X
ಹೋಮ್ ಚಲನಚಿತ್ರಗಳ ಒಳನೋಟ

ಓಂ ಟು ಹೆಡ್‌ಬುಷ್: ನೈಜ ಘಟನೆ ಆಧರಿಸಿ ತೆರೆಗೆ ಬಂದ 14 ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

Author Sowmya Bairappa | Published: Saturday, July 22, 2023, 03:10 PM [IST]

ನೈಜ ಘಟನೆ ಆಧರಿತ ಸಿನಿಮಾ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ನಿರ್ದೇಶಕರು ನಿಜ ಜೀವನದ ಕಥೆಯಾಧಾರಿತ ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಆದಾಗ್ಯೂ ಕೂಡ ಸ್ಯಾಂಡಲ್‌ವುಡ್‌ನ ಅನೇಕ ನಿರ್ದೇಶಕರು ನೈಜ ಘಟನೆಯಾಧಾರಿತ ಸಿನಿಮಾ ಮಾಡಿ ಸಕ್ಸಸ್ ಆಗಿದ್ದಾರೆ. ಇಲ್ಲಿ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ತೆರೆಗೆ ಬಂದ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಓಂ

ರೌಡಿಸಂ ಮತ್ತು ಪ್ರೇಮ ಕಥೆಯ ಸಂಘರ್ಷವನ್ನು ಹೀಗೂ ಹೇಳಬಹುದು ಎಂದು ಭಾರತೀಯ ಚಿತ್ರರಂಗಕ್ಕೆ ತೋರಿಸಿದ ಸಿನಿಮಾ 'ಓಂ'. ಈ ಸಿನಿಮಾವನ್ನು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಮಾಡಿದ್ದರು. ನಿರ್ದೇಶಕ ಉಪೇಂದ್ರ ಕೆಲವು ಪತ್ರಿಕೆಗಳಲ್ಲಿ ಬಂದ ನೈಜ ಘಟನೆಗಳ ಜೊತೆಗೆ ನಿಜವಾದ ರೌಡಿಗಳ ಕಥೆಯನ್ನು ಬೆಳ್ಳಿ ತೆರೆ ಮೇಲೆ ತೋರಿಸುವ ಮೂಲಕ ರೌಡಿಸಂ, ಶಾಶ್ವತ ಅಲ್ಲ ಎಂಬ ಜಾಗೃತಿಯನ್ನು ಮೂಡಿಸಿದ್ದರು. ಜೇಡರಹಳ್ಳಿ ಕೃಷ್ಣ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ತನ್ವೀರ್ ಮುಂತಾದ ನಿಜ ಜೀವನದ ರೌಡಿಗಳು 'ಓಂ' ಚಿತ್ರದಲ್ಲಿ ನಟಿಸಿದ್ದರು. ಇಂತಹ ಪ್ರಯೋಗ ಮಾಡಿದ ಮೊದಲ ಸಿನಿಮಾ ಇದು. ಕಪಾಲಿ ಚಿತ್ರಮಂದಿರದಲ್ಲಿಯೇ ಇದು 30 ಬಾರಿ ಬಿಡುಗಡೆಯಾಗಿತ್ತು. ಸಿನಿಮಾವೊಂದು ಒಂದೇ ಚಿತ್ರಮಂದಿರದಲ್ಲಿ ಇಷ್ಟು ಬಾರಿ ಬಿಡುಗಡೆಯಾದ ಬೇರೆ ನಿದರ್ಶನವಿಲ್ಲ.  

ರಿಂಗ್ ರೋಡ್ ಶುಭ

2015ರಲ್ಲಿ ತೆರೆಕಂಡ ಕ್ರೈಂ ಥ್ರಿಲ್ಲರ್ ಸಿನಿಮಾ ರಿಂಗ್ ರೋಡ್. ಪ್ರಿಯ ಬೆಳ್ಳಿಯಪ್ಪ ನಿರ್ದೇಶನದ ಈ ಚಿತ್ರ ೨೦೦೩ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾಫ್ಟವೇರ್ ಇಂಜಿನಿಯರ್ ಗಿರೀಶ್ ಹತ್ಯೆಯನ್ನು ಆಧಾರಿಸಿತ್ತು. ಈ ಚಿತ್ರದಲ್ಲಿ ದುನಿಯಾ ವಿಜಯ್, ನಿಖಿತಾ ತುಕ್ರಾಲ್, ಅವಿನಾಶ್, ಮಾಳವಿಕಾ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 

