ಚಲನಚಿತ್ರಗಳ ಒಳನೋಟ


Click it and Unblock the Notifications
ನಾಗರಹಾವು ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಸಂಪತ್ ಕುಮಾರ್ ಮುಂದೆ ವಿಷ್ಣುವರ್ಧನ್ ಹೆಸರಿನಿಂದ ಕನ್ನಡ ಸಿನಿ ಪ್ರಿಯರ ಹೃದಯ ಸಾಮ್ರಾಜ್ಯದಲ್ಲಿ ಸಾಹಸಸಿಂಹನಾಗಿ ಶಾಶ್ವತವಾಗಿ ನೆಲೆಸಿದರು. ಇನ್ನೂರು ಚಿತ್ರಗಳ ಮೂಲಕ ಕನ್ನಡ ಕಲಾದೇವಿಯ ಸೇವೆಗೈದ ವಿಷ್ಣು ಆಪ್ತರಕ್ಷಕ ಚಿತ್ರದ ಮೂಲಕ `ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮವನೇ' ಎಂದು ಅಂತಿಮ ವಿದಾಯ ಹೇಳಿದರು. ಕನ್ನಡ ಚಿತ್ರರಂಗದ ಮೊದಲ ಆ್ಯಂಗ್ರಿ ಯಂಗ್ ಮ್ಯಾನ್ ವಿಷ್ಣುವರ್ಧನ್ ರವರು ಭಗ್ನ ಪ್ರೇಮಿಯಾಗಿ, ರೋಷಭರಿತ ಖೈದಿಯಾಗಿ, ಖಡಕ್ ಪೋಲಿಸ್ ಅಧಿಕಾರಿಯಾಗಿ ಹೀಗೆ ಹತ್ತು ಹಲವು ಪಾತ್ರಗಳ ಮೂಲಕ ಅಜರಾಮರವಾಗಿದ್ದಾರೆ. ಸುಮಾರು 20 ಚಿತ್ರಗಳಲ್ಲಿ ವಿಷ್ಣು ದ್ವಿಪಾತ್ರಗಳಲ್ಲಿ ನಟಿಸಿದ್ದು ಭಾರತ ಚಿತ್ರರಂಗದಲ್ಲಿ ಒಂದು ದಾಖಲೆಯೇ ಸರಿ. ವಿಷ್ಣು ದ್ವಿಪಾತ್ರಗಳಲ್ಲಿ ನಟಿಸಿದ 20 ಚಿತ್ರಗಳನ್ನು ಪಟ್ಟಿಯನ್ನು ಮುಂದೆ ಪ್ರಕಟ ಪಡಿಸಲಾಗುವುದು. ಹಲವಾರು ಹಿಟ್ ಚಿತ್ರಗಳನ್ನು ನೀಡಿದ ಸಾಹಸಸಿಂಹನ ಟಾಪ್ 20 ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ..
ಮುಂಗೋಪಿ ಯುವಕ ಮತ್ತು ಅವನನ್ನು ಮಗನಂತೇ ಪ್ರೀತಿಸಿ ಸದಾ ಕಾಪಾಡುವ ಮೇಷ್ಟ್ರ ಪ್ರೀತಿಯ ಬಾಂಧವ್ಯದ ಕಥೆಯನ್ನು ಹೊಂದಿರುವ ಈ ಚಿತ್ರ ಚಿತ್ರದುರ್ಗದ ಕೋಟೆಯಲ್ಲಿ ತೆರೆದುಕೊಂಡಿತು. ವಿಷ್ಣುವರ್ಧನ್ ನಾಯಕರಾಗಿ ನಟಿಸಿದ ಮೊದಲ ಚಿತ್ರ.
ಚಿತ್ರದಲ್ಲಿ ವಿಷ್ಣುವರ್ಧನ್ ಬಾಲ್ಯದಲ್ಲಿ ತನ್ನ ಕುಟುಂಬಕ್ಕೆ ಆದ ಅನ್ಯಾಯದ ಸೇಡಿನ ಜೊತೆಗೆ ತನ್ನ ಪೋಲಿಸ್ ಕರ್ತವ್ಯವನ್ನು ನಿಭಾಯಿಸುವ ಪಾತ್ರವನ್ನು ನಿಭಾಯಿಸಿದ್ದರು. ಈ ಚಿತ್ರದ ಹೆಸರೇ ಮುಂದೆ ವಿಷ್ಣು ಬಿರುದಾಯಿತು.
