X
ಹೋಮ್ ಚಲನಚಿತ್ರಗಳ ಒಳನೋಟ

ದ್ವಂದ್ವ ಟು ಒಲವೇ ಮಂದಾರ 2: ಈ ವಾರ ತೆರೆಗೆ ಬರುತ್ತಿರುವ ಏಳು ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

Author Sowmya Bairappa | Published: Thursday, September 21, 2023, 07:47 PM [IST]

ಸೆಪ್ಟಂಬರ್ 22ರಂದು ಬರೋಬ್ಬರಿ ಏಳು ಸಿನಿಮಾಗಳು ತೆರೆಗೆ ಬರುತ್ತಿವೆ. ಎಲ್ಲವೂ ಕೂಡ ಹೊಸಬರ ಸಿನಿಮಾವಾಗಿದ್ದು, ಉತ್ತಮ ಕಥೆಯೊಂದಿಗೆ ಪ್ರೇಕ್ಷಕರ ಮನಗೆಲ್ಲಲು ಸಜ್ಜಾಗಿವೆ. ಆ ಸಿನಿಮಾಗಳು ಯಾವವು ಹಾಗೂ ಕಥೆ ಏನು ಎಂಬು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.


cover image
ದ್ವಂದ್ವ

ದ್ವಂದ್ವ ಸಿನಿಮಾವನ್ನು ಭರತ್ ಲಕ್ಷ್ಮಿಕಾಂತ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಉಗ್ರಂ ಖ್ಯಾತಿಯ ತಿಲಕ್ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಆಸಿಯಾ ಫಿರ್ದೋಸೆ, ಬಾಲ ಕಲಾವಿದೆ ಹಾಸ್ಯ, ನಯನಾ ಮತ್ತು ಶೋಭರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಸೂರ್ಯಾಸ್ತ ಮತ್ತು ಸೂರ್ಯೋದಯದ ನಡುವಿನ 12 ಗಂಟೆಗಳ ಕಾಲ ನಡೆಯುವ ಕಥೆಯಾಗಿದೆ.

 

ಒಲವೇ ಮಂದಾರ 2

ಒಲವೇ ಮಂದಾರ 2 ಸಿನಿಮಾವನ್ನು ಎಸ್ ಆರ್ ಪಾಟೀಲ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸನತ್ ನಾಯಕನಾಗಿ ನಟಿಸಿದ್ದು, ಪ್ರಜ್ನಾ ಭಟ್, ಅನುಪ ಸತೀಶ್ ನಾಯಕಿಯರಾಗಿ ನಟಿಸಿದ್ದಾರೆ. ಉಳಿದಂತೆ ಹಿರಿಯ ನಟಿ ಭವ್ಯಾ, ಡಿಂಗ್ರಿ ನಾಗರಾಜ್‌, ಕಾಮಿಡಿ ಕಿಲಾಡಿಗಳು ಖ್ಯಾತಿಯ ಮನು, ಶಿವಾನಂದ್  ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಹೇಮಂತ್ ಸಂಗೀತ ನೀಡಿದ್ದು, ಮಹೇಶ್ ಮರಗೋಳ ನಿರ್ಮಿಸಿದ್ದಾರೆ. ಇದೊಂದು ಪರಿಶುದ್ಧ ಪ್ರೇಮಕಥೆ ಹೊಂದಿರುವ ಸಿನಿಮಾವಾಗಿದ್ದು, ಒಬ್ಬರಬೊಬ್ಬರು ಅರಿತು ಪ್ರೀತಿ ಮಾಡುವುದು ಎಂದಿಗೂ ತಪ್ಪಲ್ಲ ಎಂಬ ಸಂದೇಶ ಇದೆ. 

ಹನಿಮೂನ್ ಇನ್ ಬ್ಯಾಂಕಾಂಕ್

ಹನಿಮೂನ್ ಇನ್ ಬ್ಯಾಂಕಾಂಕ್ ಸಿನಿಮಾವನ್ನು ಸಂಜಯ್ ಬಿ ಎಸ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಉದಯ್ ಸೂರ್ಯ, ಅನು ಗೌಡ, ಅನನ್ಯ ದೇ, ಪ್ರೇಕ್ಷಾ ರಾವ್, ವಿಜಯ್ ಚೆಂಡೂರ್ ಮುಂತಾದವರು ನಟಿಸಿದ್ದಾರೆ. ಹೊಸದಾಗಿ ಮದುವೆಯಾದ ದಂಪತಿ ಹನಿಮೂನ್‌ಗೆ ಎಂದು ದೂರದ ಬ್ಯಾಕಾಂಕ್‌ಗೆ ಹೋದಾಗ ಅಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಕಥಾವಸ್ತು. 

