ಚಲನಚಿತ್ರಗಳ ಒಳನೋಟ
ಚಂದನವನದಲ್ಲಿ ಮಿಂಚಬೇಕೆಂದು ಕನಸೊತ್ತು ಗಾಂಧಿನಗರಕ್ಕೆ ಬರುವವರು ಹಲವರು. ಈ ಪೈಕಿ ಅವಕಾಶ ಗಿಟ್ಟಿಸಿಕೊಳ್ಳುವವರು ಹಾಗೂ ಸಿಕ್ಕ ಅವಕಾಶದಲ್ಲಿ ಕ್ಲಿಕ್ ಆಗಿ ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯುವವರು ಕೆಲವರು ಮಾತ್ರ. ಅದೇ ರೀತಿಯ ಕನಸನ್ನು ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟು ಹಲವರಲ್ಲಿ ಕೆಲವರಾಗಿ ಉಳಿದುಕೊಂಡಿರುವವರ ಪೈಕಿ ಗುಳ್ಟೂ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟ ನವೀನ್ ಶಂಕರ್ ಕೂಡ ಒಬ್ಬರು. ಸದ್ಯ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವ ನವೀನ್ ಶಂಕರ್ ಕುರಿತ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.