X
ಹೋಮ್ ಚಲನಚಿತ್ರಗಳ ಒಳನೋಟ

ಹೇಮಶ್ರೀ ಟು ಪವಿತ್ರಾ ಜಯರಾಮ್: ಚಿಕ್ಕವಯಸ್ಸಿನಲ್ಲಿ ಜೀವನದ ಪಯಣ ಮುಗಿಸಿದ ಕನ್ನಡ ಕಿರುತೆರೆ ನಟಿಯರಿವರು!

Author Sowmya Bairappa | Published: Saturday, May 18, 2024, 03:01 PM [IST]

ಸಿನಿಮಾ ನಟ-ನಟಿಯರಿಗಿಂತ ಕಿರುತೆರೆ ನಟರು ಬಹುಬೇಗ ಜನರಿಗೆ ಹತ್ತಿರವಾಗುತ್ತಾರೆ. ಹೀಗೆ ತಮ್ಮ ನಟನೆ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿರುವ ಯುವ ನಟ-ನಟಿಯರ ದಿಢೀರ್ ಮರಣ ಅಭಿಮಾನಿಗಳಿಗೆ ದೊಡ್ಡ ಆಘಾತ ಉಂಟುಮಾಡುತ್ತದೆ. ಇಲ್ಲಿ ಚಿಕ್ಕವಯಸ್ಸಿನಲ್ಲೇ ಜೀವನದ ಪಯಣ ಮುಗಿಸಿದ ಕನ್ನಡ ಕಿರುತೆರೆ ನಟಿಯರ ಪಟ್ಟಿಯನ್ನು ನೀಡಲಾಗಿದೆ.


cover image
ಜಯಶ್ರೀ ಆರಾಧ್ಯ

ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಮೂಲಕ ಕನ್ನಡ ಕಿರುತೆರೆಗೆ ಪರಿಚಿತರಾಗಿದ್ದ ಜಯಶ್ರೀ ರಾಮಯ್ಯ, 2021ರ ಜನವರಿ 25ರಂದು ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯ ಪ್ರಗತಿ ಬಡಾವಣೆಯಲ್ಲಿರುವ ಸಂಧ್ಯಾಕಿರಣ ಆಶ್ರಮದ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಈ ನಟಿ ಸಾವಿನ ದಾರಿ ಹಿಡಿದಿದ್ದರು. ಅಂದ್ಹಾಗೆ ಜಯಶ್ರೀ ರಾಮಯ್ಯ ಬಿಗ್ ಬಾಸ್ ಸೀಸನ್ 3ರಲ್ಲಿ ಇವರು ಭಾಗವಹಿಸಿದ್ದರು. 


ಹೇಮಶ್ರೀ

ನಟಿ ಹೇಮಶ್ರೀ  ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಹೆಸರುವಾಸಿಯಾಗಿದ್ದರು. ವಠಾರ ಧಾರಾವಾಹಿಯಿಂದ ನಟನೆ ಆರಂಭಿಸಿ, ನಂತರ ತುಳಸಿ, ಉತ್ತರಾಯಣ, ಮಹಾಮಾಯಿ ಸೇರಿದಂತೆ 35ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದರು. ಅಲ್ಲದೆ ಅಪ್ಪು, ವೀರ ಪರಂಪರೆ, ಸಿರಿವಂತ, ಮರ್ಮ, ಉಗ್ರಗಾಮಿ, ವರ್ಷದಂತಹ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ತೊಂದರೆ ಎದುರಿಸಿದ್ದರು. ಮದುವೆ, ಚುನಾವಣೆಯಲ್ಲಿ ಸೋಲು ಅವರನ್ನು ಭಾದಿಸಿತ್ತು ಎನ್ನಲಾಗಿದೆ. ಆಂಧ್ರ ಅನಂತಪುರದಿಂದ ಹಿಂತಿರುಗುವಾಗ ಇದ್ದಕ್ಕಿದ್ದ ಹಾಗೇ ಹೇಮಶ್ರೀ ಪ್ರಜ್ಙೆ ತಪ್ಪಿದ್ದರು. ಆಸ್ಪತ್ರೆಗೆ ಕೊಂಡೊಯ್ಯುವಾಗಲೇ ಕೊನೆಯುಸಿರೆಳೆದಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದಲ್ಲಿ ಕ್ಲೋರೋಫಾರ್ಮ್ ಇರುವುದಾಗಿ ವರದಿಯಾಗಿತ್ತು. 

