X
ಹೋಮ್ ಚಲನಚಿತ್ರಗಳ ಒಳನೋಟ

ಹ್ಯಾಪಿ ಬರ್ತಡೇ: ಸ್ಯಾಂಡಲ್‌ವುಡ್‌ನ ಯುವ ಪ್ರತಿಭೆ ನವೀನ್ ಶಂಕರ್ ಕುರಿತ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.

Author Sowmya Bairappa | Updated: Thursday, May 25, 2023, 10:01 AM [IST]

ಚಂದನವನದಲ್ಲಿ ಮಿಂಚಬೇಕೆಂದು ಕನಸೊತ್ತು ಗಾಂಧಿನಗರಕ್ಕೆ ಬರುವವರು ಹಲವರು. ಈ ಪೈಕಿ ಅವಕಾಶ ಗಿಟ್ಟಿಸಿಕೊಳ್ಳುವವರು ಹಾಗೂ ಸಿಕ್ಕ ಅವಕಾಶದಲ್ಲಿ ಕ್ಲಿಕ್ ಆಗಿ ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯುವವರು ಕೆಲವರು ಮಾತ್ರ. ಅದೇ ರೀತಿಯ ಕನಸನ್ನು ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟು ಹಲವರಲ್ಲಿ ಕೆಲವರಾಗಿ ಉಳಿದುಕೊಂಡಿರುವವರ ಪೈಕಿ ಗುಳ್ಟೂ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟ ನವೀನ್ ಶಂಕರ್ ಕೂಡ ಒಬ್ಬರು. ಸದ್ಯ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವ ನವೀನ್ ಶಂಕರ್ ಕುರಿತ ಇಂಟರೆಸ್ಟಿಂಗ್ ವಿಷಯಗಳು ಇಲ್ಲಿವೆ.


cover image
ಉತ್ತರ ಕರ್ನಾಟಕದ ಪ್ರತಿಭೆ
1

ನವೀನ್‌ ಶಂಕರ್ ಮೂಲತಃ ಬಾಲಗಕೋಟೆ ಜಿಲ್ಲೆಯ ಇಳಕಲ್ ಮೂಲದವರು. ಮೊದಲಿಗೆ ಪತ್ರಿಕೋದ್ಯಮನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ರಿಪೋರ್ಟ್ ಆಗಿದ್ದರು. ಬಳಿಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 

 

ರಂಗಭೂಮಿ ಕಲಾವಿದ
2

ನವೀನ್‌ ರಂಗಭೂಮಿ ಕಲಾವಿದ ಕೂಡ ಹೌದು. ಇವರು ರಾಜಮಾರ್ಗ್ ಕಲೆ, ಸಂಸ್ಕೃತಿ ಮತ್ತು ನಾಟಕ ಅಕಾಡೆಮಿ ಅಡಿಯಲ್ಲಿ ೨೦೧೦ರಿಂದ ಮೂರು ವರ್ಷಗಳ ಕಾಲ ರಂಗಭೂಮಿಯಲ್ಲಿದ್ದರು. ಈ ಮೂರು ವರ್ಷಗಳಲ್ಲಿ 45ಕ್ಕೂ ಹೆಚ್ಚು ಸ್ಟೇಜ್‌ ಶೋಗಳಲ್ಲಿ ಮತ್ತು ಎಂಟು ವಿಭಿನ್ನ ನಿರ್ಮಾಣ ಬ್ಯಾನರ್‌ಗಳನ್ನೊಳಗೊಂಡ ಸಾಮಾಜಿಕ ಜಾಗೃತಿಯ 200 ಬೀದಿ ನಾಟಕಗಳಲ್ಲಿ ನಟಿಸಿದ್ದಾರೆ. 

ಮೊದಲ ಸಿನಿಮಾ
3

ನವೀನ್ ಶಂಕರ್ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಗುಳ್ಟೂ ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿ ಸ್ಯಾಂಡಲ್‌ವುಡ್ ಪ್ರವೇಶಿಸಿದರು. 2018ರಲ್ಲಿ ತೆರೆಕಂಡಿದ್ದ ಈ ಚಿತ್ರ ಆಗಿನ ಸಮಯಕ್ಕೆ ಸಿನಿ ಪ್ರೇಕ್ಷಕರಿಂದ 'ಕನ್ನಡದಲ್ಲಿ ಒಳ್ಳೆ ಪ್ರಯೋಗಾತ್ಮಕ ಸಿನಿಮಾ ಬರಲ್ಲ ಅಂತೀರಲ್ಲ ಬಂದಿದೆ ನೋಡಿ' ಎಂಬ ಒಳ್ಳೆಯ ವಿಮರ್ಶೆ ಪಡೆದುಕೊಂಡಿತ್ತು. ಶತದಿನದ ಸಂಭ್ರಮ ಆಚರಿಸಿಕೊಂಡಿದ್ದ ಗುಳ್ಟೂ ಚಿತ್ರವನ್ನು ಇಂದಿಗೂ ಸಹ ಕನ್ನಡ ಸಿನಿ ರಸಿಕರು ಇತರೆ ಪ್ರೇಕ್ಷಕರಿಗೆ ನೋಡಿ ಎಂದು ಸಲಹೆ ನೀಡುವಂತ ಚಿತ್ರವಾಗಿ ಉಳಿದಿದೆ. 