ಆ ದಿನಗಳು

ಆ ದಿನಗಳು 1986ರಲ್ಲಿ ಬೆಂಗಳೂರಿನಲ್ಲಿ ನಡೆದ ಭೂಗತ ಜಗತ್ತಿನ ರಿಯಲ್ ಸ್ಟೋರಿ ಸಿನಿಮಾ. ಅಂದಿನ ರೌಡಿಸಂ ದಿನಗಳಲ್ಲಿ ಗುರುತಿಸಿಕೊಂಡಿದ್ದ, ಬರಹಗಾರ ಅಗ್ನಿ ಶ್ರೀಧರ್ ಬರೆದಿರುವ ನೈಜ ಕಥೆಯನ್ನು ನಿರ್ದೇಶಕ ಕೆ.ಎಂ. ಚೈತನ್ಯ ನಿರ್ದೇಶನ ಮಾಡಿದ್ದರು. 'ಆ ದಿನಗಳು' ಸಿನಿಮಾ ಮೂಲಕ ಚೇತನ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ಕಾಲದಲ್ಲಿ ಭೂಗತ ಜಗತ್ತಿನಲ್ಲಿ ಹಿಡಿತ ಸಾಧಿಸಿದ್ದ ಕೊತ್ವಾಲ್​​​ ರಾಮಚಂದ್ರ ಎಂಬ ರೌಡಿಯ ಕಥೆಯನ್ನು 'ಆ ದಿನಗಳು' ಸಿನಿಮಾ ಒಳಗೊಂಡಿತ್ತು. 2007ರಲ್ಲಿ ತೆರೆಕಂಡ ಈ ಸಿನಿಮಾ ನೈಜ ಕಥೆ ಆಧರಿಸಿದ್ದ ಕಾರಣಕ್ಕೆ ಸಕ್ಸಸ್ ಕಂಡು ನಟ ಚೇತನ್​​​ಗೆ ಒಳ್ಳೆ ಹೆಸರು ತಂದು ಕೊಟ್ಟಿತ್ತು. 

 

ಮೈನಾ

ಚೇತನ್ ಕುಮಾರ್ ಮತ್ತು ನಿತ್ಯ ಮೆನನ್ ನಟನೆಯ 'ಮೈನಾ' ಕನ್ನಡದ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ. ಇದೊಂದು ನಿಜ ಜೀವನ ಕಥೆ ಆಧಾರಿತ ಚಿತ್ರವಾಗಿದ್ದು, ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದರು. ಚಿತ್ರದ ನಾಯಕ ಸತ್ಯ (ಚೇತನ್) ಮತ್ತು ಮೈನಾ (ನಿತ್ಯಾ ಮೆನನ್)ನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಮೈನಾ ಅಂಗವಿಕಲೆ ಆಗಿರುತ್ತಾಳೆ. ಹೀಗಿದ್ದರೂ ಸತ್ಯ ಆಕೆಯನ್ನು ಮದುವೆಯಾಗುತ್ತಾನೆ. ಬಳಿಕ ಆಕೆಗೆ ಚಿಕಿತ್ಸೆ ಕೊಡಿಸಲು ವೈದ್ಯರ ಬಳಿ ಕರೆದೊಯ್ಯದಾಗ ವೈದ್ಯ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಾನೆ. ಇದನ್ನು ತಿಳಿದ ಸತ್ಯ ಆತನನ್ನ ಕೊಲ್ಲುತ್ತಾನೆ. ರಾಜಕಾರಣಿ ಸಹೋದರನನ್ನು ಹತ್ಯೆ ಮಾಡಿದ್ದಕ್ಕಾಗಿ ಸಿನಿಮಾದ ಕೊನೆಯಲ್ಲಿ ಸತ್ಯ ಹಾಗೂ ಮೈನಾ ಇಬ್ಬರು ಸಾವನ್ನಪ್ಪುತ್ತಾರೆ. ಇದೊಂದು ದುರಂತ ಅಂತ್ಯವಿರುವ ಸಿನಿಮಾ. 

