X
ಹೋಮ್ ಚಲನಚಿತ್ರಗಳ ಒಳನೋಟ

ನೀವು ಮಿಸ್ ಮಾಡದೇ ಕೇಳಲೇಬೇಕಾದ ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳಿವು!

Author Sowmya Bairappa | Updated: Tuesday, April 30, 2024, 02:02 PM [IST]

ವರನಟ ಡಾ.ರಾಜ್‌ಕುಮಾರ್ ಕನ್ನಡ ಸಿನಿಲೋಕಕ್ಕೆ ಭದ್ರ ಬುನಾದಿ ಹಾಕಿದ ಆದ್ಯರಲ್ಲಿ ಪ್ರಮುಖರು. ಡಾ.ರಾಜ್ ನಟರಷ್ಟೇ ಅಲ್ಲ, ಅವರ ಕಂಠ ಕೂಡ ಅದ್ಭುತವಾಗಿತ್ತು. ಸಿನಿ ಇತಿಹಾಸದಲ್ಲಿ ತಮ್ಮ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದವರು. ಅಣ್ಣಾವ್ರ ಜೀವನ ಚೈತ್ರ ಚಿತ್ರದ `ನಾದಮಯ' ಗೀತೆಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಡಾ.ರಾಜ್‌ ಅವರು ಕನ್ನಡಿಗರಿಗೆ ಸದಾಕಾಲ ಸ್ಫೂರ್ತಿ ನೀಡುವಂತಹ ನೂರಾರು ಹಾಡುಗಳನ್ನು ನೀಡಿದ್ದಾರೆ. ಈ ಪೈಕಿ ಬೆಸ್ಟ್ ಎನಿಸಿಕೊಂಡಿರುವ ಹಾಡುಗಳನ್ನು ಇಲ್ಲಿ ನೀಡಲಾಗಿದೆ.


cover image
Video Thumbnail

'ಯಾರೇ ಕೂಗಾಡಲಿ ಊರೇ ಹೋರಾಡಲಿ'

ಸಂಪತ್ತಿಗೆ ಸವಾಲ್ ಸಿನಿಮಾದಲ್ಲಿ ಡಾ.ರಾಜ್ ಎಮ್ಮೆಯ ಮೇಲೆ ಕುಳಿತು ಹಾಡುತ್ತಾ ಸಾಗುವ  'ಯಾರೇ ಕೂಗಾಡಲಿ ಊರೇ ಹೋರಾಡಲಿ' ಕನ್ನಡ ಸಿನಿಮಾರಂಗದಲ್ಲಿ ಐಕಾನಿಕ್ ಹಾಡು. 'ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೆ ಮುಂದೆ ಸಾಗುವೆ' ಎಂದು ಎಮ್ಮೆಯ ನೆಮ್ಮದಿಯ ಸೂತ್ರವನ್ನು ಮನುಷ್ಯನಿಗೆ ಅನ್ವಯಿಸಿ, ಪ್ರಾಣಿಗಳ ಗುಣಗಳಿಂದ ಮನುಷ್ಯರು ಕಲಿಯಬೇಕಾದ್ದನ್ನು ಉದಾಹರಿಸಿ ಹಾಡಿದ್ದಾರೆ. 

Video Thumbnail

'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು'

ಜೀವನ ಚೈತ್ರ ಸಿನಿಮಾದಲ್ಲಿ ಹಳದಿ ಪೇಟ ಕಟ್ಟಿಕೊಂಡು ಜಟಕಾ ಬಂಡಿ ಹೊಡೆಯುತ್ತಾ ಡಾ.ರಾಜ್‌ಕುಮಾರ್ ಸಾಗುವ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡು ಐತಿಹಾಸಿಕ. ಕನ್ನಡ ಹೋರಾಟಕ್ಕೆ ಸದಾ ಸ್ಫೂರ್ತಿ ತುಂಬ ಹಾಡಿದು. ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ..ಕನ್ನಡ..ಕಸ್ತೂರಿ ಕನ್ನಡ ಹಾಡು ಇಂದೂ ಮುಂದೂ ಎಂದೆಂದು ಕನ್ನಡ ನಾಡಿನ ಆತ್ಮಗೀತೆಯಂತೆ ಇರುತ್ತದೆ. 





Video Thumbnail

'ನಗುತಾ ನಗುತಾ ಬಾಳು ನೀನು ನೂರು ವರುಷ'

ಪರಶುರಾಮ ಸಿನಿಮಾದ 'ನಗುತಾ ನಗುತಾ ಬಾಳು ನೀನು ನೂರು ವರುಷ' ಹಾಡು ಕನ್ನಡದ ಎರಡು ಬೆಲೆಬಾಳುವ ಮುತ್ತುಗಳನ್ನು ಒಳಗೊಂಡ ಮಾಣಿಕ್ಯ. ಈ ಹಾಡಿನಲ್ಲಿ ಅಣ್ಣಾವ್ರ ಬಾಲನಟ ಪುನೀತ್‌ ರಾಜ್‌ಕುಮಾರ್‌ಗೆ ಹುಟ್ಟುಹಬ್ಬದ ಕೇಕ್ ತಿನ್ನಿಸುತ್ತಾ ಹಾಡುತ್ತಾರೆ. ದೇವರು ತಂದ ಸೃಷ್ಟಿಯ ಅಂದ ಎಲ್ಲರು ನಗಲೆಂದೇ ಎಂಬ ಅರ್ಥಪೂರ್ಣ ಸಾಲುಗಳನ್ನು ಈ ಸಾಂಗ್ ಒಳಗೊಂಡಿದೆ.

