X
ಹೋಮ್ ಚಲನಚಿತ್ರಗಳ ಒಳನೋಟ

ಸಾಧನೆ ಅಂದ್ರೆ ಇದು: ಅವಮಾನಿಸಿದವರ ಮುಂದೆ ಬೆಳೆದು ತೋರಿಸಿದ ಸ್ಯಾಂಡಲ್‌ವುಡ್ ನಟರಿವರು!

Author Sowmya Bairappa | Published: Wednesday, October 30, 2024, 06:15 AM [IST]

ಬಣ್ಣದ ಲೋಕದಲ್ಲಿ ಸ್ಟಾರ್‌ಗಳಾಗಿ ಬೆಳೆಯುವುದು ಸುಲಭದ ಮಾತಲ್ಲ. ಸಿನಿಮಾ ಹಿನ್ನೆಲೆಯಿಂದ ಬಂದವರೂ ಕೂಡ ಆರಂಭದಲ್ಲಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಇಂದು ಬೆಳ್ಳಿಪರದೆ ಮೇಲೆ ಸ್ಟಾರ್ ನಟರಾಗಿ ಮಿಂಚುತ್ತಿರುವ ಅನೇಕ ನಟರು ಒಂದು ಕಾಲದಲ್ಲಿ ಸಾಕಷ್ಟು ಅವಮಾನ, ಅಪಮಾನ ಎದುರಿಸಿದ್ದಾರೆ. ಅದನ್ನೆಲ್ಲಾ ಸಹಿಸಿಕೊಂಡು ತಮ್ಮ ಬೆಳವಣಿಗೆ ಮೂಲಕವೇ ಉತ್ತರ ನೀಡಿದ್ದಾರೆ. ಕೆಲವರು ತಮಗಾದ ಅವಮಾನಗಳನ್ನು ಖುದ್ದು ಹೇಳಿಕೊಂಡಿದ್ದಾರೆ. ಇಲ್ಲಿ ಅವಮಾನಿಸಿದವರ ಮುಂದೆ ಬೆಳೆದು ತೋರಿಸಿದ ಸ್ಯಾಂಡಲ್‌ವುಡ್ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ಸುದೀಪ್

ಭಾರತ ಸಿನಿಮಾರಂಗದಲ್ಲಿ ಹಲವು ಸ್ಟಾರ್ ನಟರಿದ್ದಾರೆ. ಅದರಲ್ಲಿ ಕೆಲವರಷ್ಟೇ ಎಂಥಹ ಪಾತ್ರಗಳಲ್ಲಿಯೂ ಉತ್ತಮವಾಗಿ ನಟಿಸಬಲ್ಲರು. ಅಂಥಹವರಲ್ಲಿ ಒಬ್ಬರು ಕನ್ನಡಿಗ ನಟ ಸುದೀಪ್. ಸದ್ಯ ಸೂಪರ್ ಹಿಟ್ ಸಿನಿಮಾಗಳ ಸರದಾರನಾಗಿರುವ ಕಿಚ್ಚನಿಗೆ ಆರಂಭದಲ್ಲಿ 'ಐರನ್ ಲೆಗ್' ಹಣೆಪಟ್ಟಿ ಕಟ್ಟಲಾಗಿತ್ತು. ಆರಂಭದಲ್ಲಿ ಸುದೀಪ್ ನಟಿಸಿದ ಕೆಲ ಸಿನಿಮಾಗಳು ನಿಂತು, ಒಂದೆರಡು ಚಿತ್ರಗಳು ಸೋಲು ಕಂಡಿದ್ದವು. ಸುದೀಪ್ ನಟನಾಗುವುದಕ್ಕೆ ತಂದೆಯ ಬೆಂಬಲವಿರಲಿಲ್ಲ. ಆದರೂ ಕೂಡ ನಟನೆಯಲ್ಲಿ ಮುಂದುವರೆದರು. ಹುಚ್ಚ ಸಿನಿಮಾದಿಂದ ಸುದೀಪ್ ಗೆಲುವಿನ ಮೆರವಣಿಗೆ ಆರಂಭವಾಯ್ತು. ನಂತರ ಕಿಚ್ಚ ತಮ್ಮ ಸಿನಿಮಾಗಳ ಮೂಲಕವೇ ಐರನ್ ಲೆಗ್ ಅಲ್ಲ ಎಂದು ಸಾಭೀತು ಮಾಡಿದ್ರು. 