ಡೆಡ್ಲಿ ಸೋಮ

2005ರಲ್ಲಿ ತೆರೆಕಂಡ 'ಡೆಡ್ಲಿ ಸೋಮ' ಸಿನಿಮಾ ಉತ್ತಮ ಯಶಸ್ಸು ಕಂಡಿತ್ತು. ಬರಹಗಾರ ರವಿ ಬೆಳಗೆರೆ ಈ ಕಥೆಯನ್ನು ಬರೆದರೆ, ರವಿ ಶ್ರೀವತ್ಸ ಚಿತ್ರಕ್ಕೆ ಸಾರಥಿಯಾಗಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ನಟ ಆದಿತ್ಯ  ಡೆಡ್ಲಿ ಸೋಮನ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾ ಸಕ್ಸಸ್ ಆದ ಕಾರಣ  ನಿರ್ದೇಶಕ ರವಿ ಶ್ರೀವತ್ಸ 'ಡೆಡ್ಲಿ ಸೋಮ ಭಾಗ 2' ಕೂಡ ಮಾಡಿದ್ದರು.  ಒಂದು ಸಭ್ಯ ಕುಟುಂಬದ ಯುವಕ ಅನಿವಾರ್ಯ ಕಾರಣಗಳಿಂದ ಹೇಗೆ ಭೂಗತ ಲೋಕಕ್ಕೆ ಹೆಜ್ಜೆಯಿಡುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿತ್ತು. 

 

2008ರಲ್ಲಿ ಬಿಡುಗಡೆಯಾದ ಸ್ಲಂ ಬಾಲ ಸಿನಿಮಾವನ್ನು ಸುಮನಾ ಕಿತ್ತೂರು ನಿರ್ದೇಶನ ಮಾಡಿದ್ದರು. ಅಂಡರ್ ವರ್ಲ್ಡ್ ಕಥೆ ಆಧರಿಸಿದ ಕಥೆಯನ್ನು ಮಹಿಳಾ ನಿರ್ದೇಶಕಿ ಸಿನಿಮಾವಾಗಿ ಹೊರತಂದಿದ್ದು ವಿಶೇಷವಾಗಿತ್ತು. ಬೆಂಗಳೂರು ಭೂಗತ ಜಗತ್ತಿನ ಕುಖ್ಯಾತ ರೌಡಿಗಳನ್ನು ಗಡಿಪಾರು ಮಾಡುವ ಕಥೆ ಆಧರಿಸಿರುವ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಗಡಿಪಾರು ಆಗುವ ರೌಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೂಡಾ ನೈಜ ಘಟನೆ ಆಧರಿಸಿದ್ದರಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

 

ಯು ಟರ್ನ್

ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಸಂದೇಶ ಸಾರುವಂತಹ ಸಿನಿಮಾ ಯು ಟರ್ನ್. ಈ ಚಿತ್ರವನ್ನು ಪವನ್ ಕುಮಾರ್ ನಿರ್ದೇಶಿದ್ದರು. ಶ್ರದ್ಧಾ ಶ್ರೀನಾಥ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಚಿತ್ರ ಸೂಪರ್ ಹಿಟ್ ಆಗಿತ್ತು. ಶ್ರದ್ಧಾ  ಈ ಚಿತ್ರದಲ್ಲಿನ ಅಭಿನಯಕ್ಕಾಗಿ `ಫಿಲ್ಮ್ ಫೇರ್' ಮತ್ತು `ಸೈಮಾ' ಪ್ರಶಸ್ತಿ ಪಡೆದಿದ್ದರು. 

 

