X
ಹೋಮ್ ಚಲನಚಿತ್ರಗಳ ಒಳನೋಟ

ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಕರಾವಳಿ ಚೆಲುವೆಯರಿವರು!

Author Sowmya Bairappa | Updated: Wednesday, April 16, 2025, 11:54 AM [IST]

ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯರಿಗಿಂತ ಕಿರುತೆರೆ ನಟಿಯರು ಜನರಿಗೆ ಹೆಚ್ಚು ಹತ್ತಿರವಾಗಿರುತ್ತಾರೆ. ಹೀಗಾಗಿ, ಸಿನಿಮಾ ಕಲಾವಿದರು ಕೂಡ ಕಿರುತೆರೆಯತ್ತ ಮುಖ ಮಾಡ್ತಿದ್ದಾರೆ. ಪ್ರತಿದಿನ ಸಂಜೆಯಾದ್ರೆ ಕಣ್ಮುಂದೆ ಬರುವ ಸೀರಿಯಲ್ ನಟ-ನಟಿಯರು ತಮ್ಮ ಅದ್ಭುತ ನಟನೆ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ. ಕನ್ನಡ ಕಿರುತೆರೆ ಹಾಗೂ ಸಿನಿಮಾರಂಗದ ಎರಡರಲ್ಲೂ ಅನೇಕ ಕರಾವಳಿ ಮೂಲದ ಕಲಾವಿದರಿದ್ದು, ತಮ್ಮದೇ ಛಾಪು ಮೂಡಿಸಿದ್ದಾರೆ. ಇಲ್ಲಿ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಕರಾವಳಿ ಸುಂದರಿಯರ ಪಟ್ಟಿಯನ್ನು ನೀಡಲಾಗಿದೆ.


cover image
ಮೌನ ಗುಡ್ಡೆಮನೆ
1

ಮೌನ ಗುಡ್ಡೇಮನೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಸೀರಿಯಲ್ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ. ಮೂಲತಃ ಮಂಗಳೂರಿನವರಾದ ಇವರು, 17ನೇ ವಯಸ್ಸಿಗೆ ಮಾಡೆಲಿಂಗ್‌ಗೆ ಕಾಲಿಟ್ಟರು. ಬಳಿಕ 2020ರಲ್ಲಿ ನಡೆದ 'ಮಿಸ್ ಟೀನ್ ತುಳುನಾಡು' ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಬಳಿಕ ಕನ್ನಡ ಕಿರುತೆರೆ ಕಾಲಿಟ್ಟ ಮೌನ, ಸದ್ಯ ಕುಲದಲ್ಲಿ ಕೀಳ್ಯಾವುದೋ ಎಂಬ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

 ಶಿಲ್ಪಾ ಕಾಮತ್
2

ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ 'ನೂರು ಜನ್ಮಕೂ' ಧಾರಾವಾಹಿಯಲ್ಲಿ ಮೈತ್ರಿ ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ನಟಿಯ ಹೆಸರು ಶಿಲ್ಪಾ ಕಾಮತ್. ಮಂಗಳೂರಿನ ಹುಡುಗಿಯಾಗಿರುವ ಶಿಲ್ಪಾ, ಈ ಹಿಂದೆ ಮಿಸ್ ಮಂಗಳೂರು ಪಟ್ಟ ಮುಡಿಗೇರಿಸಿಕೊಂಡಿದ್ದರು. ನೂರು ಜನ್ಮಕೂ ಅವರ ಮೊದಲ ಧಾರಾವಾಹಿಯಾಗಿದೆ.

ಅಮಿತಾ ಕುಲಾಲ್
3

ಈ ಹಿಂದೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ತಾರಿಣಿ ಪಾತ್ರದ ಮೂಲಕ ಗಮನ ಸೆಳೆದಿದ್ದ ಅಮಿತಾ ಕುಲಾಲ್ ಕೂಡ ಮೂಲತಃ ಮಂಗಳೂರಿನವರು. 2018ರಲ್ಲಿ ತೆರೆಕಂಡ 'ಜಗತ್ ಕಿಲಾಡಿ' ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಇವರು, ನಂತರ ತೆಲುಗು ಧಾರಾವಾಹಿಯೊಂದರಲ್ಲಿ ಅಭಿನಯಿಸಿದರು. ನಂತರ ಒಲವಿನ ನಿಲ್ದಾಣ ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು.

ನೀತಾ ಅಶೋಕ್
4

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ನಾ ನಿನ್ನ ಬಿಡಲಾರೆ' ಕಿರುತೆರೆ ಪ್ರೇಕ್ಷಕರ ಫೇವರಿಟ್ ಎನಿಸಿಕೊಂಡಿದೆ. ಈ ಧಾರಾವಾಹಿಯ ಗುಣಮಟ್ಟ ಹಾಗೂ ಮೇಕಿಂಗ್ ನೋಡಿ ವೀಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅಂಬಿಕಾ ಪಾತ್ರ ಮಾಡುತ್ತಿರುವ ನೀತಾ ಅಶೋಕ್ ಮೂಲತಃ ಉಡುಪಿ ಜಿಲ್ಲೆಯ ಕೋಟಾದವರು. ಈ ಸೀರಿಯಲ್‌ಗೂ ಮುನ್ನ ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಮೇಘಾ ಶೆಟ್ಟಿ
5

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಜೊತೆ ಜೊತೆಯಲಿ' ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ನಟಿ ಮೇಘಾ ಶೆಟ್ಟಿ, ಅನು ಸಿರಿಮನೆ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರು. ಇವರು ಮೂಲತಃ ಮಂಗಳೂರಿನವರಾಗಿದ್ದು, ಸದ್ಯ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.

ಅನುಶ್ರೀ
6

ಕನ್ನಡ ಕಿರುತೆರೆಯಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಿರೂಪಕರಲ್ಲಿ ಅನುಶ್ರೀ ಮೊದಲಿಗರು. ಆಂಕರ್ ಅನುಶ್ರೀ ಅಂತಲೇ ಜನಪ್ರಿಯತೆ ಪಡೆದಿರುವ ಇವರು, ತಮ್ಮ ನಿರೂಪಣಾ ಶೈಲಿಯಿಂದ ಕರ್ನಾಟಕದ ಮನೆಮಾತಾಗಿದ್ದಾರೆ. ಕನ್ನಡದ ಚಿತ್ರರಂಗದ ಯಾವುದೇ ಲಾಂಚ್ ಈವೆಂಟ್, ಅವಾರ್ಡ್ ಫಂಕ್ಷನ್‌ಗಳ ನಿರೂಪಕರಾಗಿ ಅನುಶ್ರೀ ಇದ್ದೇ ಇರುತ್ತಾರೆ. ಸದ್ಯ ಜೀ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಶ್ರೀ ಮೂಲತಃ ಮಂಗಳೂರಿನವರು.






Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+