X
ಹೋಮ್ ಚಲನಚಿತ್ರಗಳ ಒಳನೋಟ

ವೀಕ್ಷಕರ ಮನಗೆಲ್ಲುತ್ತಿದೆ 'ಭೂಮಿಗೆ ಬಂದ ಭಗವಂತ': ಈ ಧಾರಾವಾಹಿಯಲ್ಲಿ ಪ್ರೇಕ್ಷಕರ ಮನಗೆದ್ದ ಪ್ರಮುಖ ಅಂಶಗಳಿವು!

Author Sowmya Bairappa | Updated: Friday, March 24, 2023, 09:49 AM [IST]

ಮಾರ್ಚ್ 20ರಿಂದ ಜೀ ಕನ್ನಡ ವಾಹಿನಿಯಲ್ಲಿ 'ಭೂಮಿಗೆ ಬಂದ ಭಗವಂತ' ಎಂಬ ವಿಭಿನ್ನ ಕಥೆಯುಳ್ಳ ಧಾರಾವಾಹಿ ಆರಂಭವಾಗಿದೆ. ನವೀನ್ ಕೃಷ್ಣ ಹಾಗೂ ಕೃತಿಕಾ ರವೀಂದ್ರ ಸೇರಿದಂತೆ ದೊಡ್ಡ ತಾರಾಗಣವಿರುವ ಈ ಸೀರಿಯಲ್ ಆರಂಭವಾದ ಎರಡೇ ದಿನಗಳಲ್ಲಿ ವೀಕ್ಷಕರಿಗೆ ಬಹಳ ಹತ್ತಿರವಾಗುತ್ತಿದೆ. ಮಿಡಲ್ ಕ್ಲಾಸ್ ವ್ಯಕ್ತಿಯ ಜೀವನದ ಕಥೆ ಹೊಂದಿರುವ ಈ ಧಾರಾವಾಹಿ ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಪ್ರಸಾರವಾಗುತ್ತಿದೆ. ಈ ಧಾರಾವಾಹಿ ಪ್ರಮುಖ ಹೈಲೈಟ್ಸ್ ಗಳು ಇಲ್ಲಿವೆ.


cover image
1

ಕೆಲವೊಮ್ಮೆ ನಾವು ಜೀವನದಲ್ಲಿ ಎದುರಾಗುವ ಪ್ರತಿಯೊಂದು ನೋವು, ಸಮಸ್ಯೆಗಳಿಗೂ ಭಗವಂತನನ್ನು ಹೊಣೆ ಮಾಡುತ್ತೇವೆ. ದೇವರೇ ಯಾಕಪ್ಪಾ ಇಷ್ಟೊಂದು ಕಷ್ಟ ಕೊಡ್ತೀಯಾ? ಅಂತೆಲ್ಲಾ ಗೊಣಗುತ್ತಾ ಇರುತ್ತೇವೆ. ಪ್ರತಿಯೊಬ್ಬ ಮನುಷ್ಯನಲ್ಲೂ ಭಗವಂತ ಹಾಗೂ ರಾಕ್ಷಸ ಇಬ್ಬರೂ ಇರುತ್ತಾರೆ. ಸಹಾಯ ಮಾಡುವ ಗುಣವುಳ್ಳ ವ್ಯಕ್ತಿಯಲ್ಲಿ ಭಗವಂತ ಇರುತ್ತಾನೆ ಎಂಬುದನ್ನು ಈ ಧಾರಾವಾಹಿ ಮೂಲಕ ತಿಳಿಸಲಾಗುತ್ತಿದೆ. ಮಿಡಲ್ ಕ್ಲಾಸ್ ವ್ಯಕ್ತಿಯೊಬ್ಬ ಜೀವನದಲ್ಲಿ ಏನೆಲ್ಲಾ ಅನುಭವಿಸಬೇಕಾಗುತ್ತದೆ ಎಂಬುದನ್ನು ಈ ಧಾರಾವಾಹಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದ್ದು, ಇದ್ದೊಂದು ಪಕ್ಕಾ ಕೌಟುಂಬಿಕ ಕಥೆ ಹೊಂದಿರುವ ಸೀರಿಯಲ್.  

 

2

ಜೀ ಕನ್ನಡ ವಾಹಿನಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈ ಬಾರಿ ವಿಶೇಷವಾದ ಭೂಮಿಗೆ ಬಂದ ಭಗವಂತ ಎಂಬ ಕಥೆ ಹೊತ್ತು ಬಂದಿದೆ. ಇದರಲ್ಲಿ ಕನ್ನಡ ಕಿರುತೆರೆಯಲ್ಲೇ ಪ್ರಥಮ ಬಾರಿಗೆ ಭಗವಂತ ಮತ್ತು ಮನುಷ್ಯನ ಸಂಬಂಧದ ಕಥೆ ಹೇಳಲಾಗುತ್ತಿದೆ. ಈ ಸೀರಿಯಲ್ ಮಧ್ಯಮ ವರ್ಗದ ಜನರ ಬದುಕಿನಲ್ಲಿ ಎದುರಾಗುವ ಅನೇಕ ಗೊಂದಲ,  ಪ್ರಶ್ನೆಗಳಿಗೆ ಉತ್ತರ ನೀಡುವ ಕೆಲಸ ಮಾಡಲಾಗಿದೆ. 