 

ದಿಗ್ವಿಜಯ

ದಿಗ್ವಿಜಯ ಸಿನಿಮಾವನ್ನು ದುರ್ಗಾ ಪಿ.ಎಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅನ್ನದಾತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವರ ಆತ್ಮಹತ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ದಿಗ್ವಿಜಯ ಸಿನಿಮಾದಲ್ಲಿ ಯುವ ಪ್ರತಿಭೆ ಜಯಪ್ರಭು ಲಿಂಗಾಯತ್ ಹಾಗೂ ಸ್ನೇಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ೩೦ ಜನ ನಿಜವಾದ ರೈತರು ಕಾಣಿಸಿಕೊಂಡಿದ್ದಾರೆ. ಜೊತೆಗೆ  ಸುಚೇಂದ್ರ ಪ್ರಸಾದ್, ದುಬೈ ರಫೀಕ್, ಪಟ್ರೆ ನಾಗರಾಜ್‌, ಕಿಲ್ಲರ್ ವೆಂಕಟೇಶ್, ಶಿವಕುಮಾರ್ ಆರಾಧ್ಯ, ರಾಹುಲ್, ಆಕಾಶ್ ಎಂ ಪಿ ಮುಂತಾದವರು ಫೋಷಕ ನಟಿಸಿದ್ದಾರೆ. ಚಿತ್ರವನ್ನು ಜೆ.ಪಿ ಎಂಟರ್‌ಟೈನ್‌ಮೆಂಟ್ ಅಡಿ ಜಯಪ್ರಭು ಆರ್ ಲಿಂಗಾಯತ್, ಅರುಣ್ ಸುಕದರ್  ಹಾಗೂ ಹರೀಶ್ ಆರ್ ಸಿ ನಿರ್ಮಿಸಿದ್ದಾರೆ. ಸಿನಿಮಾಗೆ ಹರ್ಷ ಸಂಗೀತ ನೀಡಿದ್ದು, ವೀನಸ್ ಮೂರ್ತಿಯವರ ಛಾಯಾಗ್ರಹಣವಿದೆ. 

ಪರಿಶುದ್ಧಂ

ಪರಿಶುದ್ಧಂ ಸಿನಿಮಾವನ್ನು ಆರೋನ್ ಕಾರ್ತಿನ್ ವೆಂಕಟೇಶ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸ್ಪರ್ಶ ರೇಖಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಭಾರ್ಗವ್, ದಿಶಾ ಪೂವಯ್ಯ, ಅರ್ಚನಾ ಪಿಳ್ಳೇಗೌಡ, ನೀತು ಶೆಟ್ಟಿ, ರಮೇಶ್ ಪಂಡಿತ್, ವಿಕ್ಟರಿ ವಾಸು, ಯತೀರಾಜ್ ಮುಂತಾದವರು ಫೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮದುವೆ ಸಂಬಂಧ ಪರಿಶುದ್ಧವಾದದ್ದು, ಪತಿ ಪತ್ನಿಯ ನಡುವೆ ಮೂರನೇ ವ್ಯಕ್ಯ ಆಗಮಿಸುತ್ತಿದ್ದಂತೆ ಏನೆಲ್ಲಾ ಘಟಿಸುತ್ತದೆ ಎಂಬುದನ್ನು ಸಿನಿಮಾದಲ್ಲಿನ ಪ್ರಮುಖ ಕಥೆ. 

ಬನ್‌ ಟೀ

ಬನ್‌ ಟೀ ಸಿನಿಮಾವನ್ನು ಉದಯ್ ಕುಮಾರ್ ಪಿ ಎಸ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಉಮೇಶ್ ಸಕ್ಕರೆನಾಡ್, ಶ್ರೀದೇವಿ ಜೆ ಇ, ಮೌರ್ಯ ಕುಮರ್ ಗೌಡ ಮುಂತಾದವರು ನಟಿಸಿದ್ದಾರೆ. ನಿರ್ದೇಶಕ ಉದಯ್ ತಮ್ಮ ಸ್ನೇಹಿತನ ಜೀವನದಲ್ಲಿ ನಡೆದ ಕಥೆಯನ್ನೇ ಸಿನಿಮಾ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರ ಹೇಗೆ ಬದಲಾಗಿದೆ ಎಂಬುದನ್ನು ತೋರಿಸಲಾಗಿದೆ. ಕೇಶವ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. 

 

ಆರಾರಿರಾರೋ

ಆರಾರಿರಾರೋ ಸಿನಿಮಾವನ್ನು ಸಂದೀಪ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಸನ್ಮ ವಿ ಶೆಟ್ಟಿ, ನಿರೀಕ್ಷಾ ಶೆಟ್ಟಿ, ಪಿಂಕಿ ರಾಣಿ, ಜೀವ ಸಿಮನ್ ಮುಂತಾದವರು ನಟಿಸಿದ್ದಾರೆ. ಇದೊಂದು ಹೊಸಬರ ಸಿನಿಮಾ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+