ಧರಣಿ ಮಂಡಲ ಮಧ್ಯದೊಳಗೆ & ಹೊಂದಿಸಿ ಬರೆಯಿರಿ
4

ಗುಳ್ಟೂ ಸಿನಿಮಾ ಬಳಿಕ ನವೀನ್ ಶಂಕರ್ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಪೈಕಿ 'ಧರಣಿ ಮಂಡಲ ಮಧ್ಯದೊಳಗೆ, ಸಿನಿಮಾ ಕಳೆದ ವರ್ಷವೇ ಬಿಡುಗಡೆಯಾಗಿದೆ. ಇದು ನವೀನ್ ಶಂಕರ್ ಸಿನಿ ವೃತ್ತಿ ಜೀವನದ ಎರಡನೇ ಚಿತ್ರ. ಚಿತ್ರದಲ್ಲಿ ನವೀನ್ ಶಂಕರ್ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಕ್ರೈಮ್ ಥ್ರಿಲ್ಲರ್‌ನಲ್ಲಿ ನವೀನ್ ಶಂಕರ್‌ಗೆ ನಟಿಯಾಗಿ ಐಶಾನಿ ಶೆಟ್ಟಿ ಕಾಣಿಸಿಕೊಂಡಿದ್ದರು. ಬಳಿಕ ಪ್ರವೀಣ್ ತೇಜ್, ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಶ್ರೀ ಮಹದೇವ್, ಭಾವನಾ ರಾವ್,  ಅರ್ಚನಾ ಜೋಯಿಸ್ ಸೇರಿದಂತೆ ಬಹುತಾರಾಗಣವಿರುವ ಹೊಂದಿಸಿ ಬರೆಯಿರಿ ಸಿನಿಮಾದಲ್ಲಿ ಅಭಿನಯಿಸಿದ್ದರು, ಐದು ಜನ ಸ್ನೇಹಿತರ ಬದುಕಿನ ಒಂದೊಂದು ಕಥೆ ಹೊಂದಿದ್ದ ಈ ಚಿತ್ರದಲ್ಲಿ ಭಾವನಾತ್ಮಕ ಜರ್ನಿಯೂ ಇತ್ತು.   

ಗುರುದೇವ್ ಹೊಯ್ಸಳದಲ್ಲಿ ಅದ್ಭುತ ನಟನೆ
5

'ಗುಲ್ಟು' ಸಿನಿಮಾದಲ್ಲೇ ನವೀನ್ ಶಂಕರ್ ತಾನೇನು ಅನ್ನೋ ಅರ್ಥ ಮಾಡಿಸಿದ್ದು ಆಗಿತ್ತು. ಆದರೆ, ಗುರುದೇವ್ ಹೊಯ್ಸಳದಲ್ಲಿ ಗಮನ ಸೆಳೆಯೋದು ಇದೇ ನಟ. ಖಳನಾಯಕನಾಗಿ ಇಡೀ ಸಿನಿಮಾದುದ್ದಕ್ಕೂ ರೊಚ್ಚಿಗೆಬ್ಬಿಸುತ್ತಾರೆ. ಬಾಲಿ ನಿಜಕ್ಕೂ ರಗಡ್. ಹೀರೊ ಇಲ್ಲದ ಎಂಟ್ರಿ.. ಆಕ್ಷನ್ ಇವರಿಗಿದೆ. ಆ ಅವಕಾಶವನ್ನು ಅಷ್ಟೇ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಹೊಯ್ಸಳನಿಗೆ ಸಮನಾಗಿ ನಿಲ್ಲುವ ಪಾತ್ರ ಬಾಲಿಯದ್ದು. ಹೀಗಾಗಿ ನವೀನ್‌ ತಮ್ಮ ಅದ್ಭುತ ನಟನೆ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮನಗೆದ್ದಿದ್ದಾರೆ. 

 

ಮುಂದಿನ ಸಿನಿಮಾಗಳು
6

ಗುರುದೇವ್ ಹೊಯ್ಸಳ ಖಳನಾಯಕನಾಗಿ ಮೋಡಿ ಮಾಡಿರುವ ನವೀನ್ ಶಂಕರ್ ಇನ್ನೇರಡು ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಒಂದು ಕ್ಷೇತ್ರಪತಿ ಮತ್ತು ಇನ್ನೊಂದು ಮೂಲತಃ ನಮ್ಮವರೇ. ಕ್ಷೇತ್ರಪತಿ ಸಿನಿಮಾದಲ್ಲಿ ನವೀನ್‌ಗೆ ಅರ್ಚನಾ ಜೋಯಿಸ್ ನಾಯಕಿಯಾಗಿ ನಟಿಸುತ್ತಿದ್ದು, ಇದೊಂದು ಕೃಷಿ ಬಿಕ್ಕಟ್ಟು ಆಧಾರಿತ ಸಿನಿಮಾವಾಗಿದೆ. ಇನ್ನು 'ಮೂಲತಃ ನಮ್ಮವರೇ' ಕೌಟುಂಬಿಕ ಸಿನಿಮಾವಾಗಿದ್ದು, ಅಪ್ಪ-ಮಗನ ಭಾಂದವ್ಯದ ಸನ್ನಿವೇಶಗಳೇ ಚಿತ್ರದ ಹೈಲೈಟ್. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+