X
ಹೋಮ್ ಚಲನಚಿತ್ರಗಳ ಒಳನೋಟ

ವಿನಯ್ ಗೌಡ ಟು ದೀಪಕ್ ಸುಬ್ರಮಣ್ಯ: ಪೌರಾಣಿಕ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದ ಕಿರುತೆರೆ ಕಲಾವಿದರಿವರು!

Author Sowmya Bairappa | Published: Monday, April 29, 2024, 12:05 PM [IST]

ಪ್ರತಿಯೊಬ್ಬ ಕಲಾವಿದರಿಗೂ ಡ್ರೀಲ್ ರೋಲ್ ಅಂತ ಇದ್ದೇ ಇರುತ್ತೆ. ಕೆಲವರಿಗೆ ಹಾಸ್ಯ, ಸೆಂಟಿಮೆಂಟ್, ಖಳನಾಯಕ, ಸಾಹಸ ಪ್ರಧಾನ ಹೀಗೆ ವಿಭಿನ್ನ ಬಗೆಯ ಪಾತ್ರ ಮಾಡಬೇಕೆಂಬ ಆಸೆ ಇರುತ್ತದೆ. ಇನ್ನೂ ಕೆಲವರಿಗೆ ಪೌರಾಣಿಕ ಪಾತ್ರಗಳ ಮೇಲೆ ಹೆಚ್ಚು ಒಲವಿರುತ್ತದೆ. ಕೇವಲ ಸಿನಿಮಾರಂಗ ಮಾತ್ರವಲ್ಲದೇ, ಕನ್ನಡ ಕಿರುತೆರೆಯಲ್ಲೂ ಅಂತಹ ಪಾತ್ರಗಳಿಗೆ ದೊಡ್ಡ ವೀಕ್ಷಕ ವರ್ಗವಿದೆ. ಇದಕ್ಕೆ ಉದಾಹರಣೆಯಾಗಿ ರಾಮಾಯಣ, ಮಹಾಭಾರತದಂತಹ ಸೀರಿಯಲ್‌ಗಳು ಭಾರೀ ಯಶಸ್ಸು ಗಳಿಸಿರುವುದನ್ನು ನಾವು ನೋಡಿದ್ದೇವೆ. ಇಲ್ಲಿ ಪೌರಾಣಿಕ ಪಾತ್ರಗಳಲ್ಲಿ ನಟಿಸಿ, ಜನರ ಮನಗೆದ್ದ ಕಿರುತೆರೆ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ವಿನಯ್ ಗೌಡ

ನಿಜ ಜೀವದಲ್ಲಿ ಶಿವನ ಭಕ್ತನಾಗಿರುವ ಬಿಗ್‌ಬಾಸ್‌ ಖ್ಯಾತಿಯ ವಿನಯ್ ಗೌಡ 'ಹರಹರ ಮಹಾದೇವ' ಧಾರವಾಹಿಯಲ್ಲಿ 'ಶಿವನ' ಪಾತ್ರ ಮಾಡುವ ಮೂಲಕ ಕರ್ನಾಟಕದಾದ್ಯಂತ ಜನಪ್ರಿಯರಾದರು. ಜೊತೆಗೆ ಕನ್ನಡ ಕಿರುತೆರೆಯಲ್ಲಿ 'ಶಿವ' ಅಂತಲೇ ಖ್ಯಾತಿ ಪಡೆದರು. ಇದಲ್ಲದೇ ಖ್ಯಾತ ನಿರ್ದೇಶಕ ಬುಕ್ಕಾಪಟ್ಟಣ ವಾಸು ನಿರ್ದೇಶನದ 'ಜೈ ಹನುಮಾನ್' ಧಾರಾವಾಹಿಯಲ್ಲಿ ವಿನಯ್‌ ಗೌಡ ರಾವಣನ ಪಾತ್ರ ಮಾಡಿದ್ದರು. ರಾವಣನ ಪಾತ್ರಕ್ಕೆ ಮೈ ಬೆಳೆಸಿಕೊಂಡು 120 ಕೆ.ಜಿ ತೂಕವಿದ್ದ ಇವರು, ಈಗ ಈ ಪಾತ್ರಕ್ಕೆ ಸರಿಯಾಗಿ 20 ಕೆ.ಜಿ. ಇಳಿಸಿಕೊಂಡಿದ್ದರು.  ಯಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲೂ ಕೂಡ ವಿನಯ್ 'ಶಿವನ' ಪಾತ್ರ ಮಾಡಿದ್ದರು. ಉಘೇ ಉಘೇ ಮಾದೇಶ್ವರ ಸೀರಿಯಲ್‌ಲ್ಲೂ ಕಾಣಿಸಿಕೊಂಡಿದ್ದರು.


