X
ಹೋಮ್ ಚಲನಚಿತ್ರಗಳ ಒಳನೋಟ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಕರಿಯ' ಸಿನಿಮಾದ ಬಗ್ಗೆ ನಿಮಗೆ ತಿಳಿಯದ ಇಂಟರೆಸ್ಟಿಂಗ್ ವಿಷಯಗಳಿವು!

Author Administrator | Published: Friday, August 30, 2024, 03:31 PM [IST]

ಮೆಜೆಸ್ಟಿಕ್ ಚಿತ್ರದಲ್ಲಿ ಗಮನ ಸೆಳೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಜೀವನದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಸಿನಿಮಾ ಕರಿಯ. ರೌಡಿಸಂ ಜಗತ್ತಿನ ಕ್ರೌಯವ ತೆರೆದಿಟ್ಟಿದ್ದ ಸಿನಿಮಾಗೆ ೨೦ ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಿನಿಮಾ ರಿಲೀಸ್ ಆಗಿದ್ದು, ದಾಸನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ದರ್ಶನ್ ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿದ್ದಾರೆ. ಇಲ್ಲಿ ಕನ್ನಡದ ಕಲ್ಟ್ ಕ್ಲಾಸಿಕ್ ಕರಿಯ ಸಿನಿಮಾದ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ವಿಷಯಗಳನ್ನು ನೀಡಲಾಗಿದೆ.


cover image
ಕರಿಯ ಸಿನಿಮಾ ಸ್ಟೋರಿ

ಕರಿಯ ಎಂಬ ರೌಡಿಯ ಜೀವನ ಕಥೆಯನ್ನು ಆಧರಿಸಿ ಬಂದಿದ್ದ ಸಿನಿಮಾವಿದು. ಹೀಗಾಗಿ, ಈ ಚಿತ್ರದಲ್ಲಿ ಹಂಡ್ರೆಡ್ ನಾಗರಾಜ್,ಶ್ಯಾಮ್ಸನ್,  ಜೋಪಡಿ ರಾಜೇಂದ್ರ, ಶ್ರೀರಾಮಪುರದ ಕಿಟ್ಟಿ ಸೇರಿದಂತೆ ಹಲವರು ನಟಿದ್ದರು. ಓರ್ವ ಡ್ಯಾನ್ಸರ್ ಅನ್ನು ಪ್ರೀತಿಸುವ ಗ್ಯಾಂಗ್‌ಸ್ಟರ್ ಕರಿಯ, ಅವಳು ತನ್ನೊಂದಿಗಿರುವಂತೆ ಒಪ್ಪಿಸಲು ಸಾಕಷ್ಟು ಕಷ್ಟಪಡುತ್ತಾನೆ. ಈ ಮಧ್ಯೆ ಆಕೆಗೆ ಕರಿಯನ ಶತ್ರುಗಳು ತೊಂದರೆ ಕೊಡಲು ಆರಂಭಿಸುತ್ತಾರೆ. ತನ್ನ ಶತ್ರುಗಳಿಂದ ಕರಿಯ ತನ್ನ ಪ್ರೇಯಸಿಯನ್ನು ಕಾಪಾಡಲು ಸಾಕಷ್ಟು ಸವಾಲುಗಳನ್ನು ಎದರಿಸುತ್ತಾನೆ.

ಕರಿಯದಲ್ಲಿ 27 ನಿಜ ರೌಡಿಗಳ ನಟನೆ

ದರ್ಶನ್ ಅವರ ಕರಿಯ ಸಿನಿಮಾದಲ್ಲಿ ಬರೋಬ್ಬರಿ 27 ಮಂದಿ ನಿಜ ರೌಡಿಗಳು ಅಭಿನಯಿಸಿದ್ದರು. ಕೆಲವರನ್ನು ಬೇಲ್ ಮೇಲೆ ನೇರವಾಗಿ ಚಿತ್ರೀಕರಣದ ಜಾಗಕ್ಕೆ ಕರೆತಂದದ್ದು ಇದೆಯಂತೆ. ಜೊತೆಗೆ ಕೆಲ ಕ್ರೈಮ್‌ಗಳು ನಡೆದ ಸ್ಥಳದಲ್ಲಿಯೇ ಈ ಸಿನಿಮಾ ಶೂಟಿಂಗ್ ಮಾಡಲಾಗಿದೆ. ನಿರ್ದೇಶಕ ಪ್ರೇಮ್ ಅವರು ರೌಡಿಗಳ ನಿಜವಾದ ಅಡ್ಡಗಳಲ್ಲಿಯೇ ಶೂಟ್ ಮಾಡಿದ್ದರು. ಕರಿಯ ಚಿತ್ರದ ಚಿತ್ರೀಕರಣ ಮುಕ್ತಾಯವಾಗುವ ಸಂದರ್ಭದಲ್ಲಿ ಸಿನಿಮಾದಲ್ಲಿ ನಟಿಸಿದ್ದ  ಮೂವರು ರೌಡಿಗಳು ಗ್ಯಾಂಗ್‌ವಾರ್‌ನಲ್ಲಿ ತೀರಿಕೊಂಡರಂತೆ.