ತನ್ನ ಹತ್ತಿರ ಕೆಲಸ ಮಾಡುವ ವೈದ್ಯಕೀಯ ವಿಧ್ಯಾರ್ಥಿಯೋರ್ವಳನ್ನು ಪ್ರೀತಿಸುವ ವೈದ್ಯ ಅವಳಿಗೆ ತನ್ನ ಪ್ರೇಮ ನಿವೇದನೆ ಮಾಡುವ ಹೊತ್ತಿಗೆ ಅವಳ ಮದುವೆ ನಿಶ್ಚಯವಾಗುತ್ತದೆ .ಅವಳ ಕೊರಗಿನಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಹರೀಶ್ ಕೊನೆಗೆ ಅವಳ ಮಗುವನ್ನು ಈ ಭೂಮಿಗೆ ಬರಮಾಡಿ ಕೊನೆಯುಸಿರೆಳೆಯುತ್ತಾನೆ. ಕನ್ನಡದ ಹಾಗೂ ವಿಷ್ಣುವರ್ಧನ್ ಸಿನಿಜೀವನದ ಅತ್ತ್ಯುತ್ತಮ ಚಿತ್ರಗಳಲ್ಲಿ ಇದೊಂದು.
ತಂದೆಯ ವಿರುದ್ಧವಾಗಿ ಛಾಯಾಗ್ರಾಹಕನನ್ನು ಮದುವೆಯಾಗುವ ಶ್ರೀಮಂತನ ಮಗಳು ನಂತರ ಭಿನ್ನಾಭಿಪ್ರಾಯಗಳಿಂದ ಪತಿಯಿಂದ ದೂರವಾಗುತ್ತಾಳೆ.ನಂತರ ಅವರ ದಾಂಪತ್ಯ ಮತ್ತೆ ಹೇಗೆ ದಾರಿಗೆ ಬರುತ್ತದೆ ಎನ್ನುವುದು ಚಿತ್ರದ ಮುಂದಿನ ಕತೆ.
ಒಬ್ಬ ಸಂಗೀತ ಸಾಧಕನ ಅದ್ಭುತ ಪಯಣವನ್ನು ಮತ್ತು ಅಂತರಂಗದ ತೊಳಲಾಟವನ್ನು ತೆರದಿಟ್ಟಿತು. ಇದೊಂದು ಕನ್ನಡದ ಒಂದು ಅದ್ಭುತ ಕ್ಲಾಸಿಕಲ್ ಚಿತ್ರ. ಸಂಗೀತ ಸಾಧನೆ ಮತ್ತು ತ್ರಿಕೋನ ಪ್ರೇಮಕತೆಯನ್ನು ಚಿತ್ರ ಮನೋಘ್ನವಾಗಿ ಬಿಂಬಿಸಿತು.
ಹಿಂದಿಯ ಹಾಥಿ ಮೇರಿ ಸಾಥಿ ಚಿತ್ರದ ಸ್ಪೂರ್ತಿಯಿಂದ ನಿರ್ಮಾಣದ ಈ ಚಿತ್ರದಲ್ಲಿ ವಿಷ್ಣು ಜಯಸಿಂಹನಾಗಿ ಕಾಡಿನ ರಕ್ಷಣೆಗೆ ಕಟಿಬದ್ಧನಾಗಿರುವ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದರು.
ಕೊಡಗಿನ ವೀರ ಸೈನಿಕ ಅಚ್ಚಪ್ಪನ ಸಾಹಸ ಶೌರ್ಯ ಮತ್ತು ಅವನ ಸುಂದರ ದಾಂಪತ್ಯದೊಂದಿಗೆ ಯುದ್ಧ ಹೇಗೆ ಅವನ ಕುಟುಂಬವನ್ನು ನಾಶ ಮಾಡುತ್ತದೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ. ಯುಧ್ಧದ ಇನ್ನೊಂದು ಮುಖವನ್ನು ತೆರೆದಿಟ್ಟ ಈ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆಯಿತು.
ಈ ಚಿತ್ರದಲ್ಲಿ ವಿಷ್ಣು ಲಾಯರ್ ಮತ್ತು ಪೋಲಿಸ್ ಪಾತ್ರದಲ್ಲಿ ಮಿಂಚಿದರು. ಈ ಚಿತ್ರದ ನಟನೆಗಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.ನಾಯಕಿಯರಾಗಿ ಲಕ್ಷ್ಮಿ ಮತ್ತು ಭವ್ಯ ನಟಿಸಿದರು.
