X
ಹೋಮ್ ಚಲನಚಿತ್ರಗಳ ಒಳನೋಟ

ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಮಾಡಿ ಗೆದ್ದಿದ್ದ ಸ್ಯಾಂಡಲ್‌ವುಡ್ ಲೆಜೆಂಟರಿ ನಟರಿವರು!

Author Sowmya Bairappa | Published: Sunday, September 1, 2024, 10:55 AM [IST]

ಸಿನಿಮಾ ನಟರು ಸ್ಟಾರ್‌ಗಳಾದ ಮೇಲೆ ಅವರಿಗೊಂದು ಇಮೇಜ್ ಅಂತ ಬಂದು ಬಿಡುತ್ತದೆ. ಇಂತಹ ಸಂದರ್ಭದಲ್ಲಿ ಫ್ಯಾನ್ಸ್‌ಗಳಿಗಾಗಿ ಎಕ್ಸಪರಿಮೆಂಟ್ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ, ಆಗಿನ ಕಾಲದ ನಮ್ಮ ಲೆಜೆಂಡರಿ ನಟರು ಸಿನಿಮಾ ಕಂಟೆಂಟ್ ಹಾಗೂ ಮೇಕರ್ಸ್ ನಂಬಿ ಕೆಲವೊಂದು ಸಿನಿಮಾಗಳನ್ನು ಮಾಡಿದ್ದಾರೆ. ಅಂತಹ ಸಿನಿಮಾಗಳು ಹಾಗೂ ನಟರು ಯಾರು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.


cover image
ವಿಷ್ಣುವರ್ಧನ್

ಕನ್ನಡ ಚಿತ್ರರಂಗ ಲೆಜೆಂಡರಿ ನಿರ್ದೇಶಕ ಸಿದ್ದಲಿಂಗಯ್ಯ ಅವರು ಆಕ್ಷನ್ ಕಟ್ ಹೇಳಿರುವ ಕ್ಲಾಸಿಕ್ ಸಿನಿಮಾಗಳಲ್ಲಿ 'ಭೂತಯ್ಯನ ಮಗ ಅಯ್ಯು' ಕೂಡ ಒಂದು. ಈ ಚಿತ್ರದಲ್ಲಿ ಸಾಹಸಿಂಹ ಡಾ.ವಿಷ್ಣುವರ್ಧನ್ ವರು 'ಗುಲ್ಲಾ' ಎಂಬ ಪಾತ್ರ ಮಾಡಿದ್ದರು. ಇವರ ಜೊತೆಗೆ ಲೋಕೇಶ್ ಕೂಡ ಇದ್ದರು. ಇವರಿಬ್ಬರು ಸಿನಿಮಾದಲ್ಲಿ ಸಮಾನಾದ ಪಾತ್ರ ನೀಡಲಾಗಿತ್ತು. ಇವರಿಬ್ಬರ ಪಾತ್ರಗಳಿಗೆ ಯಾವುದೇ ರೀತಿಯ ಬಿಲ್ಡಪ್ ಇರಲಿಲ್ಲ. ಆದರೂ ಈ ಪಾತ್ರ ಮಾಲು ಲೋಕೇಶ್ ಹಾಗೂ ವಿಷ್ಣು ಮುಂತಾದರು. ಆಗಿನ ಕಾಲದಲ್ಲಿ 12  ಲಕ್ಷ ರೂ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 45 ಲಕ್ಷ ರೂ. ಕಮಾಯಿ ಮಾಡಿತ್ತು. ನಾಲ್ಕು ವಿಭಾಗಗಳಲ್ಲಿ ರಾಜ್ಯ ಪ್ರಶಸ್ತಿ ಕೂಡ ಪಡೆದಿತ್ತು. ಕಥೆಯ ಈ ಸಿನಿಮಾದ ಜೀವಾಳವಾಗಿತ್ತು. ಸಮಾಜದಲ್ಲಿ ಎಲ್ಲರು ಒಂದೇ, ಎಲ್ಲರೂ ಒಂದಾಗಿ ಬಾಳಬೇಕೆಂಬ ಸಂದೇಶ ಹೊಂದಿದ್ದ ಭೂತಯ್ಯನ ಮಗ ಅಯ್ಯು ಚಿತ್ರವನ್ನು ಇಂದಿಗೂ ಕನ್ನಡಿಗರ ಮರೆತಿಲ್ಲ.