ಕಾರ್ತಿಕ್ ಜಯರಾಂ

ಅಶ್ವಿನಿ ನಕ್ಷತ್ರ ಖ್ಯಾತಿಯ ನಟ ಕಾರ್ತಿಕ್ ಜಯರಾಮ್ ಕನ್ನಡ ಯಾವುದೇ ಪೌರಾಣಿಕ ಧಾರಾವಾಹಿಯಲ್ಲಿ ನಟಿಸದಿದ್ದರೂ ಹಿಂದಿಯಲ್ಲಿ ಮಾಡಿದ್ದಾರೆ. ಹಿಂದಿಯ ಜನಪ್ರಿಯ ಧಾರಾವಾಹಿ 'ಸಿಯಾ ಕೆ ರಾಮ್‌'ನಲ್ಲಿ ರಾವಣನ ಪಾತ್ರದಲ್ಲಿ ಅ್ಭುತವಾಗಿ ನಟಿಸಿದ್ದರು. ಇವರ ಪಾತ್ರ ಬಹಳ ಜನಪ್ರಿಯತೆ ಪಡೆದುಕೊಂಡಿತ್ತು.   

ಸಂಗೀತಾ ಶೃಂಗೇರಿ

ಬಿಗ್‌ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಕೂಡ ಕಿರುತೆರೆ ಮೂಲಕವೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು. ಇವರ ಮೊದಲ ಸೀರಿಯಲ್ 'ಹರ ಹರ ಮಹಾದೇವ'. ಈ ಧಾರಾವಾಹಿಯಲ್ಲಿ 'ಸತಿ'ಯ ಪಾತ್ರದ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ಇದಾದ ಬಳಿಕ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಆದರೆ, ಅರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟದ್ದು ಸತಿಯ ಪಾತ್ರ. 

ದೀಪಕ್  ಸುಬ್ರಮಣ್ಯ

ಹಲವರಿಗೆ ದೀಪಕ್ ಸುಬ್ರಮಣ್ಯ ಅಂದ ಕೂಡಲೇ ಯಾರು ಎಂಬುದು ಗೊತ್ತಾಗದೇ ಇರಬಹುದು. ಆದರೆ, ಶ್ರೀನಿವಾಸ ನಾಯಕ ಅಂದರೆ ಥಟ್ ಅಂತ ಗೊತ್ತಾಗುತ್ತದೆ. ಯಾಕೆಂದರೆ, ದೀಪಕ್ ಸುಬ್ರಮಣ್ಯ ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ದಾಸ ಪುರಂದರ' ಸೀರಿಯಲ್‌ನಲ್ಲಿ  ಶ್ರೀನಿವಾಸ ನಾಯಕನ ಪಾತ್ರ ಮಾಡಿದ್ದರು. ಇದು ಅವರ ಮೊದಲ ಧಾರಾವಾಹಿಯಾಗಿದ್ದು, ಹಿಟ್ ಆಗಿತ್ತು. 'ದಾಸ ಪುರಂದರ' ಧಾರಾವಾಹಿಯಲ್ಲಿ ಪುರಂದರ ದಾಸರ ಪಾತ್ರ ಮಾಡಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದ ದೀಪಕ್, ಆ ಪಾತ್ರಕ್ಕಾಗಿ ಬರೋಬ್ಬರಿ 11 ಕೆಜಿ ತೂಕ ಇಳಿಸಿಕೊಂಡಿದ್ದರಂತೆ. ಜೊತೆಗೆ ಕೇವಲ ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದರಂತೆ. ಸದ್ಯ 'ಲಕ್ಷ್ಮೀ ನಿವಾಸ' ಧಾರಾವಾಹಿಯ ಜಯಂತ್ ಪಾತ್ರದ ಮೂಲಕ ಗಮನ ಮೂಲಕ ಗಮನ ಸೆಳೆಯುತ್ತಿದ್ದಾರೆ. 