ಸೌಜನ್ಯಾ

ಕನ್ನಡ ಹಾಗೂ ತೆಲುಗು ಕಿರುತೆರೆ ನಟಿ ಸೌಜನ್ಯಾ 2021ರಲ್ಲಿ ಕುಂಬಳಗೋಡಿನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ನಟಿ ಯಾವ ಮೇಲೂ ಆರೋಪ ಮಾಡಿರಲಿಲ್ಲ. ಮಾನಸಿಕವಾಗಿ ಕುಗ್ಗಿರುವುದಾಗಿ ಹೇಳಿದ್ದರು. ನನ್ನ ಜೀವನದಲ್ಲಿ ಇಂತಹದ್ದೊಂದು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಪ್ರಾಮಿಸ್ ಮಾಡಿದ್ದೆ. ಆದರೆ, ನನಗೀಗ ಯಾವುದೇ ಆಯ್ಕೆ ಇಲ್ಲ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದರು.   

ಚಂದನ

ಕನ್ನಡ ಕಿರುತೆರೆ, ಜಾಹೀರಾತು ಮತ್ತು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ನಟಿ ಚಂದನ, 2020ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ತಾವು ಪ್ರೀತಿಸಿದ ಹುಡುಗ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ನಟಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.


ಮೆಬಿನಾ ಮೈಕಲ್

ಪ್ಯಾಟೇ ಹುಡ್ಗೀರು ಸೀಸನ್ 4ರ ವಿಜೇತಯಾಗಿದ್ದ ಮೆಬಿನಾ ಮೈಕಲ್ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ನಂತರ ತಮಿಳು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದು, ಮಾಡೆಲಿಂಗ್‌ನಲ್ಲೂ ಜನಪ್ರಿಯತೆ ಗಳಿಸಿದ್ದರು. ಆದರೆ, 2020ರಲ್ಲಿ ನಡೆದ ಕಾರು ಅಪಘಾತದಲ್ಲಿ 23ರಲ್ಲಿ ನಿಧನರಾದರು. 

ಚೇತನಾ ರಾಜ್‌

ದೊರೆಸಾನಿ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಚೇತನಾ ರಾಜ್‌, 2022ರಲ್ಲಿ ತೂಕ ಕಳೆದುಕೊಳ್ಳಬೇಕು ಎಂದು ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಆದರೆ, ದುರಾದೃಷ್ಟವಶಾತ್ ಸರ್ಜರಿ ನಡೆಯುವಾಗಲೇ ಸಾವನ್ನಪ್ಪಿದ್ದರು. ಈ ನಟಿಗೆ ಕೇವಲ ೨೧ ವರ್ಷ ವಯಸ್ಸಾಗಿತ್ತು. 

ಪವಿತ್ರಾ ಜಯರಾಮ್

ಕನ್ನಡದಲ್ಲಿ ಜೋಕಾಲಿ, ನೀಲಿ, ರಾಧಾರಮಣ ಹಾಗೂ ತೆಲುಗಿನ ತ್ರಿನಯನಿ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದಿದ್ದ ನಟಿ ಪವಿತ್ರ ಜಯರಾಮ್ ಇತ್ತೀಚೆಗೆಗಷ್ಟೇ ನಿಧರಾಗಿದ್ದಾರೆ. ಮೂಲತಃ ಮಂಡ್ಯದರಾದ ಇವರು,  ಮೇ 11ರ ರಾತ್ರಿ ಕರ್ನೂಲು ಬಳಿ ನಡೆದ ರಸ್ತೆ ಅಪಘಾತದಲ್ಲಿ ನಿಧರಾದರು. 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+