X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್‌ಗೆ 'ಕ' ಲಕ್ಕಿ : ಕ ಅಕ್ಷರದಿಂದ ಬಂದು ಸೂಪರ್ ಹಿಟ್ ಆದ ಕನ್ನಡ ಸಿನಿಮಾಗಳಿವು!

Author Sowmya Bairappa | Published: Saturday, January 6, 2024, 03:32 PM [IST]

ಸ್ಯಾಂಡಲ್‌ವುಡ್‌ಗೆ 'ಕ' ಅಕ್ಷರ ತುಂಬಾ ಲಕ್ಕಿ ಅನಿಸುತ್ತೆ. ಯಾಕೆಂದರೆ, ಈ ಅಕ್ಷರವಿರುವ ಟೈಟಲ್ ಇರುವ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. 'ಕ' ಅಕ್ಷರದಿಂದ ಬಂದ ಕೆಜಿಎಫ್ ಸಿನಿಮಾ ದೇಶ-ವಿದೇಶದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇಲ್ಲಿ 'ಕ' ಅಕ್ಷರ ಸೂಪರ್ ಹಿಟ್ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಕಾಟೇರ

2023ರ ಕೊನೆಯಲ್ಲಿ ಬಿಡುಗಡೆಯಾದ ಚಾಲೆಂಜಿಂಗ್ ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರಕ್ಕೆ ಕನ್ನಡಿಗರು ಮಾತ್ರವಲ್ಲದೇ, ಪರಭಾಷಾ ಪ್ರೇಕ್ಷಕರು ಕೂಡ ಕಾಟೇರ ಸಿನಿಮಾಗೆ ಜೈಕಾರ ಹಾಕಿದ್ದಾರೆ. ಸಿನಿಮಾ ಬಿಡುಗಡೆಯಾದಲ್ಲಿಂದ ಇಲ್ಲಿವರೆಗೂ ಪ್ರತಿದಿನ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಹಿನ್ನಡೆಯಾಗಿದ್ದೇ ಇಲ್ಲ. ಅಪ್ಪಟ ಕನ್ನಡ ಸಿನಿಮಾ ಅಂತಲೇ ಅಖಾಡಕ್ಕೆ ಇಳಿದಿದ್ದ ಈ ಸಿನಿಮಾ ಸದ್ಯ ಬಾಕ್ಸಾಫೀಸ್ ದೋಚುತ್ತಿದೆ. ಚಿತ್ರದಲ್ಲಿ ನಟ ದರ್ಶನ್ ತಮ್ಮ ಪಾತ್ರದಲ್ಲಿ ಅಕ್ಷರಶಃ ಜೀವಿಸಿದ್ದು, ಕಥೆಯ ಗೇಜ್ ಅರಿತು ಹಾಗೂ ತಮ್ಮ ಇಮೇಜ್ ಪಕ್ಕಕ್ಕಿಟ್ಟು ಈ ಪಾತ್ರ ಮಾಡಿದ್ದಾರೆ.

 

ಕೆಜಿಎಫ್

2018ರಲ್ಲಿ ತೆರೆಕಂಡ ಕೆಜಿಎಫ್ ಚಾಪ್ಟರ್ 1 ಸಿನಿಮಾ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಈ ಸಿನಿಮಾದ ಮೂಲಕ ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಚಿತ್ರ ಒಟ್ಟು 250 ಕೋಟಿ ಗಳಿಸಿತ್ತು. ಕೆಜಿಎಫ್ ಚಾಪ್ಟರ್ 1ನ ಸೂಪರ್ ಹಿಟ್ ಆದಮೇಲೆ  ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು 100 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿತ್ತು. ಇದು ಕನ್ನಡ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾ. ಇದು ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಇಂಡಿಯನ್ ಬಾಕ್ಸಾಪೀಸ್ ನಡುಗುವಂತೆ ಮಾಡಿತ್ತು. ಬಾಲಿವುಡ್ ಅಲ್ಲೂ ಸಖತ್ ಸೌಂಡು ಮಾಡಿದ್ದ ಕೆಜಿಎಫ್-2 ಸಿನಿಮಾ, 1250 ಕೋಟಿ ರೂ. ಗಳಿಸುವ ಮೂಲಕ ದಾಖಲೆ ಬರೆದಿತ್ತು. ಈ ಎರಡು ಚಿತ್ರಗಳು 'ಸ್ಯಾಂಡಲ್‌ವುಡ್‌' ಘನತೆಯನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದವು. 

