X
ಹೋಮ್ ಚಲನಚಿತ್ರಗಳ ಒಳನೋಟ

ಕಾಟೇರ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗಲು ಕಾರಣವಾದ ಪ್ರಮುಖ ಅಂಶಗಳಿವು!

Author Sowmya Bairappa | Published: Thursday, January 4, 2024, 04:10 PM [IST]

2023ರಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ. ಇನ್ನೇನು ವರ್ಷ ಮುಗಿಯುವ ಕೊನೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಸಿನಿಮಾ ರಿಲೀಸ್ ಆಗಿತ್ತು. ಅಪ್ಪಟ ಕನ್ನಡ ಸಿನಿಮಾ ಅಂತಲೇ ಅಖಾಡಕ್ಕೆ ಇಳಿದಿದ್ದ ಈ ಸಿನಿಮಾ ಸದ್ಯ ಬಾಕ್ಸಾಫೀಸ್ ದೋಚುತ್ತಿದೆ. ಇದರಿಂದ 2023ರ ಕೊನೆಯಲ್ಲಿ ರಿಲೀಸ್ ಆಗಿದ್ದ 'ಕಾಟೇರ'ದಿಂದ ಕನ್ನಡ ಚಿತ್ರರಂಗಕ್ಕೆ ಬಿಗ್ ಸಕ್ಸಸ್ ಸಿಕ್ಕಂತಾಗಿದೆ. ಕಾಟೇರ ಚಿತ್ರ ನೂರು ಕೋಟಿ ಗಳಿಕೆ ಸನಿಹದಲ್ಲಿದ್ದು, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಇಲ್ಲಿ ಕಾಟೇರ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗಲು ಕಾರಣವಾದ ಅಂಶಗಳನ್ನು ಇಲ್ಲಿ ನೀಡಲಾಗಿದೆ.


cover image
ಚಾಲೆಂಜಿಂಗ್ ಸ್ಟಾರ್ ದರ್ಶನ್

ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ದರ್ಶನ್ ಇಷ್ಟು ಎತ್ತರಕ್ಕೆ ಬೆಳೆದು ನಿಂತರೂ ಕೂಡ ತಮ್ಮ ಆರಂಭಿಕ ಹಾಗೂ ಕಷ್ಟದ ದಿನಗಳನ್ನು ಮರೆತಿಲ್ಲ. ಕಷ್ಟ ಅಂತ ಮನೆ ಬಾಗಿಲಿಗೆ ಬಂದವರನ್ನು ದರ್ಶನ್ ಎಂದಿಗೂ ಹಾಗೆಯೇ ಕಳಿಸುವುದಿಲ್ಲ. ಚಿತ್ರರಂಗದವರೇ ಆಗಿರಲಿ, ಅಭಿಮಾನಿಗಳೇ ಆಗಿರಲಿ ಅಥವಾ ಸಾಮಾನ್ಯ ಜನರೇ ಆಗಿರಲಿ ದರ್ಶನ್ ಎಲ್ಲರಿಗೂ ಆರ್ಥಿಕ ಸಹಾಯ ಮಾಡಿದ್ದಾರೆ. ದರ್ಶನ್ ಈ ಗುಣವನ್ನು ಮೆಚ್ಚಿಕೊಂಡವರು ಅನೇಕ ಜನರಿದ್ದಾರೆ. ಹೀಗಾಗಿ, ಇವರ ಅಭಿಮಾನಿ ಬಳಗ ದೊಡ್ಡದಿದೆ. ಕಾಟೇರ ಸಿನಿಮಾ ಗೆಲುವಿಗೆ ಅವರ ಅಭಿಮಾನಿಗಳ ಕೊಡುಗೆಯೂ ಸಾಕಷ್ಟಿದೆ. 

ಎರಡು ಶೇಡ್

ಈ ಸಿನಿಮಾದಲ್ಲಿ ದರ್ಶನ್ 'ಕಾಟೇರ'ನಾಗಿ ಎರಡು ಶೇಡ್‌ಗಳಲ್ಲಿ ಅಬ್ಬರಿಸಿದ್ದಾರೆ. ನಟ ದರ್ಶನ್ ತಮ್ಮ ಪಾತ್ರದಲ್ಲಿ ಅಕ್ಷರಶಃ ಜೀವಿಸಿದ್ದು, ಕಥೆಯ ಗೇಜ್ ಅರಿತು ಹಾಗೂ ತಮ್ಮ ಇಮೇಜ್ ಪಕ್ಕಕ್ಕಿಟ್ಟು ಈ ಪಾತ್ರ ಮಾಡಿದ್ದಾರೆ. ಸಿನಿಮಾದಲ್ಲಿ ದರ್ಶನ್ ಒನ್‌ಮ್ಯಾನ್ ಶೋನಂತೆ ಮಿಂಚಿದ್ದಾರೆ. ಅವರು ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ನಟಿಸಿರುವುದು ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ.