ಚಿತ್ರದಲ್ಲಿ ವಿಷ್ಣು ಅಪ್ಪಾಜಿ ಮತ್ತು ಶಕ್ತಿ ಎಂಬ ದ್ವಿಪಾತ್ರದಲ್ಲಿ ಮಿಂಚಿದ್ದರು. ಚಿತ್ರದ ಕತೆಯನ್ನು ತೆಲುಗಿನ ನಿರ್ದೇಶಕ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ ಬರೆದಿದ್ದರು.
ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಒಬ್ಬ ದೇಶಪ್ರೇಮಿ ಗಾಂಧಿವಾದಿ ನಾಯಕನ ಜೀವನವನ್ನು ಚಿತ್ರ ಹೇಳುತ್ತದೆ. ಸಂಬಂಧಗಳಿಗಿಂತ ದೇಶಪ್ರೇಮವೇ ಹೆಚ್ಚೆಂದು ಉಗ್ರಗ್ರಾಮಿಯಾದ ತನ್ನ ಮಗನನ್ನೇ ಕೊಲ್ಲುವ ಅಪ್ಟಟ ದೇಶಾಭಿಮಾನಿಯ ಕಥೆ ಈ ಚಿತ್ರದಲ್ಲಿದೆ.
ಕನ್ನಡದ ಅತ್ಯುತ್ತಮ ಕೌಟುಂಬಿಕ ಚಿತ್ರಗಳಲ್ಲೊಂದು. ತನ್ನ ತಮ್ಮಂದಿರಗಾಗಿ ತನ್ನ ವೈಯಕ್ತಿಕ ಜೀವನವನ್ನೇ ತ್ಯಾಗ ಮಾಡುವ ಅಣ್ಣ ಮತ್ತು ಅವನ ತ್ಯಾಗದಿಂದ ರೂಪುಗೊಳ್ಳುವ ತಮ್ಮಿಂದರ ಬದುಕು ಚಿತ್ರದಲ್ಲಿ ಉತ್ತಮವಾಗಿ ಮೂಡಿಬಂದಿದೆ.
ಕೋಪದ ಭರದಲ್ಲಿ ತನ್ನ ಊರಿನ ಪ್ರೀತಿ ಪಾತ್ರ ಜನ ಮಾಡುವ ಅವಿವೇಕದ ಅನಾಹುತದ ಸೇಡನ್ನು ತನ್ನ ಮೇಲೆ ತೀರಿಸಿಕೊಳ್ಳಲು ಬರುವವರ ವಿರುದ್ಧವೂ ಶಾಂತನಾಗಿ ವರ್ತಿಸುವ ಸೂರಪ್ಪನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಯಿತು.
ತನ್ನ ತಂದೆಗೆ ವಿರುದ್ಧವಾಗಿ ನೆಡೆಯುವ ಮಗ ಮತ್ತು ತಂದೆಯ ಕೋಪವನ್ನೇ ಆಶೀರ್ವಾದ ಎಂದು ಭಾವಿಸಿ ಮೇಲಕ್ಕೆ ಬೆಳೆಯುವ ಮಗನ ಕಥೆಯನ್ನು ಚಿತ್ರ ಹೊಂದಿತ್ತು. ವಿಷ್ಣು ಮೊದಲ ಬಾರಿಗೆ ಈ ಚಿತ್ರದಲ್ಲಿ ದೊಡ್ಡದಾದ ಮೀಸೆಯನ್ನು ಬಿಟ್ಟಿದ್ದರು.
ತೆರೆಯಾಚೆಗಿನ ಅಂಬಿ-ವಿಷ್ಣು ಸ್ನೇಹಕ್ಕೆ ಒಂದು ರೂಪು ಕೊಟ್ಟ ಸರೆ ಹಿಡಿದ ಚಿತ್ರ ದಿಗ್ಗಜರು. ಇಬ್ಬರು ಬಾಲ್ಯ ಸ್ನೇಹಿತರು ಹೇಗೆ ಜೀವನದುದ್ದಕ್ಕು ತಮ್ಮ ಸ್ನೇಹವನ್ನು ಕಾಪಾಡಿಕೊಳ್ಳುತ್ತಾರೆ ಎಂಬುದನ್ನು ಚಿತ್ರ ತೆರೆದಿಟ್ಟಿತು.