3

'ಭೂಮಿಗೆ ಬಂದ ಭಗವಂತ' ಧಾರಾವಾಹಿಯಲ್ಲಿ ನಟ ನವೀನ್ ಕೃಷ್ಣ, ರಾಧಾಕಲ್ಯಾಣ ಸೀರಿಯಲ್ ಖ್ಯಾತಿಯ ಕೃತಿಕಾ ರವೀಂದ್ರ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ಸಾಮಗ್ ದೇವರ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಉಮೇಶ್ ಅವರು ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಅಂಕಿತ ಜಯರಾಮ್, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅನುರಾಗ್, ಎಂ.ಎನ್.ಸುರೇಶ್, ಪವನ್, ಗೌತಮಿ  ಸೇರಿದಂತೆ ಅನೇಕರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.  

4

ಮೊದಲೇ ಹೇಳಿದಂತೆ ಇದ್ದೊಂದು ಮಧ್ಯಮ ವರ್ಗದ ಕಥೆ ಹೊಂದಿರುವ ಸೀರಿಯಲ್ ಆಗಿದ್ದು,  ಕೃತಿಕಾ ಒಂದೊಂದು ರೂಪಾಯಿಗೂ ಲೆಕ್ಕಾಚಾರ ಹಾಕುವ ಮಡದಿಯಾಗಿ ಕಾಣಿಸಿಕೊಂಡಿದ್ದಾರೆ. ಈಕೆಯ ಜೊತೆಗೆ ಶಿವಪ್ರಸಾದ್ (ನವೀನ್ ಕೃಷ್ಣ) ದಿನ ಏಗುತ್ತಿರುತ್ತಾನೆ. ಹೆಂಡತಿ ಎಲ್ಲದಕ್ಕೂ ಪಕ್ಕದ ಮನೆಯ ವಿಠ್ಠಲನನ್ನು ಉದಾಹರಣೆ ಕೊಡುತ್ತಾ ಶಿವಪ್ರಸಾದ್‌ನನ್ನು ಹಂಗಿಸುತ್ತಿರುತ್ತಾಳೆ. ಇದರಿಂದ ಬೇಸರವಾದರೂ ಕೂಡ ಶಿವ ಪ್ರಸಾದ್ ತನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮೌನವಾಗಿಯೇ ಇರುತ್ತಾನೆ. ಹೆಂಡತಿಗೆ ಏನೂ ಹೇಳುವುದಿಲ್ಲ. ಅಪ್ಪನ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಮಗಳು ಮತ್ತು ಪರಿಸ್ಥಿತಿ ಅರ್ಥವಾಗದ ಮಗ. ಮಗನ ಕಷ್ಟಕ್ಕೆ ಸ್ಪಂದಿಸಲಾಗದೆ ಒದ್ದಾಡುವ ಶಿವಪ್ರಸಾದ್ ತಂದೆ.  

 

5

ಶಿವಪ್ರಸಾದ್ ಇನ್ನರ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆದರೆ, ಇನ್ನರ್‌ವೇರ್ ಮಾರಾಟವಾಗುತ್ತಿಲ್ಲ ಎಂದು ಸದಾ ತನ್ನ ಮ್ಯಾನೇಜರ್ ನಿಂದ ಬೈಯಿಸಿಕೊಳ್ಳುತ್ತಿರುತ್ತಾನೆ. ಬೇರೆ ಕೆಲಸಗಾರರು ಮ್ಯಾನೇಜರ್ ಅನ್ನು ಹೋಗಳಿ ಸಂಬಳ ಪಡೆದರೆ, ಶಿವಪ್ರಸಾದ್ ಇದ್ದುದ್ದನ್ನು ಇದ್ದ ಹಾಗೆ ಹೇಳಿ ಬೈಯಿಸಿಕೊಳ್ಳುತ್ತಿರುತ್ತಾನೆ. ಸದ್ಯ ಇನ್ನರ್‌ವೇರ್ ಕ್ವಾಲಿಟಿ ಚೆನ್ನಾಗಿಲ್ಲ, ಹೀಗಾಗಿ ಮಾರಾಟವಾಗುತ್ತಿಲ್ಲ ಎಂದು ಕಂಪನಿಯ ಬಾಸ್‌ಗೆ ಮೇಲ್ ಮಾಡಿದ್ದು, ಇದನ್ನು ತಿಳಿದ ಮ್ಯಾನೇಜರ್ ಶಿವಪ್ರಸಾದ್  ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾನೆ. 

 

6

ಸದ್ಯ ಶಿವಪ್ರಸಾದ್ ನಿತ್ಯ ಮರದ ಬಳಿ ಬೈಯುವುದನ್ನು ಕೇಳುತ್ತಿದ್ದ ಭಗವಂತ ಭೂಮಿಗೆ ಇಳಿದು ಬಂದಿದ್ದಾನೆ. ಬೇರೆ ಯಾರಿಗೂ ಕಾಣಿಸಿಕೊಳ್ಳದ ಭಗವಂತ, ಶಿವಪ್ರಸಾದ್ಗೆ ಮಾತ್ರ ಕಾಣಿಸಿದ್ದಾನೆ. ಶಂಕರ ಮಹಾದೇವ ದೇವರು ಎಂಬುದನ್ನು ತಿಳಿಯದ ಶಿವಪ್ರಸಾದ್, ಯಾರೋ ವ್ಯಕ್ತಿ ಎಂದು ಭಾವಿಸಿದ್ದಾನೆ. ರಾತ್ರಿಯೆಲ್ಲಾ ಶಂಕರ ಮಹಾದೇವ ಶಿವಪ್ರಸಾದ್‌ನನ್ನು ಕಾಡಿದ್ದಾನೆ. ಇದರಿಂದ ಶಿವಪ್ರಸಾದ್‌ಗೆ ಸ್ವಲ್ಪ ಗಾಬರಿಯೂ ಆಗಿದೆ. ಮುಂದೆ ಏನು ಮಾಡುತ್ತಾನೆ ಎಂಬುದನ್ನು ಕಾಡು ನೋಡಬೇಕು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+