 

ನಿರ್ದೇಶನ ಮತ್ತು ವಾಸ್ತವ ವಿಷಯ

ಕಾಟೇರ ಸಿನಿಮಾದ ಕಥೆ ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿದೆ. ಪ್ರಸ್ತುತ ಚರ್ಚೆಯಲ್ಲಿರುವ ಹಲವು ವಿಚಾರಗಳ ಬಗ್ಗೆ ಸಿನಿಮಾ ಮಾತನಾಡುತ್ತದೆ. ಇದು ಸಿನಿಮಾ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಜೊತೆಗೆ ತರುಣ್ ಸುದೀರ್ ನಿರ್ದೇಶನ ಕೂಡ ತುಂಬಾ ಚೆನ್ನಾಗಿದೆ. ಚಿತ್ರದಲ್ಲಿ ದರ್ಶನ್ ಅವರಿಗೆ ಒಂದು ರೀತಿಯ ಜೊಸ ಇಮೇಜ್ ತಂದುಕೊಟ್ಟಿದ್ದಾರೆ. 

ಡೈಲಾಗ್‌ಗಳು ಮತ್ತು ಫೈಟ್

ಕನ್ನಡ ಚಿತ್ರರಂಗದ ಖ್ಯಾತ ಸಂಭಾಷಣೆಕಾರ ಮಾಸ್ತಿ ಬರೆದಿರುವ ಖಡಕ್‌ ಡೈಲಾಗ್‌ಗಳು ಕಾಟೇರ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದಿವೆ. ದರ್ಶನ್ ಸಿನಿಮಾಗಳು ಆಕ್ಷನ್ ವಿಚಾರಕ್ಕೆ ಹೆಚ್ಚು ಗಮನ ಸೆಳೆಯುತ್ತವೆ. ಕಾಟೇರ ಸಿನಿಮಾದಲ್ಲಿ ರೆಗ್ಯುಲರ್ ಶೈಲಿಯ ಫೈಟ್‌ಗಳಿಗಿಂತ ವಿಭಿನ್ನವಾದ ಸಾಹಸ ಸಂಯೋಜನೆ ಮಾಡಲಾಗಿದೆ ಇದು ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ.

 

ಸಾಮಾಜಿಕ ಸಂದೇಶ

ಕಾಟೇರ ಸಿನಿಮಾದಲ್ಲಿ 50  ವರ್ಷಗಳ ಹಿಂದೆ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮೇಲು ಕೀಳು ಎನ್ನುವ ಭೇದ-ಭಾವ ಎಷ್ಟರಮಟ್ಟಿಗಿತ್ತು ಎನ್ನುವುದನ್ನು ತೋರಿಸಲಾಗಿದೆ. ಪ್ರಮುಖವಾಗಿ ರೈತರ ಸಮಸ್ಯೆ ಬಗ್ಗೆ ಹೇಳಲಾಗಿದೆ.  'ಉಳುವವನೆ ಭೂಮಿಯ ಒಡೆಯ ಕಾಯ್ದೆ' ದೇಶದಲ್ಲಿ ಎಂತಹ ಬದಲಾವಣೆಗಳನ್ನು ತಂದಿತ್ತು. ತಮ್ಮ ಕಾಲಡಿ ಇರುವವರು ಈ ಕಾಯ್ದೆಯಿಂದ ಎದ್ದು ನಿಲ್ತಾರೆ ಎಂದಾಗ, ಅದನ್ನೆಲ್ಲಾ ಸಹಿಸದವರು ಏನೆಲ್ಲಾ ಮಾಡಿರಬಹುದು? ಎನ್ನುವುದನ್ನು ಕಾಟೇರ ಸಿನಿಮಾದಲ್ಲಿ ಹೇಳಲಾಗಿದೆ. ಇದರ ಜೊತೆಗೆ ಮನುಷ್ಯ ಸಂಬಂಧಗಳ ಬಗ್ಗೆಯೂ ಚಿತ್ರ ಮಾತಾಡುತ್ತದೆ.  

 

ಕ್ಯಾಮರಾ ವರ್ಕ್

ಕಾಟೇರ ಸಿನಿಮಾದ ಪ್ಲಸ್‌ ಪಾಯಿಂಟ್‌ಗಳಲ್ಲಿ ಸುಧಾಕರ್ ಎಸ್‌ ರಾಜ್ ಅವರ ಛಾಯಾಗ್ರಹಣದ ಬಗ್ಗೆ ಹೇಳಲೇಬೇಕು.  ಅವರು 'ದಿ ಬೆಸ್ಟ್' ಕ್ಯಾಮರಾ ವರ್ಕ್ ಮಾಡಿದ್ದಾರೆ.  ಕಥೆ ಸೂಕ್ತವಾಗುವ ಸೆಟ್‌ಗಳನ್ನು ಹಾಕಿ, ಲೋಕೇಶನ್‌ಗಳನ್ನು ಹುಡುಕಿ ಸಿನಿಮಾ ಚಿತ್ರೀಕರಣ ಮಾಡಲಾಗಿದ್ದು, ಇದು ಸಿನಿರಸಿಕರ ಮನಗೆದ್ದಿದೆ.  

ಬಾಯಿಮಾತಿನ ಪ್ರಚಾರ

ಕಾಟೇರ ಸಿನಿಮಾ ಬಿಡುಗಡೆಯಾದ ಮೇಲೆ ಹೆಚ್ಚು ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಬಾಯಿಮಾತಿನ ಪ್ರಚಾರ. ಕಾಟೇರ ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಮೆಚ್ಚಿಕೊಂಡಿದ್ದು, ಬೇರೆಯವರಿಗೂ ಈ ಸಿನಿಮಾ ನೋಡುವಂತೆ ಸಲಹೆ ನೀಡುತ್ತಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+