ಒಬ್ಬ ಸಮಾನ್ಯ ಯುವಕ ತನ್ನ ಸ್ನೇಹಿತನ ಸಾವಿನಿಂದ ಬದಲಾಗಿ ಮುಂಬೈ ಭೂಗತ ಲೋಕದ ದೊರೆಯಾಗುವ ಕಥೆಯನ್ನು ಚಿತ್ರ ಹೊಂದಿತ್ತು. ವಿಷ್ಣುವರ್ಧನ್ ಮುಂಬೈ ಗ್ಯಾಂಗ್ ಸ್ಟರ್ ಜಯಸಿಂಹ ಮತ್ತು ಮುಗ್ಧ ಅಟೋ ಡ್ರೈವರ್ ನಂಜುಂಡನ ಪಾತ್ರದಲ್ಲಿ ಮಿಂಚಿದ್ದರು.
2002 ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ವಿಷ್ಣುವರ್ಧನ್ ತ್ರಿಪಾತ್ರದಲ್ಲಿ ನಟಿಸಿದ್ದರು. ನ್ಯಾಯಕ್ಕಾಗಿ ಮತ್ತು ಜನರ ಒಳಿತಿಗಾಗಿ ಕಟಿಬದ್ಧವಾಗಿರುವ ಒಂದು ಕುಟುಂಬದ ಮೂರು ತಲೆಮಾರುಗಳ ಕತೆಯನ್ನು ಚಿತ್ರ ಹೇಳಿತು.
ವಿಷ್ಣುವರ್ಧನ್, ಸೌಂದರ್ಯ, ರಮೇಶ್ ಮತ್ತು ಪ್ರೇಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರ ಕನ್ನಡದ ಅತ್ಯುತ್ತಮ ಹಾರರ್ ಚಿತ್ರಗಳಲ್ಲೊಂದು. ಮನೋವೈದ್ಯನ ಪಾತ್ರದಲ್ಲಿ ವಿಷ್ಣುರ ಮನೋಘ್ನ ಅಭಿನಯ ಮತ್ತು ಸೌಂದರ್ಯರ ರೌದ್ರಾಭಿನಯ ಪ್ರೇಕಕರನ್ನು ಮಂತ್ರಮುಗ್ದಗೊಳಿಸುತ್ತದೆ.
ತನ್ನ ಆದರ್ಶಗಳೇ ತನ್ನ ಜೀವನವೆಂದು ಬದುಕುತ್ತಿದ್ದ ಒಬ್ಬ ಸಾಮಾನ್ಯ ಗೃಹಸ್ಥ ತನ್ನ ಮಕ್ಕಳಿಗಾಗಿ ತನ್ನ ಆದರ್ಶಗಳನ್ನು ಬಲಿ ಕೊಡಬೇಕಾಗಿ ಬಂದಾಗ ಉಂಟಾಗುವ ತುಮುಲಗಳನ್ನು ಚಿತ್ರ ತೋರಿಸಿತು.
ವೃದ್ಯಾಪ್ಯದಲ್ಲಿ ಮಕ್ಕಳ ತಾತ್ಸಾರಕ್ಕೆ ಒಳಗಾಗುವ ದಂಪತಿಗಳು ಮಕ್ಕಳಿಂದ ದೂರಾಗಿ ಕೊನೆಗೆ ತಮ್ಮದೇ ಸ್ವಂತ ಪ್ರಪಂಚ ಕಟ್ಟುವ ಕಥೆಯನ್ನು ಚಿತ್ರ ಹೊಂದಿತ್ತು.ಈ ಚಿತ್ರದಲ್ಲಿ ನಟ ದರ್ಶನ್ ವಿಷ್ಣುವರ್ಧನ್ ರ ಸಾಕು ಪುತ್ರನ ಪಾತ್ರದಲ್ಲಿ ನಟಿಸಿದ್ದರು.
ವಿಷ್ಣುವರ್ಧನ್ ರವರ ಕೊನೆಯ ಮತ್ತು 200 ನೇ ಚಿತ್ರ. ಈ ಚಿತ್ರ ಬಿಡುಗಡೆಯಾಗುವ ಮುಂಚೆನೇ ವಿಷ್ಣು ಇಹಲೋಕ ತ್ಯಜಿಸಿದರು. ಮೂರು ವಿಭಿನ್ನ ಅವತಾರಗಳಲ್ಲಿ ವಿಷ್ಣುವರ್ಧನ್ ರವರ ನಟನೆಯನ್ನು ನೋಡಬಹುದು.


Click it and Unblock the Notifications