ಅಂಬರೀಶ್

ಕನ್ನಡ ಚಿತ್ರರಂಗದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರಷ್ಟು ಎಕ್ಸಪರಿಮೆಂಟಲ್ ಸಿನಿಮಾ ಮಾಡಿದ ಸ್ಟಾರ್ ನಟ ಯಾರಿಲ್ಲ ಅಂದರೆ ತಪ್ಪಾಗಲ್ಲ. ಅಂಬಿ ಅಭಿನಯದ ಸೂಪರ್ ಹಿಟ್ ಸಿನಿಮಾ ಅಂತ. ರಾಜೇಂದ್ರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ರಾಜಕಾರಣಿಗಳು ಮತ್ತು ಸರ್ಕಾರದ ಬಗ್ಗೆ ತೋರಿಸಲಾಗಿತ್ತು. ಈ ಸಿನಿಮಾದ ಕ್ಲ್ಯೈಮ್ಯಾಕ್ಸ್‌ನಲ್ಲಿ ಹೀರೋ ಕಣ್ಣೇದುರೆ ಅವನ ಗರ್ಭಿಣಿ ಹೆಂಡತಿಯನ್ನು ಒದ್ದು ಸಾಯಿಸುತ್ತಾರೆ. ಹೀರೋ ಉಗುರು ಕೀಳುತ್ತಾರೆ. ಇದನ್ನೆಲ್ಲಾ ಲೆಕ್ಕಿಸದೇ ಅಂಬಿ ನಟಿಸಿದ್ದರು.

ಶಂಕರ್ ನಾಗ್

ಶಂಕರ್ ನಾಗ್ ನಟ ಮಾತ್ರವಲ್ಲದೇ ಅವರೊಬ್ಬ ಪ್ರಬುದ್ಧ ನಿರ್ದೇಶಕ. ಇದಕ್ಕೆ ಸಾಕ್ಷಿ ಆಕ್ಸಿಡೆಂಟ್, ಒಂದು ಮುತ್ತಿನ ಕಥೆ ಹಾಗೂ ಮಾಲ್ಗುಡಿ ಡೇಸ್ ಸಿನಿಮಾಗಳು. 1985ರಲ್ಲಿ ತೆರೆಕಂಡ ಆಕ್ಸಿಡೆಂಟ್ ಆಗಿನ ಕಾಲದಲ್ಲೇ ಮೆಟ್ರೋ ಸಿಟಿಗಳಲ್ಲಿ ಆಲ್ಕೋಹಾಲ್, ಡ್ರಗ್ ಅಡಿಕ್ಷನ್ ಹಾಗೂ ಪಶ್ಚಿಮಾತ್ಯ ಸಂಸ್ಕೃತಿ ಹೇರಿಕೆಯಿಂದ ಆಗುತ್ತಿರುವ ಅನಾಹುತಗಳ ಮೇಲೆ ಬೆಳಕು ಚೆಲ್ಲಿತ್ತು. ಜೊತೆಗೆ ಸಾಮಾಜಿಕ ಕಳಕಳಿ ಮತ್ತು ಸಂದೇಶಕ್ಕಾಗಿ 32ನೇ ರಾಷ್ಟ್ರ ಪ್ರಶಸ್ತಿ ಪಡೆದಿತ್ತು. ಬಹುಶಃ ಹಿಟ್ ಆ್ಯಂಡ್ ರನ್ ಘಟನೆಯನ್ನು ಪರದೆಯ ಮೇಲೆ ತೋರಿಸಿದ ಮೊದಲ ಭಾರತೀಯ ಚಿತ್ರವೆಂದರೂ ತಪ್ಪಾಗಲಾರದು. ಕೇವಲ ಎರಡು ತಿಂಗಳಲ್ಲಿ ಶಂಕರನಾಗ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಅವರೊಬ್ಬ ಸೀದಾ ಸಾದಾ ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕೆ ಯಾವುದೇ ಇಮೇಜ್‌ನ ಹಂಗಿರಲಿಲ್ಲ.