ದುನಿಯಾ ವಿಜಯ್

ದುನಿಯಾ ವಿಜಯ್ ಫೈಟರ್ ಆಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದವರು. ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ದುನಿಯಾ ವಿಜಯ್, ದುನಿಯಾ ಸಿನಿಮಾದಲ್ಲಿ ಹೀರೋ ಆಗಿ ನಟಿಸಿ ಯಶಸ್ಸು ಗಳಿಸಿದರು. ತಮ್ಮ ಮೈಬಣ್ಣ ಹಾಗೂ ಫೈಟರ್ ಎನ್ನುವ ಕಾರಣಕ್ಕೆ ಆರಂಭದಲ್ಲಿ ವಿಜಯ್ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದರು. ಫೈಟರ್ ಎಲ್ಲಾ ಹೀರೋ ಆಗೋಕೆ ಆಗುತ್ತಾ? ಅಂತ ಕೆಲವರು ಆಡಿಕೊಂಡಿದ್ದರು. ಸಂದರ್ಶನವೊಂದರಲ್ಲಿ ತಮ್ಮ ಹಿಂದಿನ ದಿನಗಳನ್ನು ನೆನೆಸಿಕೊಂಡಿದ್ದ ವಿಜಿ, ಒಮ್ಮೆ  22 ದಿನಗಳ ಕೆಲಸ ಮಾಡಿ ಸಂಬಳ ಕೇಳಿದ್ದಕ್ಕೆ ಒಬ್ಬರು ನನ್ನ ಕೆನ್ನೆಗೆ ಬಾರಿಸಿ ಕೆಟ್ಟದಾಗಿ ಬೈದುಬಿಟ್ಟಿದ್ದರು. ಇಂದು ಅವರ ಮುಂದೆ ಬೆಳೆದು ನಿಂತಿದ್ದೇನೆ ಅಂತ ಹೇಳಿದ್ದರು. 

ದರ್ಶನ್

ದರ್ಶನ್ ಖ್ಯಾತ ಖಳನಟ ತೂಗುದೀಪ್ ಶ್ರೀನಿವಾಸ್ ಅವರ ಮಗನಾದರೂ ಆರಂಭದಲ್ಲಿ ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಈ ಬಗ್ಗೆ ವೀಕೆಂಡ್ ವಿತ್ ರಮೇಶ್‌ನಲ್ಲಿ ಮಾತನಾಡಿದ್ದ ಚಾಲೆಂಜಿಂಗ್ ಸ್ಟಾರ್, ತಂದೆಯಿದ್ದಾಗ ಎಲ್ಲರೂ ಚೆನ್ನಾಗಿ ಮಾತನಾಡಿಸುತ್ತಿದ್ದರು. ಅವರ ಅನುಪ ಸ್ಥಿತಿಯಲ್ಲಿ ಚಿತ್ರಣವೇ ಬದಲಾಗಿತ್ತು. ನಾನು ಲೈಟ್‌ಬಾಯ್ ಆಗಿದ್ದ ಹೊಸತರಲ್ಲಿ ಒಮ್ಮೆ ಕುಳಿತುಕೊಳ್ಳುವ ಚೇರ್ ಒದ್ದುಬಿಟ್ಟರು. ಕೈಯಲ್ಲಿ ಊಟದ ತಟ್ಟೆಯಿತ್ತು. ಆದರೂ ಚೇರ್ ಒದ್ದುಬಿಟ್ಟರು. ಅವತ್ತು ನಿಜವಾಗಿಯೂ ಭೂಮಿ ಬಾಯಿಬಿಟ್ಟ ಅನುಭವವಾಗಿತ್ತು ಎಂದಿದ್ದರು. ಮುಂದೆ ದರ್ಶನ್ ಬಾಕ್ಸಾಫೀಸ್‌ ಸುಲ್ತಾನ್ ಆಗಿ ಬೆಳೆದಿದ್ದು ಎಲ್ಲರಿಗೂ ಗೊತ್ತೇ ಇದೆ. 