ಕಿಲ್ಲಿಂಗ್ ವೀರಪ್ಪನ್

ಕಿಲ್ಲಿಂಗ್ ವೀರಪ್ಪನ್ ಕೂಡ ನೈಜ ಘಟನೆ ಆಧಾರಿತ ಸಿನಿಮಾ. ಇದು ವೀರಪ್ಪನ್ ಜೀವನದ ಕುರಿತಾಗಿತ್ತು. ಚಿತ್ರದಲ್ಲಿ ಶಿವರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದರು. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಸಿನಿಮಾ ಕತೆಯನ್ನು ವೀರಪ್ಪನ್ ಹತ್ಯೆಗೆ ಮಾತ್ರ ಸಿಮೀತ ಮಾಡಿರಲಿಲ್ಲ. ಎಲ್.ಟಿ.ಟಿ.ಇ, ಕಂಚಿಸ್ವಾಮಿ, ರಜನೀಕಾಂತ್ , ಪೊಲೀಸ್ ಸಿಸ್ಟಂ ಒಳಗೇ ನಡೆಯುವ ಗೊತ್ತಿರದ ವಿಚಾರಗಳು. ಸಂದೇಶ ನೀಡುವವರ ರಹಸ್ಯ ಕೊಲೆ ಎಲ್ಲವನ್ನೂ ತೋರಿಸಿದ್ದರು.  ಒಟ್ಟಿನಲ್ಲಿ ನಿಜವಾಗಿಯೂ ವೀರಪ್ಪನ್ ಆರ್ಭಟ ಹೇಗಿತ್ತು ಎಂದು ತೋರಿಸಲಾಗಿತ್ತು. 

 

ಪೂಜಾ ಗಾಂಧಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ಸಿನಿಮಾ ದಂಡುಪಾಳ್ಯ. ಈ ಸಿನಿಮಾದಲ್ಲಿನ ನಟನೆಗಾಗಿ ಪೂಜಾ ಗಾಂಧಿ ಅವರಿಗೆ ಅತ್ಯುತ್ತಮ ಕನ್ನಡ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಅತ್ಯುತ್ತಮ ನಟಿಗಾಗಿ ಸುವರ್ಣ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿತ್ತು. ದಂಡುಪಾಳ್ಯ ಸಿನಿಮಾವನ್ನು ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದರು.  ದಂಡುಪಾಳ್ಯ ಸಿನಿಮಾವನ್ನು ನೈಜ ಘಟನೆ ಆಧರಿಸಿ ಮಾಡಲಾಗಿತ್ತು.  

 

ಎದೆಗಾರಿಕೆ

2008ರಲ್ಲಿ ಬಿಡುಗಡೆಯಾದ ಎದೆಗಾರಿಕೆ  ಸಿನಿಮಾವನ್ನು ನಿರ್ದೇಶಕಿ ಸುಮನಾ ಕಿತ್ತೂರು ನಿರ್ದೇಶಿಸಿದ್ದರು.  ಈ ಚಿತ್ರದಲ್ಲಿ ಆದಿತ್ಯ ಮುಂಬೈ ಶಾರ್ಪ್ ಶೂಟರ್ ಆಗಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು. ಇದು ಬರಹಗಾರ ಅಗ್ನಿ ಶ್ರೀಧರ್​​​​​​​​​​ ಬರೆದ ಕಥೆಯಾದ್ದರಿಂದ ಇದು ಕೂಡ ಯಶಸ್ವಿಯಾಗಿತ್ತು. ಈ ಸಿನಿಮಾ ಮುಂಬೈ ಅಂಡರ್ ವರ್ಲ್ಡ  ಕಥೆ ಹೊಂದಿತ್ತು. 

ಎದೆಗಾರಿಕೆ

2008ರಲ್ಲಿ ಬಿಡುಗಡೆಯಾದ ಎದೆಗಾರಿಕೆ  ಸಿನಿಮಾವನ್ನು ನಿರ್ದೇಶಕಿ ಸುಮನಾ ಕಿತ್ತೂರು ನಿರ್ದೇಶಿಸಿದ್ದರು.  ಈ ಚಿತ್ರದಲ್ಲಿ ಆದಿತ್ಯ ಮುಂಬೈ ಶಾರ್ಪ್ ಶೂಟರ್ ಆಗಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು. ಇದು ಬರಹಗಾರ ಅಗ್ನಿ ಶ್ರೀಧರ್​​​​​​​​​​ ಬರೆದ ಕಥೆಯಾದ್ದರಿಂದ ಇದು ಕೂಡ ಯಶಸ್ವಿಯಾಗಿತ್ತು. ಈ ಸಿನಿಮಾ ಮುಂಬೈ ಅಂಡರ್ ವರ್ಲ್ಡ  ಕಥೆ ಹೊಂದಿತ್ತು. 