ಅಂಬರೀಶ್

ನ್ಯೂ ಡೆಲ್ಲಿ ಅಂಬರೀಶ್ ಅವರ ಮತ್ತೊಂದು ಬೋಲ್ಡ್ ಸಿನಿಮಾ. ಇದರಲ್ಲಿ ಅಂಬಿ ಪಾತ್ರ ಕೂಡ ಖಡಕ್ ಆಗಿತ್ತು. ಅಂಬಿ ಓರ್ವ ಸಹಾಯಕ ಜರ್ನಲಿಸ್ಟ್ ಪಾತ್ರ ಮಾಡಿದ್ದರು. ತಾನು ಮಾಡದಂತಹ ತಪ್ಪಿಗೆ ಹುಚ್ಚನ ಪಟ್ಟ ಕಟ್ಟಿಕೊಂಡು ಜೈಲು ಸೇರುತ್ತಾರೆ. ತನ್ನ ಪ್ರೇಯಸಿ ಮೇಲೆ ಲೈಂಗಿಕ ದೌರ್ಜನ್ಯವಾಗಿದ್ರೂ ಆತನಿಗೆ ಏನೂ ಮಾಡಲಾಗಲ್ಲ. ಕೊನೆಗೆ ತಮ್ಮನ್ನ ಈ ಗತಿಗೆ ತಂದವರನ್ನು ನ್ಯೂ ಡೆಲ್ಲಿ ಪೇಪರ್ ಮೂಲಕ ಕೊಲ್ಲುತ್ತಾ ಬರ್ತಾರೆ. ಇದು ಮಲಯಾಳಂ ಸಿನಿಮಾದ ರಿಮೇಕ್ ಆಗಿತ್ತು.  

ಡಾ.ರಾಜ್‌ಕುಮಾರ್

ಶಂಕರನಾಗ್ ನಿರ್ದೇಶನದ ಕೊನೆಯ ಚಿತ್ರ ಒಂದು ಮುತ್ತಿನ ಕಥೆ. ಡಾ.ರಾಜ್‌ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರದ ಕೆಲ ದೃಶ್ಯಗಳನ್ನು ಸಾಗರಾಳದಲ್ಲಿ ಚಿತ್ರೀಕರಿಸಬೇಕಿತ್ತು. ಇದರಲ್ಲಿ ರಾಜ್‌ಕುಮಾರ್ ಓರ್ವ ಮೀನುಗಾರನ ಪಾತ್ರ ಮಾಡಿದ್ದರು. ಅಣ್ಣಾವ್ರು ಪೀಕ್‌ನಲ್ಲಿದ್ದಾಗ ಕೂಡ ಇಂತಹ ಎಕ್ಸಪೀರಿಮೆಂಟ್ ಮಾಡಿದ್ದರು.

ಅಂಬರೀಶ್

ಅಂಬಿ ಅಭಿನಯದ ಮತ್ತೊಂದು ಸೈಕಲಾಜಿಕಲ್ ಎಕ್ಸಪರಿಮೆಂಟಲ್ ಸಿನಿಮಾ ಏಳು ಸುತ್ತಿನ ಕೋಟೆ. ದುಡ್ಡಿದ್ದವರು ಬಡವರನ್ನು ತುಳಿದು ಬದುಕುತ್ತಿದ್ದಾರೆ ಎಂಬ ಧೋರಣೆ ಮೂಲಕ ತನ್ನಗಾದಂತಹ ತೊಂದರೆಯನ್ನು ಸರಿಪಡಿಸಿಕೊಳ್ಳೋದಕ್ಕೆ ಒಂದು ಕೊಲೆ ಮಾಡುತ್ತಾರೆ. ಆದರೆ, ಆತನೊಬ್ಬ ಪದವೀಧರನಾಗಿದ್ದು, ನಿರುದ್ಯೋಗಿಯಾಗಿರುತ್ತಾನೆ. ಒಬ್ಬ ವ್ಯಕ್ತಿಯನ್ನು ಕೊಂದಾಗ ಮನಸ್ಸಿನಲ್ಲಿ ಎಷ್ಟೆಲ್ಲಾ ತಳಮಳವಾಗುತ್ತೆ, ಆತ್ಮಸಾಕ್ಷಿ ಹೇಗೆ ಕಾಡುತ್ತೆ ಅನ್ನೋದನ್ನು ಈ ಚಿತ್ರದಲ್ಲಿ ಅದ್ಭುತಾಗಿ ತೋರಿಸಿದ್ದಾರೆ. ಅಂಬಿ ಅವರ ಮಸಣದ ಹೂವು, ರಂಗನಾಯಕಿ ಸಿನಿಮಾಗಳು ಕೂಡ ವಿಶಿಷ್ಟವಾಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+