು. ಹ್ಯಾಟ್ರಿಕ್ ಹೀರೋ ಲಾಂಗು, ಮಚ್ಚು, ಲವ್ವು ಎಲ್ಲದರಿಂದ ಹೊರಬಂದು ಈ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. 

ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಕಷ್ಟದಿಂದಲೇ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡವರು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ಇಂದು ತಮ್ಮದೇಯಾದ ನಟನಾ ಶೈಲಿಯಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮದೇಯಾದ ಮ್ಯಾನರಿಸಂ ಮೂಲಕ ಪ್ರೇಕ್ಷಕರನ್ನು ನಕ್ಕುನಲಿಸುವ ಜಗ್ಗೇಶ್, ಸಿನಿಮಾ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಅನುಭವ ಹೊಂದಿದ್ದಾರೆ. ಜಗ್ಗೇಶ್ ಮೊದಲ ಬಾರಿಗೆ ಇಮೇಜಿನ ಹಂಗು ತೊರೆದು 'ಮನ್ಮಥ' ಚಿತ್ರದಲ್ಲಿ ಕುರೂಪಿಯಾಗಿ ನಟಿಸಿದ್ದರು. ಗೂನು ಬೆನ್ನು, ಉಬ್ಬಲ್ಲು, ಸೊಟ್ಟಕಾಲು ಹೀಗೆ ಅಷ್ಟಾವಕ್ರನ ರೂಪದಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸಿದ್ದರು. ಈ ಸಿನಿಮಾದಲ್ಲಿನ ಇವರ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಜಗ್ಗೇಶ್ ಈ ಪಾತ್ರ ನಿರ್ವಹಿಸಲು ಸಾಕಷ್ಟು ರಿಸ್ಕ್ ತೆಗೆದುಕೊಂಡಿದ್ದರು.  

 

ರಾಜ್ ಬಿ ಶೆಟ್ಟಿ

ರಾಜ್‌ ಬಿ ಶೆಟ್ಟಿ ಯಾವಾಗಲೂ ವಿಭಿನ್ನ ಕಥೆ ಮತ್ತು ವಿಭಿನ್ನ ಶೈಲಿಯ ನಿರೂಪಣೆ ಇರುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಮೊಟ್ಟೆಯ ಕಥೆ ಎಂಬ ಹಾಸ್ಯದ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು, 'ಗರುಡ ಗಮನ ವೃಷಭ ವಾಹನ' ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಅಬ್ಬರಿಸಿದ್ದರು. ಈ ಸಿನಿಮಾದಲ್ಲಿ ನಾಯಕಿ, ಲವ್, ಡ್ಯುಯೆಟ್ ಸಾಂಗ್ ಯಾವುದು ಇರಲಿಲ್ಲ. ಇದೊಂದು ಮಂಗಳೂರು ಹಿನ್ನಲೆಯಲ್ಲಿ ನೆಡೆಯುವ ಗ್ಯಾಂಗ್‌ಸ್ಟರ್ ಚಿತ್ರವಾಗಿದ್ದು, ಅರ್ಭಟಿಸುವ ರೆಬೆಲ್ ಶಿವನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಮಿಂಚದ್ದರು. ಈ ಚಿತ್ರಕ್ಕೆ ಅವರೇ ನಿರ್ದೇಶನ ಮಾಡಿದ್ದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+