ಭೀಮಾ ತೀರದಲ್ಲಿ

ಕುಖ್ಯಾತ ಭೀಮಾ ತೀರದ ಹಂತಕ ಚಂದಪ್ಪ ಹರಿಜನ್ ಜೀವನದ ಮೇಲೆ ಆಧಾರಿತ ಈ ಚಿತ್ರದಲ್ಲಿ ದುನಿಯಾ ವಿಜಿ ಚಂದಪ್ಪನ ಪಾತ್ರದಲ್ಲಿ ನಟಿಸಿದ್ದರು. ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಭೀಮಾ ತೀರದಲ್ಲಿ ಚಿತ್ರದಲ್ಲಿ  ದುನಿಯಾ ವಿಜಿ ಈವರೆಗೆ ಮಾಡದೇ ಇರುವ ಮತ್ತು ಮಾಡಲೇಬೇಕಿದ್ದ ಪಾತ್ರವನ್ನು ಮಾಡಿದ್ದರು. ಹಲವು ವಿವಾದಗಳ ಜೊತೆ ತೆರೆಕಂಡ ಈ ಚಿತ್ರ ಬಾಕ್ಸಾಫೀಸಿನಲ್ಲಿ ಯಶಸ್ಸು ಕಂಡಿತ್ತು. 

 

ಎ.ಎಂ.ಆರ್. ರಮೇಶ್ ನಿರ್ದೇಶನದ ಅಟ್ಟಹಾಸ ಸಿನಿಮಾದಲ್ಲಿ ಕಿಶೋರ್, ಅರ್ಜುನ್ ಸರ್ಜಾ, ವಿಜಯಲಕ್ಷ್ಮಿ, ರವಿ ಕಾಳೆ, ಸುರೇಶ್ ಒಬೆರಾಯ್, ಶಿಖಾ, ಸುಲಕ್ಷಣಾ, ಸಿಪಿ ಯೋಗೇಶ್ವರ್ ಮುಂತಾದವರು ನಟಿಸಿದ್ದರು. ಇದು ಕಾಡುಗಳ್ಳ, ನರಹಂತಕ ವೀರಪ್ಪನ್ ಜೀವನ ಚರಿತ್ರೆ ಕುರಿತ ಸಿನಿಮಾವಾಗಿತ್ತು. ಚಿತ್ರದಲ್ಲಿ ಕಿಶೋರ್ ವಿರಪ್ಪನ್ ಪಾತ್ರ ನಿರ್ವಹಿಸಿದ್ದರು. ಅಟ್ಟಹಾಸ ಸಿನಿಮಾದಲ್ಲಿ ವೀರಪ್ಪನ್ ಜೀವನ ಚರಿತ್ರೆ ಮಾತ್ರವಲ್ಲ, ಅವನ ಮತ್ತೊಂದು ಮುಖವನ್ನೂ ತೋರಿಸಲಾಗಿತ್ತು. ಗನ್ ಹಿಡಿದವನು ಕಡೆಗೆ ಅದೇ ಗನ್‌ಗೆ ತಲೆಕೊಡಬೇಕಾಗುತ್ತದೆ ಎಂಬ ಸಂದೇಶವನ್ನು ಚಿತ್ರ ಸಾರುತ್ತದೆ.

ಹೆಡ್ ಬುಷ್

ಹೆಡ್ ಬುಷ್ ಈ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಬೆಂಗಳೂರಿನ ಭೂಗತ ದೊರೆ ಡಾನ್ `ಎಂ.ಪಿ.ಜಯರಾಜ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ 70- 80ರ ದಶಕದ ಬೆಂಗಳೂರು ಭೂಗತಲೋಕದ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಹೇಳುವ ಪ್ರಯತ್ನ ಮಾಡಲಾಗಿದೆ. ಅಗ್ನಿ ಶ್ರೀಧರ್ ಬರೆದ 'ಮೈ ಡೇಸ್ ಇನ್ ಅಂಡರ್​ವರ್ಲ್ಡ್' ಪುಸ್ತಕ ಆಧರಿಸಿ 'ಹೆಡ್‌ಬುಷ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇಷ್ಟು ದಿನ ಬೆಂಗಳೂರು ಭೂಗತಲೋಕದ ಬಗ್ಗೆ ಅವರಿವರು ಹೇಳಿದ್ದನ್ನು ಕೇಳಿದ್ದವರಿಗೆ ಅದನ್ನು ದೃಶ್ಯರೂಪದಲ್ಲಿ ನೋಡುವ ಅವಕಾಶ ಸಿಗಲಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+