 

ಕಾಂತಾರ

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ನಿರೀಕ್ಷೆಗೂ ಮೀರಿ ಅದ್ಭುತ ಯಶಸ್ಸುಗಳಿಸಿರುವ 'ಕಾಂತಾರ' ಚಿತ್ರ ಬಾಕ್ಸ್‌ ಆಫೀಸ್‌ನಲ್ಲೂ ಸಖತ್ ಸದ್ದು ಮಾಡಿತ್ತು. ಕಾಂತಾರ' ಸಿನಿಮಾ ನೋಡಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲೂ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡ ಕಥೆ, ಅದನ್ನು ಪ್ರಸೆಂಟ್ ಮಾಡಿದ ರೀತಿ, ಕಲಾವಿದರ ಅಭಿನಯ, ಹಿನ್ನೆಲೆ ಸಂಗೀತ, ರಿಷಬ್ ಶೆಟ್ಟಿ ಅವರ ನಟನೆ ಎಲ್ಲವನ್ನೂ ಕೊಂಡಾಡಿದ್ದರು.  ಕಾಂತಾರ ಚಿತ್ರದಿಂದ ರಿಷಬ್ ಶೆಟ್ಟಿ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿಬಿಟ್ಟರು.

ಕುರುಕ್ಷೇತ್ರ

ಕನ್ನಡದ ಅತ್ಯಂತ ಅದ್ಧೂರಿ ಪೌರಾಣಿಕ ಚಿತ್ರವಾದ ಕುರುಕ್ಷೇತ್ರವನ್ನು ಶಾಸಕ ಮುನಿರತ್ನ ನಿರ್ಮಿಸಿದ್ದರು. ನಾಗಣ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ನಟಿಸಿದ್ದರು. ಇದು ದರ್ಶನ್ ರ 50ನೇ ಚಿತ್ರ.ರೆಬೆಲ್ ಸ್ಟಾರ್ ಅಂಬರೀಶ್ ಭೀಷ್ಮನಾಗಿ, ರವಿಚಂದ್ರನ್ ಕ‍ಷ್ಣನಾಗಿ, ಅರ್ಜುನ ಸರ್ಜಾ ಕರ್ಣನಾಗಿ, ನಿಕಿಲ್ ಕುಮಾರಸ್ವಾಮಿ ಅಭಿಮನ್ಯುವಾಗಿ ನಟಿಸಿದ್ದು, ಮೇಘನಾ ರಾಜ್ ಭಾನುಮತಿ ಪಾತ್ರದಲ್ಲಿ ಮತ್ತು ಖ್ಯಾತ ತಮಿಳು ನಟಿ ಸ್ನೇಹಾ ದ್ರೌಪದಿ ಪಾತ್ರದಲ್ಲಿ ಅಭಿನಯಿಸಿದ್ದರು. ಕುರುಕ್ಷೇತ್ರ ಚಿತ್ರವನ್ನು 50 ಕೊಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು 110 ಕೋಟಿ ಗಳಿಕೆ ಕಂಡಿತ್ತು. 

 

ಕೆಂಪೇಗೌಡ

2011ರಲ್ಲಿ ಬಿಡುಗಡೆಯಾದ ತಮಿಳಿನ `ಸಿಂಗಂ' ಚಿತ್ರದ ರಿಮೇಕ್ ಆದ 'ಕೆಂಪೇಗೌಡ' ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು.  ಈ ಸಿನಿಮಾವನ್ನು ತಾವೇ ನಿರ್ದೇಶಿಸಿದ್ದ ಕಿಚ್ಚ ಸುದೀಪ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು. 8 ಕೋಟಿ ಬಜಟ್‌ನಲ್ಲಿ ನಿರ್ಮಿಸಿದ್ದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸುಮಾರು 38 ಕೋಟಿ ಗಳಿಸಿ ಅದ್ಭುತ ಯಶಸ್ಸು ಕಂಡಿತ್ತು. ಈ ಚಿತ್ರದ ಮೂಲಕ ರವಿಶಂಕರ್ ಎಂಬ ನಟಭಯಂಕರ ಖಳನಾಯಕ ಕನ್ನಡಕ್ಕೆ ದೊರೆತರು. ಕೆಂಪೇಗೌಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಶತದಿನೋತ್ಸವ ಪೂರೈಸಿತು.