Video Thumbnail

'ಜಗವೇ ಒಂದು ರಣರಂಗ, ಧೈರ್ಯ ಇರಲಿ ನಿನ್ನ ಸಂಗ'

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ರಣರಂಗ ಚಿತ್ರದ 'ಜಗವೇ ಒಂದು ರಣರಂಗ, ಧೈರ್ಯ ಇರಲಿ ನಿನ್ನ ಸಂಗ' ಹಾಡನ್ನು ಡಾ.ರಾಜ್‌ಕುಮಾರ್ ಹೇಳಿದ್ದು. ಈ ಹಾಡಿನಲ್ಲಿನ ಹಿಡಿಯೋ ಆತ್ಮಬಲದಸ್ತ್ರ, ಅದುವೇ ಜಯದ ಮಹಾ ತಂತ್ರ, ನಿನ್ನ ದಾರಿಯಲ್ಲಿ ಎಲ್ಲೂ ಸೋಲೇ ಇಲ್ಲ. ಬಾಳ ಯುದ್ದದಲ್ಲಿ ನಿನ್ನ ಗೆಲ್ಲೋರಿಲ್ಲ, ಛಲವೇ ಬಲವು ಮುಂದೆ ನುಗ್ಗಿ ನುಗ್ಗಿ ಬಾ' ಎಂಬ ಸಾಲುಗಳು ಧೈರ್ಯ ತುಂಬುತ್ತವೆ.


Video Thumbnail

'ಬಾನಿಗೊಂದು ಎಲ್ಲೇ ಎಲ್ಲಿದೆ'

ಬೆಳದಿಂಗಳಾಗಿ ನಾ ಚಿತ್ರದಲ್ಲಿ ನಾಯಕಿ ಆರತಿಯವರಿಗೆ ಡಾ.ರಾಜ್‌ಕುಮಾರ್ ಬುದ್ದಿವಾದ ಹೇಳುವ ಹಾಡು 'ಬಾನಿಗೊಂದು ಎಲ್ಲೇ ಎಲ್ಲಿದೆ'. ಚಿಕ್ಕಮಗಳೂರಿನ ಹಸಿರು ಸಿರಿಯ ಮಧ್ಯೆ ಕಾರು ಚಲಾಯಿಸುತ್ತಾ 'ಆಸೆಯೆಂಬ ಬಿಸಿಲು ಕುದುರೆ ಏಕೆ ಎರುವೆ, ಹೂವು-ಮುಳ್ಳು ಎರಡೂ ಉಂಟು ನಮ್ಮ ಬಾಳಲಿ' ಎಂದು ಹಾಡುತ್ತಾ ಸಾಗುವ ಈ ದೃಶ್ಯ ಮನಮೋಹಕವಾಗಿದೆ.

Video Thumbnail

ಬಾಳುವಂಥ ಹೂವೇ ಬಾಡುವಾಸೆ ಏಕೆ

ಆಕಸ್ಮಿಕ ಸಿನಿಮಾದಲ್ಲಿ ಅಣ್ಣಾವ್ರ ಬಾಯಕಿ ಮಾಧವಿಗೆ ಹೇಳುವ ಹಾಡು ಬಾಳುವಂಥ ಹೂವೇ ಬಾಡುವಾಸೆ ಏಕೆ? ಯಾರಿಗೆ ಗೊತ್ತಿಲ್ಲ ಹೇಳಿ. ಈ ಹಾಡಿನಲ್ಲಿ ಯಾರಿಗಿಲ್ಲ ನೋವು, ಯಾರಿಗಿಲ್ಲ ಸಾವು, ವ್ಯರ್ಥವ್ಯಸನದಿಂದ ಸಿಹಿಯು ಕೂಡ ಬೇವು ಎಂಬಂರ್ಥದ ಹಾಡು ಸಾಕಷ್ಟು ನೀತಿಮಾತುಗಳನ್ನು ಒಳಗೊಂಡಿದೆ.


Video Thumbnail

ನಾನಿರುವುದೇ ನಿಮಗಾಗಿ, ನಾಡಿರುವುದೇ ನಮಗಾಗಿ

ಕನ್ನಡ ನಾಡಿನ ಮೊದಲ ಸಾಮ್ರಾಟ ಕದಂಬರ ಮಯೂರವರ್ಮನಾಗಿ 'ಮಯೂರ' ಸಿನಿಮಾದಲ್ಲಿ ಅಭಿನಯಿಸಿರು ಡಾ.ರಾಜ್‌, ನಾನಿರುವುದೇ ನಿಮಗಾಗಿ, ನಾಡಿರುವುದೇ ನಮಗಾಗಿ, ಕಣ್ಣೀರೇಕೆ, ಬಿಸಿಯುಸಿರೇಕೆ, ಬಾಳುವಿರೆಲ್ಲಾ ಹಾಯಾಗಿ, ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ಎಂದು ಧೈರ್ಯ ಹೇಳಿದ್ದು ಒಂದು ಕಾಲದಲಲ್ಲಿ ನಾಡಿನ ಜನತೆಯಲ್ಲಿ ಧೈರ್ಯವನ್ನು ತುಂಬ ನಾಯಕ ಗುಣವನ್ನು ಸ್ಪಷ್ಪವಾಗಿ ಚಿತ್ರಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+