ಸುನೀಲ್

ಪೌರಾಣಿಕ ಧಾರಾವಾಹಿ 'ಶನಿ'ಯಲ್ಲಿ ಬಾಲ ಶನಿಯಾಗಿ ನಟಿಸಿದವರು ಸುನೀಲ್. ಮೂಲತಃ ಚಾಮರಾಜನಗರದವರಾದ ಈ ನಟ, ಶನಿಯ ಪಾತ್ರದಲ್ಲಿ ಸದ್ಭುತವಾಗಿ ಅಭಿನಯಿಸಿದ್ದರು. ಆ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಇದಾದ ಬಳಿಕ ಅವರು ಕೆಂಡಸಂಪಿಗೆ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದರು. 


ಪ್ರಿಯಾಂಕ ಚಿಂಚೋಳಿ

ಉತ್ತರ ಕರ್ನಾಟಕ ಮೂಲದ ನಟಿ ಪ್ರಿಯಾಂಕಾ ಚಿಂಚೋಳಿ 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಸತಿಯ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಈ ಪಾತ್ರ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ಆನಂತರದಲ್ಲಿ 'ಜೈ ಹನುಮಾನ್' ಸೀರಿಯಲ್‌ನಲ್ಲಿ ಅಂಜನಿ ಪಾತ್ರದ ಮೂಲಕ ಗಮನ ಸೆಳೆದಿದ್ದರು. 


ಅಮಿತ್ ಕಶ್ಯಪ್

ನಟ ಅಮಿತ್ ಕಶ್ಯಪ್ 'ಶ್ರೀ ವಿಷ್ಣು ದಶಾವತಾರ' ಧಾರಾವಾಹಿಯಲ್ಲಿ ವಿಷ್ಣು ಪಾತ್ರದ ಮೂಲಕ ಗಮನ ಸೆಳೆದಿದ್ದರು. ವಿಶೇಷವೆಂದರೆ, ವಿಷ್ಣುವಿನ ಹತ್ತು ಅವತಾರಗಳನ್ನು ತೆರೆಮೇಲೆ ತೋರಿಸುವ ಅವಕಾಶ ಇವರಿಗೆ ಸಿಕ್ಕಿತ್ತು. ಈ ಧಾರಾವಾಹಿ ಕನ್ನಡ ಹಾಗೂ ತಮಿಳು ಎರಡು ಭಾಷೆಯಲ್ಲಿ ನಿರ್ಮಾಣಗೊಂಡಿತ್ತು.

ಆರ್ಯನ್ ರಾಜ್‌

ನಟ ಆರ್ಯನ್ ರಾಜ್‌ 'ಉಘೇ ಉಘೇ ಮಾದೇಶ್ವರ' ಧಾರಾವಾಹಿಯಲ್ಲಿ ಮಾದೇಶ್ವರ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿದ್ದರು. ಈ ಸೀರಿಯಲ್ ಮಾತ್ರವಲ್ಲದೇ, ಹರ ಹರ ಮಹಾದೇವ  ಸೇರಿದಂತೆ ಇನ್ನೂ ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಜೊತೆಗೆ ಸಿನಿಮಾರಂಗದಲ್ಲೂ ಸಕ್ರಿಯರಾಗಿದ್ದಾರೆ. 


 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+