 

ಕೋಟಿಗೊಬ್ಬ-2

ಕೆ.ಎಸ್.ರವಿಕುಮಾರ್ ನಿರ್ದೇಶನದ ಕೋಟಿಗೊಬ್ಬ 2 ಸಿನಿಮಾ ತಮಿಳು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಶಿವ ಹಾಗೂ ಸತ್ಯ ಎಂಬ ಎರಡು ವಿಭಿನ್ನ ಶೇಡ್ ಇರುವ ಪಾತ್ರಗಳಲ್ಲಿ ನಟಿಸಿದ್ದರು. ಆಕ್ಷನ್ ಸನ್ನಿವೇಶಗಳಲ್ಲಿ ಸುದೀಪ್ ಸ್ಕ್ರೀನ್ ಪ್ರೆಸೆನ್ಸ್ ಸೂಪರ್ ಆಗಿತ್ತು. 2016ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.

ಕಿರಾತಕ

ರಾಕಿಂಗ್ ಸ್ಟಾರ್ ಸಿನಿ ಕರಿಯರ್‌ಗೆ ದೊಡ್ಡ ತಿರುವು ನೀಡಿದ್ದ ಸಿನಿಮಾ ಕಿರಾತಕ. ತಮಿಳು ಚಿತ್ರದ ರಿಮೇಕ್ ಆಗಿದ್ದ ಈ ಚಿತ್ರವನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ನಿರ್ದೇಶಕ ಪ್ರದೀಪ್ ರಿಮೇಕ್ ಮಾಡಿದ್ದರು. ಬಾಕ್ಸಾಫೀಸ್‌ನಲ್ಲಿ ಕಿರಾತಕ ಸಿನಿಮಾ ದೊಡ್ಡ ಹಿಟ್ ಆಗಿದ್ದಲ್ಲದೆ ಯಶ್ ಗೆ ಬಿಗ್ ಬ್ರೇಕ್ ನೀಡಿತು. ರಾಜ್ಯದ 20 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದ ಈ ಚಿತ್ರ ಕೆಲ ಚಿತ್ರಮಂದಿರಗಳಲ್ಲಿ ಸೆಂಚುರಿ ಬಾರಿಸಿತ್ತು. ಈ ಚಿತ್ರದಲ್ಲಿನ ಹಳ್ಳಿ ಹೈದನ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. 

ಕೃಷ್ಣನ್ ಲವ್ ಸ್ಟೋರಿ

ಶಶಾಂಕ್ ನಿರ್ದೇಶನದ ಕೃಷ್ಣನ್ ಲವ್ ಸ್ಟೋರಿ ಚಿತ್ರ ಕೂಡ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಅಜಯ್ ರಾವ್ ನಾಯಕನಾಗಿ ಹಾಗೂ ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದರು. ಚಿತ್ರದ ಅಭಿನಯಕ್ಕಾಗಿ ರಾಧಿಕಾ ಉದಯ ಫಿಲ್ಮ್ ,ಸುವರ್ಣ, ಫಿಲ್ಮ್ ಫೇರ್ ಮುಂತಾದ ಪ್ರಶಸ್ತಿಗಳನ್ನು ಪಡೆದರು. ಈ ಚಿತ್ರ ಯುವತಿಯೊಬ್ಬಳು ಬಡತನ, ಬದುಕು ಮತ್ತು ಪ್ರೀತಿಗಳ  ಸುಳಿಯಲ್ಲಿ ಸಿಲುಕಿ ಕೊನೆಗೆ ದುರಂತ ಅಂತ್ಯ ಕಥೆ ಹೆಣೆಯಲಾಗಿತ್ತು. 