ಯಶ್

ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಯಶ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅಭಿಮಾನಿಗಳಿಂದ ರಾಕಿಂಗ್ ಸ್ಟಾರ್ ಎಂಬ ಬಿರುದು ಪಡೆದುಕೊಂಡಿದ್ದಾರೆ. ಬಸ್ ಚಾಲಕನ ಮಗನಾಗಿರುವ ರಾಕಿಂಗ್ ಸ್ಟಾರ್ ಯಶ್, ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ, ನಟ ಯಶ್ ಒಂದೇ ದಿನದಲ್ಲಿ ಇಷ್ಟೆಲ್ಲಾ ಸಾಧಿಸಲು ಸಾಧ್ಯವಾಗಿಲ್ಲ, ಅದಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ನಾನು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾಗ ಒಂದು ಸಂದರ್ಶನ ನಡೆಯುತ್ತಿತ್ತು. ಸಂದರ್ಶಕರು ಬಂದು ಎಲ್ಲಾ ಆರ್ಟಿಸ್ಟ್‌ಗಳನ್ನು ಮಾತನಾಡಿಸುತ್ತಿದ್ದರು. ನನ್ನನ್ನು ಮಾತನಾಡಿಸಲಿಲ್ಲ. ಆಗ ಅಂದುಕೊಂಡಿದ್ದೆ 'ಒಂದಿನ ನಾನು ಬೆಳೆಯುತ್ತೇನೆ, ಆಗ ಬಂದು ಮಾತನಾಡಿಸುತ್ತಾರೆ' ಅಂದುಕೊಂಡಿದ್ದೆ. ಆದರೆ, ಅದೇ ವ್ಯಕ್ತಿ ಒಂದಿನ ಇಂಟರ್‌ವ್ಯೂವ್ ಬೇಕು ಅಂತ ಹಲವು ಬಾರಿ ಕರೆಮಾಡಿದ್ದರು. ನಾನು ಹೋಗಲು ಆಗಿರಲಿಲ್ಲ. ಮೂರು ದಿನ ಕಾಯ್ದು ತೆಗೆದುಕೊಂಡರು ಎಂದಿದ್ದರು. ಇಂದು ಯಶ್ ಸಂದರ್ಶನಕ್ಕಾಗಿ ಹೆಸರಾಂತ ವಾಹಿನಿಗಳು ಕಾಯುತ್ತಿರುತ್ತವೆ. 

ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಇಂದು ಎಲ್ಲಾ ಚಿತ್ರರಂಗಕ್ಕೂ ಚಿರಪರಿಚಿತ. ಉಪ್ಪಿ ಸಹಾಯಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಬಂದವರು. ಈ ಸಂದರ್ಭ ಊಟಕ್ಕಾಗಿ ತಟ್ಟೆ ಹಿಡಿದು ನಿಂತಾಗ ಬಡಿಸುತ್ತಿದ್ದ ವ್ಯಕ್ತಿ, ಊಟ ಇಲ್ಲ ಹೋಗು ಅಂತ ಪಕ್ಕಕ್ಕೆ ತಳ್ಳಿಬಿಟ್ಟಿದ್ದನಂತೆ. ಈ ವಿಷಯವನ್ನು ಉಪ್ಪಿ ಅವರೇ ಪ್ರಸ್ತಾಪಿಸಿ, ಮುಂದೆ ನಾನು ನಿರ್ದೇಶಕನಾದಾಗ ಅದೇ ವ್ಯಕ್ತಿ ಸೆಟ್‌ಗೆ ಬಂದಿದ್ದ, ನಾನು ಆತನ ವಿರುದ್ಧ ಧ್ವೇಷ ಸಾಧಿಸಲಿಲ್ಲ. ಆತ ಅವಮಾನ ಮಾಡಿದಾಗ ನಾನು ಏನೂ ಆಗಿರಲಿಲ್ಲ ಎಂದು ಹೇಳಿದ್ದರು.   


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+