ಸಾಂಗ್ ವಿವಾದ

ಕರಿಯ ಸಿನಿಮಾಗೆ ಗುರುಕಿರಣ್ ಸಂಗೀತ ನೀಡಿದ್ದರು. ಚಿತದ ಕೆಂಚಾಲೋ, ಮಚ್ಚಾಲೋ ಹಾಡು ಸೂಪರ್ ಹಿಟ್ ಆಗಿತ್ತು. ಈ ಹಾಡಿನಲ್ಲಿ 'ಅವಳು ನನಗೆ ಸಿಗದಿದ್ರೆ ಆಸಿಡ್ ಹಾಕುವೆ' ಸಾಲಿಗೆ ರಾಜ್ಯ ಮಹಿಳಾ ಸಬಲೀಕರಣ ಆಯೋಗ ಆಕ್ಷೇಪ ವ್ಯಕ್ತಪಡಿಸಿತ್ತು. ಮಹಿಳೆಯರ ಮೇಲೆ ಆಸಿಡ್ ಹಾಕುವಂತೆ ಇದು ಪ್ರೇರೆಪಿಸುತ್ತದೆ. ಸೆನ್ಸಾರ್ ಬೋರ್ಡ್‌ನವರು ಈ ಸಾಲು ತೆಗೆಯಬೇಕು ಅಂತ ಹೇಳಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ.

ಸಿನಿಮಾದಲ್ಲಿ ನಟಿಸಲ್ಲ ಎಂದಿದ್ದ ದಾಸ

ಕರಿಯದಲ್ಲಿ ರೌಡಿಗಳನ್ನು ಹಾಕಿಕೊಂಡು ಸಿನಿಮಾ ಮಾಡುವುದು ಒಂದು ದೊಡ್ಡ ಸಮಸ್ಯೆಯಾಗಿದ್ರೆ, ಇತ್ತ ಯಾವುದೋ ಕಾರಣಕ್ಕೆ ಪ್ರೇಮ್ ಮೇಲೆ ಮುನಿಸಿಕೊಂಡಿದ್ದ ದರ್ಶನ್ ಸಿನಿಮಾ ಮಾಡಲ್ಲ ಎಂದಿದ್ದರಂತೆ. ಆಗ ಮೈಕೋ ನಾಗರಾಜ್, ಆನೇಕಲ್ ಬಾಲರಾಜ್ ಸೇರಿದಂತೆ ಹಲವರು ದರ್ಶನ್‌ನನ್ನು ಒಪ್ಪಿಸಿ, ಸಿನಿಮಾ ಮುಗಿಸಿದ್ದರಂತೆ. ಈ ವಿಷಯವನ್ನು ಸಂದರ್ಶನವೊಂದರಲ್ಲಿ ಸ್ವತಃ ಮೈಕೋ ನಾಗರಾಜ್ ಹೇಳಿದ್ದರು.

2 ಕೋಟಿಗೂ ಅಧಿಕ ಹಣ ಗಳಿಕೆ

2003ರ ಜನವರಿ 3ರಂದು ಬಿಡುಗಡೆಯಾಗಿದ್ದ ಕರಿಯ ಸಿನಿಮಾಗೆ ಮೊದಲ ವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಲವರು ಈ ಸಿನಿಮಾ ಫ್ಲಾಪ್ ಅಂದುಕೊಂಡಿದ್ದರಂತೆ. ಕಪಾಲಿ ಥಿಯೇಟರ್‌ನಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾವನ್ನು 50 ದಿನ ಪೂರೈಸಿದ ಬಳಿಕ ಬೇರೊಂದು ಸಿನಿಮಾಗಾಗಿ ಎತ್ತಂಗಡಿ ಮಾಡಿಸಲಾಗತ್ತಂತೆ. ಬಳಿಕ ಒತ್ತಾಯದ ಮೇರೆಗೆ ಸಿನಿಮಾ ಮರುಬಿಡುಗಡೆ ಮಾಡುತ್ತಿದ್ದಂತೆ  ಕರಿಯ ಸೂಪರ್ ಹಿಟ್ ಆಯಿತು. ಕೇವಲ 6 ಲಕ್ಷ ಕೊಟ್ಟು ವಿತರಣೆ ಹಕ್ಕು ಪಡೆದ ಬರೋಬ್ಬರಿ 2 ಕೋಟಿ ರೂಪಾಯಿ ಅಧಿಕ ಗಳಿಕೆ ಮಾಡಿದ್ದರು. ರಾಜ್ಯದಲ್ಲಿ 675  ದಿನ ಭರ್ಜರಿ ಪ್ರದರ್ಶನ ಕಂಡು ಬ್ಲ್ಯಾಕ್‌ಬಸ್ಟರ್ ಆಯಿತು.

ಕರಿಯದಲ್ಲಿ ಮಾರಿಮುತ್ತು ನಟಿಸಬೇಕಿತ್ತು

ಈ ಸಿನಿಮಾದಲ್ಲಿ ಮಾಜಿ ರೌಡಿ ಮಾರಿಮುತ್ತು ಕೂಡ ಅಭಿನಯಿಸಬೇಕಿತ್ತು. ಈ ಸಂದರ್ಭದಲ್ಲಿ ಕೌನ್ಸಲರ್ ಆಗಿ ಆಯ್ಕೆಯಾಗಿದ್ದ ಕಾರಣ ಕರಿಯದಲ್ಲಿ ನಟಿಸಿದರೆ ತಮ್ಮ ರಾಜಕೀಯ ಜೀವನಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ನಟಿಸಲಿಲ್ಲವಂತೆ. ಆದರೆ, ನಿರ್ದೇಶಕ ಪ್ರೇಮ್ ಬೇರೆ ರೌಡಿಗಳನ್ನು ಬಳಸಿಕೊಂಡು ಅವರಿಂದ ನಟನೆ ತೆಗೆಯುವಲ್ಲಿ ಸಫಲವಾದರು.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+