 

ಕೆಂಡಸಂಪಿಗೆ

2015ರಲ್ಲಿ ರಿಲೀಸ್ ಆಗಿದ್ದ ದುನಿಯಾ ಸೂರಿ ನಿರ್ದೇಶನದ 'ಕೆಂಡಸಂಪಿಗೆ' ಸಿನಿಮಾ ಕಥೆ ಡ್ರಗ್ಸ್ ಮೇಲೆ ನಿಂತಿತ್ತು. ಪೊಲೀಸರು ಡ್ರಗ್ಸ್ನಿಂದ ಹೇಗೆ ಹಣ ಗಳಿಸುತ್ತಾರೆ. ಅದನ್ನು ಮುಚ್ಚಿಡುವುದು ಹೇಗೆ? ಡ್ರಗ್ಸ್ ಪ್ರಕರಣಗಳಲ್ಲಿ ಅಮಾಯಕರು ಹೇಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ ಎನ್ನುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿನ ಕೆಂಡದಂತ ಕ್ರೌರ್ಯ ಮತ್ತು ಸಂಪಿಗೆಯಂತಹ ಎಳೆ ಪ್ರೇಮಿಗಳ ಕಥೆಯನ್ನು ಹೊಂದಿದ್ದ ಈ ಸಿನಿಮಾ ಡ್ರಗ್ಸ್ ಮಾಫಿಯಾ ವಿರುದ್ಧ ಜಾಗೃತಿ ಮೂಡಿಸಿತ್ತು. ಜೊತೆಗೆ ಪ್ರೇಕ್ಷಕರ ಮನಗೆಲ್ಲವಲ್ಲಿ ಯಶಸ್ವಿಯಾಗಿತ್ತು. ಈ ಸಿನಿಮಾದ ನಟನೆಗಾಗಿ ನಟಿ ಮಾನ್ವಿತಾ ಕಾಮತ್  ಸೈಮಾ ಪ್ರಶಸ್ತಿ ಪಡೆದಿದ್ದರು. 

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ ಮೂಲಕ ದರ್ಶನ್ ಮೊದಲ ಬಾರಿಗೆ ಐತಿಹಾಸಿಕ  ಸಿನಿಮಾದಲ್ಲಿ ನಟಿಸಿದ್ದರು. ಕಿತ್ತೂರಿನ ಸ್ವಾತಂತ್ರದ ಕಿಚ್ಚನ್ನು ಈ ಸಿನಿಮಾ ಬಿತ್ತರಿಸಿತ್ತು. ಭಾರತದ ಪ್ರಥಮ ಸ್ವಾತಂತ್ಯ ಸಂಗ್ರಾಮ, ಆಂಧ್ರದಲ್ಲಿ ಸೈರಾ ನರಸಿಂಹ ರೆಡ್ಡಿ ಹೋರಾಟಕ್ಕೂ ಮೊದಲೇ ಬ್ರಿಟಿಷರ ವಿರುದ್ಧ ತೊಡೆತಟ್ಟಿದ ಸೇನಾನಿ ರಾಯಣ್ಣನ ಬದುಕನ್ನು ಚಿತ್ರ ಮನೋಘ್ನವಾಗಿ ಬಿತ್ತರಿಸಿತ್ತು. ದರ್ಶನ್ ಸಿನಿ ಕರಿಯರ್‌ನಲ್ಲಿ 30 ಕೋಟಿ ಬಂಡವಾಳ ಹೂಡಿದ ಮೊದಲ ಸಿನಿಮಾ ಇದು. ದರ್ಶನ್ ರಾಯಣ್ಣಬಾಗಿ ಮಿಂಚಿದ್ದ ಈ ಸಿನಿಮಾ ಬಾಕ್ಸಾಫೀಸಿನಲ್ಲಿ 50 ಕೋಟಿಗೂ ಅಧಿಕ ಗಳಿಸಿತ್ತು. ಈ ಮೇಲಿನ ಸಿನಿಮಾಗಳು ಮಾತ್ರವಲ್ಲದೇ 'ಕ' ಅಕ್ಷರದ ಇನ್ನು ಹಲವು ಕನ್ನಡ ಸಿನಿಮಾಗಳು ಸೂಪರ್ ಹಿಟ್ ಆಗಿವೆ.   

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+